TV9 Kannada News Live: ದೆಹಲಿಗೆ ಪ್ರಯಾಣ ಬೆಳೆಸಿದ ಸಿಎಂ ಡಿಕೆ ಶಿವಕುಮಾರ್; ಈ ಹೊತ್ತಿನ ಪ್ರಮುಖ ಸುದ್ದಿಗಳು ಇಲ್ಲಿವೆ

Karnataka News Today Live Updates: ಮಾಜಿ ಸಚಿವ ಬಿ.ಸಿ. ನಾಗೇಶ್ ನಿಧನ, ಸಿಎಂ ಡಿ.ಕೆ. ಶಿವಕುಮಾರ್ ದೆಹಲಿ ಪ್ರವಾಸ ಹಾಗೂ ಶಿವಮೊಗ್ಗ- ತಾಳಗುಪ್ಪ ರೈಲು ಸಂಚಾರದಲ್ಲಿ ವ್ಯತ್ಯಯ; ಆಗಸ್ಟ್ 19 ರ ರಾಜ್ಯದ ಪ್ರಮುಖ ಮುಖ್ಯಾಂಶಗಳ ಲೈವ್ ಅಪ್‌ಡೇಟ್ಸ್ ಇಲ್ಲಿದೆ.

TV9 Kannada News Live: ದೆಹಲಿಗೆ ಪ್ರಯಾಣ ಬೆಳೆಸಿದ ಸಿಎಂ ಡಿಕೆ ಶಿವಕುಮಾರ್; ಈ ಹೊತ್ತಿನ ಪ್ರಮುಖ ಸುದ್ದಿಗಳು ಇಲ್ಲಿವೆ
ದೆಹಲಿಗೆ ಪ್ರಯಾಣ ಬೆಳೆಸಿದ ಸಿಎಂ ಡಿಕೆ ಶಿವಕುಮಾರ್

Updated on: Aug 19, 2026 | 11:51 AM

LIVE NEWS & UPDATES

  • 19 Aug 2026 11:50 AM (IST)

    ನಕಲಿ ಔಷಧಿ ಜಾಲ ತಡೆಗೆ ಎಸ್‍ಐಟಿ ರಚನೆ: ಸಚಿವ ಯು.ಟಿ.ಖಾದರ್

    ರಾಜ್ಯದಲ್ಲಿ ನಕಲಿ ಔಷಧಿ ಹಾಗೂ ಕಾಸ್ಮೆಟಿಕ್ಸ್ ಜಾಲ ಬಯಲಾದ ಹಿನ್ನೆಲೆಯಲ್ಲಿ, ಸಮಗ್ರ ತನಿಖೆಗೆ ವಿಶೇಷ ತನಿಖಾ ತಂಡ (SIT) ರಚಿಸಲು ಸರ್ಕಾರ ನಿರ್ಧರಿಸಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ. ದುಬೈನಲ್ಲಿರುವ ಪ್ರಶಾಂತ್ ಎಂಬಾತ ಸಿದ್ದಯ್ಯ ಎಂಬುವರ ಫಾರ್ಮ್‌ಹೌಸ್ ಲೀಸ್‌ಗೆ ಪಡೆದು, ಬೇರೆ ರಾಜ್ಯಗಳಿಂದ ತಂದ ನಕಲಿ ಮಾತ್ರೆಗಳಿಗೆ ಮಲ್ಟಿನ್ಯಾಷನಲ್ ಕಂಪನಿಗಳ ಲೇಬಲ್ ಹಾಕಿ ಮಾರಾಟ ಮಾಡುತ್ತಿದ್ದ. ಐಸಿಯು ಔಷಧಿಗಳನ್ನೂ ನಕಲಿ ಮಾಡಲಾಗಿದ್ದು, ಹಿಮಾಚಲ ಪ್ರದೇಶ, ತೆಲಂಗಾಣ ಸೇರಿದಂತೆ ದೇಶಾದ್ಯಂತ ಈ ಜಾಲ ಹರಡಿದೆ. ಪ್ರಸ್ತುತ ಪ್ರಭುದೇವ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಸಾರ್ವಜನಿಕರು ನಕಲಿ ಜಾಲದ ಮಾಹಿತಿ ನೀಡಿದರೆ ಸೂಕ್ತ ಬಹುಮಾನ ನೀಡಲಾಗುವುದು.

