ಟಿವಿ9 ರಿಯಾಲಿಟಿ ಚೆಕ್ ನಲ್ಲಿ ಬಯಲಾಯ್ತು ಸರ್ಕಾರದ ವೈಫಲ್ಯ: ಓಲಾ, ಊಬರ್​ಗೆ ನೋಟಿಸ್ ನೀಡಿದ ನಂತರವೂ ದರ ದುಪ್ಪಟ್ಟು ವಸೂಲಿ!

ಓಲಾ, ಊಬರ್ ಕಂಪನಿಗಳು ಪ್ರಯಾಣಿಕರಿಂದ ದುಪ್ಪಟ್ಟು ದರ ವಸೂಲಿ ಮಾಡುತ್ತಿದೆ. ಈ ಬಗ್ಗೆ ಈಗಾಗಲೇ ಟಿವಿ9 ವರದಿ ಮಾಡಿದ್ದು ಇಂದು ಓಲಾ ಊಬರ್ ಕಂಪನಿಗಳು ಆಟೋಗಳನ್ನು ನಿಲ್ಲಿಸಿದ್ದವಾ ಅಥವಾ ಇಲ್ವ ಎಂಬ ಬಗ್ಗೆ ಟಿವಿ9 ರಿಯಾಲಿಟಿ ಚೆಕ್ ಮಾಡಿದೆ.

ಟಿವಿ9 ರಿಯಾಲಿಟಿ ಚೆಕ್ ನಲ್ಲಿ ಬಯಲಾಯ್ತು ಸರ್ಕಾರದ ವೈಫಲ್ಯ: ಓಲಾ, ಊಬರ್​ಗೆ ನೋಟಿಸ್ ನೀಡಿದ ನಂತರವೂ ದರ ದುಪ್ಪಟ್ಟು ವಸೂಲಿ!
ಸಾಂದರ್ಭಿಕ ಚಿತ್ರ
Follow us
| Updated By: ಆಯೇಷಾ ಬಾನು

Updated on:Oct 10, 2022 | 11:46 AM

ಬೆಂಗಳೂರು: ಓಲಾ(Ola), ಉಬರ್(Uber) ಕಂಪನಿಗಳು ಪ್ರಯಾಣಿಕರ ಬಳಿ ದುಪ್ಪಟ್ಟು ಹಣ ವಸೂಲಿ ಮಾಡುತ್ತಿವೆ. ಈ ಕಂಪನಿಗಳಿಗೆ ಕ್ಯಾಬ್ ನಡೆಸಲು ಮಾತ್ರ ಅವಕಾಶ ನೀಡಲಾಗಿದೆ ಆದರೆ ಇವರು ಅನಧಿಕೃತವಾಗಿ ಆಟೋಗಳನ್ನು ರನ್ ಮಾಡ್ತಿದ್ದಾರೆ. ಹೀಗಾಗಿ ಈ ಕೂಡಲೇ ತಮ್ಮ ಆ್ಯಪ್ ನಲ್ಲಿ ಆಟೋಗಳನ್ನು ನಿಲ್ಲಿಸಬೇಕು ಎಂದು ಸಾರಿಗೆ ಇಲಾಖೆ(Karnataka Transportation Department) ಖಡಕ್ ಆಗಿ ನೋಟಿಸ್ ನೀಡಿದೆ. ಆದ್ರೆ ನೋಟಿಸ್ ನೀಡಿ ನಾಲ್ಕು ದಿನ ಕಳೆದರೂ ಯಾವುದೇ ಕ್ರಮ ಜರುಗಿಲ್ಲ. ಈ ಬಗ್ಗೆ ಈಗಾಗಲೇ ಟಿವಿ9 ವರದಿ ಮಾಡಿದ್ದು ಇಂದು ಓಲಾ ಊಬರ್ ಕಂಪನಿಗಳು ಆಟೋಗಳನ್ನು ನಿಲ್ಲಿಸಿದ್ದವಾ ಅಥವಾ ಇಲ್ವ ಎಂಬ ಬಗ್ಗೆ ಟಿವಿ9 ರಿಯಾಲಿಟಿ ಚೆಕ್(TV9 Reality Check) ಮಾಡಿದೆ.

