Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇವಲ 12 ಗಂಟೆಯಲ್ಲಿ 120 ಕಿ.ಮೀ ಪಾದಯಾತ್ರೆ ಮಾಡಿ ಯಲ್ಲಮ್ಮನ ಹರಕೆ ತೀರಿಸಿದ ಯುವಕರು: ಇವರ ಸಾಹಸಕ್ಕೆ ಗ್ರಾಮಸ್ಥರ ಮೆಚ್ಚುಗೆ

Saundatti Yellamma Temple: ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಜಿ.ಬಸವನಕೊಪ್ಪ ಗ್ರಾಮದ ಮಹಾಂತೇಶ ಯಲ್ಲಪ್ಪ ಅರಳಿಹೊಂಡ ಹಾಗೂ ಗಂಗಪ್ಪ ಗಿರೇಪ್ಪಗೌಡರ ಎಂಬ ಯುವಕರು ಆರಾಧ್ಯ ದೇವತೆ ಸವದತ್ತಿ ಯಲ್ಲಮ್ಮನ ಗುಡ್ಡಕ್ಕೆ ಪಾದಯಾತ್ರೆ ಮೂಲಕ ತೆರಳಿ ಹರಿಕೆ ತೀರಿಸಿದ್ದಾರೆ. ಈ ಯುವಕರು ಹೋಗುವ, ಬರುವ ದಾರಿ ಸೇರಿ ಸುಮಾರು 120 ಕಿ.ಮೀ ದೂರವನ್ನು ಕೇವಲ 12 ಗಂಟೆಯಲ್ಲಿ ಪೂರ್ಣಗೊಳಿಸಿದ್ದು ವಿಶೇಷವಾಗಿದೆ.

ಕೇವಲ 12 ಗಂಟೆಯಲ್ಲಿ 120 ಕಿ.ಮೀ ಪಾದಯಾತ್ರೆ ಮಾಡಿ ಯಲ್ಲಮ್ಮನ ಹರಕೆ ತೀರಿಸಿದ ಯುವಕರು: ಇವರ ಸಾಹಸಕ್ಕೆ ಗ್ರಾಮಸ್ಥರ ಮೆಚ್ಚುಗೆ
ಕೇವಲ 12 ಗಂಟೆಯಲ್ಲಿ 120 ಕಿ.ಮೀ ಪಾದಯಾತ್ರೆ ಮಾಡಿ ಯಲ್ಲಮ್ಮನ ಹರಕೆ ತೀರಿಸಿದ ಯುವಕರು
Follow us
ಶಿವಕುಮಾರ್ ಪತ್ತಾರ್. ಹುಬ್ಬಳ್ಳಿ
| Updated By: ಆಯೇಷಾ ಬಾನು

Updated on: Oct 01, 2023 | 12:10 PM

ಧಾರವಾಡ, ಅ.01: ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಜಿ.ಬಸವನಕೊಪ್ಪ ಗ್ರಾಮದ ಯುವಕರಿಬ್ಬರು ಸುಕ್ಷೇತ್ರ ಸವದತ್ತಿ ಯಲ್ಲಮ್ಮನ ಗುಡ್ಡಕ್ಕೆ (Saundatti Yellamma Temple) ಕೇವಲ 12 ಗಂಟೆಗಳಲ್ಲಿ ಪಾದಯಾತ್ರೆ (Padayatre) ಮೂಲಕ ತೆರಳಿ ದರ್ಶನ ಪಡೆದು ವಿಶೇಷ ಸಾಧನೆ ಮೆರೆದಿದ್ದಾರೆ. ತಾಲೂಕಿನ ಜಿ.ಬಸವನಕೊಪ್ಪ ಗ್ರಾಮದ ಮಹಾಂತೇಶ ಯಲ್ಲಪ್ಪ ಅರಳಿಹೊಂಡ ಹಾಗೂ ಗಂಗಪ್ಪ ಗಿರೇಪ್ಪಗೌಡರ ಎಂಬ ಯುವಕರೇ ಸಾಧನೆ ಮಾಡಿದವರು. ಆರಾಧ್ಯ ದೇವತೆ ಸವದತ್ತಿ ಯಲ್ಲಮ್ಮನ ಗುಡ್ಡಕ್ಕೆ ಪಾದಯಾತ್ರೆ ಮೂಲಕ ತೆರಳಿ ಹರಿಕೆ ತೀರಿಸಿರುವ ಈ ಯುವಕರು ಹೋಗುವ, ಬರುವ ದಾರಿ ಸೇರಿ ಸುಮಾರು 120 ಕಿ.ಮೀ ದೂರವನ್ನು ಕೇವಲ 12 ಗಂಟೆಯಲ್ಲಿ ಪೂರ್ಣಗೊಳಿಸಿದ್ದು ವಿಶೇಷವಾಗಿದೆ.

