AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮುನಿರತ್ನ BJPಗೆ ಬಂದಿದ್ದೇಕೆಂದು ಹೇಳುವ ಧೈರ್ಯ ಡಿಕೆಶಿ, ಸಿದ್ದರಾಮಯ್ಯಗೆ ಇದ್ಯಾ?’

ಬೆಂಗಳೂರು: ಮುನಿರತ್ನ ಬಿಜೆಪಿಗೆ ಬಂದಿದ್ದೇಕೆಂದು ಹೇಳುವ ಧೈರ್ಯವಿದೆಯಾ? ಡಿ.ಕೆ.ಶಿವಕುಮಾರ್ ಅಥವಾ ಸಿದ್ದರಾಮಯ್ಯರಿಗೆ ಇದೆಯಾ? ಎಂದು ರಾಜರಾಜೇಶ್ವರಿನಗರ ಉಪಚುನಾವಣೆಯ ಹಿನ್ನೆಲೆಯಲ್ಲಿ ಡಿಸಿಎಂ ಡಾ. ಅಶ್ವತ್ಥ್​ ನಾರಾಯಣ ಪ್ರಶ್ನಿಸಿದ್ದಾರೆ. ಶೀಘ್ರದಲ್ಲೇ ಆಡಿಯೋ ಸಾಕ್ಷಿ ಬಿಡುಗಡೆ ಮುನಿರತ್ನ ಪಕ್ಷ ಬಿಡುವ ಪ್ರಮೇಯ ಬಂದಿದ್ದು ಯಾಕೆ? ಬಂಡೆ ರೀತಿ ಇರುತ್ತೇನೆಂದು ಡಿಕೆಶಿ ಹೇಳಿಕೊಂಡು ಓಡಾಡಿದ್ರು. ಆದರೆ, ಡಿ.ಕೆ.ಶಿವಕುಮಾರ್ ತಿಂಗಳಿಗೊಂದು ಗುಂಡಿ ತೋಡಿದ್ರು. ಮೈತ್ರಿ ಸರ್ಕಾರದಲ್ಲಿ 13 ತಿಂಗಳು 13 ಅಡಿ ಗುಂಡಿ ತೋಡಿದ್ರು ಎಂದು ಅಶ್ವತ್ಥ್​ ನಾರಾಯಣ ತಿರುಗೇಟು ನೀಡಿದ್ದಾರೆ. ಯಾರು ಮುನಿರತ್ನ […]

‘ಮುನಿರತ್ನ BJPಗೆ ಬಂದಿದ್ದೇಕೆಂದು ಹೇಳುವ ಧೈರ್ಯ ಡಿಕೆಶಿ, ಸಿದ್ದರಾಮಯ್ಯಗೆ ಇದ್ಯಾ?’
KUSHAL V
| Updated By: ಸಾಧು ಶ್ರೀನಾಥ್​|

Updated on: Oct 20, 2020 | 1:56 PM

Share

ಬೆಂಗಳೂರು: ಮುನಿರತ್ನ ಬಿಜೆಪಿಗೆ ಬಂದಿದ್ದೇಕೆಂದು ಹೇಳುವ ಧೈರ್ಯವಿದೆಯಾ? ಡಿ.ಕೆ.ಶಿವಕುಮಾರ್ ಅಥವಾ ಸಿದ್ದರಾಮಯ್ಯರಿಗೆ ಇದೆಯಾ? ಎಂದು ರಾಜರಾಜೇಶ್ವರಿನಗರ ಉಪಚುನಾವಣೆಯ ಹಿನ್ನೆಲೆಯಲ್ಲಿ ಡಿಸಿಎಂ ಡಾ. ಅಶ್ವತ್ಥ್​ ನಾರಾಯಣ ಪ್ರಶ್ನಿಸಿದ್ದಾರೆ.

ಶೀಘ್ರದಲ್ಲೇ ಆಡಿಯೋ ಸಾಕ್ಷಿ ಬಿಡುಗಡೆ ಮುನಿರತ್ನ ಪಕ್ಷ ಬಿಡುವ ಪ್ರಮೇಯ ಬಂದಿದ್ದು ಯಾಕೆ? ಬಂಡೆ ರೀತಿ ಇರುತ್ತೇನೆಂದು ಡಿಕೆಶಿ ಹೇಳಿಕೊಂಡು ಓಡಾಡಿದ್ರು. ಆದರೆ, ಡಿ.ಕೆ.ಶಿವಕುಮಾರ್ ತಿಂಗಳಿಗೊಂದು ಗುಂಡಿ ತೋಡಿದ್ರು. ಮೈತ್ರಿ ಸರ್ಕಾರದಲ್ಲಿ 13 ತಿಂಗಳು 13 ಅಡಿ ಗುಂಡಿ ತೋಡಿದ್ರು ಎಂದು ಅಶ್ವತ್ಥ್​ ನಾರಾಯಣ ತಿರುಗೇಟು ನೀಡಿದ್ದಾರೆ. ಯಾರು ಮುನಿರತ್ನ ಅವರನ್ನು ಪಕ್ಷದಿಂದ ಕಳುಹಿಸಿದ್ರು ಎಂಬುದನ್ನು ಸಾಬೀತುಪಡಿಸುವ ಆಡಿಯೋ ಸಾಕ್ಷಿ ಇದೆ. ಶೀಘ್ರದಲ್ಲೇ ಆಡಿಯೋ ಸಾಕ್ಷಿ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದರು.

