AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯದಲ್ಲಿ ಈವರೆಗೆ ಶೇ.4.5ರಷ್ಟು ಜನರಿಗೆ ಮಾತ್ರ ಲಸಿಕೆ ನೀಡಿಕೆ; ಭಾರತ ಈವರೆಗೆ ಕೇವಲ 16.5 ಮಿಲಿಯನ್ ಲಸಿಕೆಗೆ ಆರ್ಡರ್!

60 ವರ್ಷ ಮೇಲ್ಪಟ್ಟ 8,41,056 ಜನರಿಗೆ 2ನೇ ಡೋಸ್ ನೀಡಿಕೆ ಪೂರ್ಣಗೊಂಡಿದೆ. 44-59 ವರ್ಷದೊಳಗಿನ 3,29,952 ಜನರಿಗೆ 2ನೇ ಡೋಸ್ ಕೂಡ ನೀಡಲಾಗಿದೆ. 18-44 ವರ್ಷ ವಯೋಮಿತಿಯ 5,759 ಮಂದಿಗೆ ಲಸಿಕೆ ವಿತರಣೆಯಾಗಿದೆ.

ರಾಜ್ಯದಲ್ಲಿ ಈವರೆಗೆ ಶೇ.4.5ರಷ್ಟು ಜನರಿಗೆ ಮಾತ್ರ ಲಸಿಕೆ ನೀಡಿಕೆ; ಭಾರತ ಈವರೆಗೆ ಕೇವಲ 16.5 ಮಿಲಿಯನ್ ಲಸಿಕೆಗೆ ಆರ್ಡರ್!
ಲಸಿಕೆಯ ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ganapathi bhat

Updated on:Aug 23, 2021 | 12:38 PM

ಬೆಂಗಳೂರು: ರಾಜ್ಯದಲ್ಲಿ ಈವರೆಗೆ ಶೇ.4.5ರಷ್ಟು ಜನರಿಗೆ ಮಾತ್ರ ಲಸಿಕೆ ನೀಡಿಕೆಯಾಗಿದೆ. ಈವರೆಗೆ 17,77,751 ಡೋಸ್ ಕೊವಿಡ್ ಲಸಿಕೆ ನೀಡಲಾಗಿದೆ. 6,85,327 ಆರೋಗ್ಯ ಕಾರ್ಯಕರ್ತರಿಗೆ ಮೊದಲ ಡೋಸ್ ನೀಡಲಾಗಿದ್ದು, 4,39,162 ಆರೋಗ್ಯ ಕಾರ್ಯಕರ್ತರಿಗೆ 2ನೇ ಡೋಸ್ ಕೂಡ ನೀಡಿದೆ. 4,40,302 ಮುಂಚೂಣಿಯ ಕಾರ್ಯಕರ್ತರಿಗೆ ಮೊದಲ ಡೋಸ್ ಹಾಗೂ 1,67,581 ಮಂದಿ ಮುಂಚೂಣಿಯ ಕಾರ್ಯಕರ್ತರಿಗೆ 2ನೇ ಡೋಸ್ ಲಸಿಕೆ ಹಾಕಿಸಲಾಗಿದೆ.

60 ವರ್ಷ ಮೇಲ್ಪಟ್ಟ 8,41,056 ಜನರಿಗೆ 2ನೇ ಡೋಸ್ ನೀಡಿಕೆ ಪೂರ್ಣಗೊಂಡಿದೆ. 44-59 ವರ್ಷದೊಳಗಿನ 3,29,952 ಜನರಿಗೆ 2ನೇ ಡೋಸ್ ಕೂಡ ನೀಡಲಾಗಿದೆ. 18-44 ವರ್ಷ ವಯೋಮಿತಿಯ 5,759 ಮಂದಿಗೆ ಲಸಿಕೆ ವಿತರಣೆಯಾಗಿದೆ.

