ಡಿಕೆ ಶಿವಕುಮಾರ್ ‘ಮುಂದಿನ ಮುಖ್ಯಮಂತ್ರಿ’​ ಎಂದು ಬ್ಯಾಟ್​ ಬೀಸಿದ ಮಹಮ್ಮದ್ ನಲಪಾಡ್

ಉಡುಪಿ: ಮುಂದಿನ ಮುಖ್ಯಮಂತ್ರಿ ಫೈಟ್​ ಕರ್ನಾಟಕ ಕಾಂಗ್ರೆಸ್​​ನಲ್ಲಿ ಮತ್ತೆ ಮುನ್ನೆಲೆಗೆ ಬಂದಿದೆ. ಕರ್ನಾಟಕ ಯೂತ್ ಕಾಂಗ್ರೆಸ್‌ನ ಮುಂದಿನ ಅಧ್ಯಕ್ಷರಾಗಿ ನೇಮಕಗೊಂಡಿರುವ ಬೆನ್ನಿಗೇ ಮಹಮ್ಮದ್ ಹ್ಯಾರಿಸ್ ನಲಪಾಡ್ ಅವರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪರ ಬ್ಯಾಟಿಂಗ್ ಮಾಡಿದ್ದಾರೆ. ಇಲ್ಲಿವರೆಗೂ ಹೆಚ್ಚಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಮೊಳಗುತ್ತಿದ್ದ ‘ಮುಂದಿನ ಮುಖ್ಯಮಂತ್ರಿ’​ ಸ್ವಘೋಷ ವಾಕ್ಯ ಈಗ ಡಿಕೆಶಿ ಪರವಾಗಿಯೂ ಮೊಳಗುತ್ತಿದೆ.   ಕಾಂಗ್ರೆಸ್ ‌ನಲ್ಲಿ ಮುಂದಿನ ಮುಖ್ಯಮಂತ್ರಿ ವಿಚಾರ ಸದ್ದು ಮಾಡುತ್ತಿರುವಾಗಲೇ ಡಿಕೆಶಿ ಪರ ಶಿಷ್ಯ ಬ್ಯಾಟಿಂಗ್  ಮಾಡಿದ್ದಾರೆ.  ಉಡುಪಿಯಲ್ಲಿ […]

ಡಿಕೆ ಶಿವಕುಮಾರ್  ‘ಮುಂದಿನ ಮುಖ್ಯಮಂತ್ರಿ’​ ಎಂದು ಬ್ಯಾಟ್​ ಬೀಸಿದ ಮಹಮ್ಮದ್ ನಲಪಾಡ್
ಡಿಕೆ ಶಿವಕುಮಾರ್, ಮಹಮ್ಮದ್ ನಲಪಾಡ್
Follow us
| Updated By: ಸಾಧು ಶ್ರೀನಾಥ್​

Updated on:Jul 07, 2021 | 9:18 AM

ಉಡುಪಿ: ಮುಂದಿನ ಮುಖ್ಯಮಂತ್ರಿ ಫೈಟ್​ ಕರ್ನಾಟಕ ಕಾಂಗ್ರೆಸ್​​ನಲ್ಲಿ ಮತ್ತೆ ಮುನ್ನೆಲೆಗೆ ಬಂದಿದೆ. ಕರ್ನಾಟಕ ಯೂತ್ ಕಾಂಗ್ರೆಸ್‌ನ ಮುಂದಿನ ಅಧ್ಯಕ್ಷರಾಗಿ ನೇಮಕಗೊಂಡಿರುವ ಬೆನ್ನಿಗೇ ಮಹಮ್ಮದ್ ಹ್ಯಾರಿಸ್ ನಲಪಾಡ್ ಅವರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪರ ಬ್ಯಾಟಿಂಗ್ ಮಾಡಿದ್ದಾರೆ. ಇಲ್ಲಿವರೆಗೂ ಹೆಚ್ಚಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಮೊಳಗುತ್ತಿದ್ದ ‘ಮುಂದಿನ ಮುಖ್ಯಮಂತ್ರಿ’​ ಸ್ವಘೋಷ ವಾಕ್ಯ ಈಗ ಡಿಕೆಶಿ ಪರವಾಗಿಯೂ ಮೊಳಗುತ್ತಿದೆ.  

ಕಾಂಗ್ರೆಸ್ ‌ನಲ್ಲಿ ಮುಂದಿನ ಮುಖ್ಯಮಂತ್ರಿ ವಿಚಾರ ಸದ್ದು ಮಾಡುತ್ತಿರುವಾಗಲೇ ಡಿಕೆಶಿ ಪರ ಶಿಷ್ಯ ಬ್ಯಾಟಿಂಗ್  ಮಾಡಿದ್ದಾರೆ.  ಉಡುಪಿಯಲ್ಲಿ ಮೀನುಗಾರ ಮಹಿಳೆಯರ ಜೊತೆಗೆ ಮಾತನಾಡುತ್ತಾ ಸಿಎಂ ವಿಚಾರ ಪ್ರಸ್ತಾಪವಾದಾಗ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಆಗ್ತಾರೆ (Next Chief Minister) ಎಂದು ಮಹಮ್ಮದ್ ಹ್ಯಾರಿಸ್ ನಲಪಾಡ್ (Karnataka Youth Congress Next President Mohammed Haris Nalapad) ಹೇಳಿದ್ದಾರೆ.

ಮುಂದೆ ಎರಡು ವರ್ಷಗಳಲ್ಲಿ ಚುನಾವಣೆ ಬರುತ್ತೆ, ಎಲ್ಲರೂ ಮತ ಹಾಕಿದ್ರೆ ಡಿಕೆ ಶಿವಕುಮಾರ್ (DK Shivakumar ) ಸಿಎಂ ಆಗ್ತಾರೆ. ಕಾಂಗ್ರೆಸ್ ‌ನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆಗ್ತಾರೆ  ಎಂದು ನಲಪಾಡ್ ಹೇಳಿದ್ದಾರೆ.  ಸದ್ಯ ಕರಾವಳಿ ಪ್ರವಾಸದಲ್ಲಿ ಇರುವ ಡಿಕೆಶಿ ಜೊತೆಗೆ ನಲಪಾಡ್ ಸಹ ಉಡುಪಿಗೆ ಆಗಮಿಸಿದ್ದಾರೆ.

(DK Shivakumar will be next chief minister opines youth congress next president mohammed haris nalapad)

Published On - 9:17 am, Wed, 7 July 21