ಉಚ್ಛಾಟಿತ ವಚನಾನಂದ ಶ್ರೀಗೆ ಮತ್ತೊಂದು ಸಂಕಷ್ಟ, ಧ್ಯಾನದ ಮೊರೆ ಹೋದ ಸ್ವಾಮೀಜಿ

ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಜಗಳ ಬೀದಿ ರಂಪಾಟವಾಗಿದೆ. ಟ್ರಸ್ಟಿಗಳಿಂದ ಉಚ್ಚಾಟನೆಗೊಳಗಾದ ವಚನಾನಂದ ಶ್ರೀ ಮಠ ಬಿಡಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಆದ್ರೆ, ಮಠ ತೊರೆಯದಿದ್ದರೆ ಎಳೆದು ಮಠದಿಂದ ಹೊರಗೆ ಹಾಕ್ತೀವಿ ಎಂದು ಟ್ರಸ್ಟಿಗಳು ಎಚ್ಚರಿಕೆ ನೀಡಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ವಚನಾನಂದ ಸ್ವಾಮೀಜಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

ಉಚ್ಛಾಟಿತ ವಚನಾನಂದ ಶ್ರೀಗೆ ಮತ್ತೊಂದು ಸಂಕಷ್ಟ, ಧ್ಯಾನದ ಮೊರೆ ಹೋದ ಸ್ವಾಮೀಜಿ
Vachananda Swamiji
Edited By:

Updated on: Apr 17, 2026 | 4:49 PM

ದಾವಣಗೆರೆ, (ಏಪ್ರಿಲ್ 17):  ಹರಿಹರ ಪಂಚಮಸಾಲಿ ಗುರುಪೀಠದಿಂದ (Harihar Panchamasa­li Petha) ವಚನಾನಂದ ಶ್ರೀಗಳನ್ನು (vachananda swamiji) ಉಚ್ಛಾಟನೆ ಮಾಡಲಾಗಿದೆ. ಆದರೂ ಸಹ ಯಾವುದೇ ಕಾರಣಕ್ಕೂ ಮಠ ಬಿಟ್ಟು ಹೋಗಲು ಎಂದು ಪಟ್ಟು ಹಿಡಿದಿರುವ ವಚನಾನಂದ ಶ್ರೀಗಳ ವಿರುದ್ಧ ಹಾಸ್ಟೆಲ್ ವಿದ್ಯಾರ್ಥಿಗಳು ಮಕ್ಕಳ ಕಲ್ಯಾಣ ಸಮಿತಿಗೆ ದೂರು ನೀಡಿದ್ದಾರೆ. ಇದರಿಂದ ಸ್ವಾಮೀಜಿಗೆ ಸಂಕಷ್ಟ ಎದುರಾಗಿದೆ. ಇನ್ನು ವಿದ್ಯಾರ್ಥಿಗಳ ದೂರು ಬೆನ್ನಲ್ಲೇ ಮಕ್ಕಳ ಕಲ್ಯಾಣ ಸಮಿತಿಯವರು ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಹನಗವಾಡಿ ಬಳಿ ಇರುವ ಮಠಕ್ಕೆ ಭೇಟಿ ನೀಡಿದ್ದು, ತನಿಖೆ ನಡೆಸಿದ್ದಾರೆ.

ಸ್ವಾಮೀಜಿ ಮಕ್ಕಳಿಂದ ಮಸಾಜ್ ಮಾಡಿಕೊಳ್ಳುತ್ತಿದ್ದ.‌ಮಕ್ಕಳಿಗೆ ಹಿಂಸೆ ನೀಡಿದ್ದಾರೆ ಎಂಬ ಆರೋಪಿಸಲಾಗಿದ್ದು, ಈ ಸಂಬಂಧ ಮಠಕ್ಕೆ ಬಂದ ಮಕ್ಕಳ ಕಲ್ಯಾಣ ಸಮತಿ ಸದಸ್ಯರಿಗೆ ಸ್ವಾಮೀಜಿ ಪರ ಹಿರಿಯ ನ್ಯಾಯವಾದಿ ಪ್ರಕಾಶ ಪಾಟೀಲ ಉತ್ತರ ನೀಡಿದ್ದಾರೆ.

ಇದನ್ನೂ ಓದಿ: ಉಚ್ಛಾಟನೆಯಾದರೂ ಮಠದಲ್ಲೇ ಉಳಿದ ವಚನಾನಂದ ಶ್ರೀಗೆ ಭಕ್ತರೇ ಕಾವಲು: ಸಿರಿಗೆರೆ ಪರಮೇಶ್ವರ ಗೌಡ ನೇತೃತ್ವದಲ್ಲಿ ಭದ್ರತೆ

