AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬಾಂಬ್’ ರಾಜಶೇಖರ್​ ಅಸಲಿ ಚರಿತ್ರೆ: ಮಾವನ ಕುಟುಂಬಸ್ಥರಿಗೆ 10 ವರ್ಷದಿಂದ ನೀಡ್ತಿದ್ದ ಚಿತ್ರಹಿಂಸೆ

ತುಮಕೂರು: CCB, ಸಿಟಿ ಸಿವಿಲ್ ಕೋರ್ಟ್​ಗೆ ಬೆದರಿಕೆ ಪತ್ರ ರವಾನಿಸಿ ಸದ್ಯ ಅರೆಸ್ಟ್​ ಆಗಿರುವ ರಾಜಶೇಖರ್​ಅಲಿಯಾಸ್​ ಬಾಂಬ್​ ರಾಜಶೇಖರ್​ ಅಸಲಿ ಚರಿತ್ರೆ ಪೊಲೀಸ್​ ವಿಚಾರಣೆ ವೇಳೆ ಬಯಲಾಗಿದೆ. ಅತ್ತೆಯ ಆಸ್ತಿಗಾಗಿ ಹವಣಿಸುತ್ತಿದ್ದ ರಾಜಶೇಖರ್​ ಕಳೆದ ಹತ್ತು ವರ್ಷಗಳಿಂದ ಅದಕ್ಕಾಗಿ ಎಲ್ಲಿಲ್ಲದ ನಾಟಕ ಮಾಡಿಕೊಂಡು ಬಂದಿದ್ದನಂತೆ. ಆಸ್ತಿಯನ್ನು ಕಬಳಿಸಲು ತನ್ನ ಅತ್ತೆ, ಹೆಂಡತಿ, ಮಾವ ಮತ್ತು ನಾದಿನಿಗೆ ಇನ್ನಿಲ್ಲದ ಚಿತ್ರಹಿಂಸೆ ನೀಡುತ್ತಿದ್ದ ಎಂದು ಸಹ ತಿಳಿದುಬಂದಿದೆ. ನಾಲ್ಕು ಎಕರೆ ಜಮೀನಿಗಾಗಿ ಷಡ್ಯಂತ್ರ ನಡೆಸಿದ್ದ ರಾಜಶೇಖರ್​ 2019ರಲ್ಲಿ ನಕಲಿ ಛಾಪಾ […]

‘ಬಾಂಬ್’ ರಾಜಶೇಖರ್​ ಅಸಲಿ ಚರಿತ್ರೆ: ಮಾವನ ಕುಟುಂಬಸ್ಥರಿಗೆ 10 ವರ್ಷದಿಂದ ನೀಡ್ತಿದ್ದ ಚಿತ್ರಹಿಂಸೆ
KUSHAL V
| Edited By: |

Updated on: Oct 20, 2020 | 1:24 PM

Share

ತುಮಕೂರು: CCB, ಸಿಟಿ ಸಿವಿಲ್ ಕೋರ್ಟ್​ಗೆ ಬೆದರಿಕೆ ಪತ್ರ ರವಾನಿಸಿ ಸದ್ಯ ಅರೆಸ್ಟ್​ ಆಗಿರುವ ರಾಜಶೇಖರ್​ಅಲಿಯಾಸ್​ ಬಾಂಬ್​ ರಾಜಶೇಖರ್​ ಅಸಲಿ ಚರಿತ್ರೆ ಪೊಲೀಸ್​ ವಿಚಾರಣೆ ವೇಳೆ ಬಯಲಾಗಿದೆ.

ಅತ್ತೆಯ ಆಸ್ತಿಗಾಗಿ ಹವಣಿಸುತ್ತಿದ್ದ ರಾಜಶೇಖರ್​ ಕಳೆದ ಹತ್ತು ವರ್ಷಗಳಿಂದ ಅದಕ್ಕಾಗಿ ಎಲ್ಲಿಲ್ಲದ ನಾಟಕ ಮಾಡಿಕೊಂಡು ಬಂದಿದ್ದನಂತೆ. ಆಸ್ತಿಯನ್ನು ಕಬಳಿಸಲು ತನ್ನ ಅತ್ತೆ, ಹೆಂಡತಿ, ಮಾವ ಮತ್ತು ನಾದಿನಿಗೆ ಇನ್ನಿಲ್ಲದ ಚಿತ್ರಹಿಂಸೆ ನೀಡುತ್ತಿದ್ದ ಎಂದು ಸಹ ತಿಳಿದುಬಂದಿದೆ.

ನಾಲ್ಕು ಎಕರೆ ಜಮೀನಿಗಾಗಿ ಷಡ್ಯಂತ್ರ ನಡೆಸಿದ್ದ ರಾಜಶೇಖರ್​ 2019ರಲ್ಲಿ ನಕಲಿ ಛಾಪಾ ಕಾಗದ ಸೃಷ್ಟಿಸಿ ರಮೇಶ್​ ಹಾಗೂ ತನ್ನ ಮಾವ ಬಸವಲಿಂಗಯ್ಯ ಮೇಲೆ ಆರೋಪ ಹೊರಿಸಿದ್ದನಂತೆ.

ಬಸವಲಿಂಗಯ್ಯ ತನ್ನ ಮಗಳು ಭೂಮಿಕಾಳನ್ನ ಒಂದೂವರೆ ಲಕ್ಷಕ್ಕೆ ಮಾರಟ ಮಾಡಿದ್ದಾರೆಂದು ಆರೋಪ ಮಾಡಿದ್ದನಂತೆ. ತನ್ನ ಮಾವ ಬಸವಲಿಂಗಯ್ಯ ಹಾಗೂ ರಮೇಶ್​ನ ಮೇಲೆ ಆರೋಪ ಹೊರಿಸಲು ನಾದಿನಿ ಮಾರಾಟದ ನಾಟಕವಾಡಿದ್ದ.

