AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಡಿನಾಡಲ್ಲಿ ಸುಂದರಿಯರ ಕ್ಯಾಟ್ ವಾಕ್: ರಂಗುರಂಗಿನ ಸೀರೆಯಲ್ಲಿ ಮಿಂಚಿದ ನೀರೆಯರು

ಬೀದರ್: ಅದು ರಂಗು ರಂಗಿನ ವೇದಿಕೆ. ಅಲ್ಲಿತ್ತು ಬಣ್ಣ ಬಣ್ಣದ ಚಿತ್ತಾರ. ನೆರೆದ ಯುವಕರ ಚೀತ್ಕಾರ. ದೇಶಿ ಹಾಗೂ ವಿದೇಶಿ ಹಾಡುಗಳಿಗೆ ನೆರೆದವರೆಲ್ಲರಿಂದ ಸಿಕ್ಕಿದ್ದು ಶಿಳ್ಳೇ ಕೇಕೆ. ಆ ಇದೇನು ಅಂದ್ರಾ? ಇಲ್ಲಿದೆ ನೋಡಿ ಆ ಕಲರ್ ಫುಲ್ ಸಂಜೆಯ ಡಿಟೇಲ್ಸ್ ರಂಗು ರಂಗಿನ ದೇಶಿ ಹಾಗೂ ವಿದೇಶಿ ಸೀರೆಯುಟ್ಟ ನೀರೆಯರು, ಬಗೆ ಬಗೆ ಉಡುಪುಗಳಲ್ಲಿ ಕಂಗೊಳಿಸುತ್ತಾ ಕ್ಯಾಟ್ ವಾಕ್ ಮಾಡ್ತಿರೋ ಹುಡುಗರು. ಆಗಾಗ ಡಾನ್ಸ್ , ಹಿಂಬದಿಯಲ್ಲಿ ಮಸ್ತ್ ಸಾಂಗ್ಸ್ ಹಾಗೂ ಕೇಕೆ ಶಿಳ್ಳೆ. ಹೌದು […]

ಗಡಿನಾಡಲ್ಲಿ ಸುಂದರಿಯರ ಕ್ಯಾಟ್ ವಾಕ್: ರಂಗುರಂಗಿನ ಸೀರೆಯಲ್ಲಿ ಮಿಂಚಿದ ನೀರೆಯರು
ಸಾಧು ಶ್ರೀನಾಥ್​
|

Updated on:Feb 18, 2020 | 11:19 AM

Share

ಬೀದರ್: ಅದು ರಂಗು ರಂಗಿನ ವೇದಿಕೆ. ಅಲ್ಲಿತ್ತು ಬಣ್ಣ ಬಣ್ಣದ ಚಿತ್ತಾರ. ನೆರೆದ ಯುವಕರ ಚೀತ್ಕಾರ. ದೇಶಿ ಹಾಗೂ ವಿದೇಶಿ ಹಾಡುಗಳಿಗೆ ನೆರೆದವರೆಲ್ಲರಿಂದ ಸಿಕ್ಕಿದ್ದು ಶಿಳ್ಳೇ ಕೇಕೆ. ಆ ಇದೇನು ಅಂದ್ರಾ? ಇಲ್ಲಿದೆ ನೋಡಿ ಆ ಕಲರ್ ಫುಲ್ ಸಂಜೆಯ ಡಿಟೇಲ್ಸ್

ರಂಗು ರಂಗಿನ ದೇಶಿ ಹಾಗೂ ವಿದೇಶಿ ಸೀರೆಯುಟ್ಟ ನೀರೆಯರು, ಬಗೆ ಬಗೆ ಉಡುಪುಗಳಲ್ಲಿ ಕಂಗೊಳಿಸುತ್ತಾ ಕ್ಯಾಟ್ ವಾಕ್ ಮಾಡ್ತಿರೋ ಹುಡುಗರು. ಆಗಾಗ ಡಾನ್ಸ್ , ಹಿಂಬದಿಯಲ್ಲಿ ಮಸ್ತ್ ಸಾಂಗ್ಸ್ ಹಾಗೂ ಕೇಕೆ ಶಿಳ್ಳೆ. ಹೌದು ಇಂದು ಸಂಜೆ ಈ ದೃಶ್ಯಗಳೆಲ್ಲ ಕಂಡುಬಂದಿದ್ದು ಬೀದರ್ ನಗರದ ಜಿಲ್ಲಾ ರಂಗಮಂದಿರದಲ್ಲಿ. ನಗರದ ಜಿಲ್ಲಾ ರೋಟರಿ ಕ್ಲಬ್ ಸಹಯೋಗದಲ್ಲಿ ಉಡಾನ್ ಸಂಸ್ಥೆ ಈ ವಿಭಿನ್ನ ಕಾರ್ಯಕ್ರಮ ಆಯೋಜಿಸಿತ್ತು.

