AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಬಳ್ಳಾಪುರ: ಬೀದಿ ನಾಯಿಗೆ ಅದ್ದೂರಿ ಹುಟ್ಟುಹಬ್ಬ ಆಚರಣೆ; ಕೇಕ್ ಕತ್ತರಿಸಿ ಸನ್ಮಾನ ಮಾಡಿದ ಸ್ಥಳೀಯರು

ಅಚ್ಚುಮೆಚ್ಚಿನ ನಾಯಿಗೆ ಶಾಲು ಹೊದಿಸಿ, ಹೂವಿನ ಹಾರ ಹಾಕಿ ಸಂಭ್ರಮಿಸುವ ಮೂಲಕ ವಿನೂತನವಾಗಿ ಹುಟ್ಟುಹಬ್ಬ ಆಚರಿಸಿದ್ದಾರೆ.

ಚಿಕ್ಕಬಳ್ಳಾಪುರ: ಬೀದಿ ನಾಯಿಗೆ ಅದ್ದೂರಿ ಹುಟ್ಟುಹಬ್ಬ ಆಚರಣೆ; ಕೇಕ್ ಕತ್ತರಿಸಿ ಸನ್ಮಾನ ಮಾಡಿದ ಸ್ಥಳೀಯರು
ಬೀದಿ ನಾಯಿಗೆ ಅದ್ದೂರಿ ಹುಟ್ಟುಹಬ್ಬ ಆಚರಣೆ
TV9 Web
| Edited By: |

Updated on:Sep 12, 2021 | 3:22 PM

Share

ಚಿಕ್ಕಬಳ್ಳಾಪುರ: ನಿಯತ್ತಿಗೆ ಇನ್ನೊಂದು ಹೆಸರು ನಾಯಿ ಎಂಬ ಮಾತಿದೆ. ಅದರಂತೆ ತನ್ನ ಒಳ್ಳೆಯ ಗುಣಗಳಿಂದ ಖ್ಯಾತಿ ಪಡೆದಿರುವ ಬೀದಿ ನಾಯಿಯೊಂದಕ್ಕೆ( Street dog) ಗೌರವ ಸಮರ್ಪಣೆ ಮಾಡಲಾಗಿದೆ. ಬೀದಿ ನಾಯಿಯ ಹುಟ್ಟುಹಬ್ಬದ (Birthday) ಅಂಗವಾಗಿ ಸ್ಥಳೀಯರು ಕೇಕ್ ಕತ್ತರಿಸಿ, ಸನ್ಮಾನ ಮಾಡಿ, ಅಭಿನಂದನೆ ಸಲ್ಲಿಸಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ನಗರದ ನಾಲ್ಕನೇ ವಾರ್ಡ್​ನಲ್ಲಿ ನಡೆದಿದೆ.

ನಗರದ 4ನೇ ವಾರ್ಡ್​ನ ಎಡಿ ಕಾಲೋನಿಯ ಸ್ನೇಹಿತ ಬಳಗದಿಂದ ಬೀದಿ ನಾಯಿಗೆ ಸನ್ಮಾನ ಮಾಡಲಾಯಿತು. ಕೆಲವು ವರ್ಷಗಳ ಹಿಂದೆ ಸಾಕು ನಾಯಿಯನ್ನು ತಂದು ದೇವಾಸ್ಥಾನದ ಆವರಣದಲ್ಲಿ ಬಿಡಲಾಯಿತು. ಇದನ್ನು ಕಂಡ ಇಲ್ಲಿನ ಜನರು ಅದಕ್ಕೆ ಶೇರ್ ಖಾನ್ ಎಂದು ಹೆಸರು ಸಹ ಇಟ್ಟಿದ್ದರು. ಹೀಗಾಗಿ ಶೇರ್ ಖಾನ್ ಹುಟ್ಟುಹಬ್ಬದ ಪ್ರಯುಕ್ತ ಬೀದಿಯಲ್ಲಿ ಪ್ಲೇಕ್ಸ್ ಕಟ್ಟಿ, ಹುಟ್ಟುಹಬ್ಬ ಆಚರಣೆ ಮಾಡಿ ಪಟಾಕಿ ಹೋಡೆಯಲಾಗಿದೆ.

