AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Power Cut: ಬೆಂಗಳೂರು ಸುತ್ತಮುತ್ತಲಿನ ಈ ಪ್ರದೇಶಗಳಲ್ಲಿ ಇಂದು 6 ಗಂಟೆ ವಿದ್ಯುತ್ ವ್ಯತ್ಯಯ

Bengaluru Power Cut today: ಬೆಸ್ಕಾಂ ತನ್ನ ತ್ರೈಮಾಸಿಕ ನಿರ್ವಹಣಾ ಕಾರ್ಯ ಕೈಗೊಂಡ ಹಿನ್ನಲೆ ಆಗಸ್ಟ್ 22ರಂದು ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ ವಿದ್ಯುತ್ ಸರಬರಾಜು ಕಡಿತಗೊಳ್ಳಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹಾಗಾದರೆ ಯಾವೆಲ್ಲಾ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂಬ ಮಾಹಿತಿ ಇಲ್ಲಿದೆ.

Power Cut: ಬೆಂಗಳೂರು ಸುತ್ತಮುತ್ತಲಿನ ಈ ಪ್ರದೇಶಗಳಲ್ಲಿ ಇಂದು 6 ಗಂಟೆ ವಿದ್ಯುತ್ ವ್ಯತ್ಯಯ
Bengaluru Power Cut
ಗಂಗಾಧರ​ ಬ. ಸಾಬೋಜಿ
|

Updated on:Aug 22, 2025 | 8:07 AM

Share

ಬೆಂಗಳೂರು, ಆಗಸ್ಟ್​ 22: ಬೆಸ್ಕಾಂ (Bescom) ತ್ರೈಮಾಸಿಕ ನಿರ್ವಹಣಾ ಕಾರ್ಯವನ್ನು ಕೈಗೊಂಡಿರುವುದರಿಂದ ಇಂದು ನಗರದ ಹಲವೆಡೆ ವಿದ್ಯುತ್​ ವ್ಯತ್ಯಯ (Power Cut) ಉಂಟಾಗಲಿದೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ಅಂದರೆ ಆರು ಗಂಟೆಗಳ ಕಾಲ ವಿದ್ಯುತ್‌ ಸರಬರಾಜು ಕಡಿತಗೊಳ್ಳಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ತಿಳಿಸಿದೆ. ಇದಕ್ಕೆ ಅನುಗುಣವಾಗಿ ಜನರು ತಮ್ಮ ಕೆಲಸ ಕಾರ್ಯಗಳನ್ನು ಯೋಜಿಸುವಂತೆ ತಿಳಿಸಲಾಗಿದೆ.

ಯಾವೆಲ್ಲಾ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ?

ಡಿಕ್ರಾಸ್, ಮುತ್ಸಂದ್ರ, ಪ್ರಿಯರ್ದಶಿನಿ ಬಡಾವಣೆ, ಟಿ.ಬಿ.ಬಡಾವಣೆ, ಗಂಗಧರಪುರ, ರೋಜಿಪುರ, ವಿನಾಯಕನಗರ, ಬಸವೇಶ್ವರನಗರ, ಸೋಮೇಶ್ವರ ಬಡಾವಣೆ, ಕುಂಭಾರಪೇಟೆ, ಮಾರುತಿನಗರ, ಗಾಣಿಗರಪೇಟೆ, ವರ್ಜಿಪೇಟೆ, ಸಿನಿಮಾ ರಸ್ತೆ, ವಡ್ಡರಪೇಟೆ, ಹಳೇಬಸ್​ ನಿಲ್ದಾಣ, ಕಛೇರಿಪಾಳ್ಯ, ಕಲ್ಲುಪೇಟೆ, ಇಸ್ಲಾಂಪುರ, ದೇವರಾಜನಗರ, ತ್ಯಾಗರಾಜನಗರ, ಕರೇನಹಳ್ಳಿ, ಶಾಂತಿನಗರ.

ಇದನ್ನೂ ಓದಿ: Bengaluru Power Cut: ನಾಳೆ ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ, ಎಲ್ಲೆಲ್ಲಿ?

