AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬಾಂಬ್’ ರಾಜಶೇಖರ್​ ಅಸಲಿ ಚರಿತ್ರೆ: ಮಾವನ ಕುಟುಂಬಸ್ಥರಿಗೆ 10 ವರ್ಷದಿಂದ ನೀಡ್ತಿದ್ದ ಚಿತ್ರಹಿಂಸೆ

ತುಮಕೂರು: CCB, ಸಿಟಿ ಸಿವಿಲ್ ಕೋರ್ಟ್​ಗೆ ಬೆದರಿಕೆ ಪತ್ರ ರವಾನಿಸಿ ಸದ್ಯ ಅರೆಸ್ಟ್​ ಆಗಿರುವ ರಾಜಶೇಖರ್​ಅಲಿಯಾಸ್​ ಬಾಂಬ್​ ರಾಜಶೇಖರ್​ ಅಸಲಿ ಚರಿತ್ರೆ ಪೊಲೀಸ್​ ವಿಚಾರಣೆ ವೇಳೆ ಬಯಲಾಗಿದೆ. ಅತ್ತೆಯ ಆಸ್ತಿಗಾಗಿ ಹವಣಿಸುತ್ತಿದ್ದ ರಾಜಶೇಖರ್​ ಕಳೆದ ಹತ್ತು ವರ್ಷಗಳಿಂದ ಅದಕ್ಕಾಗಿ ಎಲ್ಲಿಲ್ಲದ ನಾಟಕ ಮಾಡಿಕೊಂಡು ಬಂದಿದ್ದನಂತೆ. ಆಸ್ತಿಯನ್ನು ಕಬಳಿಸಲು ತನ್ನ ಅತ್ತೆ, ಹೆಂಡತಿ, ಮಾವ ಮತ್ತು ನಾದಿನಿಗೆ ಇನ್ನಿಲ್ಲದ ಚಿತ್ರಹಿಂಸೆ ನೀಡುತ್ತಿದ್ದ ಎಂದು ಸಹ ತಿಳಿದುಬಂದಿದೆ. ನಾಲ್ಕು ಎಕರೆ ಜಮೀನಿಗಾಗಿ ಷಡ್ಯಂತ್ರ ನಡೆಸಿದ್ದ ರಾಜಶೇಖರ್​ 2019ರಲ್ಲಿ ನಕಲಿ ಛಾಪಾ […]

‘ಬಾಂಬ್’ ರಾಜಶೇಖರ್​ ಅಸಲಿ ಚರಿತ್ರೆ: ಮಾವನ ಕುಟುಂಬಸ್ಥರಿಗೆ 10 ವರ್ಷದಿಂದ ನೀಡ್ತಿದ್ದ ಚಿತ್ರಹಿಂಸೆ
KUSHAL V
| Edited By: ಸಾಧು ಶ್ರೀನಾಥ್​|

Updated on: Oct 20, 2020 | 1:24 PM

Share

ತುಮಕೂರು: CCB, ಸಿಟಿ ಸಿವಿಲ್ ಕೋರ್ಟ್​ಗೆ ಬೆದರಿಕೆ ಪತ್ರ ರವಾನಿಸಿ ಸದ್ಯ ಅರೆಸ್ಟ್​ ಆಗಿರುವ ರಾಜಶೇಖರ್​ಅಲಿಯಾಸ್​ ಬಾಂಬ್​ ರಾಜಶೇಖರ್​ ಅಸಲಿ ಚರಿತ್ರೆ ಪೊಲೀಸ್​ ವಿಚಾರಣೆ ವೇಳೆ ಬಯಲಾಗಿದೆ.

ಅತ್ತೆಯ ಆಸ್ತಿಗಾಗಿ ಹವಣಿಸುತ್ತಿದ್ದ ರಾಜಶೇಖರ್​ ಕಳೆದ ಹತ್ತು ವರ್ಷಗಳಿಂದ ಅದಕ್ಕಾಗಿ ಎಲ್ಲಿಲ್ಲದ ನಾಟಕ ಮಾಡಿಕೊಂಡು ಬಂದಿದ್ದನಂತೆ. ಆಸ್ತಿಯನ್ನು ಕಬಳಿಸಲು ತನ್ನ ಅತ್ತೆ, ಹೆಂಡತಿ, ಮಾವ ಮತ್ತು ನಾದಿನಿಗೆ ಇನ್ನಿಲ್ಲದ ಚಿತ್ರಹಿಂಸೆ ನೀಡುತ್ತಿದ್ದ ಎಂದು ಸಹ ತಿಳಿದುಬಂದಿದೆ.

