
Breaking News Today Live Updates in Kannada: ಮಾಜಿ ಶಿಕ್ಷಣ ಸಚಿವ, ಬಿಜೆಪಿ ಹಿರಿಯ ನಾಯಕ ಬಿ.ಸಿ. ನಾಗೇಶ್ (72) ಅನಾರೋಗ್ಯದಿಂದ ನಿಧನರಾಗಿದ್ದು, ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಲ್ಲೇಶ್ವರಂ ಕಚೇರಿಗೆ ಭೇಟಿ ನೀಡಿ ಶ್ರದ್ಧಾಂಜಲಿ ಸಲ್ಲಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಪಕ್ಷದ ಕೆಲಸಕ್ಕಾಗಿ ಇಂದು ದೆಹಲಿ ಹಾಗೂ ನಾಳೆ ಚೆನ್ನೈಗೆ ಪ್ರಯಾಣಿಸುತ್ತಿರುವುದಾಗಿ ತಿಳಿಸಿದ್ದಾರೆ. ಮತ್ತೊಂದೆಡೆ, ಮಲ್ಲಸಂದ್ರ-ಗುಬ್ಬಿ ನಡುವಿನ ಇಂಜಿನಿಯರಿಂಗ್ ಕಾಮಗಾರಿಯಿಂದಾಗಿ ಆಗಸ್ಟ್ 19, 22, 23 ಮತ್ತು 26 ರಂದು ಶಿವಮೊಗ್ಗ, ತಾಳಗುಪ್ಪ ಹಾಗೂ ಚಿಕ್ಕಮಗಳೂರು ಮಾರ್ಗದ ಹಲವು ರೈಲು ಸಂಚಾರ ರದ್ದು ಮತ್ತು ಮಾರ್ಗ ಬದಲಾವಣೆಯಾಗಿದ್ದು, ಪ್ರಯಾಣಿಕರು ವೇಳಾಪಟ್ಟಿ ಪರಿಶೀಲಿಸಲು ರೈಲ್ವೆ ಇಲಾಖೆ ಕೋರಿದೆ. ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.
ಚಾಮರಾಜನಗರ ಶೂಟೌಟ್ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಮ್ಯಾಜಿಸ್ಟ್ರೀಟ್ ತನಿಖೆಗೆ ನೀಡಲಾಗಿದೆ. ಇದರ ಮಧ್ಯೆ ಇದೀಗ ಈ ಪ್ರಕರಣದಲ್ಲಿ ಮಾನವ ಹಕ್ಕುಗಳ ಆಯೋಗ ಎಂಟ್ರಿ ಕೊಟ್ಟಿದ್ದು, ಮೂವರ ಸಾವಿನ ಕುರಿತು ಸತ್ಯಾ ಸತ್ಯತೆ ತಿಳಿಯಲು ಮಾನವ ಹಕ್ಕು ಆಯೋಗದ ಡಿವೈ ಎಸ್ಪಿ ಅಶ್ವತ್ಥನಾರಾಯಣ ಮತ್ತು ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿದೆ.
ದೆಹಲಿಯ ಇಂದಿರಾ ಭವನದಲ್ಲಿ ನಡೆದ ಸಿಡಬ್ಲ್ಯುಸಿ ಮೀಟಿಂಗ್ ಅಂತ್ಯಗೊಂಡಿದ್ದು, ಈ ಸಭೆಯಲ್ಲಿ ಭಾಗಿಯಾಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯನವರು ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೇ ಕರ್ನಾಟಕ ಭವನದತ್ತ ಹೊರಟರು.