ಟಿವಿ9 ರಿಯಾಲಿಟಿ ಚೆಕ್ ನಲ್ಲಿ ಬಯಲಾಯ್ತು ಕಳ್ಳಾಟ

ಓಲಾ, ಊಬರ್ ಕಂಪನಿಗಳು ಪ್ರಯಾಣಿಕರಿಂದ ದುಪ್ಪಟ್ಟು ದರ ವಸೂಲಿ ಮಾಡುತ್ತಿದೆ. ರಾಜ್ಯ ಸಾರಿಗೆ ಇಲಾಖೆಯ ರೂಲ್ಸ್ ಪ್ರಕಾರ ಎರಡು ಕಿಮೀ ಅಂದರೆ ಮಿನಿಮಮ್ ಚಾರ್ಜ್ 30 ರುಪಾಯಿ ಮಾತ್ರ ಪಡೆದುಕೊಳ್ಳಬೇಕು ಎಂದು ನಿಗಧಿ ಮಾಡಲಾಗಿದೆ. ಆದರೆ ಈ ಎರಡು ಆ್ಯಪ್ ಬೇಸ್ಡ್ ಕಂಪನಿಗಳು ಪ್ರಯಾಣಿಕರಿಂದ ದುಪ್ಪಟ್ಟು ಹಣ ಪಡೆದುಕೊಳ್ಳುತ್ತಿವೆ. ಈ ಬಗ್ಗೆ ಟಿವಿ9 ಈ ಹಿಂದೆ ಸುದ್ದಿ ಮಾಡಿತ್ತು. ಅಲ್ಲದೆ ಈ ಬಗ್ಗೆ ಪ್ರಯಾಣಿಕರಿಂದ ಸಾರಿಗೆ ಆಯುಕ್ತರಿಗೆ ದೂರು ಬಂದಿತ್ತು. ಈ ಹಿನ್ನೆಲೆ ರಾಜ್ಯ ಸಾರಿಗೆ ಇಲಾಖೆ ಈ ಎರಡೂ ಕಂಪನಿಗಳಿಗೆ ನೋಟಿಸ್ ಜಾರಿ ಮಾಡಿತ್ತು.

ಕ್ಯಾಬ್ ನಡೆಸಲು ಮಾತ್ರ ಅನುಮತಿ ನೀಡಲಾಗಿದ್ದು ತಮ್ಮ ಆ್ಯಪ್ ನಲ್ಲಿ ಅನಧಿಕೃತವಾಗಿ ಆಟೋ, ಬೈಕ್ ಟ್ಯಾಕ್ಸಿಗಳನ್ನು ರನ್ ಮಾಡಲಾಗುತ್ತಿದೆ. ಹೀಗಾಗಿ ಈ ಕೂಡಲೇ ಅವುಗಳ ಸೇವೆಯನ್ನು ನಿಲ್ಲಿಸಿ. ಮತ್ತು ದುಪ್ಪಟ್ಟು ದರ ವಸೂಲಿ ಬಗ್ಗೆ ಮೂರು ದಿನದೊಳಗೆ ಪ್ರತಿಕ್ರಿಯೆ ನೀಡಬೇಕು ಎಂದು ಅ.6ರಂದು ನೋಟಿಸ್ ನೀಡಿದ್ದರು. ಆದರೆ ಈ ನೋಟಿಸ್ ನೀಡಿ ನಾಲ್ಕು ದಿನ ಕಳೆದರೂ ಇಂದು ವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದಕ್ಕೆ ಕ್ಯಾಬ್ ಚಾಲಕರ ಸಂಘದ ಮುಖಂಡರು ಸಾರಿಗೆ ಇಲಾಖೆಗೆ ಧೈರ್ಯ ಇಲ್ಲ. ಕೇವಲ ನೋಟಿಸ್ ಕೊಟ್ಟು ಸುಮ್ಮನಾಗಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಇದನ್ನೂ ಓದಿ: Karwa Chauth 2022: ನವವಿವಾಹಿತ ಮಹಿಳೆಯರು ಈ ವರ್ಷ ಉಪವಾಸ ವ್ರತ ಆಚರಿಸಬಾರದು ಏಕೆ ಗೊತ್ತೇ?

ಸದ್ಯ ಈ ಅಕ್ರಮ ಬಯಲು ಮಾಡಲು ಟಿವಿ9 ರಿಯಾಲಿಟಿ ಚೆಕ್​ ನಡೆಸಿದ್ದು ನಾಲ್ಕು ಸ್ಥಳಗಳಿಂದ ಓಲಾ, ಊಬರ್ ಕ್ಯಾಬ್ ಬುಕ್​ ಮಾಡಿ ದರ ಬದಲಾವಣೆ ಬಗ್ಗೆ ಪರಿಶೀಲನೆ ನಡೆಸಿದೆ. ಮೊದಲಿಗೆ ಲಾಲ್ ಬಾಗ್ ಮೆಟ್ರೋ ಸ್ಟೇಷನ್ ನಿಂದ ಬನಶಂಕರಿ ಮೆಟ್ರೋ ಸ್ಟೇಷನ್ ವರೆಗೆ ಓಲಾ ಆ್ಯಪ್ ನಲ್ಲಿ ಕ್ಯಾಬ್ ಬುಕ್ ಮಾಡಲಾಗಿದ್ದು ನಾಲ್ಕು ಕಿಮೀ ದೂರಕ್ಕೆ ಮಿನಿಮಮ್ 75 ರುಪಾಯಿ ಇರೋದು ಓಲಾದಲ್ಲಿ 87 ರುಪಾಯಿ ದರ ವಸೂಲಿ ಮಾಡಲಾಗಿದೆ. ಇದೇ ರೀತಿ ನಾಲ್ಕು ಸ್ಥಳಗಳಿಂದ ಬುಕ್ ಮಾಡಿ ಚೆಕ್ ಮಾಡಿದಾಗ ಓಲಾ, ಊಬರ್ ದುಪ್ಪಟ್ಟು ಹಣ ವಸೂಲಿ ಮಾಡುತ್ತಿರುವುದು ಬಯಲಾಗಿದೆ. ಎರಡು ಕಿಮೀ ದೂರಕ್ಕೆ ಸರ್ಕಾರ ಮೂವತ್ತು ರೂಪಾಯಿ ನಿಗದಿ ಮಾಡಿದೆ ಆದರೆ ಊಬರ್ ಕಂಪನಿ ಆ್ಯಪ್ ನಲ್ಲಿ 76 ರೂಪಾಯಿ ದರ ವಸೂಲಿ ಮಾಡಲಾಗುತ್ತಿದೆ.

