ಮಾನವರ ಮೇಲೆ ಹೆಚ್ಚಾದ ಚಿರತೆ ದಾಳಿ: ಅರಣ್ಯಾಧಿಕಾರಿ ನೇತೃತ್ವದಲ್ಲಿ ಚಿರತೆ ಸೆರೆಗೆ ಮುಂದಾದ ಲೆಪರ್ಡ್ ಟಾಸ್ಕ್ ಫೋರ್ಸ್

| Updated By: ಗಂಗಾಧರ​ ಬ. ಸಾಬೋಜಿ

Updated on: Jul 27, 2023 | 7:30 PM

ದಿನದಿಂದ ದಿನಕ್ಕೆ ಮಾನವರ ಮೇಲೆ ಚಿರತೆ ದಾಳಿ ಪ್ರಕರಣಗಳು ಹೆಚ್ಚಾಗುತ್ತಿವೆ. ಇತ್ತೀಚೆಗೆ ಮಲ್ಲಿಗೆಹಳ್ಳಿಯಲ್ಲಿ ಬಾಲಕನ ಮೇಲೆ ಚಿರತೆ ದಾಳಿ ಮಾಡಿತ್ತು. ಹಾಗಾಗಿ ಚಿರತೆ ಸೆರೆ ಹಿಡಿಯಲು ಅರಣ್ಯಾಧಿಕಾರಿ ನೇತೃತ್ವದಲ್ಲಿ ನುರಿತ ಲೆಪರ್ಡ್ ಟಾಸ್ಕ್ ಫೋರ್ಸ್​ನೊಂದಿಗೆ ಕೂಂಬಿಂಗ್ ಕಾರ್ಯಚರಣೆ ಶುರು ಮಾಡಲಾಗಿದೆ.

ಮಾನವರ ಮೇಲೆ ಹೆಚ್ಚಾದ ಚಿರತೆ ದಾಳಿ: ಅರಣ್ಯಾಧಿಕಾರಿ ನೇತೃತ್ವದಲ್ಲಿ ಚಿರತೆ ಸೆರೆಗೆ ಮುಂದಾದ ಲೆಪರ್ಡ್ ಟಾಸ್ಕ್ ಫೋರ್ಸ್
ಚಿರತೆಗಾಗಿ ಶೋಧ ಕಾರ್ಯಾಚರಣೆ
Follow us on

ಚಾಮರಾಜನಗರ, ಜುಲೈ 27: ಜಿಲ್ಲೆಯ ಯಳಂದೂರು ತಾಲೂಕಿನ ಮಲ್ಲಿಗೆಹಳ್ಳಿಯಲ್ಲಿ ಬಾಲಕನ ಮೇಲೆ ಚಿರತೆ (Leopard) ದಾಳಿ ಪ್ರಕರಣ ಹಿನ್ನೆಲೆ ಗ್ರಾಮದ ಸುತ್ತಮುತ್ತ ಚಿರತೆಗಾಗಿ ಶೋಧ ಕಾರ್ಯಾಚರಣೆ ಮಾಡಲಾಗುತ್ತಿದೆ. ಮೈಸೂರಿನಿಂದ ಆಗಮಿಸಿರುವ ಟಾಸ್ಕ್​ಫೋರ್ಸ್​ನಿಂದ ಶೋಧ ಮಾಡಲಾಗಿದೆ. ಅರಣ್ಯ ಸಿಬ್ಬಂದಿ ಎಷ್ಟೇ ಹುಡುಕಾಡಿದರೂ ಚಿರತೆ ಪತ್ತೆಯಾಗಿಲ್ಲ. ಆದರೆ ಶತಾಯಗತಾಯ ಚಿರತೆ ಸೆರೆಗಾಗಿ ಟಾಸ್ಕ್​ಫೋರ್ಸ್ ಪಣ ತೊಟ್ಟಿದೆ.

