ರಾಜ್ಯ ಸರ್ಕಾರದ ನಾಯಕರ ಟ್ಯೂಬ್​ಲೈಟ್​ ಲೇಟಾಗಿ ಹೊತ್ತಿದೆ: ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿ ವ್ಯಂಗ್ಯ

ಪಿಎಂ ಕುಸುಮ್ ಯೋಜನೆ ಅನುಷ್ಠಾನದಲ್ಲಿ ರಾಜ್ಯ ಸರ್ಕಾರದ ‘ಟ್ಯೂಬ್‌ಲೈಟ್’ ತಡವಾಗಿ ಬೆಳಗಿದೆ ಎಂದು ಹುಬ್ಬಳ್ಳಿಯಲ್ಲಿ ಟೀಕಿಸಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಜಗತ್ತಿನ ಕಠಿಣ ಸ್ಥಿತಿಯ ನಡುವೆಯೂ ದೇಶದ ಆರ್ಥಿಕತೆ ಸದೃಢವಾಗಿದೆ. ಇದನ್ನು ಬ್ರಿಕ್ಸ್ ಸಭೆಯಲ್ಲಿ ಜಗತ್ತಿನ ಅನೇಕರು ಕೊಂಡಿಡಿದ್ದಾರೆ. ಆದ್ರೆ ವಿರೋಧ ಪಕ್ಷದ ನಾಯಕರು ಅಲ್ಲಿನ ಮೆನು ಬಗ್ಗೆ ಮಾತಾಡ್ತಿದ್ದಾರೆ ಎಂದವರು ಟೀಕಿಸಿದ್ದಾರೆ.

ರಾಜ್ಯ ಸರ್ಕಾರದ ನಾಯಕರ ಟ್ಯೂಬ್​ಲೈಟ್​ ಲೇಟಾಗಿ ಹೊತ್ತಿದೆ: ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿ ವ್ಯಂಗ್ಯ
ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿ
Image Credit source: PTI
Edited By:

Updated on: Sep 15, 2026 | 2:38 PM

ಹುಬ್ಬಳ್ಳಿ, ಸೆಪ್ಟೆಂಬರ್​​ 15: ಕಾಂಗ್ರೆಸ್​​ ವಿರುದ್ಧ ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿ ವಾಗ್ದಾಳಿ ನಡೆಸಿದ್ದು, ರಾಜ್ಯ ಸರ್ಕಾರದ ನಾಯಕರ ಟ್ಯೂಬ್​ಲೈಟ್​ ಲೇಟಾಗಿ ಹೊತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ. ಲೇಟಾಗಿ ಪ್ರಧಾನಮಂತ್ರಿ ಕುಸುಮ ಯೋಜನೆ ಜಾರಿ ಮಾಡ್ತಿದ್ದಾರೆ. ಇಂದಿರಾ ಗಾಂಧಿ, ರಾಜೀವ್​ ಗಾಂಧಿ ಅವರ ಹತ್ಯೆ ನಂತರ ಅವರ ಚಿತಾಭಸ್ಮ ತೆಗೆದುಕೊಂಡು ಹೋಗಿ ಚುನಾವಣೆ ಮಾಡಲಾಯ್ತು. ಕಾಂಗ್ರೆಸ್ ಎಮೋಷನಲ್ ಪಾಲಿಟಿಕ್ಸ್ ಮಾಡ್ತು ಎಂದು ಆರೋಪಿಸಿದ ಅವರು, ಆದ್ರೆ ಇದೀಗ ಕಾರ್ಯ ಕ್ಷಮತಾ ರಾಜಕಾರಣ ಮಾಡುತ್ತಿದ್ದೇವೆ ಎಂದಿದ್ದಾರೆ.

ಬೆಲೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರದಿಂದ ಪ್ರಯತ್ನ

ಜಿಡಿಪಿ ಅಂಕಿ ಅಂಶಗಳನ್ನು ಮುಚ್ಚಿಡಲು ಆಗಲ್ಲ. ದೇಶದಲ್ಲಿ ಹೂಡಿಕೆ ಮಾಡಲು ಮುಂದೆ ಬರ್ತಿದ್ದಾರೆ, ರಫ್ತು ಹೆಚ್ಚಾಗಿದೆ. ಮುಂದಿನ ವರ್ಷ ಭಾರತೀಯ ಡಿಸೈನ್ ಹಾಗೂ ಮೊಬೈಲ್ ಬರಲಿದೆ. ಹೀಗಿದ್ದರೂ ದೇಶದ ಯಶಸ್ಸಿನ ವಿರುದ್ಧ ಮಾತನಾಡುವುದು ಕಾಂಗ್ರೆಸ್​ ಭಾಗವಾಗಿದೆ. ರೈತರ ಹಿತ ಕಾಪಾಡಲು ಕೇಂದ್ರ ಸರ್ಕಾರ ಬದ್ಧವಾಗಿದ್ದು, ಮಳೆ ಕೊರತೆಯಿಂದ ದೇಶದಲ್ಲಿ ಕೆಲವು ವಸ್ತುಗಳ ಬೆಲೆ ಏರಿಕೆಯಾಗಿದೆ. ಅದನ್ನು ನಿಯಂತ್ರಣ ಮಾಡಲು ಕೇಂದ್ರ ಸರ್ಕಾರ ಪ್ರಯತ್ನ ಮಾಡ್ತಿದೆ ಎಂದೂ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಕಳಪೆ ಶೂ ಭಾಗ್ಯ: ಗುತ್ತಿಗೆದಾರನನ್ನು ಬಿಟ್ಟು ಸ್ಥಳೀಯ ಅಧಿಕಾರಿಗಳ ಮೇಲೆ ಕ್ರಮಕ್ಕೆ ಸೂಚನೆ; ಇದೆಂಥಾ ನಿರ್ಧಾರ?

ಜಗತ್ತಿನ ಕಠಿಣ ಸ್ಥಿತಿಯ ನಡುವೆಯೂ ದೇಶದ ಆರ್ಥಿಕತೆ ಸದೃಢವಾಗಿದೆ. ಇದನ್ನು ಬ್ರಿಕ್ಸ್ ಸಭೆಯಲ್ಲಿ ಜಗತ್ತಿನ ಅನೇಕರು ಕೊಂಡಿಡಿದ್ದಾರೆ. ಆದ್ರೆ ವಿರೋಧ ಪಕ್ಷದ ನಾಯಕರು ಅಲ್ಲಿನ ಮೆನು ಬಗ್ಗೆ ಮಾತಾಡ್ತಿದ್ದಾರೆ. 81 ಕೋಟಿ ಜನರಿಗೆ ಉಚಿತವಾಗಿ ಪ್ರತಿ ತಿಂಗಳು ಅಕ್ಕಿ ನೀಡುತ್ತಿದ್ದೇವೆ ಎಂದವರು ತಿಳಿಸಿದ್ದಾರೆ. ಪ್ರಧಾನಿ ಜನ್ಮದಿನದ ಅಂಗವಾಗಿ ಬಿಜೆಪಿಯಿಂದ ಸೆಪ್ಟೆಂಬರ್ 17ರಿಂದ ಅಕ್ಟೋಬರ್ 17ರ ವರಗೆ ಸೇವಾ ಸಂಕಲ್ಪ ಸಪ್ತಾಹ ಆಚರಣೆ ನಡೆಯಲಿದೆ. ಜನಸೇವೆಯೇ ಪ್ರಭುಸೇವೆ ಅನ್ನೋ ಧ್ಯೇಯವಾಕ್ಯದೊಂದಿಗೆ ಸಪ್ತಾಹ ನಡೆಯಲಿದ್ದು, ಸೆಪ್ಟೆಂಬರ್ 17ರಂದು ಪ್ರತಿ ಮನೆ ಮುಂದೆ ಆಶೀರ್ವಾದ ದೀಪವನ್ನು ಹಚ್ಚಲಾಗುವದು ಎಂದು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 2:38 pm, Tue, 15 September 26

Loading...
Unable to load recommendations.
Follow Us