ಬೆಂಗಳೂರಿನಲ್ಲಿ ಬಿಜೆಪಿ-ಆರ್‌ಎಸ್ಎಸ್‌ ಸಭೆ: ಮತ್ತೊಮ್ಮೆ ಒಗ್ಗಟ್ಟಿನ ಮಂತ್ರ ಜಪಿಸಿದ ನಾಯಕರು

ಇಂದಿನ ಸಭೆಯಲ್ಲಿ ಎಂದಿನಂತೆ ಮತ್ತೊಮ್ಮೆ ಒಗ್ಗಟ್ಟಿನ ಮಂತ್ರ ಜಪಿಸಲ್ಪಟ್ಟಿದೆ. ಎಲ್ಲರೂ ಒಂದಾಗಿ ಹೋಗಬೇಕು ಎಂಬ ನಿರ್ಣಯ ತೆಗೆದುಕೊಂಡವರು ಸಭೆಯಿಂದ ಹೊರಬಂದ ಕೂಡಲೇ ಅದನ್ನು ಮರೆತುಬಿಟ್ಟಿದ್ದಾರೆ. ಪಕ್ಷ ಎಂದ ಮೇಲೆ ಭಿನ್ನಾಭಿಪ್ರಾಯ ಇದ್ದಿದ್ದೇ. ಇದುವರೆಗಿನದ್ದನ್ನು ಮರೆತು ಮುಂದೆ ಹೋಗಬೇಕು. ಇನ್ನು ಮುಂದೆ ಯಾರೂ ಕೂಡಾ ಏಕಪಕ್ಷೀಯ ನಿರ್ಣಯ ತೆಗೆದುಕೊಳ್ಳುವಂತಿಲ್ಲ. ಪಕ್ಷದ ನಿರ್ಣಯಕ್ಕೆ ಎಲ್ಲರೂ ಬದ್ಧರಾಗಿರಬೇಕು.

ಬೆಂಗಳೂರಿನಲ್ಲಿ ಬಿಜೆಪಿ-ಆರ್‌ಎಸ್ಎಸ್‌ ಸಭೆ: ಮತ್ತೊಮ್ಮೆ ಒಗ್ಗಟ್ಟಿನ ಮಂತ್ರ ಜಪಿಸಿದ ನಾಯಕರು
ಬೆಂಗಳೂರಿನಲ್ಲಿ ಬಿಜೆಪಿ-ಆರ್‌ಎಸ್ಎಸ್‌ ಸಭೆ: ಮತ್ತೊಮ್ಮೆ ಒಗ್ಗಟ್ಟಿನ ಮಂತ್ರ ಜಪಿಸಿದ ನಾಯಕರು
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Sep 12, 2024 | 9:19 PM

ಬೆಂಗಳೂರು, ಸೆಪ್ಟೆಂಬರ್​ 12: ಬಹಳ ದಿನಗಳಿಂದ ಬಾಕಿ ಉಳಿದಿದ್ದ ಬಿಜೆಪಿ ಮತ್ತು ಆರ್​ಎಸ್​ಎಸ್ (RSS)​ ಸಮನ್ವಯ ಸಭೆ ಇಂದು ಬೆಂಗಳೂರಿನಲ್ಲಿ ನಡೆದಿದೆ. ರಾಜ್ಯ ನಾಯಕತ್ವದ ವಿರುದ್ಧ ಮುನಿಸಿಕೊಂಡಿದ್ದ ಶಾಸಕರು ಸಭೆಯ ಬಳಿಕ ತಣ್ಣಗಿರುವಂತೆ ಕಾಣಿಸಿಕೊಂಡಿದ್ದು, ಸಮನ್ವಯತೆ ಮತ್ತು ಪಕ್ಷ ಸಂಘಟನೆ ಕುರಿತಂತೆ ಸಭೆಯಲ್ಲಿ ಒಂದಷ್ಟು ಪಾಠ ಹೇಳಲಾಗಿದೆ.

