AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬಾಂಬ್’ ರಾಜಶೇಖರ್​ ಅಸಲಿ ಚರಿತ್ರೆ: ಮಾವನ ಕುಟುಂಬಸ್ಥರಿಗೆ 10 ವರ್ಷದಿಂದ ನೀಡ್ತಿದ್ದ ಚಿತ್ರಹಿಂಸೆ

ತುಮಕೂರು: CCB, ಸಿಟಿ ಸಿವಿಲ್ ಕೋರ್ಟ್​ಗೆ ಬೆದರಿಕೆ ಪತ್ರ ರವಾನಿಸಿ ಸದ್ಯ ಅರೆಸ್ಟ್​ ಆಗಿರುವ ರಾಜಶೇಖರ್​ಅಲಿಯಾಸ್​ ಬಾಂಬ್​ ರಾಜಶೇಖರ್​ ಅಸಲಿ ಚರಿತ್ರೆ ಪೊಲೀಸ್​ ವಿಚಾರಣೆ ವೇಳೆ ಬಯಲಾಗಿದೆ. ಅತ್ತೆಯ ಆಸ್ತಿಗಾಗಿ ಹವಣಿಸುತ್ತಿದ್ದ ರಾಜಶೇಖರ್​ ಕಳೆದ ಹತ್ತು ವರ್ಷಗಳಿಂದ ಅದಕ್ಕಾಗಿ ಎಲ್ಲಿಲ್ಲದ ನಾಟಕ ಮಾಡಿಕೊಂಡು ಬಂದಿದ್ದನಂತೆ. ಆಸ್ತಿಯನ್ನು ಕಬಳಿಸಲು ತನ್ನ ಅತ್ತೆ, ಹೆಂಡತಿ, ಮಾವ ಮತ್ತು ನಾದಿನಿಗೆ ಇನ್ನಿಲ್ಲದ ಚಿತ್ರಹಿಂಸೆ ನೀಡುತ್ತಿದ್ದ ಎಂದು ಸಹ ತಿಳಿದುಬಂದಿದೆ. ನಾಲ್ಕು ಎಕರೆ ಜಮೀನಿಗಾಗಿ ಷಡ್ಯಂತ್ರ ನಡೆಸಿದ್ದ ರಾಜಶೇಖರ್​ 2019ರಲ್ಲಿ ನಕಲಿ ಛಾಪಾ […]

‘ಬಾಂಬ್’ ರಾಜಶೇಖರ್​ ಅಸಲಿ ಚರಿತ್ರೆ: ಮಾವನ ಕುಟುಂಬಸ್ಥರಿಗೆ 10 ವರ್ಷದಿಂದ ನೀಡ್ತಿದ್ದ ಚಿತ್ರಹಿಂಸೆ
KUSHAL V
| Edited By: ಸಾಧು ಶ್ರೀನಾಥ್​|

Updated on: Oct 20, 2020 | 1:24 PM

Share

ತುಮಕೂರು: CCB, ಸಿಟಿ ಸಿವಿಲ್ ಕೋರ್ಟ್​ಗೆ ಬೆದರಿಕೆ ಪತ್ರ ರವಾನಿಸಿ ಸದ್ಯ ಅರೆಸ್ಟ್​ ಆಗಿರುವ ರಾಜಶೇಖರ್​ಅಲಿಯಾಸ್​ ಬಾಂಬ್​ ರಾಜಶೇಖರ್​ ಅಸಲಿ ಚರಿತ್ರೆ ಪೊಲೀಸ್​ ವಿಚಾರಣೆ ವೇಳೆ ಬಯಲಾಗಿದೆ.

ಅತ್ತೆಯ ಆಸ್ತಿಗಾಗಿ ಹವಣಿಸುತ್ತಿದ್ದ ರಾಜಶೇಖರ್​ ಕಳೆದ ಹತ್ತು ವರ್ಷಗಳಿಂದ ಅದಕ್ಕಾಗಿ ಎಲ್ಲಿಲ್ಲದ ನಾಟಕ ಮಾಡಿಕೊಂಡು ಬಂದಿದ್ದನಂತೆ. ಆಸ್ತಿಯನ್ನು ಕಬಳಿಸಲು ತನ್ನ ಅತ್ತೆ, ಹೆಂಡತಿ, ಮಾವ ಮತ್ತು ನಾದಿನಿಗೆ ಇನ್ನಿಲ್ಲದ ಚಿತ್ರಹಿಂಸೆ ನೀಡುತ್ತಿದ್ದ ಎಂದು ಸಹ ತಿಳಿದುಬಂದಿದೆ.

