AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಲಿಕಾನ್ ಸಿಟಿ ಜನರಿಗೆ ನಿರಾಸೆ; ಡಬ್ಬಲ್ ಡೆಕ್ಕರ್ ಬಸ್ ರಸ್ತೆಗಿಳಿಯೋದು ಡೌಟ್, ಆರಂಭವಾಗಿಲ್ಲ ಟೆಂಡರ್ ಪ್ರಕ್ರಿಯೆ

ಕಾಲಾಕ್ರಮೇಣ ಮರೆಯಾಗಿದ್ದ ಡಬಲ್ ಡೆಕ್ಕರ್ ಬಸ್​ಗಳನ್ನ ಮತ್ತೆ ನಗರದಲ್ಲಿ ರಸ್ತೆಗಿಳಿಸಲು ಬಿಎಂಟಿಸಿ ತೀರ್ಮಾನಿಸಿತ್ತು. ಬಿಎಂಟಿಸಿಯ ಈ ನಿರ್ಧಾರಕ್ಕೆ ಬೆಂಗಳೂರಿಗರು ಕೂಡ ಡಬ್ಬಲ್ ಡೆಕ್ಕರ್ ಅನುಭವಕ್ಕೆ ಕಾದು ಕುಳಿತಿದ್ದಾರೆ. ಆದರೆ ಸದ್ಯಕ್ಕೆ ಜನರ ಕಾಯುವಿಕೆ ಮುಗಿಯೋದು ಡೌಟ್ ಎನ್ನಲಾಗ್ತಿದ್ದು, ಡಬ್ಬಲ್ ಡೆಕ್ಕರ್​ನಲ್ಲಿ ಅನುಭವ ಪಡೆಯೋಕೆ ಇನ್ನೂ ಕೆಲ ಒಂದಷ್ಟು ತಿಂಗಳು ಕಾಯಲೇಬೇಕಾಗಿದೆ.

ಸಿಲಿಕಾನ್ ಸಿಟಿ ಜನರಿಗೆ ನಿರಾಸೆ; ಡಬ್ಬಲ್ ಡೆಕ್ಕರ್ ಬಸ್ ರಸ್ತೆಗಿಳಿಯೋದು ಡೌಟ್,  ಆರಂಭವಾಗಿಲ್ಲ ಟೆಂಡರ್ ಪ್ರಕ್ರಿಯೆ
ಸಾಂದರ್ಭಿಕ ಚಿತ್ರ
ಕಿರಣ್​ ಸೂರ್ಯ
| Edited By: ಆಯೇಷಾ ಬಾನು|

Updated on: Sep 16, 2023 | 7:23 AM

Share

ಬೆಂಗಳೂರು, ಸೆ.16: 90 ರ ದಶಕದಲ್ಲಿ ಬೆಂಗಳೂರಿನ ವೈಭವನ್ನ ಸಾರಿದ್ದ ಡಬ್ಬಲ್ ಡೆಕ್ಕರ್ ಬಸ್(Double Decker Bus) ಮತ್ತೆ ಸಿಲಿಕಾನ್ ಸಿಟಿ ರಸ್ತೆಗೆ ಇಳಿಸೋದಾಗಿ ಬಿಎಂಟಿಸಿ(BMTC) ಹೇಳಿತ್ತು. ಬೆಂಗಳೂರಿಗರು ಕೂಡ ಡಬ್ಬಲ್ ಡೆಕ್ಕರ್​ನಲ್ಲಿ ಸಂಚಾರಕ್ಕಾಗಿ ಸಖತ್ ಥ್ರಿಲ್ ನಲ್ಲಿದ್ರು. ಆದರೆ ಸದ್ಯಕ್ಕೆ ಸಿಲಿಕಾನ್ ಸಿಟಿಗರ(Bengaluru) ಕನಸು ನನಸಾಗೋದು ಡೌಟ್ ಅನ್ನಿಸುತ್ತಿದೆ. ಡಬ್ಬಲ್ ಡೆಕ್ಕರ್ ಬಸ್ ಖರೀದಿ ಟೆಂಡರ್ ಪ್ರಕ್ರಿಯೆ ಆರಂಭವಾಗಿಲ್ಲ. ಹೀಗಾಗಿ ಡಬ್ಬಲ್ ಡೆಕ್ಕರ್ ಬಸ್ ಸಿಲಿಕಾನ್ ಸಿಟಿ ರಸ್ತೆಗಿಳಿಯೋದು ಡೌಟ್ ಆಗಿದೆ.