11 ಯುವಕರ ಪಯಣ

ಮಹಾಂತೇಶ ಅರಳಿಹೊಂಡ, ಗಂಗಪ್ಪ ಗಿರೇಪ್ಪಗೌಡ ಅವರ ಜೊತೆ ಇನ್ನೂ 9 ಯುವಕರು ಪಾದಯಾತ್ರೆ ಮಾಡಿದ್ದಾರೆ. ಜಿ.ಬಸವನಕೊಪ್ಪ ಗ್ರಾಮದವರೇ ಆದ ಬಸವರಾಜ ಅಂಗಡಿ, ರಮೇಶ ಹರಿಜನ, ಮಲ್ಲಿಕಾರ್ಜುನ ಅರಳಿಹೊಂಡ, ಸಿದ್ರಾಮ ಮಡಿವಾಳರ, ನಿಂಗಪ್ಪ ಮಡಿವಾಳರ, ಪ್ರಕಾಶ ಮಡಿವಾಳರ, ಮಲ್ಲಿರ್ಕಾಜುನ ಗಿರೇಪ್ಪಗೌಡರ, ನಿರಂಜನ ಹೂಗಾರ, ಮಂಜುನಾಥ ಹುಡೇದ ಎಂಬ ಯುವಕರು ಕೂಡ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

12 ಗಂಟೆ ಶರ್ಯತ್ತು

ಗ್ರಾಮದ ಹಿರಿಯರ ಸಮ್ಮುಖದಲ್ಲಿ 11 ಯುವಕರು ಸುಕ್ಷೇತ್ರ ಸವದತ್ತಿ ಯಲ್ಲಮ್ಮನ ಗುಡ್ಡಕ್ಕೆ ಪಾದಯಾತ್ರೆ ಮೂಲಕ ತೆರಳಿ ದೇವಿ ದರ್ಶನ ಪಡೆಯುವ ಹರಿಕೆ ಹೊತ್ತಿದ್ದರು. ಗ್ರಾಮದಿಂದ ಬೆಳಗ್ಗೆ ಬಿಟ್ಟು ಯಲ್ಲಮ್ಮನ ಗುಡ್ಡಕ್ಕೆ ತೆರಳಿ ದೇವಿ ದರ್ಶನ ಪಡೆದು ಸಂಜೆ 6 ಗಂಟೆ ವೇಳೆಗೆ ಮರಳಿ ಗ್ರಾಮಕ್ಕೆ ಬರಬೇಕು ಎಂಬ ಶರ್ಯತ್ತು ವಿಧಿಸಲಾಗಿತ್ತು. ಅದರಂತೆ ಯುವಕರು ಬೆಳಗ್ಗೆ 6ಕ್ಕೆ ಗ್ರಾಮದಿಂದ ಯಲ್ಲಮ್ಮನ ಗುಡ್ಡಕ್ಕೆ ಪಯಣ ಬೆಳೆಸಿದ್ದರು.

ಇದನ್ನೂ ಓದಿ: ಹಬ್ಬದ ಪ್ರಯುಕ್ತ ಸ್ಪರ್ಧೆ ಆಯೋಜನೆ, 16 ವರ್ಷದ ಯುವಕರಿಂದ ವಿನೂತನ ಸಾಧನೆ, ಎಲ್ಲಿ?

ನಿಗದಿತ ಸಮಯಕ್ಕೆ ದೇವಿ ದರ್ಶನ ಮಾಡಿ ಗ್ರಾಮಕ್ಕೆ ಬಂದ ಯುವಕರು

ಧಾರವಾಡ, ಅಮ್ಮಿನಭಾವಿ, ಇನಾಂಹೊಂಗಲ, ಹಾರೋಬೆಳವಡಿ, ಸವದತ್ತಿ ಮಾರ್ಗವಾಗಿ 11 ಯುವಕರು ಸುಕ್ಷೇತ್ರ ತಲುಪಿದ್ದರು. ಕೆಲವರು ಮೊದಲು, ಇನ್ನೂ ಕೆಲವರು ಆನಂತರ ಯಲ್ಲಮ್ಮನ ಗುಡ್ಡ ತಲುಪಿದ್ದರು. ಆದರೆ ಮಹಾಂತೇಶ ಅರಳಿಹೊಂಡ, ಗಂಗಪ್ಪ ಗಿರೇಪ್ಪಗೌಡ ಇಬ್ಬರು ಯುವಕರು ಮಾತ್ರ ಸುಕ್ಷೇತ್ರ ತಲುಪಿ ದೇವಿ ದರ್ಶನ ಪಡೆದು ನಿಗದಿತ ಸಮಯಕ್ಕೆ ಮರಳಿ ಗ್ರಾಮಕ್ಕೆ ತಲುಪಿ ಸಾಹಸ ಮೆರೆದಿದ್ದಾರೆ.