ರಾಜ್ಯ ಸರ್ಕಾರದ 2023ರ ಮಾರ್ಚ್ 14ರ ನಿರ್ದೇಶನ ಉಲ್ಲಂಘಿಸಿ ಹಂಚಿಕೆ ಮಾಡಿರುವ ಮುಡಾ ನಿವೇಶನಗಳ ವಿರುದ್ಧ ಸರ್ಕಾರ ಕ್ರಮ ಕೈಗೊಂಡಿದೆ. ಮುಡಾ ಬದಲಿ ನಿವೇಶನ ಹಂಚಿಕೆ ಮಾಡಿರುವ ಎಲ್ಲಾ ಆದೇಶಗಳನ್ನು ರದ್ದುಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.ನೋಂದಣಿಯಾಗಿರುವ ಬದಲಿ ನಿವೇಶನಗಳ ಖಾತೆ ಮಾಡುವುದನ್ನುತಡೆಹಿಡಿಯಲು ಸ್ಥಳೀಯ ಸಂಸ್ಥೆಗಳಿಗೆ ರಾಜ್ಯ ಸರ್ಕಾರ ನಿರ್ದೇಶನ ನೀಡಿದೆ. ಅಲ್ಲದೇ ಸರ್ಕಾರದ ಮಾರ್ಗಸೂಚಿ ಬರುವವರೆಗೆ ಕ್ರಯಪತ್ರ ನೀಡದಂತೆ ಸೂಚನೆ ನೀಡಲಾಗಿದೆ. ಇನ್ನು ಈಗಾಗಲೇ ಖಾತೆ ಆಗಿದ್ದರೆ ನಿಯಮಾನುಸಾರ ರದ್ದುಪಡಿಸುವಂತೆ ಸೂಚಿಸಲಾಗಿದೆ.
ಪಿಂಚಣಿ ಯೋಜನೆಯ ಫಲಾನುಭವಿಗಳ ಆದಾಯ ಮಿತಿ ಹೆಚ್ಚಳ ಮಾಡಲಾಗಿದೆ. ವಾರ್ಷಿಕ ಆದಾಯ ಮಿತಿ 32,000 ದಿಂದ ₹1,20,000 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಇನ್ನು 1,20,000ರವರೆಗಿನ ಆದಾಯ ಹೊಂದಿರುವವರಿಗೆ ಪಿಂಚಣಿ ಮುಂದುವರಿಕೆಗೆ ಕಂದಾಯ ಇಲಾಖೆ ಆದೇಶ ಹೊರಡಿಸಿದೆ. ಮತ್ತಷ್ಟು ಓದಿ
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಳ್ಳಾಳಿಗಳ ಹಾವಳಿ ಹೆಚ್ಚಾಗಿದೆ. ಆಸ್ಪತ್ರೆಯ ಸಿಬ್ಬಂದಿಯಿಂದಲೇ ಖಾಸಗಿ ಆಸ್ಪತ್ರೆಗೆ ರೋಗಿಗಳನ್ನು ಹೊರ ಕಳಿಸುವ ಪ್ರಯತ್ನ ನಡೆದಿರುವ ಪ್ರಕರಣ ಬೆಳಕಿಗೆ ಬಂದಿದೆ.ಹೌದು… ಅಪಘಾತದಲ್ಲಿ ಗಾಯಗೊಂಡ ಕೋಲಾರ ಜಿಲ್ಲೆ ಕೆಜಿಎಫ್ ನಿವಾಸಿ ಪ್ರಶಾಂತ್ ಎಂಬುವರು ಚಿಕಿತ್ಸೆಗೆ ವಿಕ್ಟೋರಿಯಾ ಕರೆದೊಯ್ದದಾಗ ಹಾಸಿಗೆ ಇಲ್ಲ ಎಂದು ಕಳಿಸುವ ಯತ್ನ ನಡೆದಿದೆ. ವಿಕ್ಟೋರಿಯಾ ಆಸ್ಪತ್ರೆಯ ಸಿಬ್ಬಂದಿ ಶಿವಕುಮಾರ್ ಎಂಬುವರಿಂದ ದಳ್ಳಾಳಿ ಕೆಲಸ ಮಾಡಿದ್ದು, ರೋಗಿ ಸಂಬಂಧಿ ಜೊತೆಗೆ ಮಾತಾನಡಿರುವ ಆಡಿಯೋ ಲಭ್ಯ ವೈರಲ್ ಆಗಿದೆ.
