AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bus Priority Lane: ಆದ್ಯತಾ ಪಥದಲ್ಲಿ ಚಲಿಸದೆ ಟ್ರಾಫಿಕ್ ಸಮಸ್ಯೆಗೆ ಪುಷ್ಟಿ ನೀಡುತ್ತಿರುವ BMTC ಬಸ್ ಸಮಸ್ಯೆಗೆ ಪರಿಹಾರವೇನು?

ನಗರದ BMTC ಬಸ್ ಒಂದು ಬಸ್​ಗಳ ಆದ್ಯತಾ ಪಥ (Bus Priority Lane-BPL) ಮೀರಿ ಸಾಮಾನ್ಯ (Non-BPL) ಹಾದಿಯಲ್ಲಿ ಚಲಿಸಿರುವ ವಿಚಾರವನ್ನು ಬೆಂಗಳೂರಿನ ನಾಗರಿಕರೊಬ್ಬರು ಗಮನಿಸಿ, BMTCಗೆ ಟ್ವೀಟ್ ಮೂಲಕ ತಿಳಿಸಿರುವ ಘಟನೆ ನಡೆದಿದೆ.

Bus Priority Lane: ಆದ್ಯತಾ ಪಥದಲ್ಲಿ ಚಲಿಸದೆ ಟ್ರಾಫಿಕ್ ಸಮಸ್ಯೆಗೆ ಪುಷ್ಟಿ ನೀಡುತ್ತಿರುವ BMTC ಬಸ್ ಸಮಸ್ಯೆಗೆ ಪರಿಹಾರವೇನು?
ಬಸ್ ಆದ್ಯತಾ ಪಥ ಸೂಚನೆ ಹಾಗೂ ಬಸ್ ಆದ್ಯತಾ ಪಥ ಪಾಲಿಸದೆ ಸಾಮಾನ್ಯ ರಸ್ತೆಯಲ್ಲಿ ಸಂಚರಿಸುತ್ತಿರುವ ಬಸ್
TV9 Web
| Updated By: ganapathi bhat|

Updated on:Apr 06, 2022 | 7:53 PM

Share

ಬೆಂಗಳೂರು: ನಗರದ BMTC ಬಸ್ ಒಂದು ಬಸ್​ಗಳ ಆದ್ಯತಾ ಪಥ (Bus Priority Lane-BPL) ಮೀರಿ ಸಾಮಾನ್ಯ (Non-BPL) ಹಾದಿಯಲ್ಲಿ ಚಲಿಸಿರುವ ವಿಚಾರವನ್ನು ಬೆಂಗಳೂರಿನ ನಾಗರಿಕರೊಬ್ಬರು ಗಮನಿಸಿ, BMTCಗೆ ಟ್ವೀಟ್ ಮೂಲಕ ತಿಳಿಸಿರುವ ಘಟನೆ ನಿನ್ನೆ (ಫೆ.18) ನಡೆದಿದೆ. ಸಾರ್ವಜನಿಕರ ಈ ಟ್ವೀಟ್​ಗೆ ಪ್ರತಿಕ್ರಿಯಿಸಿರುವ ಬೆಂಗಳೂರು ಮೆಟ್ರೋಪಾಲಿಟನ್ ಟ್ರಾನ್ಸ್​ಪೋರ್ಟ್ ಕಾರ್ಪೊರೇಷನ್ (BMTC) ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ.

ನಿನ್ನೆ, ಶ್ರೀಕಾಂತ್ ಎಂ. ಎಂಬವರು ಯಾವುದೇ ಬಸ್ ಸಂಚಾರವಿರದೆ ಖಾಲಿಯಾಗಿದ್ದ ಬಸ್ ಆದ್ಯತಾ ಪಥವನ್ನು ಗಮನಿಸಿದ್ದಾರೆ. ಜತೆಗೆ, ಬಿಎಂಟಿಸಿ ಬಸ್ ಒಂದು ಸಾಮಾನ್ಯ (Non-BPL) ರಸ್ತೆಯಲ್ಲಿ ಸಂಚರಿಸುತ್ತಿರುವುದನ್ನು ಕಂಡಿದ್ದಾರೆ. ಮಾರತ್​ಹ​ ಳ್ಳಿ ಸೇತುವೆಯ ಬಳಿ, ಸಂಜೆ 4.45ರ ಸುಮಾರಿಗೆ ಈ ಘಟನೆಗೆ ಶ್ರೀಕಾಂತ್ ಸಾಕ್ಷಿಯಾಗಿದ್ದಾರೆ. ಇದರಿಂದ ಬಸ್ ಆದ್ಯತಾ ಪಥವು ಖಾಲಿಯಾಗಿದ್ದು, Non-BPL ಮಾರ್ಗವು ಇಕ್ಕಟ್ಟಿನ ಪರಿಸ್ಥಿತಿ ಎದುರಿಸುವಂತಾಗಿದೆ.

