AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಮಗಳೂರಿನಲ್ಲಿ ಮೂರು ವರ್ಷ ಕಳೆದರೂ ನೆರೆ ಸಂತ್ರಸ್ತರಿಗೆ ಸಿಕ್ಕಿಲ್ಲ ಪರಿಹಾರ! ರಾಷ್ಟ್ರಪತಿಗೆ ಪತ್ರ ಬರೆದು ದಯಾಮರಣಕ್ಕೆ ಮನವಿ

ಬೆಟ್ಟ ಗುಡ್ಡಗಳಿಂದ ಕೂಡಿದ ಪ್ರದೇಶದ ಮಧ್ಯೆ ಹೊದ್ದು ಮಲಗಿರುವ ಮಲೆಮನೆ ಗ್ರಾಮ 2019ರವರೆಗೂ ಅಷ್ಟೊಂದು ಜನರಿಗೆ ಪರಿಚಿತವೆನೂ ಆಗಿರಲಿಲ್ಲ. ಆದರೆ 2019ರ ಮಹಾಮಳೆಯ ಹೊಡೆತಕ್ಕೆ ಸಿಲುಕಿ ಅಕ್ಷರಶಃ ನೀರಿನಲ್ಲಿ ಕೊಚ್ಚಿಹೋಗಿತ್ತು.

ಚಿಕ್ಕಮಗಳೂರಿನಲ್ಲಿ ಮೂರು ವರ್ಷ ಕಳೆದರೂ ನೆರೆ ಸಂತ್ರಸ್ತರಿಗೆ ಸಿಕ್ಕಿಲ್ಲ ಪರಿಹಾರ! ರಾಷ್ಟ್ರಪತಿಗೆ ಪತ್ರ ಬರೆದು ದಯಾಮರಣಕ್ಕೆ ಮನವಿ
ಪತ್ರ ಹಿಡಿದು ನಿಂತಿರುವ ನೆರೆ ಸಂತ್ರಸ್ತರು
TV9 Web
| Edited By: |

Updated on: Apr 26, 2022 | 1:59 PM

Share

ಚಿಕ್ಕಮಗಳೂರು: 2019ರಲ್ಲಿ ಪ್ರವಾಹ (Flood) ಉಂಟಾಗಿ ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಲೆಮನೆ ಗ್ರಾಮದ 5 ಮನೆಗಳು ಸಂಪೂರ್ಣ ಕೊಚ್ಚಿ ಹೋಗಿದ್ದವು. ಮೂರು ವರ್ಷ ಕಳೆದರೂ ಸಂತ್ರಸ್ತರಿಗೆ ಪರಿಹಾರ ಸಿಕಿಲ್ಲ.ಬದುಕಿಗೆ ಆಧಾರವಾಗಿದ್ದ ತೋಟ-ಗದ್ದೆಗಳು ನಾಶವಾಗಿದ್ದವು. ಅಂದಿನ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ಗ್ರಾಮಕ್ಕೆ ಆಗಮಿಸಿ ಪರಿಹಾರ ನೀಡುವ ಭರವಸೆ ನೀಡಿದ್ದರು. ಆ ಬಳಿಕ ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳ ಕಚೇರಿಗಳಿಗೆ ಅಲೆದು ಅಲೆದು ಸಂತ್ರಸ್ತರು ಸುಸ್ತಾಗಿದ್ದಾರೆ. ಸತತ ಮೂರು ವರ್ಷ ಹೋರಾಟ ಮಾಡಿದರೂ ಪರಿಹಾರ ಸಿಕ್ಕಿಲ್ಲ. ಇದೀಗ ರಾಷ್ಟ್ರಪತಿಗೆ ಪತ್ರ ಬರೆದು ದಯಾಮರಣಕ್ಕೆ ಮನವಿ ಮಾಡಿದ್ದಾರೆ.

ಆತ್ಮಹತ್ಯೆಯೊಂದೇ ದಾರಿ: ಕಚೇರಿಗೆ ಹೋಗಿ ಕೇಳಿದರೆ ಎಲ್ಲೂ ಕೂಡ ಜಾಗ ಸಿಗುತ್ತಿಲ್ಲ. ನಮ್ಮ ಕೈಯಲ್ಲಿ ಏನೂ ಇಲ್ಲ, ಸರ್ಕಾರಕ್ಕೆ ಫೈಲ್ ಕಳುಹಿಸಿದ್ದೇವೆ, ಪ್ರಯತ್ನ ಪಡುತ್ತಿದ್ದೀವಿ. ಈ ರೀತಿಯ ಹಾರಿಕೆ ಉತ್ತರಗಳು ಮಾತ್ರ ಸಿಗುತ್ತಿದೆ ಹೊರತು ಮೂರು ವರ್ಷವಾದರೂ ಸರ್ಕಾರ, ಜಿಲ್ಲಾಡಳಿತ, ಜನಪ್ರತಿನಿಧಿಗಳು, ಅಧಿಕಾರಿಗಳು ಸಂತ್ರಸ್ಥರ ಸಮಸ್ಯೆಗೆ ನ್ಯಾಯಯುತವಾಗಿ ಪರಿಹಾರ ಕೊಡಿಸುವ ಮನಸ್ಸು ಮಾಡುತ್ತ ಇಲ್ಲ. ಇವರ ಜೊತೆ ಭಿಕ್ಷೆ ಬೇಡುವುದಕ್ಕಿಂತ ಸಾಯುವುದೇ ಲೇಸು ಅಂತ ಸಂತ್ರಸ್ತರು ಹೇಳುತ್ತಿದ್ದಾರೆ.