ಕುರುಬರಹಳ್ಳಿ, ದರ್ಗಾಜೋಗಿಹಳ್ಳಿ, ಪಾಲನಜೋಗಿಹಳ್ಳಿ, ಕುರುಬರಹಳ್ಳಿ ಆಶ್ರಯ ಬಡಾವಣೆ, ಕೊಡಿಗೇಹಳ್ಳಿ, ಹಸನ್‌ಘಟ್ಟಾ, ತಳಗವಾರ ಮಾದಗೊಂಡನಹಳ್ಳಿ, ಕಂಟನಕುಂಟೆ, ಕೋಳುರು, ಅಂತರಹಳ್ಳಿ ಗೊಲ್ಲಹಳ್ಳಿ, ಆಳ್ಳಾಲಸಂದ್ರ, ಮೇಲಿನ ನಾಯಕರಾಂಡಹಳ್ಳಿ, ಕೆಳಗಿನ ನಾಯಕರಾಂಡಹಳ್ಳಿ, ವಡ್ಡರಹಳ್ಳಿ, ತಿರುಮಗೊಂಡನಹಳ್ಳಿ, ಗಂಗಸಂದ್ರ, ಪೆರಮಗೊಂಡನಹಳ್ಳಿ, ಹಾಡೋನಹಳ್ಳಿ, ಎಸ್ ನಾಗೇನಹಳ್ಳಿ, ಮುದ್ದನಾಯಕನಪಾಳ್ಯ, ರಾಮಯ್ಯನಪಾಳ್ಯ, ತೊಗರಿಘಟ್ಟಾ, ಗಡ್ಡಂಬಚ್ಚಹಳ್ಳಿ, ತಿಮ್ಮಸಂದ್ರ, ಜಯನಗರ, ಪಿಂಡಕೂರು ತಿಮ್ಮನಹಳ್ಳಿ, ನಾಗದೇನಹಳ್ಳಿ, ರಘುನಾಥಪುರ, ಆದಿನಾರಾಯಣ ಹೊಸಹಳ್ಳಿ ಹೀರೆಗುಡ್ಡದಹಳ್ಳಿ, ಮೋಪರಹಳ್ಳಿ, ನಂದಿಮೋರಿ, ಕುರುವಿಗೆರೆ, ಕಂಚಿಗನಾಳ, ರಾಜಘಟ್ಟಾ, ದಾಸಗೊಂಡನಹಳ್ಳಿ, ಅಂಚರಹಳ್ಳಿ, ಗಂಡರಾಜಪುರ, ಹಮಾಮ್, ಬೀಡಿಕೆರೆ, ಸೊಣ್ಣಪ್ಪನಹಳ್ಳಿ, ಶಿವಪುರ, ಕೋಡಿಹಳ್ಳಿ, ಕೊನಘಟ್ಟಾ, ಲಿಂಗನಹಳ್ಳಿ, ನೆಲ್ಲುಕುಂಟೆ, ಕಮಲೂರು, ಮಜರಾಹೊಸಹಳ್ಳಿ, ನಾಗಶೆಟ್ಟಹಳ್ಳಿ, ಶಿರವಾರ, ಮೆಲಿಸಿ, ಅಣಗಲಪುರ, ನೇರಳೆಘಟ್ಟಾ ಹೊನ್ನಾಘಟ್ಟಾ, ಕೆಸ್ತೂರು, ಹಣದೆ, ಮರಳೇನಹಳ್ಳಿ, ಶ್ರೀನಿವಾಸಪುರ, ಸೋಮಶೆಟ್ಟಿಹಳ್ಳಿ, ಕಲ್ಲುದೇವನಹಳ್ಳಿ, ಶಿರವಾರ, ತಿನ್ನೂರು ಹಾಗೂ ಸುತ್ತಮುತ್ತ.

ತಿಪಟೂರು, ಬಂಡಿಹಳ್ಳಿ, ಕೆರೆಗೋಡಿ, ಹಾಲ್ಕುರಿಕೆ, ಗುಂಗುರಮಳೆ, ಕರಡಿ ಉಪಸ್ಥಾವರಗಳ ತ್ರೈಮಾಸಿಕ ನಿರ್ವಹಣೆ ಕಾಮಗಾರಿ ಹಿನ್ನಲೆ ತಾಲೂಕಿನ ನಗರ ಹಾಗೂ ಗ್ರಾಮೀಣ ಭಾಗದ ಎಲ್ಲಾ ಪ್ರದೇಶಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5ಗಂಟೆಯವರೆಗೆ ವ್ಯತ್ಯಯವಾಗಲಿದೆ.

ಇದನ್ನೂ ಓದಿ: ಒಸಿ, ಸಿಸಿ ಇಲ್ಲದೇ ಬೆಸ್ಕಾಂನಿಂದ ವಿದ್ಯುತ್​​ ಹೊಸ ಸಂಪರ್ಕ; ಆನ್ ಲೈನ್​​ ನಲ್ಲಿಯೇ ಅಪ್ಲೈ ಮಾಡಿ

ಇನ್ನು ಕೆಪಿಟಿಸಿಎಲ್ ವತಿಯಿಂದ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕೂಡ ತುರ್ತು ನಿರ್ವಹಣಾ ಕಾರ್ಯವನ್ನು ಕೈಗೊಳ್ಳಲಾಗಿದೆ. ಹಾಗಾಗಿ ಬೆಳಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. 12ನೇ ಹಂತ, 7ನೇ ಹಂತ, 11ನೇ ಹಂತ, ಆರ್​ಜಿಎ ಇನ್‌ಪ್ರಾಟ್ರಾಕ್ಚರ್, 1, 2 ಮತ್ತು 9ನೇ ಎ ಹಂತ, 9ನೇ ಬಿ ಹಂತ, ಇಂಟೆಲ್, ಸ್ಟೇಷನ್ ಆಕ್ಸಿಲರಿ ಸೇರಿದಂತೆ ಸುತ್ತಮುತ್ತಲು ವ್ಯತ್ಯಯವಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:05 am, Fri, 22 August 25