ಅಷ್ಟೇ ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಈ ಸುಳ್ಳು ಸುದ್ದಿಯನ್ನ ಸಹ ಹಬ್ಬಿಸಿದ್ದನಂತೆ. ಸುದ್ದಿ ಬಳಿಕ ಭೂಮಿಕಾ ಹೇಳಿಕೆ ದಾಖಲು ಮಾಡಿಕೊಂಡಿದ್ದ ಪೊಲೀಸರು ಮತ್ತು ಮಕ್ಕಳ ಸಂರಕ್ಷಣೆ ಅಧಿಕಾರಿಗಳಿಗೆ ರಾಜಶೇಖರ್​ ಸ್ವತಃ ಭೂಮಿಕಾಗೆ ಲೈಂಗಿಕ ಕಿರುಕುಳ ನೀಡಿದ್ದ ಎಂಬ ಮಾಹಿತಿ ಸಿಕ್ಕಿದೆ. ಆಗ, ಭೂಮಿಕಾ ಮತ್ತು ಬಸವಲಿಂಗಪ್ಪ ನೀಡಿದ್ದ ದೂರಿನನ್ವಯ ಚೇಳೂರು ಪೊಲೀಸರು ಕೇಸ್ ದಾಖಲು ಮಾಡಿಕೊಂಡಿದ್ದರು.

ರಾಜಶೇಖರ್ ಆಗ ಚೇಳೂರು ಪೊಲೀಸರಿಗೂ ತಲೆ ಬಿಸಿ ತಂದಿದ್ದ ಎಂದು ಹೇಳಲಾಗಿದೆ. ಈ ನಡುವೆ ಪ್ರಕರಣದ ತನಿಖೆ‌ ನಡೆಸಿದ್ದ ಪೊಲೀಸರಿಗೆ ರಾಜಶೇಖರ್​ನ ಷಡ್ಯಂತ್ರ ಗೊತ್ತಾಗಿತ್ತು. ಆಗ, ರಾಜಶೇಖರ್​ಗೆ ಎಚ್ಚರಿಕೆ ನೀಡಿದ್ದರಂತೆ. ಆದರೆ, ಪೊಲೀಸರ‌ ಎಚ್ಚರಿಕೆಯನ್ನ ಲಘುವಾಗಿ ಪರಿಗಣಿಸಿದ ರಾಜಶೇಖರ್​ ಇದೀಗ ನ್ಯಾಯಾಧೀಶರಿಗೆ ಬೆದರಿಕೆ ಪತ್ರ ಬರೆದು ಬಾಂಬ್​ ರಾಜಶೇಖರ್​ ಆಗಿ ಪರಿಣಮಿಸಿದ್ದಾನೆ.

CCB, ಸಿವಿಲ್ ಕೋರ್ಟ್​ಗೆ ಬೆದರಿಕೆ ಪತ್ರ: ಸಿಕ್ಕಿಬಿದ್ದರು ಇಬ್ಬರು ಆರೋಪಿಗಳು!

ಬಾಂಬ್ ಬೆದರಿಕೆ ಪ್ರಕರಣದ ಸೆನ್ಸೇಷನಲ್ ಇನ್‌ಸೈಡ್ ಸ್ಟೋರಿ.. ಸಿನಿಮೀಯವಾಗಿದೆ ಓದಿ!

Follow Us
ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಎಐಎಡಿಎಂಕೆಗೆ ಬೆಂಬಲ ಘೋಷಿಸಿದ ಎಎಂಎಂಕೆ
ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಎಐಎಡಿಎಂಕೆಗೆ ಬೆಂಬಲ ಘೋಷಿಸಿದ ಎಎಂಎಂಕೆ
ಪ್ರಜಾಕೀಯ ಜೊತೆ ಜೊತೆಗೆ ರಾಜ್ಯ ರಾಜಕಾರಣದ ಬಗ್ಗೆ ಉಪ್ಪಿ ಮಾತು
ಪ್ರಜಾಕೀಯ ಜೊತೆ ಜೊತೆಗೆ ರಾಜ್ಯ ರಾಜಕಾರಣದ ಬಗ್ಗೆ ಉಪ್ಪಿ ಮಾತು
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚಿನ ಬೆಂಬಲ: ವಿಜಯ್​​ ಕೈ ಹಿಡಿದ ಪಕ್ಷಗಳಾವುವು
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ತಮಿಳುನಾಡಿನಲ್ಲಿ TVK ಸರ್ಕಾರ ಫಿಕ್ಸ್‌, ಮ್ಯಾಜಿಕ್ ನಂಬರ್ ಹೊಂದಿಸಿದ ವಿಜಯ್
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ವಿಜಯ್ ಜೊತೆ ನಟಿಸಿರುವ ಕನ್ನಡದ ನಟ ವಜ್ರಾಂಗ್ ದಳಪತಿ ಬಗ್ಗೆ ಹೇಳಿದ್ದೇನು?
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ
ನನ್ನ ಎಲ್ಲಾ ಅಸ್ತಿ ಅನಾಥ ಆಶ್ರಮಕ್ಕೆ ಕೊಡ್ತೇನೆ ಎಂದ ತಾಯಿ