AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೂವಿನಿಂದಲೂ ಗಾಯ ಆಗಬಹುದು; ನೆಚ್ಚಿನ ನಾಯಕನಿಗೆ ಪುಷ್ಪಾರ್ಚನೆ ಮಾಡುವ ಅಭಿಮಾನಿಗಳೆ ಎಚ್ಚರ

ಸನ್ಮಾನ ಮಾಡುತ್ತಿದ್ದಂತೆ ತಲೆಯ ಮೇಲೆ ಹೂವು ಹಾಕುವುದು ಎಂದು ನಿರ್ಧರಿಸಲಾಗಿತ್ತು. ಜೊತೆಗೆ ಹೂವನ್ನು ಮುರಿದು ಸನ್ಮಾನಿತರ ಮೇಲೆ ಹಾಕಲು ಅನುಕೂಲ ಆಗುವಂತೆ ಮಾಡಲಾಗಿತ್ತು. ಆದರೆ ಹೀಗೆ ಹೂವು ಹಾಕಿದ್ದೇ ತಡ ಅದು ಸಂಸದರಿಗೆ ಅಲರ್ಜಿ ಉಂಟು ಮಾಡಿದೆ.

ಹೂವಿನಿಂದಲೂ ಗಾಯ ಆಗಬಹುದು; ನೆಚ್ಚಿನ ನಾಯಕನಿಗೆ ಪುಷ್ಪಾರ್ಚನೆ ಮಾಡುವ ಅಭಿಮಾನಿಗಳೆ ಎಚ್ಚರ
ಕೊರೊನಾ ವಾರಿಯರ್​ಗಳಿಗೆ ಸನ್ಮಾನ
TV9 Web
| Updated By: preethi shettigar|

Updated on: Oct 27, 2021 | 7:45 AM

Share

ದಾವಣಗೆರೆ: ಇತ್ತೀಚಿಗೆ ತಮ್ಮ ನೆಚ್ಚಿನ ನಾಯಕರಿಗೆ ಪುಷ್ಪಾರ್ಚನೆ ಮಾಡುವುದು. ಕ್ವಿಂಟಾಲ್ ತೂಕ ಸೇಬಿನ ಹಾರ ಹಾಕುವುದು ಹೆಚ್ಚಾಗಿದೆ. ಅದರಲ್ಲೂ ಜೆಸಿಬಿಗಳಲ್ಲಿ ಹೂವು ತುಂಬಿಕೊಂಡು ಸುರಿಸುವುದು ಜೋರಾಗಿದೆ. ಆದರೆ ಇದು ಎಂತಹ ಅಪಾಯಕಾರಿ ಎಂಬುವುದನ್ನು ದಾವಣಗೆರೆ ಸಂಸದ , ಅವರನ್ನು ಕೇಳಿದರೆ ಗೊತ್ತಾಗುತ್ತದೆ. ಏಕೆಂದರೆ ಹೂ ಮಳೆಯಿಂದ ಅವರ ಮುಖದ ಬಹುತೇಕ ಕಡೆ ಗಾಯವಾದಂತಾಗಿದೆ. ಮೇಲಾಗಿ ಮುಖ ಉದಿಕೊಂಡಿದೆ. ಕಣ್ಣಿಗೂ ಸ್ವಲ್ಪ ತೊಂದರೆ ಆಗಿದೆ. ಇದಕ್ಕೆಲ್ಲಾ ಕಾರಣ ಹೂವು. ಅದು ಹೇಗೆ ಎಂದು ಹುಬ್ಬೇರಿಸುವವರಿಗೆ ಇಲ್ಲಿದೆ ಉತ್ತರ.

