AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಶಕದ ಬಳಿಕ ಜೋಗ ಜಲಪಾತದಂತೆ ತುಂಬಿ ಹರಿದ ಉಚ್ಚಂಗಿದುರ್ಗದ ಹೊನ್ನಮ್ಮನ ಝರಿ -ಮನ ಸೋತ ಪ್ರವಾಸಿಗರು

ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಗೆ ಇಲ್ಲೊಂದು ಭವ್ಯ ಮನೋಹರ ಸಾಮ್ರಾಜ್ಯ ಹುಟ್ಟುಕೊಂಡಿದೆ. ಗುಡ್ಡದ ಮೇಲಿಂದ ಭೂಮಿಗೆ ಒಂದೇ ಸಮನೆ ನೀರು ಜೋಗ ಜಲಪಾತದಂತೆ ಬೀಳುತ್ತಿದೆ. ಇದಕ್ಕೆ ಹೊನ್ನಮ್ಮನ ಝರಿ ಎಂದು ಹೆಸರು. ನೂರ ಅಡಿಗೂ ಹೆಚ್ಚು ಎತ್ತರದಿಂದ ನೀರು ಭೂಮಿಗೆ ಬಂದು ಹೊಂಡ ಸೇರುತ್ತದೆ.

ದಶಕದ ಬಳಿಕ ಜೋಗ ಜಲಪಾತದಂತೆ ತುಂಬಿ ಹರಿದ ಉಚ್ಚಂಗಿದುರ್ಗದ ಹೊನ್ನಮ್ಮನ ಝರಿ -ಮನ ಸೋತ ಪ್ರವಾಸಿಗರು
ಉಚ್ಚಂಗಿದುರ್ಗದ ಹೊನ್ನಮ್ಮನ ಝರಿ
TV9 Web
| Edited By: ಸಾಧು ಶ್ರೀನಾಥ್​|

Updated on:Jul 23, 2021 | 2:18 PM

Share

ದಾವಣಗೆರೆ: ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗ ಐತಿಹಾಸಿಕ ಪ್ರಸಿದ್ದ ಸ್ಥಳ. ಮೇಲಾಗಿ ಇಲ್ಲಿನ ಗುಡ್ಡದ ಮೇಲೆ ಇರುವ ಉಚ್ಚಂಗೆಮ್ಮನ ಪುಣ್ಯಕ್ಷೇತ್ರಕ್ಕೆ ವರ್ಷವಿಡೀ ಲಕ್ಷಾಂತರ ಜನ ಬರುತ್ತಾರೆ‌. ಕರ್ನಾಟಕವಷ್ಟೆ ಅಲ್ಲದೇ ಪಕ್ಕದ ಆಂಧ್ರಪ್ರದೇಶದ ತೆಲಂಗಾಣ ಸೇರಿದಂತೆ ಬಹುತೇಕ ಕಡೆಯಿಂದ ಜನ ಬರುತ್ತಾರೆ.

ಇದು ಪುಣ್ಯಕ್ಷೇತ್ರದ ಕಥೆಯಾದ್ರೆ ಮತ್ತೊಂದೆಡೆ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಗೆ ಇಲ್ಲೊಂದು ಭವ್ಯ ಮನೋಹರ ಸಾಮ್ರಾಜ್ಯ ಹುಟ್ಟುಕೊಂಡಿದೆ. ಗುಡ್ಡದ ಮೇಲಿಂದ ಭೂಮಿಗೆ ಒಂದೇ ಸಮನೆ ನೀರು ಜೋಗ ಜಲಪಾತದಂತೆ ಬೀಳುತ್ತಿದೆ. ಇದಕ್ಕೆ ಹೊನ್ನಮ್ಮನ ಝರಿ ಎಂದು ಹೆಸರು. ನೂರ ಅಡಿಗೂ ಹೆಚ್ಚು ಎತ್ತರದಿಂದ ನೀರು ಭೂಮಿಗೆ ಬಂದು ಹೊಂಡ ಸೇರುತ್ತದೆ. ವಿಶೇಷವಾಗಿ ಮಳೆಗಾಲದಲ್ಲಿ‌ ಮಾತ್ರ ಇಂತಹ ದೃಶ್ಯಗಳನ್ನ ನೋಡಲು ಸಾದ್ಯ. ಕಾರಣ ಇದು ಮಳೆಯಾಶ್ರಿತ ಪ್ರದೇಶ. ಮೇಲಾಗಿ ಬರದ ನಾಡು. ಕಳೆದ ಹತ್ತುವರ್ಷದ ಬಳಿಕ ಇಂತಹ ಮನಮೋಹಕ ಪ್ರಕೃತಿ ಸೌಂದರ್ಯದ ಸವಿಯುವ ಭಾಗ್ಯ ಸುತ್ತಲಿನ ಜನರಿಗೆ ಪ್ರಾಪ್ತಿ ಆಗಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ಕಳೆದ ನಾಲ್ಕು ದಿನಗಳ ಹಿಂದೆ ಈ ಪ್ರದೇಶದಲ್ಲಿ ಸುರಿದ ಭರ್ಜರಿ ಮಳೆ.

