AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೆಟ್ರೋ ಹಳಿಗೆ ಜಿಗಿದು ಸಾಲು ಸಾಲು ಆತ್ಮಹತ್ಯೆ: ಎಚ್ಚೆತ್ತ ಬಿಎಂಆರ್​ಸಿಎಲ್ PSD ಮೊರೆ, ಏನಿದು?

ಸಿಲಿಕಾನ್ ಸಿಟಿ ಜನರ ಮೊಸ್ಟ್ ಹಾಟ್ ಫೇವರೇಟ್ ಟ್ರಾನ್ಸ್ ಪೋರ್ಟ್ ಅಂದರೆ ಅದು ನಮ್ಮ ಮೆಟ್ರೋ. ಟ್ರಾಫಿಕ್ ಕಿರಿಕಿರಿ ಇರೋಲ್ಲ, ಗಂಟೆಗಟ್ಟಲೇ ಕಾಯುವ ಅವಶ್ಯಕತೆಯಿಲ್ಲ. ಆದ್ರೆ, ಮೆಟ್ರೋ ಸ್ಟೇಷನ್​ಗಳು ಇತ್ತೀಚೆಗೆ ಸೂಸೈಡ್ ಸ್ಪಾಟ್ ಆಗುತ್ತಿದ್ದು, ಇದು ಮೆಟ್ರೊ ಸಿಬ್ಬಂದಿಗಳಿಗೆ ಮಾತ್ರವಲ್ಲ, ಪ್ರಯಾಣಿಕರಿಗೂ ಸಮಸ್ಯೆಯಾಗಿದೆ. ಅದಕ್ಕೆ ಕೊನೆಗೂ ಪರಿಹಾರ ಕಂಡುಕೊಳ್ಳಲು ಬಿಎಂಆರ್​ಸಿಎಲ್​ ಮುಂದಾಗಿದೆ.

ಮೆಟ್ರೋ ಹಳಿಗೆ ಜಿಗಿದು ಸಾಲು ಸಾಲು ಆತ್ಮಹತ್ಯೆ: ಎಚ್ಚೆತ್ತ ಬಿಎಂಆರ್​ಸಿಎಲ್ PSD ಮೊರೆ, ಏನಿದು?
ಬಿಎಂಆರ್​ಸಿಎಲ್ PSD ಮೊರೆ,
ಕಿರಣ್​ ಸೂರ್ಯ
| Edited By: |

Updated on: Aug 06, 2024 | 10:07 PM

Share

ಬೆಂಗಳೂರು, ಆ.06: ಮೆಟ್ರೋದಲ್ಲಿ ಹೋಗುವುದು ಸೇಫ್. ಆದ್ರೆ, ಕೆಲ ತಾಂತ್ರಿಕ ಕಾರಣದಿಂದ‌ ಮೆಟ್ರೋ ಆಗಾಗೇ ಕೈ ಕೊಡುತ್ತಿರುವುದು ಎಲ್ಲರಿಗೂ ಗೊತ್ತಿದೆ. ಇದರ ಜೊತೆಗೆ ಈಗ ಮೆಟ್ರೋ(Metro) ಹಳಿ ಮೇಲೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಇದರಿಂದ ಮೆಟ್ರೋ ಸಂಚಾರಕ್ಕೆ ಕುತ್ತು ಬರುತ್ತಿದ್ದು, ಸಡನ್ ಆಗಿ‌ ಹೀಗೆ ಆಗುತ್ತಿರುವುದರಿಂದ ಮೆಟ್ರೋ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣ ಆಗುತ್ತಿದೆ. ಇದನ್ನು ತಡೆಗಟ್ಟಲು ಬಿಎಂಆರ್​ಸಿಎಲ್ ಪ್ಲಾಟ್‌ ಫಾರ್ಮ್ ಸ್ಕ್ರೀನ್‌ ಡೋರ್‌ಗಳ (ಪಿಎಸ್​ಡಿ) ಮೊರೆ ಹೋಗಿದೆ. ಇದು ಮೆಟ್ರೊ ರೈಲಿನ ಪ್ರವೇಶ ದ್ವಾರದಲ್ಲಷ್ಟೇ ತೆರೆದುಕೊಳ್ಳಲಿವೆ.

ಹೊಸ ಮಾರ್ಗದಲ್ಲಿ ಪಿಎಸ್​ಡಿ ಆಳವಡಿಕೆ, ಹಳೆ ಮಾರ್ಗಕ್ಕೂ ಪ್ಲಾನ್?