ಕ್ಯಾಟ್ ವಾಕ್ ಮಾಡಿದ ಸುಂದರಿಯರು: ಈ ಸಂಸ್ಥೆ ಆಯೋಜಿಸಿದ್ದ ಇಂದಿನ ಫ್ಯಾಷನ್ ಫಿನಾಲೆ ತೀರಾ ವಿಭಿನ್ನವಾಗಿತ್ತು. ಮಂದ ಬೆಳಕಿನ ನಡುವೆ ಕ್ಯಾಟ್ ವಾಕ್ ಮಾಡಿದ ಸುಂದರಿಯರ ಲಹರಿ ನೋಡುಗರಿಗೆ ಹೊಸ ಲೋಕವನ್ನೇ ತೆರೆದಿಟ್ಟಿತ್ತು‌. ತೆಲಂಗಾಣ, ಮಹಾರಾಷ್ಟ್ರ, ಹೈದರಾಬಾದ್​ನಿಂದ ಬಂದಿದ್ದ ಯುವತಿಯರ ಜೊತೆಗೆ ಸ್ಥಳೀಯ ಬೀದರ್ ಯುವತಿಯರು ಈ ಫ್ಯಾಶನ್ ಶೋದಲ್ಲಿ ಭಾಗಿಯಾಗಿದ್ರು.

ಒಟ್ಟು 50ಕ್ಕೂ ಹೆಚ್ಚು ಸ್ಪರ್ಧಿಗಳು ಭಾಹವಹಿಸಿದ್ದ ಈ ಸ್ಪರ್ಧೆಯಲ್ಲಿ ಹೆಣ್ಣು ಮಕ್ಕಳ ಸಮಸ್ಯೆ ಬಿಂಬಿಸುವಂತಹ ಘಟನಾವಳಿಗಳ ಬಗ್ಗೆಯೂ ಬೆಳಕು ಚೆಲ್ಲಲಾಯಿತು. ಫ್ಯಾಷನ್ ಶೋ ಎಂದರೆ ಈ ಕಾರ್ಯಕ್ರಮ ಅದಕ್ಕಷ್ಟೇ ಸೀಮಿತವಾಗಿರಲಿಲ್ಲ. ಬೀದರ್​ನಂತಹ ಗಡಿನಾಡಲ್ಲೂ ನಡೆದ ಈ ಉತ್ತಮ ಕಾರ್ಯಕ್ರಮ ಲಿಂಗ ಸಮಾನತೆ, ಮಹಿಳಾ ಸ್ವಾತಂತ್ರ್ಯ ದಂತಹ ವಿಚಾರಗಳ ಪ್ರಹಸನದ ಮೂಲಕ ಗಮನ ಸೆಳೆಯಿತು. ಜೊತೆಗೆ ಸ್ಪರ್ಧಿಗಳು ಒಬ್ಬರಿಗಿಂತ ಒಬ್ಬರು ಸಾಕಷ್ಟು ವಿಭಿನ್ನ ಎನ್ನುವಂತೆ ಡಾನ್ಸ್ ಮಾಡುವ ಮೂಲಕ ಗಮನ ಸೆಳೆದರು.

ಯುವ ಜನತೆಯನ್ನು ಗುರಿಯಾಗಿಟ್ಟುಕೊಂಡು ಆಯೋಜಿಸಿದ್ದ ಈ ಕಾರ್ಯಕ್ರಮ ಮನೋಹರವಾಗಿತ್ತು‌. ಹಲವಾರು ಕಾಲೇಜಿನ ವಿದ್ಯಾರ್ಥಿಗಳ ಪ್ರತಿಭೆ ಅನಾವರಣಕ್ಕೂ ವೇದಿಕೆಯಾಗಿತ್ತು. ಮನರಂಜನೆಯ ಜೊತೆಗೆ ಯುವಕ, ಯುವತಿಯರ ಪ್ರಾತ್ಯಕ್ಷಿತೆ ಬಗ್ಗೆಯೂ ಚೆನ್ನಾಗಿ ತಿಳಿಸಿಕೊಟ್ಟ ಈ ಕಾರ್ಯಕ್ರಮ ಅವರ ಜವಾಬ್ದಾರಿ ನೆನಪಿಸುವಲ್ಲಿಯೂ ಸಕ್ತವಾಯಿತು ಎಂದರೆ ಅತಿಶಯೋಕ್ತಿ ಆಗಲಾರದು‌.

Published On - 5:37 pm, Mon, 17 February 20

Follow Us
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!