AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾರಾಂತ್ಯ, ಗೌರಿ-ಗಣೇಶ ಹಬ್ಬ ರಜೆ: ಖಾಸಗಿ ಬಸ್​ ಮಾಲೀಕರಿಂದ ದುಪ್ಪಟ್ಟು ಹಣ ವಸೂಲಿ

ವಾರಾಂತ್ಯ ಮತ್ತು ಗೌರಿ-ಗಣೇಶ ಹಬ್ಬದ ರಜಾ ನಿಮಿತ್ತ ಊರಿಗೆ ಹೋಗುವ ಪ್ರಯಾಣಿಕರಿಗೆ ಖಾಸಗಿ ಬಸ್‌ಗಳ ಮಾಲೀಕರು ಶಾಕ್​ ನೀಡಿದ್ದಾರೆ. ಪ್ರಯಾಣದ ದರ ದ್ವಿಗುಣಗೊಂಡಿದೆ. ವಾರಾಂತ್ಯದ ರಜೆ ಮತ್ತು ಹಬ್ಬದ ಸಮಯದಲ್ಲಿ ಖಾಸಗಿ ಬಸ್‌ ಮಾಲೀಕರು ದರ ಏರಿಕೆ ಮಾಡಿದ್ದಾರೆ. ಬೆಂಗಳೂರಿನಿಂದ ವಿವಿಧ ಊರುಗಳಿಗೆ ಪ್ರಯಾಣದ ದರ ಎಷ್ಟು ಏರಿಕೆಯಾಗಿದೆ ಇಲ್ಲಿದೆ ವಿವರ.

ವಾರಾಂತ್ಯ, ಗೌರಿ-ಗಣೇಶ ಹಬ್ಬ ರಜೆ: ಖಾಸಗಿ ಬಸ್​ ಮಾಲೀಕರಿಂದ ದುಪ್ಪಟ್ಟು ಹಣ ವಸೂಲಿ
ಸಾಂದರ್ಭಿಕ ಚಿತ್ರ
Kiran Surya
| Updated By: ವಿವೇಕ ಬಿರಾದಾರ|

Updated on:Aug 22, 2025 | 3:57 PM

Share

ಬೆಂಗಳೂರು, ಆಗಸ್ಟ್​ 22: ವಾರಾಂತ್ಯದ ರಜೆ ಮತ್ತು ಗೌರಿ- ಗಣೇಶ ಹಬ್ಬ (Gauri-Ganesha Festival) ಅಂತ ಬೆಂಗಳೂರಿನಿಂದ (Bengaluru) ಅನೇಕ ಜನರು ತಮ್ಮ ಊರಿಗೆ ಹೋಗಲು ಸಜ್ಜಾಗಿದ್ದಾರೆ. ಇದನ್ನೇ, ಬಂಡವಾಳ ಮಾಡಿಕೊಂಡಿರುವ ಕೆಲ ಖಾಸಗಿ ಬಸ್​ ಮಾಲೀಕರು ಪ್ರಯಾಣದ ದರವನ್ನು ದುಪಟ್ಟು ಮಾಡಿದ್ದಾರೆ. ನಾಳೆ ನಾಲ್ಕನೇ ಶನಿವಾರ ರಜೆ, ಭಾನುವಾರ ರಜೆ ಸೋಮವಾರ ಒಂದು ದಿನ ರಜೆ ತೆಗೆದುಕೊಂಡರೆ ಮಂಗಳವಾರ ಗೌರಿ ಹಬ್ಬ, ಬುಧವಾರ ಗಣೇಶ ಹಬ್ಬ ಒಟ್ಟು ಐದು ದಿನಗಳ ರಜೆ ಸಿಗಲಿದೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ಉದ್ಯೋಗಿಗಳು ಈಗಾಗಲೇ ತಮ್ಮ ಕಚೇರಿಗಳಿಗೆ ರಜೆ ಹಾಕಿದ್ದಾರೆ. ಇದನ್ನು ಬಂಡವಾಳ ಮಾಡಿಕೊಂಡಿರುವ ಖಾಸಗಿ ಬಸ್ ಮಾಲೀಕರು, ಟಿಕೆಟ್​ ದರ ದುಪ್ಪಟ್ಟು ಮಾಡಿದ್ದಾರೆ.