ಶಾಶ್ವತ ಕಡಿವಾಣ ಹಾಕಲೇಬೇಕು ಎಂದು ಪಣ ತೊಟ್ಟಿರುವ ನಮ್ಮ ಮೆಟ್ರೋ, ಈ ಹಿಂದೆ ಈ ರೀತಿಯ ಆತ್ಮಹತ್ಯೆ ಪ್ರಕರಣಗಳು ಆದಾಗ ಮ್ಯಾನ್ ಪವರ್ ಹೆಚ್ಚು ಮಾಡಿದ್ದರು. ಜೊತೆಗೆ ಜನದಟ್ಟಣೆ ಇರುವ ಸ್ಟೇಷನ್​ಗಳಲ್ಲಿ ಬ್ಯಾರಿಕೇಡ್ ಆಳವಡಿಸಿದ್ದರು. ಇದರಿಂದ ಆತ್ಮಹತ್ಯೆ ಮಾಡಿಕೊಳ್ಳೋರನ್ನ ತಡೆಯಲು ಆಗೋಲ್ಲ, ಆಕಸ್ಮಿಕವಾಗಿ ಹಳಿ ಮೇಲೆ ಬಿದ್ದ ಉದಾಹರಣೆಗಳೇ ಇಲ್ಲ.‌ ಹೀಗಾಗಿ ಹೊಸ ಮಾರ್ಗಗಳಾದ ಗೊಟ್ಟಿಗೆರೆ ಯಿಂದ ನಾಗವಾರ (ಪಿಂಕ್‌ ಲೈನ್) ಸಿಲ್ಕ್ ಬೋರ್ಡ್ ಯಿಂದ ಅಂತರರಾಷ್ಟ್ರೀಯ ಏರ್ಪೋರ್ಟ್ (ಬ್ಲೂ ಲೈನ್) ನಲ್ಲಿ ಪಿಎಸ್​ಡಿ ಡೋರ್ ಅಳವಡಿಸಲು ಖಾಸಗಿ ಕಂಪನಿಗೆ 152 ಕೋಟಿ ರೂಪಾಯಿ ವೆಚ್ಚದಲ್ಲಿ ಗುತ್ತಿಗೆ ನೀಡಲಾಗಿದೆ.

ಇದನ್ನೂ ಓದಿ:ಬೆಂಗಳೂರು ನಮ್ಮ ಮೆಟ್ರೋ: ಹೊಸ ಮೆಟ್ರೋ ರೈಲುಗಳಿಗಾಗಿ ಸಿದ್ಧವಾಗುತ್ತಿವೆ ಐದು ಡಿಪೋಗಳು

ಇನ್ನು ಹಳೆಯ ಮಾರ್ಗಕ್ಕೆ ಸೇಫ್ಟಿ ಡೋರ್ಸ್ ಹಾಕೋದಕ್ಕೆ ಚಿಂತನೆ ನಡೆದಿದೆ. ಈಗ ಇರುವ ಮೆಟ್ರೋ ಸ್ಟೇಷನ್ ಅನ್ನು ಪಿಎಸ್​ಡಿ ಟೆಕ್ನಾಲಜಿ ಜೊತೆಗೆ ಹೊಂದಿಕೆ ಮಾಡಬೇಕು. ಇದು ತಾಂತ್ರಿಕ ಸವಾಲು, ಜೊತೆಗೆ ಒಂದು ನಿಲ್ದಾಣದಲ್ಲಿ ಪಿಎಸ್ ಡಿ ಆಳವಡಿಕೆ ಮಾಡಲು ಕನಿಷ್ಠ 10 ಕೋಟಿ ಬೇಕಾಗುತ್ತದೆ. ಜನರ ಸೇಫ್ಟಿ ದೃಷ್ಟಿಯಿಂದ ನಮ್ಮ ಮೆಟ್ರೋ ಈ ಎರಡು ಸವಾಲನ್ನ ಸ್ವೀಕರಿಸಿ ಪ್ರಯಾಣಿಕರಿಗೆ ತೊಂದರೆ ಆಗದಂತೆ ಈ ಕಾಮಗಾರಿ ಮಾಡಬೇಕಾಗಿದೆ.

ಇದನೆಲ್ಲ ಉನ್ನತ ಮಟ್ಟದಲ್ಲಿ ಸಭೆ ಮಾಡಲಾಗುತ್ತಿದೆ. ಪಿಎಸ್​ಡಿ ಡೋರ್ ಅಳವಡಿಸಲು ಮುಂದಾಗಿರುವ ಮೆಟ್ರೋ ಬಗ್ಗೆ ಪ್ರಯಾಣಿಕರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಿನಲ್ಲಿ, ನಮ್ಮ‌ ಮೆಟ್ರೋ ಸಿಲಿಕಾನ್ ಸಿಟಿ ಜನರ ಬೆಸ್ಟ್ ಟ್ರಾನ್ಸ್ ಪೋರ್ಟ್, ಹೀಗೆ ಆತ್ಮಹತ್ಯೆ ಮಾಡಿಕೊಳ್ಳೋ‌ ಜಾಗವಂತೂ ಖಂಡಿತವಲ್ಲ. ಆದಷ್ಟು ಬೇಗ ಎಲ್ಲ ಕಡೆ ಇನ್ನಷ್ಟು ಸೇಫ್ಟಿ ಕೈಗೊಂಡರೆ ಇತಂಹ ಘಟನೆಗಳಿಗೆ ಬ್ರೇಕ್ ಬೀಳೋದು ಗ್ಯಾರೆಂಟಿ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Kiran Surya
Kiran Surya

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