ಸಾರಿಗೆ ಇಲಾಖೆ ನೋಟಿಸ್ ನೀಡಿದ್ದರು ಈ ಕಂಪನಿಗಳು ಮಾತ್ರ ತಮ್ಮ ಅಕ್ರಮವನ್ನು ನಿಲ್ಲಿಸಿಲ್ಲ. ಅಲ್ಲದೆ ರಾಜ್ಯ ಸಾರಿಗೆ ಇಲಾಖೆ ಕೂಡು ಕ್ರಮ ಕೈಗೊಳ್ಳದೇ ಸುಮ್ಮನಿರೋದು ಹಲವು ಅನುಮಾನಗಳಿಗೆ ದಾರಿ ಮಾಡಿದೆ. ಅಕ್ರಮ ಸಂಚಾರದಿಂದ ಬರುವ ಆದಾಯದಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳಿಗೂ ಪಾಲಿದೆ ಹೀಗಾಗಿ ಅವರು ಸುಮ್ಮನಿದ್ದಾರೆ ಎಂದು ಕೆಲ ಸಂಘಟನೆಗಳು ಆಕ್ರೋಶ ಹೊರ ಹಾಕಿವೆ. ಇನ್ನು ಓಲಾ, ಊಬರ್​ನಲ್ಲಿ ಆಟೋಗಳಿಗೆ ಅವಕಾಶವಿಲ್ಲದಿದ್ದರೂ ಆಟೋಗಳು ರಾಜಾರೋಷವಾಗಿ ಸಂಚರಿಸುತ್ತಿವೆ. ಇದನ್ನೂ ಓದಿ: ಓಲಾ, ಊಬರ್ ಆಟೋ ಚಾಲಕರೇ ಹುಷಾರ್! ಮಧ್ಯಾಹ್ನದ ನಂತರ ಫೀಲ್ಡಿಗೆ ಇಳಿಯಲಿದ್ದಾರೆ ಆರ್​ಟಿಒ ಅಧಿಕಾರಿಗಳು

ಸಾರಿಗೆ ಸಚಿವರು ಮತ್ತು ಸಿಎಂ ಮನೆ ಮುತ್ತಿಗೆ ಹಾಕುತ್ತೇವೆ

ಇನ್ನು ಮತ್ತೊಂದೆಡೆ ಕ್ರಮ ಕೈಗೊಳ್ಳುತ್ತೀವಿ ಎಂಬ ಹೆಸರಲ್ಲಿ ಆರ್​ಟಿಒ ಅಧಿಕಾರಿಗಳು ಓಲಾ ಊಬರ್ ಆಟೋಗಳನ್ನು ಸೀಜ್ ಮಾಡಿದ್ರೆ ಅಥವಾ ಆಟೋ ಚಾಲಕರಿಗೆ ದಂಡ ಹಾಕಿದ್ರೆ ಸಾರಿಗೆ ಸಚಿವರು ಮತ್ತು ಸಿಎಂ ಮನೆ ಮುತ್ತಿಗೆ ಹಾಕುತ್ತೇವೆ ಎಂದು ಆದರ್ಶ ಆಟೋ ಅಸೋಸಿಯೇಷನ್ ಅಧ್ಯಕ್ಷ ಮಂಜುನಾಥ್ ಎಚ್ಚರಿಕೆ ನೀಡಿದ್ದಾರೆ.

ಇನ್ನೂ ಈ ಎರಡು ಕಂಪನಿಗಳ ಅಕ್ರಮ ಆಟೋ ಸೇವೆ ಮತ್ತು ದುಪ್ಪಟ್ಟು ದರ ವಸೂಲಿ ಬಗ್ಗೆ ಪ್ರತಿಕ್ರಿಯೆ ಕೇಳಲು ಎರಡು ಕಂಪನಿಗೂ ಟಿವಿ9 ಕಾಲ್ ಮಾಡಿತ್ತು. ಆದ್ರೆ ಈ ಎರಡು ಕಂಪನಿಯ ಪೋನ್ ನಂಬರ್ ಗಳು ಅಸ್ತಿತ್ವದಲ್ಲಿ ಇಲ್ಲ ಎಂದು ಹೇಳ್ತಿದೆ.

ವರದಿ: ಕಿರಣ್ ಸೂರ್ಯ, ಟಿವಿ9 ಬೆಂಗಳೂರು

Published On - 11:43 am, Mon, 10 October 22

ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು