AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ಣನ ಕೊಲ್ಲಿಸೋಕೆ ಮುಂದಾದ ರಮೇಶ್; ಲಾರಿ ಅಪಘಾತ

‘ಕರ್ಣ’ ಧಾರಾವಾಹಿಯಲ್ಲಿ ಮಹಾ ತಿರುವು ಎದುರಾಗಿದ್ದು, ತನಗೆ ಆದ ಅವಮಾನ ತಾಳಲಾರದೆ ರಮೇಶ್ ತನ್ನ ಸಾಕುಮಗ ಕರ್ಣನನ್ನೇ ಕೊಲ್ಲಲು ಸಂಚು ರೂಪಿಸಿದ್ದಾನೆ. ತಂಗಿ ತಾರಾಳ ಕುಮ್ಮಕ್ಕಿನಿಂದ ನಡೆದ ಭೀಕರ ಲಾರಿ ಅಪಘಾತದಲ್ಲಿ ಕರ್ಣ ತೀವ್ರ ಗಾಯಗೊಂಡಿದ್ದು, ಮುಂದಿನ ಎಪಿಸೋಡ್‌ಗಳು ವೀಕ್ಷಕರಲ್ಲಿ ತೀವ್ರ ಕುತೂಹಲ ಮೂಡಿಸಿವೆ.

ಕರ್ಣನ ಕೊಲ್ಲಿಸೋಕೆ ಮುಂದಾದ ರಮೇಶ್; ಲಾರಿ ಅಪಘಾತ
ಕರ್ಣ ಧಾರಾವಾಹಿ
 ಶ್ರೀಲಕ್ಷ್ಮೀ ಎಚ್
| Edited By: |

Updated on: Aug 13, 2026 | 7:55 AM

Share

ಮುಖ್ಯಾಂಶಗಳು

  • ಹಣ ಮತ್ತು ಅವಮಾನದ ಸೇಡು: ತಂಗಿ ತಾರಾ ಮಾತು ಕೇಳಿ ಕೊಲೆಗೆ ಮುಂದಾದ ರಮೇಶ್
  • ಸೀತಾಳನ್ನು ಹುಡುಕಲು ಹೋದ ಕರ್ಣನಿಗೆ ಎದುರಾಯ್ತು ಭೀಕರ ಲಾರಿ ಅಪಘಾತ
  • ಸತ್ಯ ತಿಳಿಯುವ ಮುನ್ನವೇ ಮಗನ ಪ್ರಾಣಕ್ಕೆ ಕುತ್ತು ತಂದ ತಂದೆಯ ಕ್ರೂರ ಸಂಚು

‘ಕರ್ಣ’ ಧಾರಾವಾಹಿಯಲ್ಲಿ ಹಲವು ಟ್ವಿಸ್ಟ್​​ಗಳು ಎದುರಾಗಿದ್ದವು. ಈಗ ದೊಡ್ಡ ತಿರುವು ಎದುರಾಗಿದೆ. ತನ್ನ ತಂದೆಯಿದಲೇ ಕರ್ಣ ಸಾಯುವ ಸ್ಥಿತಿ ತಲುಪಿದ್ದಾನೆ. ಹೌದು, ಕರ್ಣ ಧಾರಾವಾಹಿಯಲ್ಲಿ ದೊಡ್ಡ ತಿರುವು ಎದುರಾಗಿದೆ. ಕರ್ಣನನ್ನು ರಮೇಶ್ ಕೊಲ್ಲಲು ಮುಂದಾಗಿದ್ದಾನೆ. ತನಗೆ ಆದ ಅವಮಾನಗಳನ್ನು ಸಹಿಸಲಾಗದೆ ಆತ ಈ ರೀತಿ ಮಾಡಲು ಮುಂದಾಗಿದ್ದಾನೆ. ಮುಂದಿನ ಎಪಿಸೋಡ್​​ಗಳು ಸಾಕಷ್ಟು ಕುತೂಹಲ ಮೂಡಿಸುತ್ತಿವೆ. ಆ ಬಗ್ಗೆ ಇಲ್ಲಿದೆ ವಿವರ.