ರಾಜಕೀಯ ಮುಖಂಡರಿಗೆ ಅಥವಾ ಇನ್ನಿತರ ದೊಡ್ಡ ವ್ಯಕ್ತಿಗಳಿಗೆ ಅದ್ದೂರಿ ಸನ್ಮಾನ ಮಾಡುವ ರೀತಿಯಲ್ಲಿ, ಸ್ಥಳಿಯ ಯುವಕರ ಗುಂಪು ಕೇಕ್ ಸಿದ್ಧಪಡಿಸಿದ್ದು, ಅದರ ಮೇಲೆ ನಾಯಿಯ ಭಾವಚಿತ್ರ ಬಿಡಿಸಿದ್ದಾರೆ. ಅಚ್ಚುಮೆಚ್ಚಿನ ನಾಯಿಗೆ ಶಾಲು ಹೊದಿಸಿ, ಹೂವಿನ ಹಾರ ಹಾಕಿ ಸಂಭ್ರಮಿಸುವ ಮೂಲಕ ವಿನೂತನವಾಗಿ ಹುಟ್ಟುಹಬ್ಬ ಆಚರಿಸಿದ್ದಾರೆ.

ಅಚ್ಚು ಮೆಚ್ಚಿನ ನಾಯಿಯ ಹುಟ್ಟುಹಬ್ಬದ ಸಂಭ್ರಮದ ಪ್ರಯುಕ್ತ ಏರಿಯಾದ ಗೆಳೆಯರೆಲ್ಲ ಒಂದೆಡೆ ಸೇರಿ ನಾಯಿಯನ್ನು ಕರೆ ತಂದು ಗೌರವ ನೀಡಿದ್ದು, ವಿಶೇಷವಾಗಿತ್ತು. ಶ್ವಾನದ ಹುಟ್ಟುಹಬ್ಬ ಕೂಡ ಈ ರೀತಿಯಾಗಿ ಮಾಡಬಹುದು ಎಂಬುವುದನ್ನು ಇಲ್ಲಿನ ಜನರು ನಿರೂಪಿಸಿದ್ದಾರೆ ಎಂದು ನಾಯಿಯ ಹುಟ್ಟುಹಬ್ಬದಲ್ಲಿ ಭಾಗಿಯಾಗಿದ್ದ ಸ್ಥಳಿಯ ಯುವಕ ಅರುಣ್ ಅಭಿಪ್ರಾಯಪಟ್ಟಿದ್ದಾರೆ.

dog birthday

ಕೇಕ್ ಕತ್ತರಿಸಿ ಸನ್ಮಾನ ಮಾಡಿದ ಸ್ಥಳೀಯರು

ಪೊಲೀಸರು ಮಾಡುವ ಕೆಲಸವನ್ನು ಶೇರ್ ಖಾನ್ ಎನ್ನುವ ಈ ಶ್ವಾನ ಮಾಡುತ್ತದೆ. ತಮ್ಮ ಏರಿಯಾಗೆ ಪೋಲಿಸರ ಅವಶ್ಯಕತೆಯಿಲ್ಲ. ವಾರ್ಡಿನಲ್ಲಿ ಕಳ್ಳ ಕದಿಮರನ್ನು ಬೆನ್ನತ್ತಿ ಹಿಡಿಯುತ್ತದೆ ಈ ನಾಯಿ. ಬೇರೆ ಬೀದಿ ನಾಯಿಗಳು ಆಗಮಿಸಿದರೆ ವಾಪಸ್ ಓಡಿಸುತ್ತದೆ. ಹೀಗಾಗಿ ನಮ್ಮ ವಾರ್ಡಿನ ಕಾವಲಾಗಿರುವ ನಾಯಿಗೂ ಗೌರವ ಕೊಟ್ಟು ಮಾನವೀಯತೆ ಮೇರೆಯಬೇಕು ಎಂದು ಇಲ್ಲಿನ ಸ್ನೇಹಿತರ ಬಳಗದ ಮುಖಂಡರು ತಿಳಿಸಿದ್ದಾರೆ.

ವರದಿ: ಭೀಮಪ್ಪ ಪಾಟೀಲ್​

ಇದನ್ನೂ ಓದಿ:

ಹಾವೇರಿಯಲ್ಲಿ ಶ್ವಾನಕ್ಕೆ ಹುಟ್ಟುಹಬ್ಬದ ಸಂಭ್ರಮ; ಕೆಕ್​ ಕತ್ತರಿಸಿ ಕನಕನಿಗೆ ಶುಭಕೋರಿದ ಪೊಲೀಸರು

ಗದಗ: ಮನೆ ಮಗಳಂತೆ ಸಾಕಿರುವ ಆಕಳಿಗೆ ಸೀಮಂತ; ರೈತ ಕುಟುಂಬದಿಂದ 7 ತಿಂಗಳ ಗರ್ಭಿಣಿ ಗೌರಿಗೆ ವಿಶೇಷ ಪೂಜೆ

(People celebrated Street dog birthday by cutting a special cake in chikkaballapur)

Published On - 3:14 pm, Sun, 12 September 21

ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