ಇತ್ತೀಚಿಗೆ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸುರಹೊನ್ನೆಯಲ್ಲಿ ಕೊರೊನಾ ವಾರಿಯರ್​ಗಳಿಗೆ ಸನ್ಮಾನವಿತ್ತು. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸಹ ಬಂದಿದ್ದರು. ಇಲ್ಲಿನ ಆಕರ್ಷಣೆ ಅಂದರೆ ಹತ್ತಾರು ಕ್ವಿಂಟಾಲ್ ಚಂಡು ಹೂವು.  ಅದು ಸನ್ಮಾನಿತರಿಗಾಗಿ ತರಲಾಗಿತ್ತು. ಸನ್ಮಾನ ಮಾಡುತ್ತಿದ್ದಂತೆ ತಲೆಯ ಮೇಲೆ ಹೂವು ಹಾಕುವುದು ಎಂದು ನಿರ್ಧರಿಸಲಾಗಿತ್ತು. ಜೊತೆಗೆ ಹೂವನ್ನು ಮುರಿದು ಸನ್ಮಾನಿತರ ಮೇಲೆ ಹಾಕಲು ಅನುಕೂಲ ಆಗುವಂತೆ ಮಾಡಲಾಗಿತ್ತು. ಆದರೆ ಹೀಗೆ ಹೂವು ಹಾಕಿದ್ದೇ ತಡ ಅದು ಸಂಸದರಿಗೆ ಅಲರ್ಜಿ ಉಂಟು ಮಾಡಿದೆ.

ನೇರವಾಗಿ ಜಮೀನಿನಿಂದ ಹೂವು ತಂದು ಅತಿಥಿಗಳ ಮೇಲೆ ಹಾಕುವುದು ಇತ್ತೀಚಿನ ದೊಡ್ಡ ಪ್ರತಿಷ್ಠೆ ಆಗಿದೆ. ಬಹುತೇಕ ನಾಯಕರಿಗೆ ಇಂತಹ ಹೂವು ಹಾಕುವುದನ್ನು ನೋಡಿದ್ದೇವೆ. ಮೇಲಾಗಿ ಜನ ಪ್ರತಿನಿಧಿಗಳು ಆದ ಹಿನ್ನೆಲೆ ಯಾರಿಗೂ ಹೂವು ಹಾಕಬೇಡಿ ಎನ್ನುವಂತಿಲ್ಲ. ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಮೈಮೇಲೆ ಹೂವು ಹಾಕಿಸಿಕೊಂಡ ಹಿನ್ನೆಲೆ ಸಂಸದರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಗುಣಮಟ್ಟದ ಹಾಗೂ ನೀರಿನಿಂದ ಸ್ವಚ್ಛ ಮಾಡಿದ ಹೂವುಗಳನ್ನು ಹಾಕುವತ್ತ ಅಭಿಮಾನಿಗಳು ಗಮನ ಹರಿಸಬೇಕಾಗಿದೆ. ಏಕೆಂದರೆ ಬೆಳೆಸುವಾಗ ಕೆಲವು ಹೂವುಗಳಿಗೆ ಔಷಧಿ ಬಳಸುತ್ತಾರೆ. ಇದು ಹೀಗೆ ತೊಂದರೆಯನ್ನು ಉಂಟು ಮಾಡುವ ಸಾಧ್ಯತೆ ಇದೆ.

ವರದಿ: ಬಸವರಾಜ್ ದೊಡ್ಮನಿ

ಇದನ್ನೂ ಓದಿ: ದಾವಣಗೆರೆ: ಸೂಳೆಕೆರೆ ಕೋಡಿ ಬಿದ್ದ ಹಿನ್ನೆಲೆ ಕೆಂಗಾಪುರ ಕಣಿವೆ ಬಿಳಚಿ ಮಧ್ಯೆ ಇರುವ ಸೇತುವೆ​ ಜಲಾವೃತ

ಕರ್ನಾಟಕ ಬಂದ್​ ಮಧ್ಯೆ ಮರಾಠಿಗರ ವಿಜಯೋತ್ಸವ: ಶಿವಾಜಿ ಪ್ರತಿಮೆಗೆ ಮಾಲಾರ್ಪಣೆ, ಸಿಹಿ ಹಂಚಿಕೆ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