ಭಾರತ ಲಸಿಕೆ ಆಮದು ವಿಚಾರದಲ್ಲಿ ಕೂಡ ಹಿಂದೆ ಉಳಿದಿದೆ. ಭಾರತ ಈವರೆಗೆ ಕೇವಲ 16.5 ಮಿಲಿಯನ್ ಲಸಿಕೆಗೆ ಆರ್ಡರ್ ಮಾಡಿದೆ. ಆದರೆ, ಅಮೆರಿಕ 2020ರ ಜುಲೈನಲ್ಲೇ 400 ಮಿಲಿಯನ್ ಲಸಿಕೆಗೆ ಆರ್ಡರ್ ಮಾಡಿತ್ತು. ಯುರೋಪಿಯನ್ ಒಕ್ಕೂಟ 800 ಮಿಲಿಯನ್ ಲಸಿಕೆಗೆ ಆರ್ಡರ್ ಮಾಡಿತ್ತು. ಇಂಗ್ಲೆಂಡ್ 120 ಮಿಲಿಯನ್‌ ಲಸಿಕೆಗೆ ಆರ್ಡರ್ ನೀಡಿದರೆ, ಬ್ರೆಜಿಲ್ 90 ಮಿಲಿಯನ್ ಲಸಿಕೆಗೆ ಆರ್ಡರ್ ನೀಡಿತ್ತು.

ವ್ಯಾಕ್ಸಿನ್ ಕೊರತೆ ಬಗ್ಗೆ ಹೈಕೋರ್ಟ್ ಆತಂಕ‌ 2ನೇ ಡೋಸ್ ವ್ಯಾಕ್ಸಿನ್ ಕೊರತೆ ಬಗ್ಗೆ ಹೈಕೋರ್ಟ್ ಆತಂಕ‌ ವ್ಯಕ್ತಪಡಿಸಿದೆ. 18 ರಿಂದ 44 ವರ್ಷದವರಿಗಿರಲಿ 45 ವರ್ಷದವರಿಗೂ ಲಸಿಕೆ ಸಿಗ್ತಿಲ್ಲ. 65 ಲಕ್ಷ ಜನರಿಗೆ 2ನೇ ಡೋಸ್ ಕೊವಿಡ್ ಲಸಿಕೆ ಸಿಕ್ಕಿಲ್ಲ. 1.60 ಲಕ್ಷ ಜನರಿಗೆ 8 ವಾರವಾದರೂ 2ನೇ ಡೋಸ್ ಸಿಕ್ಕಿಲ್ಲ. 16.63 ಲಕ್ಷ ಜನಕ್ಕೆ 6 ವಾರವಾದರೂ 2ನೇ ಡೋಸ್ ಸಿಕ್ಕಿಲ್ಲ. ಒಟ್ಟು 26 ಲಕ್ಷ ಜನಕ್ಕೆ ತಕ್ಷಣ ವ್ಯಾಕ್ಸಿನೇಷನ್‌ ಅಗತ್ಯವಿದೆ. ಕ್ರಮ ಕೈಗೊಳ್ಳದಿದ್ದರೆ ಲಸಿಕಾ ಕಾರ್ಯಕ್ರಮವೇ ವಿಫಲವಾಗಲಿದೆ ಎಂದು ಮುಖ್ಯ ನ್ಯಾಯಮೂರ್ತಿ ಎ.ಎಸ್.ಒಕಾ, ನ್ಯಾ. ಅರವಿಂದ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಇಂಗ್ಲೆಂಡ್​ಗೆ ಲಸಿಕೆ ಕಳುಹಿಸಲು ಅನುಮತಿ ಕೇಳಿದ ಸೆರಮ್​ ಸಂಸ್ಥೆ; ದೇಶದಲ್ಲೇ ಕೊರತೆ ಇದೆ, ರಫ್ತು ಸಾಧ್ಯವಿಲ್ಲ ಎಂದ ಭಾರತ ಸರ್ಕಾರ

ಬಡ, ಮಧ್ಯಮ ಆದಾಯದ ರಾಷ್ಟ್ರಗಳಿಗೆ ಲಸಿಕೆ ಪೂರೈಸುತ್ತಿರುವ ಗವಿ ಮೈತ್ರಿಕೂಟದಿಂದ ಭಾರತಕ್ಕೆ ಕೊರೊನಾ ಲಸಿಕೆಯ ನೆರವು

