Murugha Shree: ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿ ವಜಾಕ್ಕೆ ಆಗ್ರಹ: ಸಭೆಯಲ್ಲಿ ಎರಡು ಗುಂಪುಗಳ ನಡುವೆ ವಾಗ್ವಾದ, ತಳ್ಳಾಟ-ನೂಕಾಟ

ಪೋಕ್ಸೋ ಪ್ರಕರಣದಲ್ಲಿ ಬಂಧಿತರಾಗಿರುವ ಚಿತ್ರದುರ್ಗ ಮುರುಘಾ ಮಠದ ಮುರುಘಾಶ್ರೀಯನ್ನು ಪೀಠದಿಂದ ವಜಾಗೊಳಿಸುವಂತೆ ಆಗ್ರಹಿಸಿ ಸಮಾಲೋಚನಾ ಸಭೆ ನಡೆದಿದೆ.

Murugha Shree: ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿ ವಜಾಕ್ಕೆ ಆಗ್ರಹ:  ಸಭೆಯಲ್ಲಿ  ಎರಡು ಗುಂಪುಗಳ ನಡುವೆ ವಾಗ್ವಾದ, ತಳ್ಳಾಟ-ನೂಕಾಟ
ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿ ವಜಾಕ್ಕೆ ಆಗ್ರಹಿಸಿ ಸಭೆ
Follow us
| Updated By: ವಿವೇಕ ಬಿರಾದಾರ

Updated on:Dec 03, 2022 | 3:18 PM

ಚಿತ್ರದುರ್ಗ: ಪೋಕ್ಸೋ ಪ್ರಕರಣದಲ್ಲಿ (Pocso Case) ಬಂಧಿತರಾಗಿರುವ ಚಿತ್ರದುರ್ಗ ಮುರುಘಾ ಮಠದ (Murugha Mutt) ಮುರುಘಾಶ್ರೀಯನ್ನು (Murugha Shri) ಪೀಠದಿಂದ ವಜಾಗೊಳಿಸುವಂತೆ ಆಗ್ರಹಿಸಿ ಮಾಜಿ ಸಚಿವ ಹೆಚ್​​.ಏಕಾಂತಯ್ಯ (H Ekantayya) ನೇತೃತ್ವದಲ್ಲಿ ಇಂದು (ಡಿ.3) ವೀರಶೈವ ಲಿಂಗಾಯತ ಸಮಾಜದ ಸಮಾಲೋಚನಾ ಸಭೆ ನಡೆದಿದೆ. ಚಿತ್ರದುರ್ಗದ ಸಿಬಾರ ಬಳಿಯ ನಿಜಲಿಂಗಪ್ಪ ಸ್ಮಾರಕ ಆವರಣದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಕೆಲಕಾಲ ಎರಡು ಗುಂಪುಗಳ ನಡುವೆ ವಾಗ್ವಾದ ನಡೆದಿದೆ. ಸಭೆಯಲ್ಲಿ ಯುವಕ ಕಾರ್ತಿಕ್ ಎಂಬಾತ ಸರ್ಕಾರದಿಂದ ಮಠದ ಆಡಳಿತಾಧಿಕಾರಿ ನೇಮಕ ಬೇಡ ಎಂದು ತೀವ್ರ ವಿರೋಧ ವ್ಯಕ್ತಪಡಿಸಿದ್ದಾನೆ. ಯುವಕ ಕಾರ್ತಿಕ ಪರವಾಗಿ ಕೆಲವರು ಧ್ವನಿ ಎತ್ತಿದ್ದಾರೆ.

ಈ ವೇಳೆ ಎರಡು ಗುಂಪುಗಳ ನಡುವೆ ವಾಗ್ವಾದ ನಡೆದು, ತಳ್ಳಾಟ ನೂಕಾಟ ಶುರುವಾಗಿದೆ. ಕೂಡಲೇ ಮಧ್ಯಪ್ರವೇಶಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.

ಇದನ್ನೂ ಓದಿ: POCSO Case 2ನೇ ಪೋಕ್ಸೋ ಪ್ರಕರಣದಲ್ಲೂ ಮುರುಘಾಶ್ರೀಗೆ ಸಿಗಲಿಲ್ಲ ಜಾಮೀನು

ಬಸವ ತತ್ವದ ಹಿನ್ನಲೆಯ ಯೋಗ್ಯ ವ್ಯಕ್ತಿಯ ಆಡಳಿತಾಧಿಕಾರಿ ನೇಮಕಕ್ಕೆ ಆಗ್ರಹ

ಇನ್ನೂ ಮಠಕ್ಕೆ ಆಡಳಿತ ಅಧಿಕಾರಿ ನೇಮಕ ಚರ್ಚೆ ವಿಚಾರವಾಗಿ ಜಾಗತಿಕ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ. ಎಸ್.ಎಂ. ಜಾಮದಾರ್ ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಬಸವ ತತ್ವದ ಹಿನ್ನಲೆಯ ಯೋಗ್ಯ ವ್ಯಕ್ತಿಯ ಆಡಳಿತಾಧಿಕಾರಿ ನೇಮಿಸಬೇಕು.

ಮಠದಲ್ಲಿ ಬಹುಮುಖಿ ಕಾರ್ಯಗಳು ಬಸವತತ್ವಕ್ಕೆ ಅನುಗುಣವಾಗಿ ನಡೆಯಬೇಕು. ಇದು ಸಮಸ್ತ ಲಿಂಗಾಯತ ಸಮುದಾಯದ ಆಶಯವಾಗಿದೆ. ನಾಲ್ಕು ಶತಮಾನಗಳಿಂದ ಮುರಘಾ ಮಠ ಬಸವಧರ್ಮ ರಕ್ಷಿಸಿ, ಬೆಳೆಸುವ ಮಹತ್ವದ ಕಾರ್ಯ ಮಾಡುತ್ತಿದೆ. ಮಠದಲ್ಲಿ ಅದೇ ಸಂಪ್ರದಾಯ ಮುಂದುವರೆಯುವಂತೆ ಸರ್ಕಾರ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ: ಚಿತ್ರದುರ್ಗ: ಮುರುಘಾ ಮಠದಲ್ಲಿದ್ದ 22 ಮಕ್ಕಳು ನಾಪತ್ತೆ, ಈ ಮಕ್ಕಳು ಮಠದ ಪಾಲಾಗಿದ್ದು ಹೇಗೆಂಬುದೇ ಪ್ರಶ್ನೆ

ವೀರಶೈವ ಅಥವಾ ಇನ್ನಾವುದೇ ಹಿನ್ನಲೆಯ ಆಡಳಿತ ಅಧಿಕಾರಿಯನ್ನು ನೇಮಕ ಮಾಡಬಾರದು ಎಂದು ಸರ್ಕಾರಕ್ಕೆ ಜಾಗತಿಕ ಲಿಂಗಾಯತ ಮಹಾಸಭಾ ಆಗ್ರಹಿಸುತ್ತದೆ. ಈ ಮಠದ ಸಂಪ್ರದಾಯಕ್ಕೆ ಧಕ್ಕೆ ತರುವಂಥ ವ್ಯಕ್ತಿಯ ನೇಮಕ ಮಾಡಬಾರದು. ಒಂದು ವೇಳೆ ನೇಮಕವಾದರೇ ಜಾಗತಿಕ ಲಿಂಗಾಯತ ಮಹಾಸಭಾದಿಂದ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:33 pm, Sat, 3 December 22