Sign In

By signing in or creating an account, you agree with Associated Broadcasting Company's Terms & Conditions and Privacy Policy.

Dengue: ಹೆಚ್ಚುತ್ತಿರುವ ಡೆಂಗ್ಯೂ ಪ್ರಕರಣ; ತುರ್ತು ಸಂದರ್ಭದಲ್ಲಿ ರಕ್ತ, ಪ್ಲೇಟ್​​ಗಳು ಎಲ್ಲೆಲ್ಲ ಸಿಗುತ್ತವೆ? ಇಲ್ಲಿದೆ ವಿವರ

ನಿಮಗೆ ಪ್ಲೇಟ್‌ಲೆಟ್‌ಗಳು ಅಥವಾ ಕೆಂಪು ರಕ್ತ ಕಣಗಳು, ತುರ್ತು ಸಂದರ್ಭಗಳಲ್ಲಿ ರಕ್ತದ ಅಗತ್ಯವಿದ್ದರೆ, ಸಹಾಯಕ್ಕಾಗಿ ನೀವು ಸಂಪರ್ಕಿಸಬಹುದಾದ ಕೆಲವು ಆನ್‌ಲೈನ್ ಪೋರ್ಟಲ್‌ಗಳು ಮತ್ತು ಪ್ಲಾಟ್‌ಫಾರ್ಮ್‌ಗಳ ವಿವರವನ್ನು ಇಲ್ಲಿ ನೀಡಲಾಗಿದೆ.

Dengue: ಹೆಚ್ಚುತ್ತಿರುವ ಡೆಂಗ್ಯೂ ಪ್ರಕರಣ; ತುರ್ತು ಸಂದರ್ಭದಲ್ಲಿ ರಕ್ತ, ಪ್ಲೇಟ್​​ಗಳು ಎಲ್ಲೆಲ್ಲ ಸಿಗುತ್ತವೆ? ಇಲ್ಲಿದೆ ವಿವರ
ಸಾಂದರ್ಭಿಕ ಚಿತ್ರ
Follow us
Ganapathi Sharma
|

Updated on:Jul 14, 2023 | 4:02 PM

ಬೆಂಗಳೂರು, ಜುಲೈ 14: ಕರ್ನಾಟಕದಲ್ಲಿ ಹಾಗೂ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluruಡೆಂಗ್ಯೂ (Dengue) ಪ್ರಕರಣಗಳು ತೀವ್ರಗತಿಯಲ್ಲಿ ಏರಿಕೆಯಾಗುತ್ತಿವೆ. ಡೆಂಗ್ಯೂ ಸೋಂಕಿನ ಪರಿಣಾಮ ದೇಹದಲ್ಲಿ ಪ್ಲೇಟ್‌ಲೆಟ್‌ಗಳು ಅಥವಾ ಕೆಂಪು ರಕ್ತ ಕಣಗಳು ಕಡಿಮೆಯಾಗುವುದು ಸಹಜ. ಕೆಲವೊಂದು ಸಂದರ್ಭದಲ್ಲಿ ಸೋಂಕಿತರಿಗೆ ಕೆಂಪುರಕ್ತಕಣಗಳನ್ನು ಹೊರಗಿನಿಂದ ನೀಡಬೇಕಾದ ಅನಿವಾರ್ಯತೆ ಎದುರಾಗುತ್ತದೆ.

ನಿಮಗೆ ಪ್ಲೇಟ್‌ಲೆಟ್‌ಗಳು ಅಥವಾ ಕೆಂಪು ರಕ್ತ ಕಣಗಳು, ತುರ್ತು ಸಂದರ್ಭಗಳಲ್ಲಿ ರಕ್ತದ ಅಗತ್ಯವಿದ್ದರೆ, ಸಹಾಯಕ್ಕಾಗಿ ನೀವು ಸಂಪರ್ಕಿಸಬಹುದಾದ ಕೆಲವು ಆನ್‌ಲೈನ್ ಪೋರ್ಟಲ್‌ಗಳು ಮತ್ತು ಪ್ಲಾಟ್‌ಫಾರ್ಮ್‌ಗಳ ವಿವರವನ್ನು ‘ನ್ಯೂಸ್ 9’ ಪಟ್ಟಿ ಮಾಡಿದೆ. ಅವುಗಳನ್ನು ಇಲ್ಲಿ ನೀಡಲಾಗಿದೆ.