CWMA 12 ಸಾವಿರ ಕ್ಯೂಸೆಕ್ ಆದೇಶಕ್ಕೆ ರಾಜ್ಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿದೆ. 12 ಸಾವಿರ ಕ್ಯೂಸೆಕ್ ಬದಲು 6 ಸಾವಿರ ಕ್ಯೂಸೆಕ್ಗೆ ಇಳಿಸಲು ಮನವಿ ಮಾಡಿದೆ. ನಿರೀಕ್ಷೆಯಂತೆ ಮುಂಗಾರು ಮಳೆ ಮುಂದುವರಿಯದೆ ಕರ್ನಾಟಕಕ್ಕೆ ಸಂಕಷ್ಟ ಎದುರಾಗಿದೆ. ಸೂಪರ್ ಎಲ್ ನಿನೊ ಪರಿಣಾಮದಿಂದ ಮುಂಗಾರು ದುರ್ಬಲಗೊಂಡಿದೆ. ಕರ್ನಾಟಕದ ಕಾವೇರಿ ಜಲಾಶಯಗಳಿಗೆ ಒಳಹರಿವಿನಲ್ಲಿ ಶೇ.47.68ರಷ್ಟು ಕೊರತೆ ಇದೆ. ಆಗಸ್ಟ್ 18ಕ್ಕೆ ಜಲಾಶಯಗಳಲ್ಲಿ ಕೇವಲ 77.907 ಟಿಎಂಸಿ ನೀರು ಸಂಗ್ರಹವಾಗಿದ್ದು, ಒಳಹರಿವು 25,964 ಕ್ಯೂಸೆಕ್ನಿಂದ 13,141 ಕ್ಯೂಸೆಕ್ಗೆ ಇಳಿದಿದೆ. ಹೀಗಾಗಿ ಆದೇಶ ಮರುಪರಿಶೀಲಿಸುವಂತೆ ಮನವಿ ಮಾಡಿದೆ.
ದೆಹಲಿಯ ಇಂದಿರಾ ಭವನದಲ್ಲಿ ಕಾಂಗ್ರೆಸ್ CWC ಸಭೆ ನಡೆಯುತ್ತಿದ್ದು, ಈ ಸಭೆಯಲ್ಲಿ ಕಾಂಗ್ರೆಸ್ನ ಘಟಾನುಘಟಿ ನಾಯಕರ ಭಾಗಿಯಾಗಿದ್ದಾರೆ. AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, K.C. ವೇಣುಗೋಪಾಲ್, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಸೇರಿದಂತೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಹಿರಿಯ ನಾಯಕರು ಸಭೆಯಲ್ಲಿ ಭಾಗಿಯಾಗಿದ್ದಾರೆ. ಇನ್ನು ಈ ಸಭೆಯಲ್ಲಿ ದೇಶದ ಪ್ರಮುಖ ರಾಜಕೀಯ ವಿಚಾರಗಳ ಕುರಿತು ಚರ್ಚೆ ನಡೆಯಲಿದೆ.
ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿಯ ಪ್ರತಿಭಟನೆ ಮುಂದುವರಿದಿದೆ. ಸದನದಲ್ಲಿ ಪ್ಲಕಾರ್ಡ್ ಪ್ರದರ್ಶಿಸಿ ಧಿಕ್ಕಾರ ಕೂಗುತ್ತಿದ್ದಾರೆ. ಇದರ ಮಧ್ಯೆಯೂ ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪ ನಡೆದಿದೆ. ಇನ್ನು ಬಿಜೆಪಿಯ ಪ್ರತಿಭಟನೆ ಜೋರಾಗುತ್ತಿದ್ದಂತೆಯೇ ಆಡಳಿತರೂಢ ಸದಸ್ಯರು ಸಹ ರಾಮಮಂದಿರ ಹಣ ಎಲ್ಲೋಯ್ತು ಎಂದು ಘೋಷಣೆ ಕೂಗಿದರು. ಈ ಗದ್ದಲದ ಮಧ್ಯೆಯೇ ಪ್ರಶ್ನೋತ್ತರ ಕಲಾಪ ಅಂತ್ಯವಾಯ್ತು. ತೀವ್ರ ಗದ್ದಲ ಹಿನ್ನೆಲೆ 15 ನಿಮಿಷ ವಿಧಾನಸಭೆ ಕಲಾಪ ಮುಂದೂಡಿಕೆ ಮಾಡಲಾಗಿದೆ.
ವಿಧಾನಸಭೆಯೊಳಗೆ ಪ್ಲೇಕಾರ್ಡ್ ಹಿಡಿದು ಧರಣಿ ನಡೆಸಲು ಅವಕಾಶ ಸಿಗದ ಹಿನ್ನೆಲೆಯಲ್ಲಿ ಬಿಜೆಪಿ ಪ್ರತಿಭಟನೆಯ ಹಾದಿ ಬದಲಿಸಿದೆ. ಮಧ್ಯಾಹ್ನ 2.45ಕ್ಕೆ ವಿಧಾನಸೌಧದ ಕೆಂಗಲ್ ಹನುಮಂತಯ್ಯ ಪ್ರತಿಮೆಯ ಎದುರು ಪ್ಲೇಕಾರ್ಡ್ ಹಿಡಿದು ಧರಣಿ ನಡೆಸಲು ವಿಪಕ್ಷ ಬಿಜೆಪಿ ಶಾಸಕರು ನಿರ್ಧರಿಸಿದ್ದಾರೆ.