ಮಲ್ಲಿಗೆಹಳ್ಳಿ ಸುತ್ತಮುತ್ತ 60 ಸಿಸಿಕ್ಯಾಮರಾ, 2 ದೊಡ್ಡ ಬೋನ್​ ಸೇರಿದಂತೆ 9 ಬೋನ್​ಗಳನ್ನು ಸಿಬ್ಬಂದಿ ಅಳವಡಿಸಿದ್ದಾರೆ. ಅರಣ್ಯ ಇಲಾಖೆಯ 70ಕ್ಕೂ ಹೆಚ್ಚು ಸಿಬ್ಬಂದಿಯಿಂದ ಕೂಂಬಿಂಗ್​ ಕಾರ್ಯಚರಣೆ ಮಾಡಲಾಗುತ್ತಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಹುಲಿಗಳ ಸಂಖ್ಯೆ ಏರಿಕೆ, ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾದ 435 ಹುಲಿಗಳು: ಈಶ್ವರ ಖಂಡ್ರೆ

ಚಿರತೆ ದಾಳಿಗೆ ಬಲಿಯಾಯ್ತು 8 ಕುರಿಮರಿಗಳು

ಕಳೆದ 4 ವರ್ಷಗಳಿಂದ ಒಂದಲ್ಲ ಒಂದು ಕಡೆ ದಾಳಿಗಳು ನಡಿತಾನೆ ಇದೆ. ಇತ್ತೀಚೆಗೆ ಕುರಿಕೊಟ್ಟಿಗೆ ಮೇಲೆ ದಾಳಿ ನಡೆಸಿದ ಚಿರತೆ ಬರೋಬ್ಬರಿ 8 ಮರಿಗಳನ್ನ ತಿಂದು ತೇಗಿತ್ತು. ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಶಿವಪುರದಲ್ಲಿ ಘಟನೆ ನಡೆದಿತ್ತು. ಚಿರತೆಯ ಅಟ್ಟಹಾಸಕ್ಕೆ ರೈತ ಗೋಪಿ ಸಾಕಿದ್ದ 8 ಕುರಿಮರಿಗಳು ಸತ್ತು ಹೋಗಿದ್ದವು. ಬೆಳ್ಳಂಬೆಳಗ್ಗೆ ಕೊಟ್ಟಿಗೆ ಒಳ ಹೊಕ್ಕ ಚಿರತೆ 6 ಮರಿಗಳ ರಕ್ತ ಹೀರಿ ಕೊಂದಾಕಿದ್ರೆ ಇನ್ನೆರೆಡು ಕುರಿ ಮರಿಗಳನ್ನ ಹೊತ್ತೊಯ್ದಿತ್ತು.

ಇದನ್ನೂ ಓದಿ: Chamarajanagar: ಕೊನೆಗೂ ಖೆಡ್ಡಾಗೆ ಬಿದ್ದ ಒಂಟಿಸಲಗ; ಸತತ ಮೂರು ಅರವಳಿಕೆ ಮದ್ದು ನೀಡಿ ಸೆರೆ

ಅರಣ್ಯಾಧಿಕಾರಿಗಳಿಗೆ ಸುದ್ದಿ ತಿಳಿಸಿದರು ಸಕಾಲಕ್ಕೆ ಅಧಿಕಾರಿಗಳು ಆಗಮಿಸಿಲ್ಲ ಎಂದು ಅರಣ್ಯಾಧಿಕಾರಿಗಳ ವಿರುದ್ದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು. ಕಳೆದ 4 ವರ್ಷದ ಹಿಂದೆಯೂ ಇದೆ ರೀತಿ ದಾಳಿಯಾಗಿತ್ತು. ಆಗ ಬೋನಿಟ್ಟ ಅರಣ್ಯಾಧಿಕಾರಿಗಳು ಚಿರತೆಯನ್ನ ಸೆರೆ ಹಿಡಿದು ಕಾಡಿಗೆ ಹೋಗಿ ಬಿಟ್ಟಿದ್ರು. ಈಗ ಮತ್ತದೆ ರೀತಿಯ ಸಮಸ್ಯೆ ಎದುರಾಗಿದ್ದು ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.