ಈ ಸಂಬಂಧ ಪ್ರತಿಕ್ರಿಯಿಸಿರುವ ಪಂಚಮಸಾಲಿ ಗುರುಪೀಠದ ದಸೋಹ ಸಮಿತಿ ಅಧ್ಯಕ್ಷ ಹಾಗೂ ಹಿರಿಯ ನ್ಯಾಯಾಲಯವಾದಿ ಪ್ರಕಾಶ ಪಾಟೀಲ್, ಇದೊಂದು ಸ್ವಾಮೀಜಿಗಳ ವಿರುದ್ಧ ಷಡ್ಯಂತ್ರ. ಅವರ ವ್ಯಕ್ತಿತ್ವದ ಕಳಂಕ ತರಲು ಮಾಡಿದ ತಂತ್ರ. ಪಂಚಮಸಾಲಿ ಗುರುಪೀಠದಲ್ಲಿ ಲೆಕ್ಕಾ ಕೊಡಿ ಚಳವಳಿ ನಡೆದಿತ್ತು. ಇದೇ ಕಾರಣಕ್ಕೆ ಸ್ವಾಮೀಜಿ ವಿರುದ್ಧ ಅನಗತ್ಯವಾಗಿ ಆರೋಪ ಮಾಡುತ್ತಿದ್ದಾರೆ. ಕಳೆದ ಕೆಲ ದಿನಗಳಿಂದ ಕೆಲವರು ಮಕ್ಕಳ ಮನೆಗಳಿಗೆ ಭೇಟಿ ನೀಡುತ್ತಿದ್ದಾರೆ. ಜೊತೆಗೆ ಸ್ವಾಮೀಜಿ ಗಳ ವಿರುದ್ದ ದೂರು ನೀಡುವಂತೆ ಮಾಡಿರುವ ಸಾದ್ಯತೆ ಸಹ ಇದೆ. ಇದರಲ್ಲಿ ಸ್ವಾಮೀಜಿ ತಪ್ಪು ಇದ್ರು ನಾವು ಒಪ್ಪುತ್ತೇವೆ. ಆದ್ರೆ ಲೆಕ್ಕಾ ಕೊಡಿ ಎಂದು ಕೇಳಿದ್ರೆ ಈ ರೀತಿ ಸಾಮೀಜಿ ವಿರುದ್ಧ ಷಡ್ಯಂತ್ರ ಸರಿಯಲ್ಲ ಎಂದು ಹೇಳಿದ್ದಾರೆ.

ಧ್ಯಾನದ ಮೊರೆ ಹೋದ ವಚನಾನಂದ ಸ್ವಾಮೀಜಿ

ಟ್ರಿಸ್ಟಿಗಳು ಸೇರಿ ಪಂಚಮಸಾಲಿ ಗುರುಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಾಡಿದ್ದಾರೆ. ಆದ್ರೆ, ವಚನಾನಂದ ಸ್ವಾಮೀಜಿ ಮಾತ್ರ ಮಠ ಬಿಟ್ಟು ಹೋಗಲ್ಲ ಎಂದು ಪಟ್ಟು ಹಿಡಿದುಕೊಂಡು ಕುಳಿತ್ತಿದ್ದಾರೆ. ಇದರಿಂದ ಪಂಚಮಸಾಲಿ ಯುವ ಘಟಕ ಸಹ ಸುದ್ದಿಗೋಷ್ಠಿ ನಡೆಸಿ, ಮಠ ಬಿಟ್ಟು ಹೋಗಬೇಕು. ಇಲ್ಲವಾದಲ್ಲಿ ಎಳೆದು ಹೊರಗೆ ಹಾಕಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದೆ. ಇದರ ಮಧ್ಯೆ ಇದೀಗ ಮಕ್ಕಳ ಕಲ್ಯಾಣ ಸಮಿತಿ ಸಹ ಮಠಕ್ಕೆ ಭೇಟಿ ನೀಡಿ ತನಿಖೆ ನಡೆಸಿದೆ. ಈ ಎಲ್ಲಾ ಬೆಳವಣಿಗಳ ನಡುವೆ ವಚನಾನಂದ ಸ್ವಾಮೀಜಿ ಮಾತ್ರ ಧ್ಯಾನದ ಮೊರೆ ಹೋಗಿದ್ದಾರೆ.

ವಚನಾನಂದ ಸ್ವಾಮೀಜಿ ಹೇಳಿದ್ದೇನು?

ಆಗಿರುವುದು ಒಳ್ಳೆಯದೇ ಆಗುತ್ತಿರುವುದು ಒಳ್ಳೆಯದೇ. ನಾವು ಸಾಧಕರು. ನಾವು ದೇವರಲ್ಲ ದೇವರ ದಾರಿಯಲ್ಲಿ ನಡೆಯುವವರು. ಸಮಯ ಬಂದಾಗ ಎಲ್ಲ ಉತ್ತರಿಸುವೆ. ಈಗ ಮಕ್ಕಳ ಕಲ್ಯಾಣ ಸಮಿತಿ ಬಂದಿತ್ತು. ಅದು ಸೂಕ್ಷ್ಮ ವಿಚಾರ. ಅದರ ಬಗ್ಗೆ ವಿವರ ನೀಡಲ್ಲ ಎಂದಿದ್ದಾರೆ.

ಇನ್ನು ಜಯಮೃತ್ಯುಂಜಯ ಸ್ವಾಮೀಜಿ ಅವರನ್ನ ಹರಿಹರ ಗುರುಪೀಠಕ್ಕೆ ತರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ವಚನಾನಂದಶ್ರೀ, ನಾವೆಲ್ಲಾ ಸ್ವಾಮೀಜಿಗಳು ಒಂದೇ. ನಾನು ಸನ್ಯಾಸ ಸ್ವೀಕರಿಸಿದ ಬಳಿಕ ಅವರು ಸ್ವೀಕರಿಸಿದ್ದಾರೆ. ಅವರು 18 ವರ್ಷ ದಿಂದ ಪಂಚಮಸಾಲಿ ಕೂಡಲ ಸಂಗಮ ಗುರುಪೀಠದಲ್ಲಿ ಇದ್ದಾರೆ.‌ ನಾವು ಸ್ವಾಮೀಜಿಗಳೆಲ್ಲ ಎಂದು ಹೇಳಿದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us