ಅದೊಂದು ಕಾಲ ಇತ್ತು 90ರ ದಶಕ. ಬೆಂಗಳೂರಿನ ರಸ್ತೆಗಳಲ್ಲಿ ಡಬಲ್ ಡೆಕ್ಕರ್ ಬಸ್​ಗಳು ಸಂಚಾರ ಮಾಡುತ್ತಿದ್ರೆ ನೋಡೋದೆ ಒಂದು ಚಂದ. ಈ ಬಸ್​ಗಳನ್ನು ಹತ್ತಿ ಮುಂಬದಿ ಸಿಟ್ ಹಿಡಿದು ನಗರದ ಸೌಂದರ್ಯ ಸವಿಯುವುದಕ್ಕೆ ಜನ ಮುಗಿಬೀಳುತ್ತಿದ್ರು. ಆದರೆ ಕಾಲಾಕ್ರಮೇಣ ಮರೆಯಾಗಿದ್ದ ಡಬಲ್ ಡೆಕ್ಕರ್ ಬಸ್​ಗಳನ್ನ ಮತ್ತೆ ನಗರದಲ್ಲಿ ರಸ್ತೆಗಿಳಿಸಲು ಬಿಎಂಟಿಸಿ ತೀರ್ಮಾನಿಸಿತ್ತು. ಬಿಎಂಟಿಸಿಯ ಈ ನಿರ್ಧಾರಕ್ಕೆ ಬೆಂಗಳೂರಿಗರು ಕೂಡ ಡಬ್ಬಲ್ ಡೆಕ್ಕರ್ ಅನುಭವಕ್ಕೆ ಕಾದು ಕುಳಿತಿದ್ದಾರೆ. ಆದರೆ ಸದ್ಯಕ್ಕೆ ಜನರ ಕಾಯುವಿಕೆ ಮುಗಿಯೋದು ಡೌಟ್ ಎನ್ನಲಾಗ್ತಿದ್ದು, ಡಬ್ಬಲ್ ಡೆಕ್ಕರ್​ನಲ್ಲಿ ಅನುಭವ ಪಡೆಯೋಕೆ ಇನ್ನೂ ಕೆಲ ಒಂದಷ್ಟು ತಿಂಗಳು ಕಾಯಲೇಬೇಕಾಗಿದೆ.