ನಾಲ್ಕು ಎಕರೆ ಜಮೀನಿಗಾಗಿ ಷಡ್ಯಂತ್ರ ನಡೆಸಿದ್ದ ರಾಜಶೇಖರ್​ 2019ರಲ್ಲಿ ನಕಲಿ ಛಾಪಾ ಕಾಗದ ಸೃಷ್ಟಿಸಿ ರಮೇಶ್​ ಹಾಗೂ ತನ್ನ ಮಾವ ಬಸವಲಿಂಗಯ್ಯ ಮೇಲೆ ಆರೋಪ ಹೊರಿಸಿದ್ದನಂತೆ.

ಬಸವಲಿಂಗಯ್ಯ ತನ್ನ ಮಗಳು ಭೂಮಿಕಾಳನ್ನ ಒಂದೂವರೆ ಲಕ್ಷಕ್ಕೆ ಮಾರಟ ಮಾಡಿದ್ದಾರೆಂದು ಆರೋಪ ಮಾಡಿದ್ದನಂತೆ. ತನ್ನ ಮಾವ ಬಸವಲಿಂಗಯ್ಯ ಹಾಗೂ ರಮೇಶ್​ನ ಮೇಲೆ ಆರೋಪ ಹೊರಿಸಲು ನಾದಿನಿ ಮಾರಾಟದ ನಾಟಕವಾಡಿದ್ದ.

ಅಷ್ಟೇ ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಈ ಸುಳ್ಳು ಸುದ್ದಿಯನ್ನ ಸಹ ಹಬ್ಬಿಸಿದ್ದನಂತೆ. ಸುದ್ದಿ ಬಳಿಕ ಭೂಮಿಕಾ ಹೇಳಿಕೆ ದಾಖಲು ಮಾಡಿಕೊಂಡಿದ್ದ ಪೊಲೀಸರು ಮತ್ತು ಮಕ್ಕಳ ಸಂರಕ್ಷಣೆ ಅಧಿಕಾರಿಗಳಿಗೆ ರಾಜಶೇಖರ್​ ಸ್ವತಃ ಭೂಮಿಕಾಗೆ ಲೈಂಗಿಕ ಕಿರುಕುಳ ನೀಡಿದ್ದ ಎಂಬ ಮಾಹಿತಿ ಸಿಕ್ಕಿದೆ. ಆಗ, ಭೂಮಿಕಾ ಮತ್ತು ಬಸವಲಿಂಗಪ್ಪ ನೀಡಿದ್ದ ದೂರಿನನ್ವಯ ಚೇಳೂರು ಪೊಲೀಸರು ಕೇಸ್ ದಾಖಲು ಮಾಡಿಕೊಂಡಿದ್ದರು.

ರಾಜಶೇಖರ್ ಆಗ ಚೇಳೂರು ಪೊಲೀಸರಿಗೂ ತಲೆ ಬಿಸಿ ತಂದಿದ್ದ ಎಂದು ಹೇಳಲಾಗಿದೆ. ಈ ನಡುವೆ ಪ್ರಕರಣದ ತನಿಖೆ‌ ನಡೆಸಿದ್ದ ಪೊಲೀಸರಿಗೆ ರಾಜಶೇಖರ್​ನ ಷಡ್ಯಂತ್ರ ಗೊತ್ತಾಗಿತ್ತು. ಆಗ, ರಾಜಶೇಖರ್​ಗೆ ಎಚ್ಚರಿಕೆ ನೀಡಿದ್ದರಂತೆ. ಆದರೆ, ಪೊಲೀಸರ‌ ಎಚ್ಚರಿಕೆಯನ್ನ ಲಘುವಾಗಿ ಪರಿಗಣಿಸಿದ ರಾಜಶೇಖರ್​ ಇದೀಗ ನ್ಯಾಯಾಧೀಶರಿಗೆ ಬೆದರಿಕೆ ಪತ್ರ ಬರೆದು ಬಾಂಬ್​ ರಾಜಶೇಖರ್​ ಆಗಿ ಪರಿಣಮಿಸಿದ್ದಾನೆ.

CCB, ಸಿವಿಲ್ ಕೋರ್ಟ್​ಗೆ ಬೆದರಿಕೆ ಪತ್ರ: ಸಿಕ್ಕಿಬಿದ್ದರು ಇಬ್ಬರು ಆರೋಪಿಗಳು!

ಬಾಂಬ್ ಬೆದರಿಕೆ ಪ್ರಕರಣದ ಸೆನ್ಸೇಷನಲ್ ಇನ್‌ಸೈಡ್ ಸ್ಟೋರಿ.. ಸಿನಿಮೀಯವಾಗಿದೆ ಓದಿ!