ಬಿಎಂಟಿಸಿ ಸಂಸ್ಥೆ ಮಾತ್ರ ಈ ಬಗ್ಗೆ ಎಚ್ಚರಿಕೆ ವಹಿಸಿದರೆ ಸಾಕಾ ಅಥವಾ ಟ್ರಾಫಿಕ್ ಪೊಲೀಸರು ಕೂಡ ಕ್ರಮ ಕೈಗೊಳ್ಳಲು ಮುಂದಾಗುತ್ತಾರಾ ಎಂದು ನಾಗರಿಕರು ಪ್ರಶ್ನಿಸುತ್ತಿದ್ದಾರೆ. ಬಸ್ ಆದ್ಯತಾ ಪಥದಲ್ಲಿ ಇತರ ವಾಹನಗಳು ಸಂಚರಿಸಿದರೆ ದಂಡ ವಿಧಿಸಿದಂತೆ, Non-BPL ಮಾರ್ಗದಲ್ಲಿ ಬಸ್ ಸಂಚರಿಸಿದರೆ ದಂಡ ಇಲ್ಲವೇ? ಎಂದೂ ಕೇಳುತ್ತಿದ್ದಾರೆ.

ಕೊವಿಡ್, ಲಾಕ್​ಡೌನ್ ಹಾಗೂ ವರ್ಕ್ ಫ್ರಮ್ ಹೋಮ್ ಕಾರಣದಿಂದ ಪ್ರಯಾಣಿಕರ ಸಂಖ್ಯೆಯ ಪ್ರಮಾಣದಲ್ಲಿ ಇಳಿಕೆ ಆಗಿತ್ತು. ಹೀಗಾಗಿ ಬಸ್​ಗಳ ಸಂಖ್ಯೆಯೂ ಕಡಿಮೆಯಾಗಿತ್ತು. ಬಸ್ ಆದ್ಯತಾ ಪಥದಲ್ಲಿ ಸಂಚರಿಸುವ ಬಸ್​ಗಳ ಸಂಖ್ಯೆ ಕಡಿಮೆಯಾಗಿತ್ತು. ಹಾಗೆಂದು ಬಸ್​ಗಳು ತಮಗೆ ಮೀಸಲಿರುವ ಆದ್ಯತಾ ಪಥಗಳ ಬದಲಾಗಿ, ಇತರ ಸಾಮಾನ್ಯ ಮಾರ್ಗದಲ್ಲಿ ಸಂಚರಿಸುವುದು ನಡೆಯುತ್ತಿದೆ. ಈ ಬಗ್ಗೆ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ನಾಗರಿಕರ ಆಗ್ರಹವಾಗಿದೆ.

ಟ್ವೀಟ್​ಗೆ ಪ್ರತಿಕ್ರಿಯಿಸಿದ ಬಿಎಂಟಿಸಿ ಬಿಎಂಟಿಸಿ ಮಾಡಿದ್ದ ಟ್ವೀಟ್​ಗೆ ಕಮೆಂಟ್ ಮೂಲಕ ಪ್ರತಿಕ್ರಿಯಿಸಿದ್ದ ಶ್ರೀಕಾಂತ್ ಎಂ., ಬಸ್​ಗಳು ಆದ್ಯತಾ ಪಥ ಮೀರಿ ಸಂಚರಿಸುತ್ತಿರುವ ವಿಚಾರವನ್ನು ಗಮನಕ್ಕೆ ತಂದಿದ್ದಾರೆ. ಇದಕ್ಕೆ ಬಿಎಂಟಿಸಿ ಕೂಡ ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿದೆ. ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದೆ.