ಹೊಳೆನರಸೀಪುರ ತಾಲೂಕಿನ ಮಾವಿನಕೆರೆಯ ನವೋದಯ ವಿದ್ಯಾಲಯ ಆವರಣದಲ್ಲಿ 34ನೇ ರಾಷ್ಟ್ರೀಯ ಖೋ ಖೋ ಕ್ರೀಡಾಕೂಟಕ್ಕೆ ಹಾಸನ ಸಂಸದ ಶ್ರೇಯಸ್ ಪಟೇಲ್ ಚಾಲನೆ ನೀಡಿದರು. ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿರುವ ಈ ಕ್ರೀಡಾಕೂಟದಲ್ಲಿ ದೇಶದ 30 ರಾಜ್ಯಗಳ 800 ಕ್ರೀಡಾಪಟುಗಳು ಭಾಗವಹಿಸುತ್ತಿದ್ದು, ಸಬ್ ಜೂನಿಯರ್, ಜೂನಿಯರ್ ಹಾಗೂ ಸೀನಿಯರ್ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ.
ರಾಮನಗರದಲ್ಲಿ ನಕಲಿ ಔಷಧಿ ಪತ್ತೆಯಾದ ಹಿನ್ನೆಲೆಯಲ್ಲಿ ತನಿಖೆಗೆ ಎಸ್ಐಟಿ ರಚಿಸಲು ನಿರ್ಧರಿಸಲಾಗಿದೆ. ವಿಧಾನಸೌಧದಲ್ಲಿ ಆರೋಗ್ಯ ಸಚಿವ ಯು.ಟಿ. ಖಾದರ್ ಹಾಗೂ ಗೃಹ ಸಚಿವ ಪರಮೇಶ್ವರ್ ಖರ್ಗೆ ಚರ್ಚೆ ನಡೆಸಿದ್ದು, ಪೊಲೀಸ್ ಮತ್ತು ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳನ್ನೊಳಗೊಂಡ ತಂಡ ರಚನೆಯಾಗಲಿದೆ. ನಕಲಿ ಇಂಜೆಕ್ಷನ್ಗಳನ್ನು ನೇರವಾಗಿ ಐಸಿಯು ಆಸ್ಪತ್ರೆಗಳಿಗೆ ಪೂರೈಸುತ್ತಿದ್ದ ಜಾಲದ ತನಿಖೆಗೆ ಇಂದೇ ಆದೇಶ ಹೊರಬೀಳುವ ಸಾಧ್ಯತೆಯಿದೆ.
ವಿಧಾನಪರಿಷತ್ನಲ್ಲಿ ವಿಪಕ್ಷಗಳ ಘೋಷಣೆಗಳನ್ನು ಕಡತಕ್ಕೆ ಸೇರಿಸಬಾರದು ಹಾಗೂ ಮಾಧ್ಯಮಗಳು ಕವರ್ ಮಾಡಬಾರದು ಎಂಬ ಸಭಾಪತಿ ಸಲೀಂ ಅವರ ಸೂಚನೆಗೆ ವಿಪಕ್ಷ ಸಚೇತಕ ರವಿಕುಮಾರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. “ಮಾಧ್ಯಮಗಳಿಗೂ ನೀವೇ ನಿರ್ದೇಶನ ನೀಡುವುದು ಸರ್ವಾಧಿಕಾರ” ಎಂದು ಕಿಡಿಕಾರಿದ ಅವರು, ಆ ಪದ ಹಿಂಪಡೆಯಲು ಆಗ್ರಹಿಸಿದರು. ಗದ್ದಲದ ನಡುವೆಯೇ ಪ್ರಶ್ನೋತ್ತರ ಕಲಾಪ ಮುಂದುವರಿಯಿತು.
ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ ಗ್ರಾಮದ ಬಳಿ ಕೌಟುಂಬಿಕ ಕಲಹದಿಂದಾಗಿ ತಂದೆ ಶಾಂತಪ್ಪ ತನ್ನಿಬ್ಬರು ಮಕ್ಕಳನ್ನು ಕಾಲುವೆಗೆ ತಳ್ಳಿದ್ದಾನೆ. ಪತ್ನಿ ರೇಣುಕಾ ಜೊತೆ ಜಗಳವಾಡಿ ಮೂವರು ಮಕ್ಕಳನ್ನು ಬೈಕ್ನಲ್ಲಿ ಕರೆದೊಯ್ದು, 9 ವರ್ಷದ ಸಾನ್ವಿ ಮತ್ತು 2 ವರ್ಷದ ಸೃಜನ್ನನ್ನು ಕಾಲುವೆಗೆ ಎಸೆದಿದ್ದಾನೆ. ಗೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಕ್ಕಳಿಗಾಗಿ ಶೋಧ ನಡೆಯುತ್ತಿದೆ.
ನಕಲಿ ಔಷಧ ದಂಧೆ ಬೆನ್ನಲ್ಲೇ ಜನರಲ್ಲಿ ಜಾಗೃತಿ ಮೂಡಿಸಲು ಆರೋಗ್ಯ ಇಲಾಖೆ ಸಂಜೆ ಮಾರ್ಗಸೂಚಿ ಬಿಡುಗಡೆ ಮಾಡಲಿದೆ. ಕ್ಯಾನ್ಸರ್ ಔಷಧಗಳ ಅಸಲಿಯತ್ತು ತಿಳಿಯಲು ಕ್ಯೂಆರ್ (QR) ಕೋಡ್ ಸ್ಕ್ಯಾನ್ ಮಾಡಲು ಮತ್ತು ಬ್ಯಾಚ್ ನಂಬರ್ ಪರಿಶೀಲಿಸಲು ಸಲಹೆ ನೀಡಲಾಗಿದೆ. ಸಾರ್ವಜನಿಕರು ಜಾಗರೂಕರಾಗಿ ನಕಲಿ ಔಷಧಗಳಿಂದ ರಕ್ಷಣೆ ಪಡೆಯುವಂತೆ ಇಲಾಖೆ ಮನವಿ ಮಾಡಿದೆ.
ದೊಡ್ಡೇರಿ ಫಾರ್ಮ್ಹೌಸ್ನಲ್ಲಿ ನಡೆಯುತ್ತಿದ್ದ ನಕಲಿ ಡ್ರಗ್ಸ್ ಜಾಲದ ಕುರಿತು ಎಸ್.ಪಿ ಶ್ರೀನಿವಾಸ್ ಗೌಡ ಮಾಹಿತಿ ನೀಡಿದ್ದಾರೆ. ಬೀಟ್ ಸಿಬ್ಬಂದಿ ಸುಳಿವು ಆಧರಿಸಿ ದಾಳಿ ನಡೆಸಿ, ಐಸಿಯು ಹೈ-ಎಂಡ್ ಔಷಧಗಳನ್ನು ನಕಲಿ ಮಾಡುತ್ತಿದ್ದುದನ್ನು ಪತ್ತೆಹಚ್ಚಲಾಗಿದೆ. ಒಬ್ಬನನ್ನು ಬಂಧಿಸಲಾಗಿದ್ದು, ಇಬ್ಬರ ವಿಚಾರಣೆ ನಡೆಯುತ್ತಿದೆ. ವರ್ಷಕ್ಕೆ ರೂ. 10 ಲಕ್ಷಕ್ಕೆ ಲೀಸ್ಗೆ ಪಡೆದ ಫಾರ್ಮ್ಹೌಸ್ನಲ್ಲಿ ಈ ಅಕ್ರಮ ನಡೆದಿದ್ದು, ಪ್ರಮುಖ ಆರೋಪಿಗಾಗಿ ಜಾಲ ಬೀಸಲಾಗಿದೆ.
ಕಾಂಗ್ರೆಸ್ ನಾಯಕರ ‘ವಂದೇ ಮಾತರಂ’ ವಿರೋಧ ಮತ್ತು ಆರ್.ಎಸ್.ಎಸ್ ಕುರಿತ ಹೇಳಿಕೆಗಳಿಗೆ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ತೀವ್ರ ಕಿಡಿಕಾರಿದ್ದಾರೆ. RSS ರಾಷ್ಟ್ರಭಕ್ತಿ ಪಸರಿಸುವ ಸಂಸ್ಥೆಯಾಗಿದ್ದು, ಮುಂಬರುವ ಗಣೇಶೋತ್ಸವ ಹಾಗೂ ಶಾರದೋತ್ಸವಗಳನ್ನು ನಿಯಂತ್ರಿಸಿ, ಹಿಂದೂಗಳನ್ನು ದಮನ ಮಾಡಲು ಸರ್ಕಾರ ಕಾಯ್ದೆ ತರಲು ಹೊರಟಿದೆ ಎಂದು ಆರೋಪಿಸಿರುವ ಅವರು, ಈ ಕಾಯ್ದೆಯನ್ನು ಸಕ್ತವಾಗಿ ವಿರೋಧಿಸುವುದಾಗಿ ಹೇಳಿದ್ದಾರೆ.