ನಾಲ್ಕು ಎಕರೆ ಜಮೀನಿಗಾಗಿ ಷಡ್ಯಂತ್ರ ನಡೆಸಿದ್ದ ರಾಜಶೇಖರ್​ 2019ರಲ್ಲಿ ನಕಲಿ ಛಾಪಾ ಕಾಗದ ಸೃಷ್ಟಿಸಿ ರಮೇಶ್​ ಹಾಗೂ ತನ್ನ ಮಾವ ಬಸವಲಿಂಗಯ್ಯ ಮೇಲೆ ಆರೋಪ ಹೊರಿಸಿದ್ದನಂತೆ.

ಬಸವಲಿಂಗಯ್ಯ ತನ್ನ ಮಗಳು ಭೂಮಿಕಾಳನ್ನ ಒಂದೂವರೆ ಲಕ್ಷಕ್ಕೆ ಮಾರಟ ಮಾಡಿದ್ದಾರೆಂದು ಆರೋಪ ಮಾಡಿದ್ದನಂತೆ. ತನ್ನ ಮಾವ ಬಸವಲಿಂಗಯ್ಯ ಹಾಗೂ ರಮೇಶ್​ನ ಮೇಲೆ ಆರೋಪ ಹೊರಿಸಲು ನಾದಿನಿ ಮಾರಾಟದ ನಾಟಕವಾಡಿದ್ದ.

ಅಷ್ಟೇ ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಈ ಸುಳ್ಳು ಸುದ್ದಿಯನ್ನ ಸಹ ಹಬ್ಬಿಸಿದ್ದನಂತೆ. ಸುದ್ದಿ ಬಳಿಕ ಭೂಮಿಕಾ ಹೇಳಿಕೆ ದಾಖಲು ಮಾಡಿಕೊಂಡಿದ್ದ ಪೊಲೀಸರು ಮತ್ತು ಮಕ್ಕಳ ಸಂರಕ್ಷಣೆ ಅಧಿಕಾರಿಗಳಿಗೆ ರಾಜಶೇಖರ್​ ಸ್ವತಃ ಭೂಮಿಕಾಗೆ ಲೈಂಗಿಕ ಕಿರುಕುಳ ನೀಡಿದ್ದ ಎಂಬ ಮಾಹಿತಿ ಸಿಕ್ಕಿದೆ. ಆಗ, ಭೂಮಿಕಾ ಮತ್ತು ಬಸವಲಿಂಗಪ್ಪ ನೀಡಿದ್ದ ದೂರಿನನ್ವಯ ಚೇಳೂರು ಪೊಲೀಸರು ಕೇಸ್ ದಾಖಲು ಮಾಡಿಕೊಂಡಿದ್ದರು.

ರಾಜಶೇಖರ್ ಆಗ ಚೇಳೂರು ಪೊಲೀಸರಿಗೂ ತಲೆ ಬಿಸಿ ತಂದಿದ್ದ ಎಂದು ಹೇಳಲಾಗಿದೆ. ಈ ನಡುವೆ ಪ್ರಕರಣದ ತನಿಖೆ‌ ನಡೆಸಿದ್ದ ಪೊಲೀಸರಿಗೆ ರಾಜಶೇಖರ್​ನ ಷಡ್ಯಂತ್ರ ಗೊತ್ತಾಗಿತ್ತು. ಆಗ, ರಾಜಶೇಖರ್​ಗೆ ಎಚ್ಚರಿಕೆ ನೀಡಿದ್ದರಂತೆ. ಆದರೆ, ಪೊಲೀಸರ‌ ಎಚ್ಚರಿಕೆಯನ್ನ ಲಘುವಾಗಿ ಪರಿಗಣಿಸಿದ ರಾಜಶೇಖರ್​ ಇದೀಗ ನ್ಯಾಯಾಧೀಶರಿಗೆ ಬೆದರಿಕೆ ಪತ್ರ ಬರೆದು ಬಾಂಬ್​ ರಾಜಶೇಖರ್​ ಆಗಿ ಪರಿಣಮಿಸಿದ್ದಾನೆ.

CCB, ಸಿವಿಲ್ ಕೋರ್ಟ್​ಗೆ ಬೆದರಿಕೆ ಪತ್ರ: ಸಿಕ್ಕಿಬಿದ್ದರು ಇಬ್ಬರು ಆರೋಪಿಗಳು!

ಬಾಂಬ್ ಬೆದರಿಕೆ ಪ್ರಕರಣದ ಸೆನ್ಸೇಷನಲ್ ಇನ್‌ಸೈಡ್ ಸ್ಟೋರಿ.. ಸಿನಿಮೀಯವಾಗಿದೆ ಓದಿ!