ಎರಕ್ಟ್‌ಕೋಶ್ (Eraktkosh)

ಇದು ಸರ್ಕಾರದ ಮೇಲ್ವಿಚಾರಣೆಯಲ್ಲಿ ನಡೆಯುವ ಬ್ಲಡ್ ಬ್ಯಾಂಕ್ ನಿರ್ವಹಣಾ ವ್ಯವಸ್ಥೆಯಾಗಿದ್ದು ಅದು ನಿಮ್ಮ ಸುತ್ತಲಿರುವ ಲಭ್ಯವಿರುವ, ಹತ್ತಿರದ ಬ್ಲಡ್ ಬ್ಯಾಂಕ್‌ಗಳ ವಿವರಗಳನ್ನು ಒದಗಿಸುತ್ತದೆ. ರಕ್ತ ಅಥವಾ ಪ್ಲೇಟ್‌ಲೆಟ್‌ಗಳ ಅಗತ್ಯವಿರುವ ಜನರು ರಾಜ್ಯ ಮತ್ತು ಜಿಲ್ಲೆಯನ್ನು ಆರಿಸಿಕೊಳ್ಳಬೇಕು ನಂತರ ಅದು ರಕ್ತ ಬ್ಯಾಂಕ್ ವಿಳಾಸಗಳು ಮತ್ತು ಸಂಪರ್ಕ ಸಂಖ್ಯೆಗಳನ್ನು ಒದಗಿಸುತ್ತದೆ.

ಕರ್ನಾಟಕ ರಾಜ್ಯ ಔಷಧ ನಿಯಂತ್ರಣ ಇಲಾಖೆ (Karnataka State Drug Control Department)

ಕರ್ನಾಟಕದಾದ್ಯಂತ ವಿವಿಧ ರಕ್ತನಿಧಿಗಳಲ್ಲಿ ಲಭ್ಯವಿರುವ ವಿವಿಧ ಪ್ರಕಾರಗಳ ರಕ್ತದ ವಿವರಗಳನ್ನು ಇದು ಒದಗಿಸುತ್ತದೆ. ಪ್ರತಿದಿನ ಅಪ್​ಡೇಟ್ ಆಗುವ ಈ ಪೋರ್ಟಲ್ ಲಭ್ಯವಿರುವ ರಕ್ತದ ಪ್ರಮಾಣ, ಸ್ಥಳ ಮತ್ತು ಸಂಪರ್ಕ ಮಾಹಿತಿಯ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ.

ಸಂಕಲ್ಪ್ ಇಂಡಿಯಾ ಫೌಂಡೇಶನ್ (Sankalp India Foundation)

ಈ ಸಂಸ್ಥೆಯು ಕರ್ನಾಟಕದಾದ್ಯಂತ ಸ್ವಯಂಪ್ರೇರಿತ ರಕ್ತದಾನ ಶಿಬಿರಗಳನ್ನು ನಡೆಸುತ್ತದೆ ಮತ್ತು ‘ರಕ್ತ ಕ್ರಾಂತಿ’ ಯೋಜನೆಯ ಅಡಿಯಲ್ಲಿ ರಕ್ತನಿಧಿಗಳನ್ನು ಮೇಲ್ವಿಚಾರಣೆ ಮಾಡುತ್ತದೆ ಮತ್ತು ಆಯೋಜಿಸುತ್ತದೆ. ರಕ್ತದಾನ ಮಾಡಲು ಅಥವಾ ದಾನ ಶಿಬಿರಗಳನ್ನು ಆಯೋಜಿಸಲು 9480044444 ಸಂಖ್ಯೆಯನ್ನು ಸಂಪರ್ಕಿಸಬಹುದು ಅಥವಾ soumi@sankalpindia.net ಮೇಲ್ ಮಾಡಬಹುದಾಗಿದೆ.

ರೆಡ್ ಕ್ರಾಸ್ ಕರ್ನಾಟಕ (Red Cross Karnataka)

ಈ ವೆಬ್‌ಸೈಟ್ ಜನರು ರಕ್ತದಾನ ಮಾಡಲು ಅನುಮತಿಸುತ್ತದೆ ಮತ್ತು ಅಗತ್ಯವಿರುವ ಜನರಿಗೆ ರಕ್ತವನ್ನು ಒದಗಿಸುತ್ತದೆ. ರಕ್ತದಾನ ಮಾಡಲು ಇಚ್ಛಿಸುವವರು ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಮತ್ತು ರಕ್ತದಾನ ಮಾಡಲು ಇಂಗ್ಲಿಷ್ ಮತ್ತು ಕನ್ನಡದಲ್ಲಿ ಲಭ್ಯವಿರುವ ಫಾರ್ಮ್‌ಗಳನ್ನು ಭರ್ತಿ ಮಾಡಬಹುದು. ರಕ್ತ ಅಥವಾ ಪ್ಲೇಟ್‌ಲೆಟ್‌ಗಳ ಅಗತ್ಯವಿರುವ ಜನರು Chat ಆಯ್ಕೆಯನ್ನು ಕ್ಲಿಕ್ ಮಾಡುವ ಮೂಲಕ ಸಹಾಯವನ್ನು ಪಡೆಯಬಹುದು.

ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ (Karnataka State AIDS Prevention Society)

ಕರ್ನಾಟಕ ಸರ್ಕಾರದ ಸಹಯೋಗದೊಂದಿಗೆ ಕಾರ್ಯನಿರ್ವಹಿಸುವ ಈ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಜನರು ದಾನ ಮಾಡಬಹುದು ಮತ್ತು ರಕ್ತಕ್ಕಾಗಿ ಮನವಿ ಸಲ್ಲಿಸಬಹುದು.

ಕೆಲವು ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಾದ iCanSaveLife , BloodAid , ಮತ್ತು BloodDonarsIndia ಗಳು ತುರ್ತು ಸಂದರ್ಭಗಳಲ್ಲಿ ರಕ್ತದಾನಕ್ಕಾಗಿ ಹುಡುಕುತ್ತಿರುವ ಭಾರತದಾದ್ಯಂತ ಜನರಿಗೆ ಸಹಾಯ ಮಾಡುತ್ತವೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಡೆಂಗ್ಯೂ ಏರಿಕೆ: ಕಳೆದ 11 ದಿನಗಳಲ್ಲಿ 178 ಪ್ರಕರಣಗಳು ಪತ್ತೆ

ರಾಜ್ಯದಲ್ಲಿ ಒಟ್ಟು 230 ರಕ್ತನಿಧಿ ಕೇಂದ್ರಗಳಿದ್ದು, ತುರ್ತು ಸಂದರ್ಭಗಳಲ್ಲಿ ರಕ್ತ ನೀಡುತ್ತವೆ. ಈ 230 ಕೇಂದ್ರಗಳಲ್ಲಿ 43 ಸರ್ಕಾರಿ ರಕ್ತನಿಧಿಗಳು, 66 ದತ್ತಿ ಖಾಸಗಿ ರಕ್ತನಿಧಿಗಳು ಮತ್ತು 108 ಖಾಸಗಿ ಆಸ್ಪತ್ರೆ ರಕ್ತನಿಧಿಗಳಿವೆ.

ಕಾನ್ಸಂಟ್ರೇಟೆಡ್ ಪ್ಲೇಟ್ಲೆಟ್​​ಗಳ ಬಾಳಿಕೆ ಅವಧಿ 5 ದಿನಗಳಾಗಿದ್ದು, ರಕ್ತಸ್ರಾವವನ್ನು ತಡೆಗಟ್ಟಲು ಅಥವಾ ಚಿಕಿತ್ಸೆ ನೀಡಲು, ಕಾಂಡಕೋಶ ಕಸಿ ಮತ್ತು ಡೆಂಗ್ಯೂ ಚಿಕಿತ್ಸೆಗಾಗಿ ಬಳಸಲಾಗುತ್ತದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:47 pm, Fri, 14 July 23

ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್
ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಮಠದಲ್ಲಿ ಸಿದ್ಧಲಿಂಗ ಸ್ವಾಮೀಜಿಯವರ ಪಾದಕ್ಕೆ ನಮಸ್ಕರಿಸಿದ ರಾಜನಾಥ್ ಸಿಂಗ್
ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ
ಕರ್ನಾಟಕ ಕಾಂಗ್ರೆಸ್ ಸರ್ಕಾರವೇ ದೇಶದ ಪಾಲಿಗೆ ಗಾರ್ಬೇಜ್: ಪ್ರಲ್ಹಾದ್ ಜೋಶಿ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಅಧ್ಯಕ್ಷನ ಸ್ಥಾನ ಉತ್ತರ ಕರ್ನಾಟಕದವರಿಗೆ ಅನ್ನೋದು ಗಾಳಿಸುದ್ದಿ: ಖರ್ಗೆ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ
ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಜನಜಾಗೃತಿ ಅಭಿಯಾನ: ವಿಜಯೇಂದ್ರ