ಸಾಮಾನ್ಯ ದಿನದ ದರ ಮತ್ತು ಹಬ್ಬದ ದರ

ಬೆಂಗಳೂರು-ಧರ್ಮಸ್ಥಳ

  • ಪ್ರಸ್ತುತ ದರ: 600-1100 ರೂ.
  • ರಜಾ ದಿನದ ದರ: 1499-2600 ರೂ.

ಬೆಂಗಳೂರು-ಮೈಸೂರು

  • ಪ್ರಸ್ತುತ ದರ: 199-2000 ರೂ.
  • ರಜಾ ದಿನದ ದರ: 300-5000 ರೂ.

ಬೆಂಗಳೂರು-ಕೊಡಗು

  • ಪ್ರಸ್ತುತ ದರ: 494-849 ರೂ.
  • ರಜಾ ದಿನದ ದರ: 680-5000 ರೂ.

ಬೆಂಗಳೂರು-ಚಿಕ್ಕಮಗಳೂರು

  • ಪ್ರಸ್ತುತ ದರ: 575-800 ರೂ.
  • ರಜಾ ದಿನದ ದರ: 950-1600 ರೂ.

ಬೆಂಗಳೂರು-ಮಂಗಳೂರು

  • ಪ್ರಸ್ತುತ ದರ: 349-2750 ರೂ.
  • ರಜಾ ದಿನದ ದರ: 1019-3000 ರೂ.

ಬೆಂಗಳೂರು-ಧಾರವಾಡ

  • ಪ್ರಸ್ತುತ ದರ: 684-3600 ರೂ.
  • ರಜಾ ದಿನ ದರ: 1000-5000 ರೂ.

ಬೆಂಗಳೂರು-ಹುಬ್ಬಳ್ಳಿ

  • ಪ್ರಸ್ತುತ ದರ: 609-1800 ರೂ.
  • ರಜಾ ದಿನ ದರ: 1200-9999 ರೂ.

ಬೆಂಗಳೂರು- ಕಾರವಾರ

  • ಪ್ರಸ್ತುತ ದರ: 740-1600 ರೂ.
  • ರಜಾ ದಿನ ದರ: 1500-3499 ರೂ.

ಬೆಂಗಳೂರು-ಕಲಬುರಗಿ

  • ಪ್ರಸ್ತುತ ದರ: 570-1300 ರೂ.
  • ರಜಾ ದಿನ ದರ: 950-2200 ರೂ.

ಬೆಂಗಳೂರು-ಶಿವಮೊಗ್ಗ

  • ಪ್ರಸ್ತುತ ದರ: 375-1199 ರೂ.
  • ರಜಾ ದಿನದ ದರ: 799-2100 ರೂ.

ಇದನ್ನೂ ಓದಿ: ಪಿಒಪಿ ಗಣೇಶ ತಯಾರಿ, ಮಾರಾಟ ಮಾಡಿದ್ರೆ ಕ್ರಿಮಿನಲ್ ಕೇಸ್

ಖಾಸಗಿ ಬಸ್​ಗಳು ದುಪ್ಪಟ್ಟು ಹಣ ವಸೂಲಿ ಮಾಡುತ್ತಿರುವುದರಿಂದ ಪ್ರಯಾಣಿಕರಿಗೆ ಸಾಕಷ್ಟು ತೊಂದರೆಯಾಗಿದೆ. ಊರುಗಳಿಗೆ ತೆರಳುವ ದಾವಂತದಲ್ಲಿರುವವರು ಟಿಕೆಟ್​ ದರ ಕೇಳಿ ದಂಗಾಗಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:57 pm, Fri, 22 August 25