ರಮೇಶ್​ಗೆ ಕರ್ಣನೇ ಮಗ ಆಗಬೇಕು. ಆದರೆ, ಆತ ಸದ್ಯಕ್ಕೆ ಸಾಕು ಮಗ. ಅವನು ತನ್ನದೇ ಮಗ ಎಂಬ ವಿಷಯ ರಿವೀಲ್ ಆಗಿಲ್ಲ. ಹೀಗಾಗಿ, ಕರ್ಣನ ವಿರುದ್ಧ ಆತ ದ್ವೇಷ ಸಾಧಿಸುತ್ತಿದ್ದಾನೆ. ತನ್ನದೇ ಮಗನ ಮೇಲೆ ಕೋಪಗೊಳ್ಳುತ್ತಿದ್ದಾನೆ. ಕರ್ಣನ ಮುಗಿಸಬೇಕು ಎಂಬುದು ರಮೇಶ್ ತಂಗಿ ತಾರಾಳ ಪ್ಲ್ಯಾನ್. ಇದಕ್ಕೆ ರಮೇಶ್​​ನ ದಾಳವನ್ನಾಗಿ ಮಾಡಿಕೊಳ್ಳುತ್ತಿದ್ದಾಳೆ. ಕರ್ಣನ ಕೊಲೆ ಮಾಡುವ ಪ್ಲ್ಯಾನ್ ಕೊಟ್ಟಿದ್ದು ಅವಳೇ.

View this post on Instagram

A post shared by Zee Kannada (@zeekannada)

ರಮೇಶ್ ಪತ್ನಿಗೆ ವಿಚ್ಛೇದನ ನೀಡಬೇಕು ಎಂದುಕೊಂಡಿದ್ದಾನೆ. ಆದರೆ, ಇದಕ್ಕೆ ಯಾರೊಬ್ಬರೂ ತಲೆಕೆಡಿಸಿಕೊಂಡಿಲ್ಲ. ಇದೆಲ್ಲ ಕರ್ಣನ ಕುಮ್ಮಕ್ಕು ಎಂಬುದು ರಮೇಶ್ ಅಭಿಪ್ರಾಯ. ಈ ರೀತಿಯ ಆಲೋಚನೆಯನ್ನು ಆತನ ತಲೆಯಲ್ಲಿ ತುಂಬಿದ್ದು ತಾರಾ. ಅಲ್ಲದೆ, ಹಣಕ್ಕಾಗಿ ಕರ್ಣನ ಬಳಿ ಕೈಚಾಚ ಬೇಕು ಎಂದು ಆತನಿಗೆ ಅನಿಸಿದೆ.

ಇದನ್ನೂ ಓದಿ:ಕರ್ಣ ಧಾರಾವಾಹಿಯಲ್ಲಿ ಆಷಾಢದ ಟ್ವಿಸ್ಟ್; ಮೆಕ್ಯಾನಿಕ್ ವೇಷದಲ್ಲಿ ಬಂದ ಕಥಾನಾಯಕ

ಇದಕ್ಕೆಲ್ಲ ಪರಿಹಾರ ಏನು ಎಂದು ತಂಗಿ ತಾರಾ ಬಳಿ ಕೇಳಿದ್ದಾನೆ ರಮೇಶ್. ಇದಕ್ಕೆ ಪರಿಹಾರವನ್ನು ತಾರಾ ಸೂಚಿಸಿದ್ದಾಳೆ. ಕೊಲೆ ಮಾಡೋಣ ಎಂದಿದ್ದಾಳೆ. ಆದರೆ, ಆರಂಭದಲ್ಲಿ ರಮೇಶ್ ಇದಕ್ಕೆ ಒಪ್ಪಿಲ್ಲ. ಕೊನೆಗೆ ಇದಕ್ಕೆ ಅವನು ಒಪ್ಪಿಗೆ ಕೊಟ್ಟಿದ್ದಾನೆ. ಕರ್ಣನ ಸೀತಾಳ ಹುಡುಕಿ ಹೋಗಿದ್ದಾನೆ. ಸೀತಾ ಎಂಬುದು ರಮೇಶ್ ಮತ್ತೊಂದು ಪತ್ನಿ. ಈ ವೇಳೆ ರಸ್ತೆಯಲ್ಲಿದ್ದ ಕರ್ಣನಿಗೆ ಲಾರಿ ಬಂದು ಡಿಕ್ಕಿ ಹೊಡೆದಿದೆ. ಇದರಿಂದ ಕರ್ಣನ ಪ್ರಾಣಕ್ಕೆ ಕುತ್ತು ಬಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us