‘ಮುನಿರತ್ನ ತಮ್ಮನ್ನು ಮಾರಿಕೊಂಡಿದ್ದಾರೆ ಅಂತಾ ಆಪಾದನೆ ಮಾಡ್ತಿದ್ದಾರೆ’ R.R. ನಗರದಲ್ಲಿ ಚುನಾವಣೆ ಬರುತ್ತದೆ ಎಂದು ಊಹಿಸಿರಲಿಲ್ಲ. ಕೋರ್ಟ್​​ನಲ್ಲಿ ಕೇಸ್ ನಡೆಯುತ್ತಿರುತ್ತದೆ ಎಂದು ಭಾವಿಸಿದ್ರು. ಕಾಂಗ್ರೆಸ್ ನಾಯಕರು ಹತಾಶರಾಗಿ ಮಾತನಾಡ್ತಿದ್ದಾರೆ. ಮುನಿರತ್ನ ತಮ್ಮನ್ನು ಮಾರಿಕೊಂಡಿದ್ದಾರೆ ಅಂತಾ ಆಪಾದನೆ ಮಾಡ್ತಿದ್ದಾರೆ. ಮುನಿರತ್ನ ಡಿ.ಕೆ.‌ ಶಿವಕುಮಾರ್ ಮತ್ತು ಡಿ.ಕೆ.ಸುರೇಶ್​ಗೆ ಆತ್ಮೀಯರು ಹಾಗೂ ಬೆಂಬಲಿಗರು. ಕಾಂಗ್ರೆಸ್ ಪಕ್ಷ ಬಿಡೋಕೆ ಯಾರು ಕಾರಣ ಎಂದು ಶಿವಕುಮಾರ್ ಸತ್ಯ ಹೇಳಬೇಕು ಎಂದು ಹೇಳಿದರು.

‘ನಾನು ಬಂಡೆ, ಮೈತ್ರಿ ಸರ್ಕಾರ ಬಿಡಲ್ಲ ಅಂತಾ ಹೇಳಿದ್ರು’ ಹದಿಮೂರು ತಿಂಗಳು ಜೋಡಿ ಎತ್ತು ಅಂತಾ ಸರ್ಕಾರ ಮಾಡಿದ್ರು. ನಾನು ಬಂಡೆ, ಮೈತ್ರಿ ಸರ್ಕಾರ ಬಿಡಲ್ಲ ಅಂತಾ ಹೇಳಿದ್ರು. ಅವರ ಜೊತೆಯಲ್ಲೇ ಇದ್ದುಕೊಂಡು ಹದಿಮೂರು ಅಡಿ ಗುಂಡಿ ತೋಡಿದ್ದಾರೆ. ಜೊತೆಯಲ್ಲೇ ಇದ್ದು ಷಡ್ಯಂತ್ರ ಮಾಡಿರೋದನ್ನು ನೋಡಿದ್ದೇವೆ. ಮೈತ್ರಿ ಸರ್ಕಾರ ಬೀಳೋದ್ದಕ್ಕೆ ಯಾರು ಕಾರಣ ಅನ್ನೋ ಸತ್ಯವನ್ನ ಹೇಳಬೇಕು. ಮುನಿರತ್ನ ಒಂದೇ ಒಂದು ರೂಪಾಯಿ ಹಣವನ್ನ ನಮ್ಮಿಂದ ಪಡೆದಿಲ್ಲ. ಅವರು ಮತ್ತು ಯಾರೂ ಕೂಡ ಹಣವನ್ನು ಪಡೆದಿಲ್ಲ. ಅವರ ಒಳಜಗಳದಿಂದ ಮೈತ್ರಿ ಸರ್ಕಾರ ಬಿತ್ತು ಎಂದು ಮೈತ್ರಿ ಸರ್ಕಾರದ ಬಗ್ಗೆ ಡಾ. ಅಶ್ವತ್ಥ್​ ನಾರಾಯಣ ಹೇಳಿದ್ದಾರೆ.