ಇದನ್ನೂ ಓದಿ: ಬೆಂಗಳೂರು ಬಂದ್: ಬಿಎಂಟಿಸಿಗೆ ಡಿಮಾಂಡಪ್ಪೋ ಡಿಮಾಂಡ್

ಹೌದು ಇದಕ್ಕೆ ಕಾರಣ ಇನ್ನೂ ಈ ಬಸ್ ಗಳ ಖರೀದಿ ಟೆಂಡರ್ ಪ್ರಕ್ರಿಯೆ ಮುಗಿಯದೇ ಇರೋದು. ಕಳೆದ ಏಪ್ರಿಲ್ ನಲ್ಲೇ ಬೆಂಗಳೂರಿನಲ್ಲಿ ಡಬ್ಬಲ್ ಡೆಕ್ಕರ್ ಬಸ್ ಗಳ‌ ಸಂಚಾರ ಆರಂಭಿಸುವುದಾಗಿ ಬಿಎಂಟಿಸಿ ಹೇಳಿತ್ತು. ಜೊತೆಗೆ ಟೆಂಡರ್ ಪ್ರಕ್ರಿಯೆಗಳು ಆರಂಭವಾಗಿತ್ತು. ಆದರೆ ಆರಂಭವಾದ ಟೆಂಡರ್ ಪ್ರಕ್ರಿಯೆ 5-6 ತಿಂಗಳಾದ್ರು‌ ಮುಗಿಯುವ ಹಂತಕ್ಕೆ ಬಂದಿಲ್ಲ.‌ ಕಾರಣ ಪ್ರಕ್ರಿಯೆ ಆರಂಭವಾದ ಬಳಿಕ ಕೇವಲ ಒಂದೇ ಒಂದು ಸಂಸ್ಥೆ ಮಾತ್ರ ಪ್ರಕ್ರಿಯೆಯಲ್ಲಿ ಭಾಗಿಯಾಗಿದೆ. ಬೇರೆ ಕಂಪನಿಗಳು ಭಾಗಿಯಾಗದ ಹಿನ್ನೆಲೆ ಸದ್ಯ ಸರ್ಕಾರದ ಮಟ್ಟದಲ್ಲಿ ಮುಂದೇನು ಅನ್ನುವಂತ ಚರ್ಚೆಗಳಾಗುತ್ತಿವೆ. ಈ ಎಲ್ಲಾ ಪ್ರಕ್ರಿಯೆಗಳು ಮುಗಿದು ರಸ್ತೆಗೆ ಬಸ್ ಇಳಿದು ಜನ ಪ್ರಯಾಣ ಮಾಡಬೇಕಾದ್ರೆ ಕೆಲ ತಿಂಗಳುಗಳ ಕಾಲಾವಕಾಶ ಬೇಕು. ಈ ಎಲ್ಲಾ ಕಾರಣ ಮುಂದಿನ ವರ್ಷ 2024 ಮಧ್ಯಕ್ಕೆ ಸಿಗಬಹುದು ಎಂದು ಅಂದಾಜಿಸಲಾಗಿದೆ.