ರಾಜ್ಯದಲ್ಲಿ ನಕಲಿ ಔಷಧಿ ಹಾಗೂ ಕಾಸ್ಮೆಟಿಕ್ಸ್ ಜಾಲ ಬಯಲಾದ ಹಿನ್ನೆಲೆಯಲ್ಲಿ, ಸಮಗ್ರ ತನಿಖೆಗೆ ವಿಶೇಷ ತನಿಖಾ ತಂಡ (SIT) ರಚಿಸಲು ಸರ್ಕಾರ ನಿರ್ಧರಿಸಿದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ. ದುಬೈನಲ್ಲಿರುವ ಪ್ರಶಾಂತ್ ಎಂಬಾತ ಸಿದ್ದಯ್ಯ ಎಂಬುವರ ಫಾರ್ಮ್ಹೌಸ್ ಲೀಸ್ಗೆ ಪಡೆದು, ಬೇರೆ ರಾಜ್ಯಗಳಿಂದ ತಂದ ನಕಲಿ ಮಾತ್ರೆಗಳಿಗೆ ಮಲ್ಟಿನ್ಯಾಷನಲ್ ಕಂಪನಿಗಳ ಲೇಬಲ್ ಹಾಕಿ ಮಾರಾಟ ಮಾಡುತ್ತಿದ್ದ. ಐಸಿಯು ಔಷಧಿಗಳನ್ನೂ ನಕಲಿ ಮಾಡಲಾಗಿದ್ದು, ಹಿಮಾಚಲ ಪ್ರದೇಶ, ತೆಲಂಗಾಣ ಸೇರಿದಂತೆ ದೇಶಾದ್ಯಂತ ಈ ಜಾಲ ಹರಡಿದೆ. ಪ್ರಸ್ತುತ ಪ್ರಭುದೇವ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಸಾರ್ವಜನಿಕರು ನಕಲಿ ಜಾಲದ ಮಾಹಿತಿ ನೀಡಿದರೆ ಸೂಕ್ತ ಬಹುಮಾನ ನೀಡಲಾಗುವುದು.
ಕೋಲಾರ ಜಿಲ್ಲೆಯಲ್ಲಿ ನಡೆಸಲಾದ ಮನೆ-ಮನೆ ಗಣತಿಯಲ್ಲಿ 1,71,034 ಮತದಾರರ ಹೆಸರುಗಳನ್ನು ಪಟ್ಟಿಯಿಂದ ಹೊರಗಿಡಲಾಗಿದೆ. ಒಟ್ಟು ವಿತರಿಸಲಾದ 12.95 ಲಕ್ಷ ಗಣತಿ ನಮೂನೆಗಳಲ್ಲಿ 11.24 ಲಕ್ಷ ನಮೂನೆಗಳ ಡಿಜಿಟಲೀಕರಣ ಪೂರ್ಣಗೊಂಡಿದೆ. ಪಟ್ಟಿಯಿಂದ ಹೊರಬಿದ್ದವರಲ್ಲಿ ಶಾಶ್ವತ ಸ್ಥಳಾಂತರಗೊಂಡವರು (86,992), ಗೈರುಹಾಜರಾದವರು, ಮೃತಪಟ್ಟವರು ಹಾಗೂ ದ್ವಿ-ನೋಂದಾಯಿತರು ಸೇರಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಮಂಗಳಾ ತಿಳಿಸಿದ್ದಾರೆ.
ತಮಿಳುನಾಡು ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಸಂಚರಿಸಿ ಜನರ ಕುಂದುಕೊರತೆ ಆಲಿಸಲು ಸಿಎಂ ವಿಜಯ್ ಹೊಸ ಕಾರು ನೀಡಲು ನಿರ್ಧರಿಸಿದ್ದಾರೆ. ಕಾರಿನ ವೆಚ್ಚ ಮತ್ತು ಚಾಲಕರ ಸಂಬಳಕ್ಕಾಗಿ ಹೆಚ್ಚುವರಿ 25,000 ರೂ. ಸೇರಿದಂತೆ ಸರ್ಕಾರದಿಂದ ತಿಂಗಳಿಗೆ ಒಟ್ಟು 75,000 ರೂ. ಹಣ ನೀಡಲಾಗುವುದು.
ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ-2026ರ ಅಂಗವಾಗಿ ಅಕ್ಟೋಬರ್ 18 ಮತ್ತು 19 ರಂದು ವೈಭವದ ಕಂಬಳ ಪಂದ್ಯಾಟ ಆಯೋಜನೆಗೆ ಸಿದ್ಧತೆಗಳು ಭರದಿಂದ ಸಾಗಿವೆ. ಮೈಸೂರಿನ ಸಾತಗಳ್ಳಿ ರಿಂಗ್ ರಸ್ತೆ ಸಮೀಪವಿರುವ ವಿಟಿಯು ಹತ್ತಿರದ ಜಾಗದಲ್ಲಿ ಟ್ರ್ಯಾಕ್ ಹಾಗೂ ಗದ್ದೆ ಹದಗೊಳಿಸುವ ಕಾರ್ಯ ಆರಂಭವಾಗಿದೆ. ಈ ಬಾರಿಯ ಕಂಬಳ ಕ್ರೀಡೆಗಾಗಿ ಈಗಾಗಲೇ 130 ಜೋಡಿ ಕೋಣಗಳು ನೋಂದಣಿಯಾಗಿದ್ದು, ಕಾರ್ಯಕ್ರಮದ ಯಶಸ್ವಿ ಆಯೋಜನೆಗಾಗಿ ವಿವಿಧ ಕಂಬಳ ಸಮಿತಿಗಳ ಜೊತೆ ಸಭೆ ನಡೆಸಿ ರೂಪುರೇಷೆಗಳನ್ನು ಸಿದ್ಧಪಡಿಸಲಾಗಿದೆ.
ಭ್ರಷ್ಟಾಚಾರ ಮುಚ್ಚಿಕೊಳ್ಳಲು ದಲಿತ ಜಾತಿ ಅಸ್ತ್ರ ಬಳಸುವುದು ತಪ್ಪು ಎಂದು ಹಿರಿಯ ಶಾಸಕ ಜನಾರ್ದನ್ ರೆಡ್ಡಿ ಹೇಳಿದ್ದಾರೆ. ಹಣ ರಿಕವರಿ ಆದ ತಕ್ಷಣ ಕಳ್ಳತನದ ಅಪರಾಧ ಇಲ್ಲವಾಗುವುದಿಲ್ಲ. ನಾಗೇಂದ್ರ ಕೇವಲ ಮುಖವಾಡ, ಈ ಹಣ ಕಾಂಗ್ರೆಸ್ ಹೈಕಮಾಂಡ್ಗೆ ತಲುಪಿದೆ ಎಂದು ಆರೋಪಿಸಿರುವ ಅವರು, ನಾಗೇಂದ್ರರನ್ನು ಸಚಿವಸ್ಥಾನದಿಂದ ತೆಗೆದು ಬೇರೆ ದಲಿತರನ್ನು ಸಚಿವರನ್ನಾಗಿ ಮಾಡಲು ಆಗ್ರಹಿಸಿದ್ದಾರೆ.
ರಾಷ್ಟ್ರಮಟ್ಟದಲ್ಲಿ ಸಕ್ರಿಯವಾಗಿರುವ ನಕಲಿ ಬ್ರಾಂಡೆಡ್ ಔಷಧ ಹಾಗೂ ಕಾಸ್ಮೆಟಿಕ್ಸ್ ಜಾಲದ ಮೇಲಿನ ದಾಳಿ ಕುರಿತು ಆರೋಗ್ಯ ಸಚಿವ ಯು.ಟಿ. ಖಾದರ್ ಸುದ್ದಿಗೋಷ್ಠಿ ನಡೆಸಿದ್ದಾರೆ. ಈ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (SIT) ರಚಿಸಲಿದ್ದು, ನಕಲಿ ಜಾಲದ ಬಗ್ಗೆ ಮಾಹಿತಿ ನೀಡುವವರಿಗೆ ಬಹುಮಾನ ಘೋಷಿಸಲಾಗಿದೆ.
Published On - 10:26 am, Wed, 19 August 26