ಯುವಕರಿಗೆ ಗ್ರಾಮದಲ್ಲಿ ಮೆರವಣಿಗೆ

ನಿಗದಿತ ಸಮಯಕ್ಕೆ ಮರಳಿ ಗ್ರಾಮಕ್ಕೆ ಆಗಮಿಸಿದ ಮಹಾಂತೇಶ ಅರಳಿಹೊಂಡ, ಗಂಗಪ್ಪ ಗಿರೇಪ್ಪಗೌಡ ಅವರ ಸಾಹಸಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗ್ರಾಮದ ಹಿರಿಯರಾದ ಶಂಕರಗೌಡ ಪಾಟೀಲ, ಅರ್ಜುನ ಅಂಗಡಿ, ಗುರುಸಿದ್ಧಯ್ಯ ಹುಬ್ಬಳ್ಳಿಮಠ, ಬಸಯ್ಯ ದುರುದುಡಿಮಠ, ಚಂದ್ರಕಾಂತ ಹಡಪದ, ಗದಿಗೆಪ್ಪ ಪಲ್ಲೇದ ಅವರ ನೇತೃತ್ವದಲ್ಲಿ ಮಹಾಂತೇಶ ಹಾಗೂ ಗಂಗಪ್ಪ ಅವರನ್ನು ತೆರೆದ ವಾಹನದಲ್ಲಿ ಗ್ರಾಮಸ್ಥರು ಮೆರವಣಿಗೆ ನಡೆಸಿ ಸನ್ಮಾನಿಸಿ ಗೌರವಿಸಿದ್ದಾರೆ.

ಇದನ್ನೂ ಓದಿ: 77ರ ಇಳಿವಯಸ್ಸಿನಲ್ಲಿಯೂ ಜಿಗಿ ಜಿಗಿಯುತ್ತಾ ಓಡುವ ಕೆಎಸ್ಸಾರ್ಟಿಸಿ ನಿವೃತ್ತ ಅಧಿಕಾರಿ ಇಂದಿನ ಯುವಕರಿಗೆ ನೀಡುವ ಸಂದೇಶ ಏನು ಗೊತ್ತಾ!?

ಒಂದು ದಿನದಲ್ಲಿ 40-50 ಕಿ.ಮೀ ದೂರ ಪಾದಯಾತ್ರೆ ಮಾಡುವುದನ್ನು ಕೇಳಿದ್ದೇವೆ. ಸುಮಾರು 120 ಕಿ.ಮೀ ದೂರವನ್ನು ಕೇವಲ 12 ಗಂಟೆಯಲ್ಲಿ ಕ್ರಮಿಸಿದ್ದು ಸುಲಭದ ಮಾತಲ್ಲ. ಇಂತಹ ಸಾಹಸ ಮೆರೆದಿರುವ ನಮ್ಮೂರಿನ ಯುವಕರ ಧೈರ್ಯ-ಸ್ಥೈರ್ಯ ಶ್ಲಾಘನೀಯವಾದದ್ದು. ಯುವಕರು ಜಿ.ಬಸವನಕೊಪ್ಪ ಗ್ರಾಮದ ಕೀರ್ತಿ-ಗೌರವ ಹೆಚ್ಚಿಸಿದ್ದಾರೆ ಎಂದು ಗ್ರಾಮದ ಹಿರಿಯರಾದ ಶಂಕರಗೌಡ ಪಾಟೀಲ ಅವರು ಅಭಿನಂದನೆ ಸಲ್ಲಿಸಿದ್ದಾರೆ.

120 ಕಿ.ಮೀ ನಡೆದು ಸಾಗುವ ಗುರಿ ಅಷ್ಟು ಸುಲಭವಾಗಿರಲಿಲ್ಲ. ಬೆಳಗ್ಗೆ ನಡೆದು ಹೋಗುವುದು ಅಷ್ಟೊಂದು ಕಷ್ಟವಿರಲಿಲ್ಲ. ಆದರೆ ಮಧ್ಯಾಹ್ಯ ಆಗುತ್ತಿದಂತೆ ಆಯಾಸ ಹೆಚ್ಚಾಗುತ್ತಿತ್ತು. ಆದರೂ ಛಲ ಬಿಡಲಿಲ್ಲ. ಗ್ರಾಮದ ಹಿರಿಯರು-ಸ್ನೇಹಿತರು ಪ್ರೋತ್ಸಾಹದಿಂದ ಈ ಕಾರ್ಯಸಾಧನೆ ಆಗಿದೆ. ಯಲ್ಲಮ್ಮನ ಆಶೀರ್ವಾದ ನಮ್ಮ ಮೇಲಿತ್ತು ಎಂದು ಮಹಾಂತೇಶ ಹಾಗೂ ಗಂಗಪ್ಪ ಸಾಹಸಿ ಯುವಕರು ತಮ್ಮ ಸಂತಸ ಹಂಚಿಕೊಂಡಿದ್ದಾರೆ.