ಕೆಲವು ಸಮಯದಿಂದ ಇದ್ದಂತಹ ಮುನಿಸು, ಸಮನ್ವಯದ ಕೊರತೆ ಎಲ್ಲವೂ ಇಂದು ಒಂದಷ್ಟು ಪರಿಹಾರವಾಗಿದೆ. ರಾಜ್ಯ ನಾಯಕತ್ವದ ವಿರುದ್ಧ ಮುನಿದಿದ್ದವರನ್ನು ಕರೆದು ಮಾತುಕತೆ ಮಾಡಲಾಗಿದ್ದು, ದೊಡ್ಡ ಮಟ್ಟದಲ್ಲಿ ಕುದಿಯುತ್ತಿದ್ದ ಅಸಮಾಧಾನವನ್ನು ತಕ್ಕಮಟ್ಟಿಗೆ ಶಮನ ಮಾಡಲು ಇಂದಿನ ಸಭೆ ಯಶಸ್ವಿಯಾಗಿದೆ. ಇದ್ದ ಅಸಮಾಧಾನವನ್ನು ಮರೆತು ಎಲ್ಲರೂ ಒಂದಾಗಿ ಹೋಗಬೇಕು ಎಂದು ಬಿಜೆಪಿ ರಾಜ್ಯ ನಾಯಕತ್ವ ಮತ್ತು ನಾಯಕತ್ವದ ವಿರುದ್ಧ ಸಿಟ್ಟಾಗಿದ್ದವರು ಎರಡೂ ಕಡೆಯವರಿಗೂ ಬೆಂಗಳೂರಿನಲ್ಲಿ ಇಂದು ನಡೆದ ಸಭೆಯಲ್ಲಿ ಸೂಚನೆ ಸಿಕ್ಕಿದೆ.

ಇದನ್ನೂ ಓದಿ: ಮುಡಾ ಹಗರಣ: ಸಿಎಂ ಅರ್ಜಿ ತೀರ್ಪು ಕಾಯ್ದಿರಿಸಿದ ಹೈಕೋರ್ಟ್, ಸಿದ್ದರಾಮಯ್ಯಗೆ ಢವಢವ

ಪಕ್ಷ ಎಂದ ಮೇಲೆ ಭಿನ್ನಾಭಿಪ್ರಾಯ ಇದ್ದಿದ್ದೇ. ಇದುವರೆಗಿನದ್ದನ್ನು ಮರೆತು ಮುಂದೆ ಹೋಗಬೇಕು. ಇನ್ನು ಮುಂದೆ ಯಾರೂ ಕೂಡಾ ಏಕಪಕ್ಷೀಯ ನಿರ್ಣಯ ತೆಗೆದುಕೊಳ್ಳುವಂತಿಲ್ಲ. ಪಕ್ಷದ ನಿರ್ಣಯಕ್ಕೆ ಎಲ್ಲರೂ ಬದ್ಧರಾಗಿರಬೇಕು. ರಾಜ್ಯ ಕೋರ್ ಕಮಿಟಿ ಪುನರ್ ರಚನೆ ಬಗ್ಗೆ ಕುಳಿತು ಚರ್ಚೆ ಆಗಲಿ. ರಾಜ್ಯ ಸರ್ಕಾರದ ವಿರುದ್ಧ ಸಂಘಟಿತ ಹೋರಾಟ ಆಗಬೇಕು. ಮತ್ತೊಂದು ಪಾದಯಾತ್ರೆ ಪಕ್ಷದ ವೇದಿಕೆಯಲ್ಲೇ ಆಗಬೇಕು ಆಂತರಿಕ ವಿಚಾರ ಬಹಿರಂಗವಾಗಿ ಚರ್ಚೆ ಮಾಡುವಂತಿಲ್ಲ. ಸಂಘಟನೆ ಇನ್ನಷ್ಟು ಗಟ್ಟಿ ಆಗಬೇಕು. ಅವಧಿ ಮುಗಿದ ಮಂಡಲ ಮತ್ತು ಜಿಲ್ಲಾಧ್ಯಕ್ಷರ ಬದಲಾವಣೆ ಆಗಬೇಕು. ಸದಸ್ಯತ್ವ ಅಭಿಯಾನ ಚುರುಕು ಪಡೆಯಬೇಕು.