ಪ್ರಕೃತಿಯ ಐಸಿರಿಯನ್ನೇ ಹೊದ್ದು ಮಲಗಿದ್ದ ಮಲೆಮನೆಗೆ ಗುಡ್ಡವೇ ಮುಳುವಾಗಿದ್ದೇಗೆ? ಬೆಟ್ಟ ಗುಡ್ಡಗಳಿಂದ ಕೂಡಿದ ಪ್ರದೇಶದ ಮಧ್ಯೆ ಹೊದ್ದು ಮಲಗಿರುವ ಮಲೆಮನೆ ಗ್ರಾಮ 2019ರವರೆಗೂ ಅಷ್ಟೊಂದು ಜನರಿಗೆ ಪರಿಚಿತವೆನೂ ಆಗಿರಲಿಲ್ಲ. ಆದರೆ 2019ರ ಮಹಾಮಳೆಯ ಹೊಡೆತಕ್ಕೆ ಸಿಲುಕಿ ಅಕ್ಷರಶಃ ನೀರಿನಲ್ಲಿ ಕೊಚ್ಚಿಹೋಗಿತ್ತು. ನೋಡು ನೋಡುತ್ತಿದ್ದಂತೆ ಮನೆಗಳು ನೆಲಸಮ ಆಗಿದ್ದವು. ಕಷ್ಟಪಟ್ಟು ಬೆವರು ಸುರಿಸಿ ಮಾಡಿದ್ದ ತೋಟ-ಗದ್ದೆಗಳು ನಿರ್ನಾಮ ಆಗಿದ್ದವು. ಕೆಲವೇ ಕೆಲವು ನಿಮಿಷಗಳಲ್ಲಿ ಗುಡ್ಡದ ಭೂತ ಮಲೆಮನೆ ಗ್ರಾಮದ ಒಂದು ದೇವಸ್ಥಾನ ಸೇರಿದಂತೆ ಐದು ಮನೆಗಳನ್ನ ಅಪೋಶನ ಪಡೆದಿತ್ತು. ಆ ಕ್ಷಣಕ್ಕೆ ಅಲ್ಲಿದ್ದ ಜನರ ಜೀವ ಉಳಿದಿದ್ದೇ ಅದೃಷ್ಟ. ನೀರಿನಲ್ಲಿ ಪೇಪರ್ ಬೋಟ್ ತೇಲಿ ಹೋಗುವಂತೆ ಗುಡ್ಡದ ನೀರಿನಲ್ಲಿ ಐದು ಮನೆಗಳು ತೇಲಿ ಹೋದವು.

ಎರಡು ದಿನವಾದರೂ ಮಲೆಮನೆ ವಿಚಾರ ಗೊತ್ತೆ ಆಗಿರಲಿಲ್ಲ: ಮಲೆಮನೆ ಅನ್ನೋ ಗ್ರಾಮ ಕಾಣೆಯಾಗಿದೆ ಅಂತಾ ಜಿಲ್ಲಾಡಳಿತಕ್ಕೆ ಗೊತ್ತಾಗುವುದಕ್ಕೆ ಎರಡು ದಿನ ಬೇಕಾಯ್ತು. ವಾರಗಟ್ಟಲ್ಲೇ ಕರೆಂಟ್ ಇರಲಿಲ್ಲ, ಬಿರುಗಾಳಿ ಮಳೆಯಿಂದ ಟವರ್ಗಳು ಕೆಲಸ ಮಾಡಲು ನಿಲ್ಲಿಸಿದ ಕಾರಣ ಮೊಬೈಲ್ ನೆಟ್ವರ್ಕ್ ಆಫ್ ಆಗಿದ್ದವು. ಓಡಾಡುವುದಕ್ಕೂ ಆಗುತ್ತಿರಲಿಲ್ಲ. ಎಂತೆಂಥ ಮಳೆಯನ್ನೇ ನೋಡಿ ಮೂಗು ಮುರಿದಿದ್ದ ಮಲೆನಾಡಿಗರು 2019ರ ಮಹಾಮಳೆಗೆ ಅಕ್ಷರಶಃ ಕಂಗಾಲಾಗಿ ಹೋಗಿದ್ದರು.