Follow Us
ಬಿಗ್ ಬಾಸ್ ಅಗ್ನಿಪರೀಕ್ಷೆ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ; ಗೆಲ್ಲೋರ್ಯಾರು?
ಬಿಗ್ ಬಾಸ್ ಅಗ್ನಿಪರೀಕ್ಷೆ ಗ್ರ್ಯಾಂಡ್ ಫಿನಾಲೆಗೆ ಕ್ಷಣಗಣನೆ; ಗೆಲ್ಲೋರ್ಯಾರು?
SIR: ಜೀವಂತ ವ್ಯಕ್ತಿಯನ್ನೇ ‘ಸತ್ತಿದ್ದಾರೆ’ ಎಂದು ಘೋಷಿಸಿದ ಚುನಾವಣಾ ಆಯೋಗ!
SIR: ಜೀವಂತ ವ್ಯಕ್ತಿಯನ್ನೇ ‘ಸತ್ತಿದ್ದಾರೆ’ ಎಂದು ಘೋಷಿಸಿದ ಚುನಾವಣಾ ಆಯೋಗ!
ಸ್ಯಾಂಪಲ್ ತಗೊಳಿ, ಹೋಟೆಲ್ ಹೆಸರು ಹೇಳ್ಬೇಡಿ! ಸ್ಟಾರ್ ಹೋಟೆಲ್ ಮಾಲೀಕರ ಅಳಲು
ಸ್ಯಾಂಪಲ್ ತಗೊಳಿ, ಹೋಟೆಲ್ ಹೆಸರು ಹೇಳ್ಬೇಡಿ! ಸ್ಟಾರ್ ಹೋಟೆಲ್ ಮಾಲೀಕರ ಅಳಲು
'ನನಗೆ ಗೊತ್ತಿಲ್ಲದೆ ಪ್ರಶ್ನೆ ಪತ್ರಿಕೆ ತೆಗೆದು ಕೊಂಡಿರಬಹುದು': ಜ್ಞಾನೇಂದ್ರ
'ನನಗೆ ಗೊತ್ತಿಲ್ಲದೆ ಪ್ರಶ್ನೆ ಪತ್ರಿಕೆ ತೆಗೆದು ಕೊಂಡಿರಬಹುದು': ಜ್ಞಾನೇಂದ್ರ
ಯಾರು ಸಿಕ್ಕಿಬಿದ್ರೂ ನಯಾಪೈಸೆ ಉಪಕಾರ ಮಾಡಲ್ಲವೆಂದ ಖಾದರ್!
ಯಾರು ಸಿಕ್ಕಿಬಿದ್ರೂ ನಯಾಪೈಸೆ ಉಪಕಾರ ಮಾಡಲ್ಲವೆಂದ ಖಾದರ್!
ಕೊಡಗು-ಕೇರಳ ಗಡಿಯಲ್ಲಿ ಲಂಚಾವತಾರ? ಚೆಕ್‌ಪೋಸ್ಟ್‌ ವಿಡಿಯೋ ವೈರಲ್
ಕೊಡಗು-ಕೇರಳ ಗಡಿಯಲ್ಲಿ ಲಂಚಾವತಾರ? ಚೆಕ್‌ಪೋಸ್ಟ್‌ ವಿಡಿಯೋ ವೈರಲ್
ಮನೆಯ ಮುಂದೆ ಪಾರ್ಕ್ ಮಾಡಿದ್ದ ಆಟೋದ ಚಕ್ರ ಕಳವು
ಮನೆಯ ಮುಂದೆ ಪಾರ್ಕ್ ಮಾಡಿದ್ದ ಆಟೋದ ಚಕ್ರ ಕಳವು
ಹೊಸ ಗೃಹಬಳಕೆ ಸಂಪರ್ಕ ಸಿಗದೆ ಗ್ರಾಹಕರ ಆಕ್ರೋಶ
ಹೊಸ ಗೃಹಬಳಕೆ ಸಂಪರ್ಕ ಸಿಗದೆ ಗ್ರಾಹಕರ ಆಕ್ರೋಶ
ಬ್ಯಾಂಕ್​ಗಳಲ್ಲಿ ಕನ್ನಡಿಗರನ್ನೇ ಕೆಲಸಕ್ಕೆ ನೇಮಿಸಿ: ಸಚಿವ ತಂಗಡಗಿ
ಬ್ಯಾಂಕ್​ಗಳಲ್ಲಿ ಕನ್ನಡಿಗರನ್ನೇ ಕೆಲಸಕ್ಕೆ ನೇಮಿಸಿ: ಸಚಿವ ತಂಗಡಗಿ
ಬೆಂಗಳೂರಿನಲ್ಲಿ ಸಿಕ್ಕಿಬಿದ್ದ 31 ಬಾಂಗ್ಲಾದೇಶೀಯರ ಗಡಿಪಾರು
ಬೆಂಗಳೂರಿನಲ್ಲಿ ಸಿಕ್ಕಿಬಿದ್ದ 31 ಬಾಂಗ್ಲಾದೇಶೀಯರ ಗಡಿಪಾರು