ಪೊಲೀಸ್ ಅಧಿಕಾರಿಗಳಿಗೆ ತಲೆ ನೋವಾದ ಕಾಡುಗಳ್ಳನ ಎನ್​ಕೌಂಟರ್​ ಕೇಸ್​: ನಾಪತ್ತೆಯಾಗಿರುವ 9 ಬೇಟೆಗಾರರಿಗಾಗಿ ಖಾಕಿ ತಲಾಶ್​​

Chamarajanagar: ಭಾನುವಾರ ನಡೆದ ಕಾಡುಗಳ್ಳನ ಎನ್ ಕೌಂಟರ್ ಪ್ರಕರಣವನ್ನ ಪೊಲೀಸರು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಚಾಮರಾಜನಗರ ಡಿವೈಎಸ್​ಪಿ ನೇತೃತ್ವದಲ್ಲಿ ತಂಡ ರಚಿಸಿರುವ ಎಸ್ ಪಿ ಪದ್ಮಿನಿ ಸಾಹು ನಾಪತ್ತೆಯಾಗಿರುವ 9 ಮಂದಿ ಕಾಡುಗಳ್ಳರಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ.

ಪೊಲೀಸ್ ಅಧಿಕಾರಿಗಳಿಗೆ ತಲೆ ನೋವಾದ ಕಾಡುಗಳ್ಳನ ಎನ್​ಕೌಂಟರ್​ ಕೇಸ್​: ನಾಪತ್ತೆಯಾಗಿರುವ 9 ಬೇಟೆಗಾರರಿಗಾಗಿ ಖಾಕಿ ತಲಾಶ್​​
ನಾಪತ್ತೆಯಾಗಿರುವವರಿಗಾಗಿ ಪೊಲೀಸ್​ ಹುಡುಕಾಟ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Nov 09, 2023 | 3:12 PM

ಚಾಮರಾಜನಗರ, ನವೆಂಬರ್​​​ 9: ಭಾನುವಾರ ನಸುಕಿನ ವೇಳೆ ಬಂಡೀಪುರ ಟೈಗರ್ ರಿಸರ್ವ್ ವ್ಯಾಪ್ತಿಯಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಕಾಡುಗಳ್ಳ ಫಾರೆಸ್ಟ್ ಅಧಿಕಾರಿ ಹಾರಿಸಿದ ಗುಂಡಿಗೆ (encounter) ಬಲಿಯಾಗಿದ್ದ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿರುವ 9 ಮಂದಿ ಬೇಟೆಗಾರರಿಗಾಗಿ ಪೊಲೀಸರು 2 ವಿಶೇಷ ತಂಡವನ್ನ ರಚಿಸಿದ್ದಾರೆ. ಚಾಮರಾಜನಗರ ಡಿವೈಎಸ್​ಪಿ ನೇತೃತ್ವದಲ್ಲಿ ತಂಡ ರಚಿಸಿರುವ ಎಸ್ ಪಿ ಪದ್ಮಿನಿ ಸಾಹು ನಾಪತ್ತೆಯಾಗಿರುವ 9 ಮಂದಿ ಕಾಡುಗಳ್ಳರಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ.

ಈಗಾಲೇ 9 ಮಂದಿ ಆರೋಪಿತರ ಟವರ್ ಲೊಕೇಷನ್ ಕಲೆ ಹಾಕಿದ್ದು 9 ಮಂದಿಯೂ ಮೊಬೈಲ್ ನ ಸ್ವಿಚ್ ಆಫ್ ಮಾಡ್ಕೊಂಡು ತಲೆ ಮರೆಸಿಕೊಂಡಿದ್ದು ಯಾರ ಸಂಪರ್ಕಕ್ಕೂ ಸಿಗದೆ ಪರಾರಿಯಾಗಿದ್ದಾರೆ.

ಇದನ್ನೂ ಓದಿ: ತಡರಾತ್ರಿ ಅರಣ್ಯದೊಳಗೆ ಘನಘೋರ ಗುಂಡಿನ ಕಾಳಗ!ಅರಣ್ಯಾಧಿಕಾರಿಯ ಎನ್ ಕೌಂಟರ್​ಗೆ ಬೇಟೆಗಾರ ಬಲಿ