Follow Us
ಬೆಂಗಳೂರು–ಮೈಸೂರು ಟೋಲ್ ದರ ವರ್ಷದಲ್ಲಿ 2ನೇ ಬಾರಿ ಏರಿಕೆ
ಬೆಂಗಳೂರು–ಮೈಸೂರು ಟೋಲ್ ದರ ವರ್ಷದಲ್ಲಿ 2ನೇ ಬಾರಿ ಏರಿಕೆ
ಮಹಾರಾಷ್ಟ್ರದ ಪಾಲ್ಘರ್​​ನಲ್ಲಿ ಭಾರೀ ಪ್ರವಾಹ; 891 ಜನರ ರಕ್ಷಣೆ
ಮಹಾರಾಷ್ಟ್ರದ ಪಾಲ್ಘರ್​​ನಲ್ಲಿ ಭಾರೀ ಪ್ರವಾಹ; 891 ಜನರ ರಕ್ಷಣೆ
‘ಕರಾವಳಿ’ ಸಿನಿಮಾ ನೋಡಿದ ಶಿವಮೊಗ್ಗ ಮಂದಿ ಹೇಳಿದ್ದೇನು?
‘ಕರಾವಳಿ’ ಸಿನಿಮಾ ನೋಡಿದ ಶಿವಮೊಗ್ಗ ಮಂದಿ ಹೇಳಿದ್ದೇನು?
‘ಜನ ನಾಯಗನ್’ ಹೇಗಿದೆ? ಸಿನಿಮಾ ನೋಡಿದವರು ಹೇಳಿದ್ದು ಹೀಗೆ...
‘ಜನ ನಾಯಗನ್’ ಹೇಗಿದೆ? ಸಿನಿಮಾ ನೋಡಿದವರು ಹೇಳಿದ್ದು ಹೀಗೆ...
‘ಜನ ನಾಯಗನ್’ ಚಿತ್ರದಲ್ಲಿ ದಳಪತಿ ವಿಜಯ್ ಜೊತೆ ಅಭಿನಯಿಸಿದ ಕನ್ನಡದ ಹೊಸ ನಟ
‘ಜನ ನಾಯಗನ್’ ಚಿತ್ರದಲ್ಲಿ ದಳಪತಿ ವಿಜಯ್ ಜೊತೆ ಅಭಿನಯಿಸಿದ ಕನ್ನಡದ ಹೊಸ ನಟ
ಕರ್ನಾಟಕದ ಹಲವೆಡೆ ಭುಗಿಲೆದ್ದ ಕಾಂಗ್ರೆಸ್-ಬಿಜೆಪಿ ಸಂಘರ್ಷ, ಎಲ್ಲಿ ಏನೇನಾಯ್ತ
ಕರ್ನಾಟಕದ ಹಲವೆಡೆ ಭುಗಿಲೆದ್ದ ಕಾಂಗ್ರೆಸ್-ಬಿಜೆಪಿ ಸಂಘರ್ಷ, ಎಲ್ಲಿ ಏನೇನಾಯ್ತ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಚಿತ್ರಕ್ಕೆ ಕ್ರೇಜ್ ಹೇಗಿದೆ? ವಿಡಿಯೋ ನೋಡಿ..
ಬೆಂಗಳೂರಿನಲ್ಲಿ ‘ಜನ ನಾಯಗನ್’ ಚಿತ್ರಕ್ಕೆ ಕ್ರೇಜ್ ಹೇಗಿದೆ? ವಿಡಿಯೋ ನೋಡಿ..
ಆಸಿಡ್ ದಾಳಿ ಆಗದಿದ್ರೆ ತಾಯಿ ಇನ್ನೂ 10 ವರ್ಷ ಇರ್ತಿದ್ರು ಎಂದ ರೇವಣ್ಣ
ಆಸಿಡ್ ದಾಳಿ ಆಗದಿದ್ರೆ ತಾಯಿ ಇನ್ನೂ 10 ವರ್ಷ ಇರ್ತಿದ್ರು ಎಂದ ರೇವಣ್ಣ
ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಪ್ರಧಾನಿ ಅತ್ಯಂತ ಸಂವೇದನಾಶೀಲರಾಗಿದ್ದಾರೆ
ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಪ್ರಧಾನಿ ಅತ್ಯಂತ ಸಂವೇದನಾಶೀಲರಾಗಿದ್ದಾರೆ
ಮಹಾರಾಷ್ಟ್ರದಲ್ಲಿ ಮಳೆ: ಏರಿಕೆ ಕಂಡ ಕೃಷ್ಣಾ, ಘಟಪ್ರಭಾ ನದಿಗಳ ಒಳಹರಿವು
ಮಹಾರಾಷ್ಟ್ರದಲ್ಲಿ ಮಳೆ: ಏರಿಕೆ ಕಂಡ ಕೃಷ್ಣಾ, ಘಟಪ್ರಭಾ ನದಿಗಳ ಒಳಹರಿವು