ವಾಲ್ಮೀಕಿ ಅಭಿವೃದ್ದಿ ನಿಗಮದ ಅವ್ಯವಹಾರ ವಿರುದ್ಧ ಹೋರಾಟದಲ್ಲಿ ಉದ್ದೇಶಿತ ಬಳ್ಳಾರಿ ಪಾದಯಾತ್ರೆಯನ್ನು ಪಕ್ಷದ ವೇದಿಕೆಯ ಮೂಲಕವೇ ನಡೆಸಲು ಇಂದಿನ ಸಭೆಯಲ್ಲಿ ನಿರ್ಣಯ ಮಾಡಲಾಗಿದ್ದು, ಇದಕ್ಕೆ ಯತ್ನಾಳ್, ಜಾರಕಿಹೊಳಿ ಕೂಡಾ ಒಪ್ಪಿಕೊಂಡಿದ್ದಾರೆ. ಇದೇ ವೇಳೆ ಇಷ್ಟು ದಿನಗಳ ಕಾಲ ಎರಡು ಮೂರು ಪ್ರತ್ಯೇಕ ಸಭೆ ನಡೆಸಿದ್ದ ಶಾಸಕರು, ಈಗ ಮುಂದಿನ ಹೆಜ್ಜೆಯ ಕುರಿತ ಅಧಿಕಾರವನ್ನು ಮಾಜಿ ಸಚಿವ ಅರವಿಂದ ಲಿಂಬಾವಳಿ ಕೈಗೆ ಒಪ್ಪಿಸಿದ್ದಾರೆ. ಸಭೆಯ ಬಳಿಕ ಮಾತನಾಡಿದ ನಾಯಕರು ತಾವು ಸಂತೋಷವಾಗಿದ್ದು, ಎಲ್ಲವೂ ಮುಕ್ತ ಚರ್ಚೆ ನಡೆದಿದೆ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ನಾಗಮಂಗಲ ಗಲಭೆ ಪ್ರಕರಣ; ಯಾವುದೇ ಧರ್ಮದವರಾಗಿರಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು-ಸಿದ್ದರಾಮಯ್ಯ

ಇಂದಿನ ಸಭೆಯಲ್ಲಿ ಎಂದಿನಂತೆ ಮತ್ತೊಮ್ಮೆ ಒಗ್ಗಟ್ಟಿನ ಮಂತ್ರ ಜಪಿಸಲ್ಪಟ್ಟಿದೆ. ಎಲ್ಲರೂ ಒಂದಾಗಿ ಹೋಗಬೇಕು ಎಂಬ ನಿರ್ಣಯ ತೆಗೆದುಕೊಂಡವರು ಸಭೆಯಿಂದ ಹೊರಬಂದ ಕೂಡಲೇ ಅದನ್ನು ಮರೆತುಬಿಟ್ಟಿದ್ದಾರೆ. ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಡೆದಿದ್ದ ಗಲಭೆ ಸಂಬಂಧ ಸ್ಥಳಕ್ಕೆ ಬಿಜೆಪಿ ನಾಯಕರು ತೆರಳಲು ಪಕ್ಷದಿಂದ ನಿರ್ಧಾರ ಮಾಡಿದ್ದು, ವಿಧಾನ ಪರಿಷತ್ ವಿಪಕ್ಷ ನಾಯಕರನ್ನು ಬಿಟ್ಟೇ ರಾಜ್ಯಾಧ್ಯಕ್ಷರು ಮತ್ತು ವಿಧಾನಸಭೆ ವಿಪಕ್ಷ ನಾಯಕರು ತೆರಳಿದ್ದಾರೆ.

ಆರ್​ಎಸ್​ಎಸ್ ಮುಖಂಡರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಮಾಜಿ ಸಚಿವ ಅರವಿಂದ ಲಿಂಬಾವಳಿ, ಮಾಜಿ ಸಂಸದ ಪ್ರತಾಪ ಸಿಂಹ ಮತ್ತು ಮಾಜಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಪಾಲ್ಗೊಂಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.