honnamana falls

ಉಚ್ಚಂಗಿದುರ್ಗದ ಹೊನ್ನಮ್ಮನ ಝರಿ

ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗ ಹೊಬಳಯಲ್ಲಿ ಒಂದೇ ದಿನ 308 ಮಿಲಿಮೀಟರ್ ಮಳೆ ದಾಖಲಾಗಿತ್ತು. ಇದನ್ನ ರಾಜ್ಯ ಹವಾಮಾನ ಇಲಾಖೆಯೇ ಸ್ಪಷ್ಟ ಪಡಿಸಿತ್ತು. ಈ ರೀತಿ ಸುರಿದ ಮಳೆಗೆ ಪಣಿಯಾಪುರ ಕರಡಿದುರ್ಗ ಸೇರಿದಂತೆ ಬಹುತೇಕ ಕೆರೆಗಳು ಭರ್ತಿಯಾಗಿ ಕೆಲ ಕೆರೆಗಳು ಒಡೆದು ಹೋಗಿದ್ದವು. ಈ ವೇಳೆ ಉಚ್ಚಂಗಿದುರ್ಗದ ಗುಡ್ಡದ ಮೇಲೆ ನೀರು ಸಂಗ್ರಹವಾಗಿದೆ. ಹೀಗೆ ಸಂಗ್ರಹವಾದ ನೀರು ಹೊನ್ನಮ್ಮನ ಝರಿ ಮೂಲಕ ಗುಡ್ಡದ ಮೇಲಿಂದ ಭೂಮಿಗೆ ಬೀಳುತ್ತಿದೆ. ಇದಕ್ಕೆ ಜನ ಜೋಗ ಜಲಪಾತ ಎನ್ನುತ್ತಿದ್ದಾರೆ. ಕಳೆದ ಹತ್ತು ವರ್ಷದಲ್ಲಿ ಹೊನ್ನಮ್ಮನ ಝರಿಗೆ ನೀರು ಬರುವಷ್ಟು ಮಳೆ ಬಂದಿರಲಿಲ್ಲ. ಈ ಝರಿಗೆ ನೀರು ಬಂದರೆ ಭರ್ಜರಿ ಮಳೆ ಆಗಿದೆ ಎಂಬುದು ಜನರ ನಂಬಿಕೆ. ಈ ವರ್ಷ ಭರ್ಜರಿ ಮಳೆ ಆಗಿದೆ ಹೀಗಾಗಿ ಝರಿ ಹರಿದಿದೆ ಎಂದು ಜನ ಸಂತೋಷದಿಂದ ಪ್ರಕೃತಿ ಸೊಬಗನ್ನು ಸವಿಸುತ್ತಿದ್ದಾರೆ.

ಉಚ್ಚಂಗಿದುರ್ಗ

ಉಚ್ಚಂಗಿದುರ್ಗ

ಇದನ್ನೂ ಓದಿ: ಬೆಳಗಾವಿ ಜಿಲ್ಲೆಯಲ್ಲಿ ಭಾರೀ ಮಳೆ; ವಾಘವಾಡೆ ಬಳಿ ಹಳ್ಳದಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನ ರಕ್ಷಣೆ

Published On - 2:08 pm, Fri, 23 July 21

Follow Us
Web contact
Web contact

TV9 Kannada

Read More
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಮುಂದಿನ ಪೀಳಿಗೆ ಕೂಡ ಡಿಕೆಶಿ ಸಾಧನೆ ಬಗ್ಗೆ ಮಾತಾಡುವಂತೆ ಕೆಲಸ ಆಗಲಿ: ರಮೇಶ್
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಕಾರಿನಲ್ಲಿ ಕುಳಿತೇ ಅಭಿಮಾನಿಗಳಿಗೆ ಫ್ಲೈಯಿಂಗ್ ಕಿಸ್ ಕೊಟ್ಟ ರಾಹುಲ್ ಗಾಂಧಿ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ
ಡಿಕೆ ಶಿವಕುಮಾರ್ ಪ್ರಮಾಣ ವಚನಕ್ಕೆ ಖುಷಿಯಿಂದ ಆಗಮಿಸಿದ ನಟಿ ರಮ್ಯಾ: ವಿಡಿಯೋ