Published On - 3:55 pm, Tue, 11 May 21

ಪಾಕಿಸ್ತಾನಕ್ಕೆ ಇನ್ನೂ ಹೆಚ್ಚಿನದನ್ನೇ ಮಾಡುವ ತಾಕತ್ತು ನಮಗಿತ್ತು
ಪಾಕಿಸ್ತಾನಕ್ಕೆ ಇನ್ನೂ ಹೆಚ್ಚಿನದನ್ನೇ ಮಾಡುವ ತಾಕತ್ತು ನಮಗಿತ್ತು
ಹೆಸರು ಬದಲಾವಣೆಯಿಂದ ಜನಕ್ಕೆ ಅನುಕೂಲವಾಗೋದಾದರೆ ಸಂತೋಷ: ಯೋಗೇಶ್ವರ್
ಹೆಸರು ಬದಲಾವಣೆಯಿಂದ ಜನಕ್ಕೆ ಅನುಕೂಲವಾಗೋದಾದರೆ ಸಂತೋಷ: ಯೋಗೇಶ್ವರ್
ಕರಾಚಿ ಏರ್​​ಪೋರ್ಟ್​ನಲ್ಲಿ ತೊಳ್ಕೊಳೋಕೂ ನೀರಿಲ್ವಂತೆ, ನಟಿ ಹೇಳಿದ್ದೇನು?
ಕರಾಚಿ ಏರ್​​ಪೋರ್ಟ್​ನಲ್ಲಿ ತೊಳ್ಕೊಳೋಕೂ ನೀರಿಲ್ವಂತೆ, ನಟಿ ಹೇಳಿದ್ದೇನು?
ವಿದ್ಯಾರ್ಥಿನಿಯ ಬದ್ಧತೆ ಕಂಡು ಸಂತೋಷ ವ್ಯಕ್ತಪಡಿಸಿದ ಕಾಲೇಜು ಪ್ರಿನ್ಸಿಪಾಲ್
ವಿದ್ಯಾರ್ಥಿನಿಯ ಬದ್ಧತೆ ಕಂಡು ಸಂತೋಷ ವ್ಯಕ್ತಪಡಿಸಿದ ಕಾಲೇಜು ಪ್ರಿನ್ಸಿಪಾಲ್
‘ಅವರು ಇದ್ದಿದ್ರೆ...’ ಅಂಬರೀಶ್ ಹುಟ್ಟುಹಬ್ಬದಂದು ಸುಮಲತಾ ಭಾವುಕ
‘ಅವರು ಇದ್ದಿದ್ರೆ...’ ಅಂಬರೀಶ್ ಹುಟ್ಟುಹಬ್ಬದಂದು ಸುಮಲತಾ ಭಾವುಕ
ಹಿಂದೂ-ಮುಸ್ಲಿಂ ಸಮುದಾಯಗಳು ಸಾಮರಸ್ಯದಿಂದ ಬದುಕಬೇಕು: ಸಿದ್ದರಾಮಯ್ಯ
ಹಿಂದೂ-ಮುಸ್ಲಿಂ ಸಮುದಾಯಗಳು ಸಾಮರಸ್ಯದಿಂದ ಬದುಕಬೇಕು: ಸಿದ್ದರಾಮಯ್ಯ
‘ಸರಿಗಮಪ’ ವೇದಿಕೆ ಮೇಲೆ ಫಿನಾಲೆಗೂ ಮೊದಲು ವಿಶೇಷ ಕಾರ್ಯಕ್ರಮ
‘ಸರಿಗಮಪ’ ವೇದಿಕೆ ಮೇಲೆ ಫಿನಾಲೆಗೂ ಮೊದಲು ವಿಶೇಷ ಕಾರ್ಯಕ್ರಮ
ಸೋನಿಯ ಗಾಂಧಿಗೆ ಹರಿಪ್ರಸಾದ್ ಆಪ್ತರು ಎಂಬ ಕಾರಣಕ್ಕೆ ಭೇಟಿಯೇ?
ಸೋನಿಯ ಗಾಂಧಿಗೆ ಹರಿಪ್ರಸಾದ್ ಆಪ್ತರು ಎಂಬ ಕಾರಣಕ್ಕೆ ಭೇಟಿಯೇ?
ಭಾರತ ಏನು ಮಾಡಬಹುದು ಎಂದು ಪಾಕಿಸ್ತಾನಕ್ಕೆ ಈಗ ಅರ್ಥವಾಗಿರಬಹುದು
ಭಾರತ ಏನು ಮಾಡಬಹುದು ಎಂದು ಪಾಕಿಸ್ತಾನಕ್ಕೆ ಈಗ ಅರ್ಥವಾಗಿರಬಹುದು
ಒಂದೇ ವಾರದಲ್ಲಿ ಹೃದಯಾಘಾತದಿಂದ ಮೂವರ ಸಾವು; ತಜ್ಞರು ಹೇಳಿದ್ದೇನು ನೋಡಿ
ಒಂದೇ ವಾರದಲ್ಲಿ ಹೃದಯಾಘಾತದಿಂದ ಮೂವರ ಸಾವು; ತಜ್ಞರು ಹೇಳಿದ್ದೇನು ನೋಡಿ