ಇದನ್ನೂ ಓದಿ: 365 ಸಾಲುಗಳ ಸುದೀರ್ಘ ಪ್ರೇಮಕವನ ಬರೆದ ಬೆಂಗಳೂರು ನವೋದ್ಯಮಿ

Published On - 8:44 pm, Fri, 19 February 21

ಪತ್ನಿಯ ಹುಡುಕುತ್ತಾ ಕಾರಿನಲ್ಲಿ ರೈಲ್ವೆ ಪ್ಲಾಟ್​ಫಾರ್ಮ್​ಗೆ ಬಂದ ಪತಿ
ಪತ್ನಿಯ ಹುಡುಕುತ್ತಾ ಕಾರಿನಲ್ಲಿ ರೈಲ್ವೆ ಪ್ಲಾಟ್​ಫಾರ್ಮ್​ಗೆ ಬಂದ ಪತಿ
ಮಗಳೊಟ್ಟಿಗೆ ಕಾಪು ಮಾರಿಗುಡಿ ದೇವಾಲಯಕ್ಕೆ ಅಶ್ವಿನಿ ಪುನೀತ್​​ ರಾಜ್​​ಕುಮಾರ್
ಮಗಳೊಟ್ಟಿಗೆ ಕಾಪು ಮಾರಿಗುಡಿ ದೇವಾಲಯಕ್ಕೆ ಅಶ್ವಿನಿ ಪುನೀತ್​​ ರಾಜ್​​ಕುಮಾರ್
ಸಿಎಂ ಜೊತೆಗಿದ್ದ ಶಾಸಕರೆಲ್ಲ ಸ್ವಂತ ಖರ್ಚಿನಲ್ಲಿ ದೆಹಲಿ ಹೋಗಿದ್ದರೇ?
ಸಿಎಂ ಜೊತೆಗಿದ್ದ ಶಾಸಕರೆಲ್ಲ ಸ್ವಂತ ಖರ್ಚಿನಲ್ಲಿ ದೆಹಲಿ ಹೋಗಿದ್ದರೇ?
ಕೆಲದಿನಗಳ ಮಟ್ಟಿಗೆ ಮುಂದೂಡಲ್ಪಟ್ಟ ಮುಖ್ಯಮಂತ್ರಿ ಗಾದಿಯ ಸಂಘರ್ಷ
ಕೆಲದಿನಗಳ ಮಟ್ಟಿಗೆ ಮುಂದೂಡಲ್ಪಟ್ಟ ಮುಖ್ಯಮಂತ್ರಿ ಗಾದಿಯ ಸಂಘರ್ಷ
ಯಶ್ ವಿಚಾರದಲ್ಲಿ ಅಷ್ಟು ಕಟುತ್ವ ಏಕೆ? ಉತ್ತರಿಸಿದ ತಾಯಿ ಪುಷ್ಪಾ
ಯಶ್ ವಿಚಾರದಲ್ಲಿ ಅಷ್ಟು ಕಟುತ್ವ ಏಕೆ? ಉತ್ತರಿಸಿದ ತಾಯಿ ಪುಷ್ಪಾ
ಧಾರ್ಮಿಕ ಸ್ಥಳಕ್ಕೆ ಬಂದಾಗ ರಾಜಕೀಯ ಮಾತಾಡಲಾರೆ: ಪರಮೇಶ್ವರ್
ಧಾರ್ಮಿಕ ಸ್ಥಳಕ್ಕೆ ಬಂದಾಗ ರಾಜಕೀಯ ಮಾತಾಡಲಾರೆ: ಪರಮೇಶ್ವರ್
ದಿನಸಿ ಸಾಲ ವಾಪಾಸ್ ಕೇಳಿದ್ದಕ್ಕೆ ಅಂಗಡಿಗೇ ಬೆಂಕಿ ಹಚ್ಚಲು ಮುಂದಾದ ವ್ಯಕ್ತಿ!
ದಿನಸಿ ಸಾಲ ವಾಪಾಸ್ ಕೇಳಿದ್ದಕ್ಕೆ ಅಂಗಡಿಗೇ ಬೆಂಕಿ ಹಚ್ಚಲು ಮುಂದಾದ ವ್ಯಕ್ತಿ!
ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವೆ ಸಂಘರ್ಷ ಶುರುವಾಗಿದೆ: ಅಶೋಕ
ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವೆ ಸಂಘರ್ಷ ಶುರುವಾಗಿದೆ: ಅಶೋಕ
ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಅಸಹಾಯಕ ತಂದೆ
ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಅಸಹಾಯಕ ತಂದೆ
ಗಜಲಕ್ಷ್ಮಿ, ಮಹಾಲಕ್ಷ್ಮಿ ಅಲಂಕಾರದಲ್ಲಿ ಕಂಗೊಳಿಸುತ್ತಿರುವ ಚಾಮುಂಡೇಶ್ವರಿ
ಗಜಲಕ್ಷ್ಮಿ, ಮಹಾಲಕ್ಷ್ಮಿ ಅಲಂಕಾರದಲ್ಲಿ ಕಂಗೊಳಿಸುತ್ತಿರುವ ಚಾಮುಂಡೇಶ್ವರಿ