  • 19 Aug 2026 11:45 AM (IST)

    ಮತದಾರರ ಪಟ್ಟಿಯಿಂದ 1.71 ಲಕ್ಷ ಜನರ ಹೆಸರು ತೆರವು

    ಕೋಲಾರ ಜಿಲ್ಲೆಯಲ್ಲಿ ನಡೆಸಲಾದ ಮನೆ-ಮನೆ ಗಣತಿಯಲ್ಲಿ 1,71,034 ಮತದಾರರ ಹೆಸರುಗಳನ್ನು ಪಟ್ಟಿಯಿಂದ ಹೊರಗಿಡಲಾಗಿದೆ. ಒಟ್ಟು ವಿತರಿಸಲಾದ 12.95 ಲಕ್ಷ ಗಣತಿ ನಮೂನೆಗಳಲ್ಲಿ 11.24 ಲಕ್ಷ ನಮೂನೆಗಳ ಡಿಜಿಟಲೀಕರಣ ಪೂರ್ಣಗೊಂಡಿದೆ. ಪಟ್ಟಿಯಿಂದ ಹೊರಬಿದ್ದವರಲ್ಲಿ ಶಾಶ್ವತ ಸ್ಥಳಾಂತರಗೊಂಡವರು (86,992), ಗೈರುಹಾಜರಾದವರು, ಮೃತಪಟ್ಟವರು ಹಾಗೂ ದ್ವಿ-ನೋಂದಾಯಿತರು ಸೇರಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಮಂಗಳಾ ತಿಳಿಸಿದ್ದಾರೆ.

  • 19 Aug 2026 11:44 AM (IST)

    ತಮಿಳುನಾಡು ಶಾಸಕರಿಗೆ ಹೊಸ ಕಾರು ನೀಡಲು ಸಿಎಂ ವಿಜಯ್ ನಿರ್ಧಾರ

    ತಮಿಳುನಾಡು ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಸಂಚರಿಸಿ ಜನರ ಕುಂದುಕೊರತೆ ಆಲಿಸಲು ಸಿಎಂ ವಿಜಯ್ ಹೊಸ ಕಾರು ನೀಡಲು ನಿರ್ಧರಿಸಿದ್ದಾರೆ. ಕಾರಿನ ವೆಚ್ಚ ಮತ್ತು ಚಾಲಕರ ಸಂಬಳಕ್ಕಾಗಿ ಹೆಚ್ಚುವರಿ 25,000 ರೂ. ಸೇರಿದಂತೆ ಸರ್ಕಾರದಿಂದ ತಿಂಗಳಿಗೆ ಒಟ್ಟು 75,000 ರೂ. ಹಣ ನೀಡಲಾಗುವುದು.

  • 19 Aug 2026 11:44 AM (IST)

    ಮೈಸೂರು ದಸರಾ: ವಿರೋಧದ ನಡುವೆಯೂ ವೈಭವದ ಕಂಬಳ ಉತ್ಸವಕ್ಕೆ ಸಿದ್ಧತೆ

    ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ-2026ರ ಅಂಗವಾಗಿ ಅಕ್ಟೋಬರ್ 18 ಮತ್ತು 19 ರಂದು ವೈಭವದ ಕಂಬಳ ಪಂದ್ಯಾಟ ಆಯೋಜನೆಗೆ ಸಿದ್ಧತೆಗಳು ಭರದಿಂದ ಸಾಗಿವೆ. ಮೈಸೂರಿನ ಸಾತಗಳ್ಳಿ ರಿಂಗ್ ರಸ್ತೆ ಸಮೀಪವಿರುವ ವಿಟಿಯು ಹತ್ತಿರದ ಜಾಗದಲ್ಲಿ ಟ್ರ್ಯಾಕ್ ಹಾಗೂ ಗದ್ದೆ ಹದಗೊಳಿಸುವ ಕಾರ್ಯ ಆರಂಭವಾಗಿದೆ. ಈ ಬಾರಿಯ ಕಂಬಳ ಕ್ರೀಡೆಗಾಗಿ ಈಗಾಗಲೇ 130 ಜೋಡಿ ಕೋಣಗಳು ನೋಂದಣಿಯಾಗಿದ್ದು, ಕಾರ್ಯಕ್ರಮದ ಯಶಸ್ವಿ ಆಯೋಜನೆಗಾಗಿ ವಿವಿಧ ಕಂಬಳ ಸಮಿತಿಗಳ ಜೊತೆ ಸಭೆ ನಡೆಸಿ ರೂಪುರೇಷೆಗಳನ್ನು ಸಿದ್ಧಪಡಿಸಲಾಗಿದೆ.