ಜ್ವಲಂತ ಸಮಸ್ಯೆಯನ್ನ ತೆರೆದಿಟ್ಟಿದ ಟಿವಿ9: ಮಹಾಮಳೆಗೆ ಮಲೆಮನೆ ಗ್ರಾಮ ನಿರ್ನಾಮ ಆದಾಗ ಆ ಘಟನೆಯನ್ನ ತೋರಿಸುವ ಕೆಲಸವನ್ನ ಟಿವಿ9 ಮಾಡಿತ್ತು. ಸಂತ್ರಸ್ಥರ ಸಂಕಷ್ಟ-ತೊಳಲಾಟವನ್ನ ತೋರಿಸುವ ಮಲೆಮನೆ ಮಾಯ ಎಂಬ ಅರ್ಧಗಂಟೆಯ ವಿಶೇಷ ಕಾರ್ಯಕ್ರಮವನ್ನ ಮಾಡಿ ಸರ್ಕಾರದ ಕಣ್ಣು ತೆರೆಸುವ ಕೆಲಸ ಟಿವಿ9ನಿಂದ ಆಗಿತ್ತು. ಸುದ್ದಿ ಪ್ರಸಾರದ ಬಳಿಕ ಅಂದಿನ ಸಿಎಂ ಬಿಎಸ್ ಯಡಿಯೂರಪ್ಪ ಖುದ್ದು ಸ್ಥಳಕ್ಕೆ ಹೋಗಿ ಮನೆ-ಆಸ್ತಿಯನ್ನ ಕಳೆದುಕೊಂಡಿದ್ದ ಸಂತ್ರಸ್ಥರಿಗೆ ಹೊಸ ಬದುಕನ್ನ ಕಟ್ಟಿಕೊಡುವ ಭರವಸೆ ನೀಡಿದ್ದರು

ಇದೀಗ ಮತ್ತೆ ಮಳೆ ಶುರುವಾಗುತ್ತಿದೆ. ಆದರೆ ಸಂತ್ರಸ್ಥರಿಗೆ ಹೊಸ ಬದುಕು ಸಿಕ್ಕೇ ಇಲ್ಲ. ವಯಸ್ಸಾದ ತಂದೆ-ತಾಯಂದಿರು, ಪುಟ್ಟ ಪುಟ್ಟ ಮಕ್ಕಳನ್ನ ಕಟ್ಟಿಕೊಂಡು ಸದ್ಯ ಊರು ಬಿಟ್ಟಿರುವ ಸಂತ್ರಸ್ಥರು ಬಾಡಿಗೆ ಮನೆಯಲ್ಲಿ ಕಳೆದ ಮೂರು ವರ್ಷಗಳಿಂದ ವಾಸಿಸುತ್ತಿದ್ದಾರೆ. ಹಾಸಿಗೆ ಹಿಡಿದ ತಂದೆ-ತಾಯಿಗೆ ಚಿಕಿತ್ಸೆ ಕೊಡಿಸಲು ಹಣವಿಲ್ಲ. ಆರ್ಥಿಕ ಸಮಸ್ಯೆಯಿಂದ ಮಕ್ಕಳಿಗೆ ಶಿಕ್ಷಣ ಕೊಡಿಸಲು ಸಾಧ್ಯವಾಗುತ್ತಿಲ್ಲ. ಗ್ರಾಮದಲ್ಲಿದ್ದ ತೋಟ-ಗದ್ದೆಗಳು ನಿರ್ನಾಮವಾಗಿದ್ದರಿಂದ ಯಾವುದೇ ಆದಾಯವಿಲ್ಲದೇ ಬಾಡಿಗೆ ಕಟ್ಟೋದಕ್ಕೂ ಹಣವಿಲ್ಲದೇ ಪರದಾಟ ನಡೆಸುತ್ತಿದ್ದಾರೆ.

ವರದಿ: ಪ್ರಶಾಂತ್

ಇದನ್ನೂ ಓದಿ

5ನೆ ಬಾರಿಗೆ ಸುಮುಹೂರ್ತ: ಎಂಟಿಬಿ ನಾಗರಾಜ್-ಡಾ ಸುಧಾಕರ್ ರಿಂದ ದೊಡ್ಡಬಳ್ಳಾಪುರ ನಗರಸಭೆ ಕಟ್ಟಡ ಉದ್ಘಾಟನೆ, ಕಾಂಗ್ರೆಸ್​ ಪ್ರತಿಭಟನೆ

Covaxin for Children: 6-12 ವರ್ಷದ ಮಕ್ಕಳಿಗೂ ಕೊವ್ಯಾಕ್ಸಿನ್ ಲಸಿಕೆ ನೀಡಲು ಅನುಮತಿ

ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