ಇನ್ನು ಅತ್ತ ಟೆಂಡರ್ ಪ್ರಕ್ರಿಯೆಯೇ ಆರಂಭವಾಗಿಲ್ಲ, ಅದಕ್ಕೂ ಮುಂಚೆಯೇ ಬಸ್ ಬಂದಾಗ ಎಲ್ಲಿ ಬಸ್ ಗಳು ಸಂಚರಿಸಬೇಕು ಅನ್ನೋ ನಿಟ್ಟಿನಲ್ಲಿ ಕೆಲ ಪ್ರಾಯೋಗಿಕ ರೂಟ್​ಗಳನ್ನ ನಿಗಮ ಫೈನಲ್ ಮಾಡಿದೆ. ಶಿವಾಜಿನಗರ, ಕೆಬಿಎಸ್, ಔಟರ್ ರಿಂಗ್ ರೋಡ್, ಅತ್ತಿಬೆಲೆ ಸೇರಿದಂತೆ ಕೆಲ ಮಾರ್ಗಗಳನ್ನ ಪ್ರಾಯೋಗಿಕವಾಗಿ ಆಯ್ಕೆ ಮಾಡಿದ್ದು, ಇದೇ ಭಾಗಗಳಲ್ಲಿ ಓಡಿಸಿದ್ರೆ ಸೂಕ್ತ ಅನ್ನೋದು ನಿಗಮದ ಚಿಂತನೆ. ಒಟ್ಟಾರೆ ಸದ್ಯಕ್ಕಂತು ಡಬ್ಬಲ್ ಡೆಕ್ಕರ್ ಪ್ರಯಾಣದ ಕನಸು ಕನಸಾಗೇ ಇರಲಿದೆ. ಮುಂದಿನ ತಿಂಗಳುಗಳಲ್ಲಾದ್ರು ಆದಷ್ಟು ಬೇಗ ನನಸಾಗುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Follow Us
ಎಂಎನ್‌ಸಿ ಕಂಪನಿಗಳ ಹೆಸರಿನಲ್ಲಿ ಫೇಕ್ ಮೆಡಿಸಿನ್ ರಿ-ಪ್ಯಾಕಿಂಗ್
ಎಂಎನ್‌ಸಿ ಕಂಪನಿಗಳ ಹೆಸರಿನಲ್ಲಿ ಫೇಕ್ ಮೆಡಿಸಿನ್ ರಿ-ಪ್ಯಾಕಿಂಗ್
‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ
‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ
ದರ್ಶನ್ ಭೇಟಿ ಬಳಿಕ ಮನಸ್ತಾಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಧನ್ವೀರ್ ಗೌಡ
ದರ್ಶನ್ ಭೇಟಿ ಬಳಿಕ ಮನಸ್ತಾಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಧನ್ವೀರ್ ಗೌಡ
ದರ್ಶನ್ ನೋಡಲು ಒಟ್ಟಿಗೆ ಜೈಲಿಗೆ ಬಂದ ಮೀನಾ, ಧನ್ವೀರ್ ಗೌಡ, ವಿಜಯಲಕ್ಷ್ಮಿ
ದರ್ಶನ್ ನೋಡಲು ಒಟ್ಟಿಗೆ ಜೈಲಿಗೆ ಬಂದ ಮೀನಾ, ಧನ್ವೀರ್ ಗೌಡ, ವಿಜಯಲಕ್ಷ್ಮಿ
ಯಾವುದೇ ಕೈದಿಗೆ ಜೈಲಲ್ಲಿ ವಿಐಪಿ ಸೌಲಭ್ಯ ಕೊಡಲ್ಲ: ಗೃಹ ಸಚಿವ
ಯಾವುದೇ ಕೈದಿಗೆ ಜೈಲಲ್ಲಿ ವಿಐಪಿ ಸೌಲಭ್ಯ ಕೊಡಲ್ಲ: ಗೃಹ ಸಚಿವ
ತುಮಕೂರು KSRTC ಬಸ್ ನಿಲ್ದಾಣದಲ್ಲಿ ರೊಚ್ಚಿಗೆದ್ದ ವಿದ್ಯಾರ್ಥಿಗಳು
ತುಮಕೂರು KSRTC ಬಸ್ ನಿಲ್ದಾಣದಲ್ಲಿ ರೊಚ್ಚಿಗೆದ್ದ ವಿದ್ಯಾರ್ಥಿಗಳು
‘ಓಣಂ’ ಸಡಗರ: ಕೇರಳಂ ಸಂಸ್ಕೃತಿ ಅನಾವರಣಗೊಳಿಸಿದ ವಿದ್ಯಾರ್ಥಿಗಳು
‘ಓಣಂ’ ಸಡಗರ: ಕೇರಳಂ ಸಂಸ್ಕೃತಿ ಅನಾವರಣಗೊಳಿಸಿದ ವಿದ್ಯಾರ್ಥಿಗಳು
ಹನೂರು ಪ್ರಕರಣ: ಅಜ್ಞಾತ ಸ್ಥಳದಿಂದ ವಿಡಿಯೋ ರಿಲೀಸ್​ ಮಾಡಿದ ಮಹಿಮದಾಸ್
ಹನೂರು ಪ್ರಕರಣ: ಅಜ್ಞಾತ ಸ್ಥಳದಿಂದ ವಿಡಿಯೋ ರಿಲೀಸ್​ ಮಾಡಿದ ಮಹಿಮದಾಸ್
ಕಾರ್ಕಳದ ದುರ್ಗಾ ಫಾಲ್ಸ್‌ನಲ್ಲಿ ಸ್ಥಳೀಯರ ಸಾಹಸಮಯ ಕಾರ್ಯಾಚರಣೆ
ಕಾರ್ಕಳದ ದುರ್ಗಾ ಫಾಲ್ಸ್‌ನಲ್ಲಿ ಸ್ಥಳೀಯರ ಸಾಹಸಮಯ ಕಾರ್ಯಾಚರಣೆ
ಸ್ಕ್ಯಾನ್ ಮಾಡಿ, ದೂರು ನೀಡಿ; ಕಳಪೆ ಆಹಾರ, ನಕಲಿ ಔಷಧಿಗೆ ಬ್ರೇಕ್!
ಸ್ಕ್ಯಾನ್ ಮಾಡಿ, ದೂರು ನೀಡಿ; ಕಳಪೆ ಆಹಾರ, ನಕಲಿ ಔಷಧಿಗೆ ಬ್ರೇಕ್!