ಹುಬ್ಬಳ್ಳಿ-ಧಾರವಾಡಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಅರ್ಜುನ್ ಜನ್ಯಗೆ ಹಾಡು ಹೊಳೆಯುವುದೆಲ್ಲಿ: ಸಂಗತಿ ವಿವರಿಸಿದ ಪ್ರೇಮ್
ಅರ್ಜುನ್ ಜನ್ಯಗೆ ಹಾಡು ಹೊಳೆಯುವುದೆಲ್ಲಿ: ಸಂಗತಿ ವಿವರಿಸಿದ ಪ್ರೇಮ್
ಮ್ಯಾನ್ಮಾರ್​ಗೆ ಸಹಾಯ ಮಾಡುವ ಆಪರೇಷನ್​ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?
ಮ್ಯಾನ್ಮಾರ್​ಗೆ ಸಹಾಯ ಮಾಡುವ ಆಪರೇಷನ್​ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
ಬಿಜೆಪಿ ಎಲ್ಲ ಭಾಷೆಯನ್ನೂ ಗೌರವಿಸುತ್ತದೆ;WITT ಶೃಂಗಸಭೆಯಲ್ಲಿ ಕಿಶನ್ ರೆಡ್ಡಿ
ಬಿಜೆಪಿ ಎಲ್ಲ ಭಾಷೆಯನ್ನೂ ಗೌರವಿಸುತ್ತದೆ;WITT ಶೃಂಗಸಭೆಯಲ್ಲಿ ಕಿಶನ್ ರೆಡ್ಡಿ
ಯತ್ನಾಳ್ ಒಬ್ಬ ಒಳ್ಳೆಯ ನಾಯಕ ಅನ್ನೋದ್ರಲ್ಲಿ ಎರಡು ಮಾತಿಲ್ಲ: ತಂಗಡಿಗಿ
ಯತ್ನಾಳ್ ಒಬ್ಬ ಒಳ್ಳೆಯ ನಾಯಕ ಅನ್ನೋದ್ರಲ್ಲಿ ಎರಡು ಮಾತಿಲ್ಲ: ತಂಗಡಿಗಿ
ವಿಶ್ವದ ಶೇಕಡಾ 60 ರಷ್ಟು ಖನಿಜಗಳು ನಮ್ಮ ದೇಶದಲ್ಲಿವೆ
ವಿಶ್ವದ ಶೇಕಡಾ 60 ರಷ್ಟು ಖನಿಜಗಳು ನಮ್ಮ ದೇಶದಲ್ಲಿವೆ
ಪಕ್ಷದ ಸಂದೇಶ ಮತ್ತು ಸೂಚನೆಗಷ್ಟೇ ನಾವು ಸೀಮಿತವಾಗಿರಬೇಕು: ಸೋಮಣ್ಣ
ಪಕ್ಷದ ಸಂದೇಶ ಮತ್ತು ಸೂಚನೆಗಷ್ಟೇ ನಾವು ಸೀಮಿತವಾಗಿರಬೇಕು: ಸೋಮಣ್ಣ
ಬಾಲಕನನ್ನು ಬಲಿ ಪಡೆದ ಬಿಬಿಎಂಪಿ ಲಾರಿಗೆ ಬೆಂಕಿ
ಬಾಲಕನನ್ನು ಬಲಿ ಪಡೆದ ಬಿಬಿಎಂಪಿ ಲಾರಿಗೆ ಬೆಂಕಿ
ಭಾರತಕ್ಕೆ ತಕ್ಷಣವೇ ವಿಶ್ವಸಂಸ್ಥೆಯ ಸದಸ್ಯತ್ವ ನೀಡಬೇಕು
ಭಾರತಕ್ಕೆ ತಕ್ಷಣವೇ ವಿಶ್ವಸಂಸ್ಥೆಯ ಸದಸ್ಯತ್ವ ನೀಡಬೇಕು
ಮ್ಯಾನ್ಮಾರ್​ಗೆ 15 ಟನ್ ಪರಿಹಾರ ಸಾಮಗ್ರಿ, ಮೆಡಿಕಲ್ ಕಿಟ್ ಕಳುಹಿಸಿದ ಭಾರತ
ಮ್ಯಾನ್ಮಾರ್​ಗೆ 15 ಟನ್ ಪರಿಹಾರ ಸಾಮಗ್ರಿ, ಮೆಡಿಕಲ್ ಕಿಟ್ ಕಳುಹಿಸಿದ ಭಾರತ