  • 19 Aug 2026 10:56 AM (IST)

    ನಾಗೇಂದ್ರರಿಂದ ದಲಿತ ಅಸ್ತ್ರ ದುರುಪಯೋಗ: ಜನಾರ್ದನ್ ರೆಡ್ಡಿ ಆರೋಪ

    ಭ್ರಷ್ಟಾಚಾರ ಮುಚ್ಚಿಕೊಳ್ಳಲು ದಲಿತ ಜಾತಿ ಅಸ್ತ್ರ ಬಳಸುವುದು ತಪ್ಪು ಎಂದು ಹಿರಿಯ ಶಾಸಕ ಜನಾರ್ದನ್ ರೆಡ್ಡಿ ಹೇಳಿದ್ದಾರೆ. ಹಣ ರಿಕವರಿ ಆದ ತಕ್ಷಣ ಕಳ್ಳತನದ ಅಪರಾಧ ಇಲ್ಲವಾಗುವುದಿಲ್ಲ. ನಾಗೇಂದ್ರ ಕೇವಲ ಮುಖವಾಡ, ಈ ಹಣ ಕಾಂಗ್ರೆಸ್ ಹೈಕಮಾಂಡ್‌ಗೆ ತಲುಪಿದೆ ಎಂದು ಆರೋಪಿಸಿರುವ ಅವರು, ನಾಗೇಂದ್ರರನ್ನು ಸಚಿವಸ್ಥಾನದಿಂದ ತೆಗೆದು ಬೇರೆ ದಲಿತರನ್ನು ಸಚಿವರನ್ನಾಗಿ ಮಾಡಲು ಆಗ್ರಹಿಸಿದ್ದಾರೆ.

  • 19 Aug 2026 10:28 AM (IST)

    ನಕಲಿ ಔಷಧ, ಕಾಸ್ಮೆಟಿಕ್ಸ್ ಜಾಲದ ಮೇಲೆ ದಾಳಿ

    ರಾಷ್ಟ್ರಮಟ್ಟದಲ್ಲಿ ಸಕ್ರಿಯವಾಗಿರುವ ನಕಲಿ ಬ್ರಾಂಡೆಡ್ ಔಷಧ ಹಾಗೂ ಕಾಸ್ಮೆಟಿಕ್ಸ್ ಜಾಲದ ಮೇಲಿನ ದಾಳಿ ಕುರಿತು ಆರೋಗ್ಯ ಸಚಿವ ಯು.ಟಿ. ಖಾದರ್ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (SIT) ರಚಿಸಲಿದ್ದು, ನಕಲಿ ಜಾಲದ ಬಗ್ಗೆ ಮಾಹಿತಿ ನೀಡುವವರಿಗೆ ಬಹುಮಾನ ಘೋಷಿಸಲಾಗಿದೆ.

Breaking News Today Live Updates in Kannada: ಮಾಜಿ ಶಿಕ್ಷಣ ಸಚಿವ, ಬಿಜೆಪಿ ಹಿರಿಯ ನಾಯಕ ಬಿ.ಸಿ. ನಾಗೇಶ್ (72) ಅನಾರೋಗ್ಯದಿಂದ ನಿಧನರಾಗಿದ್ದು, ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಲ್ಲೇಶ್ವರಂ ಕಚೇರಿಗೆ ಭೇಟಿ ನೀಡಿ ಶ್ರದ್ಧಾಂಜಲಿ ಸಲ್ಲಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಪಕ್ಷದ ಕೆಲಸಕ್ಕಾಗಿ ಇಂದು ದೆಹಲಿ ಹಾಗೂ ನಾಳೆ ಚೆನ್ನೈಗೆ ಪ್ರಯಾಣಿಸುತ್ತಿರುವುದಾಗಿ ತಿಳಿಸಿದ್ದಾರೆ. ಮತ್ತೊಂದೆಡೆ, ಮಲ್ಲಸಂದ್ರ-ಗುಬ್ಬಿ ನಡುವಿನ ಇಂಜಿನಿಯರಿಂಗ್ ಕಾಮಗಾರಿಯಿಂದಾಗಿ ಆಗಸ್ಟ್ 19, 22, 23 ಮತ್ತು 26 ರಂದು ಶಿವಮೊಗ್ಗ, ತಾಳಗುಪ್ಪ ಹಾಗೂ ಚಿಕ್ಕಮಗಳೂರು ಮಾರ್ಗದ ಹಲವು ರೈಲು ಸಂಚಾರ ರದ್ದು ಮತ್ತು ಮಾರ್ಗ ಬದಲಾವಣೆಯಾಗಿದ್ದು, ಪ್ರಯಾಣಿಕರು ವೇಳಾಪಟ್ಟಿ ಪರಿಶೀಲಿಸಲು ರೈಲ್ವೆ ಇಲಾಖೆ ಕೋರಿದೆ. ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.

Tv9 Kannada Live TV ಇಲ್ಲಿ ವೀಕ್ಷಿಸಿ

YouTube video player

Published On - 10:26 am, Wed, 19 August 26

Loading...
Unable to load recommendations.
Follow Us