ಭಾನುವಾರ ನಸುಕಿನ ವೇಳೆ ಬಂಡೀಪುರ ಟೈಗರ್ ರಿಸರ್ವ್ ಫಾರೆಸ್ಟ್​ನ ಮದ್ದೂರು ವಲಯದಲ್ಲಿ 10 ಮಂದಿ ಬೇಟೆಗಾರರು ಮೂರ್ನಾಲ್ಕು ಕಡವೆಯನ್ನ ಬೇಟೆಯಾಡಿದ್ದರು. ಗುಂಡಿನ ಮೊರೆತ ಕೇಳಿದ ಗಸ್ತು ಸಿಬ್ಬಂದಿ ಎಪಿಸಿಗೆ ವಿಷಯ ಮುಟ್ಟಿಸಿದ್ದರು. ಈ ವೇಳೆ ಬೇಟೆಗಾರರಿಗಾಗಿ ಶೋಧ ನಡೆಸಿ ಎಪಿಸಿ ಕ್ಯಾಂಪ್ ಸಿಬ್ಬಂದಿಗೆ ಬೇಟೆಗಾರರು ಎದುರಾಗಿದ್ದರು.

ಶರಣಾಗುವಂತೆ ಎಪಿಸಿ ಸಿಬ್ಬಂದಿ ಸೂಚನೆ ನೀಡಿದ್ದರು ಭೀಮನಬೀಡು ಗ್ರಾಮದ ಮನು ಅರಣ್ಯಾಧಿಕಾರಿಗಳ ಮೇಲೆಯೆ ಗುಂಡು ಹಾರಿಸಿದ್ದ. ಈ ವೇಳೆ ಆತ್ಮರಕ್ಷಣೆಗಾಗಿ ಅರಣ್ಯಾಧಿಕಾರಿ ಮನು ಮೇಲೆ ಗುಂಡು ಹಾರಿಸಿ ಎನ್ ಕೌಂಟರ್ ಮಾಡಿದ್ದರು. ಮನುವಿಗೆ ಗುಂಡು ಬೀಳುತ್ತಿದ್ದಂತೆ 140 ಕೆಜಿ ತೂಕದ ಕಡವೆ ಮಾಂಸ ಹಾಗೂ ಒಂದು ಸಿಂಗಲ್ ಬ್ಯಾರಲ್ ಬಂದೂಕನ್ನ ಸ್ಥಳದಲ್ಲೇ ಬಿಟ್ಟು 9 ಮಂದಿ ಬೇಟೆಗಾರರು ಎಸ್ಕೇಪ್ ಆಗಿದ್ದರು. ಈಗ ಪರಾರಿಯಾಗಿರುವ 9 ಮಂದಿ ಬೇಟೆಗಾರರಿಗಾಗಿ ಪೊಲೀಸರು ತೀವ್ರ ಶೋಧಕಾರ್ಯ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಚಿಕ್ಕಮಗಳೂರು: ಜಿಂಕೆ ಬೇಟೆಯಾಡಲು ಬಂದಿದ್ದವನ ಎದೆ ಸೀಳಿದ ಅರಣ್ಯಾಧಿಕಾರಿಯ ಗುಂಡು; ಸ್ಥಳದಲ್ಲೇ ಮೃತ

ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂಬಂತೆ ಈಗ ಇನ್ನುಳಿದ 9 ಮಂದಿ ಬೇಟೆಗಾರರಿಗಾಗಿ ಪೊಲೀಸರು ತೀವ್ರ ಶೋಧಕಾರ್ಯ ನಡೆಸುತ್ತಿದ್ದು 2 ಪ್ರತ್ಯೇಕ ತಂಡದೊಂದಿಗೆ ಶೋಧಕಾರ್ಯ ನಡೆಸುತ್ತಿದ್ದಾರೆ.

ಆರೋಪಿಗಳ ಕಾಲಿಗೆ ಗುಂಡೇಟು ಕೊಟ್ಟು ಬಂಧಿಸಿದ ಪೊಲೀಸರು!

ಕೋಲಾರ: ಅಪ್ರಾಪ್ತ ಬಾಲಕ ಕಾರ್ತಿಕ್‌ ಸಿಂಗ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳ ಮೇಲೆ‌ ಪೊಲೀಸರು ಫೈರಿಂಗ್‌ ಮಾಡಿರುವಂತಹ ಘಟನೆ ಮುಳಬಾಗಿಲು ತಾಲೂಕಿನ ದೇವರಾಯಸಮುದ್ರ ಗ್ರಾಮದ ಬಳಿ ನಡೆದಿದೆ. ಆರೋಪಿಗಳನ್ನು ಬಂಧಿಸುವ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಮುಂದಾದಾಗ ಮುಳಬಾಗಿಲು ಸಬ್ಇನ್ಪೆಕ್ಟರ್ ವಿಠಲ್ ತಳವಾರ್ ಅವರಿಂದ ಆರೋಪಿಗಳ ಎರಡೂ ಕಾಲುಗಳಿಗೆ ಫೈರಿಂಗ್‌ ಮಾಡಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?
‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