AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಕ್ರಮವಾಗಿ ಬಂದೂಕು ಇಟ್ಟುಕೊಂಡವರಿಗೆ ಖಡಕ್​ ಎಚ್ಚರಿಕೆ ಕೊಟ್ಟ ಸಿಎಂ ಡಿಕೆ ಶಿವಕುಮಾರ್​

ಅಕ್ರಮವಾಗಿ ಬಂದೂಕು ಇಟ್ಟುಕೊಂಡವರಿಗೆ ಖಡಕ್​ ಎಚ್ಚರಿಕೆ ಕೊಟ್ಟ ಸಿಎಂ ಡಿಕೆ ಶಿವಕುಮಾರ್​

ಈರಣ್ಣಾ ಬಸವಾ
| Edited By: |

Updated on: Sep 11, 2026 | 3:40 PM

Share

ಸಿಎಂ ಡಿಕೆ ಶಿವಕುಮಾರ್ ಅವರು ಅಕ್ರಮ ಬಂದೂಕು ಹೊಂದಿರುವವರಿಗೆ ನವೆಂಬರ್ 1 ರೊಳಗೆ ಶರಣಾಗಲು ಗಡುವು ನೀಡಿದ್ದಾರೆ. ಗಡುವಿನ ನಂತರ ಸಿಕ್ಕಿಬಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ. ಪೊಲೀಸ್ ಸಿಬ್ಬಂದಿಯ ಬೇಡಿಕೆಗಳ ಕುರಿತು ಚರ್ಚಿಸುವುದಾಗಿ ತಿಳಿಸಿದ್ದು, ರೈತರ ಸಮಸ್ಯೆಗಳು, ಬರ ಮತ್ತು ಕಸ್ತೂರಿರಂಗನ್ ವರದಿ ಕುರಿತು ವಿಶೇಷ ಅಧಿವೇಶನ ನಡೆಯಲಿದೆ ಎಂದು ಹೇಳಿದ್ದಾರೆ.

ಬೆಂಗಳೂರು, ಸೆಪ್ಟೆಂಬರ್​ 11: ‘ರಾಜ್ಯದಲ್ಲಿ ಅಕ್ರಮ ಬಂದೂಕು ಇಟ್ಟುಕೊಂಡವರು ನವೆಂಬರ್ 1ರೊಳಗೆ ಪೊಲೀಸ್ ಮತ್ತು ಸ್ಥಳೀಯ ಅಧಿಕಾರಿಗಳಿಗೆ ಸರೆಂಡರ್​ ಮಾಡಬೇಕು, ಇಲ್ಲದಿದ್ದರೆ ಕಠಿಣ ಕ್ರಮಕೈಗೊಳ್ಳುವುದಾಗಿ’ ಸಿಎಂ ಡಿಕೆ ಶಿವಕುಮಾರ್ ಖಡಕ್​ ಎಚ್ಚರಿಕೆ ನೀಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ ಈಗಲೂ ಬಂದೂಕು ಕಡಿಮೆಯಾಗಿಲ್ಲ. ಕೊಳ್ಳೇಗಾಲ ಸೇರಿ ಹಲವು ಕಡೆಗಳಲ್ಲಿ ಇವೆ. ಇನ್ನು ಕೂಡ ಕೆಲವರಿಗೆ ಡಿಕ್ಲೇರ್ ಮಾಡಿ ಲೈಸೆನ್ಸ್ ಮಾಡಿಕೊಳ್ಳುತ್ತಿಲ್ಲ. ಕಳ್ಳ ಬೇಟೆ ನಿಲ್ಲಿಸಬೇಕು. ನವೆಂಬರ್​ 1ರ ಒಳಗೆ ಸರೆಂಡರ್ ಮಾಡದಿದ್ದರೆ ಮನೆ ಸರ್ಚ್ ಮಾಡುತ್ತೇವೆ. ಸರೆಂಡರ್ ಮಾಡಿದವರ ಮೇಲೆ ಕೇಸ್ ಮಾಡಲ್ಲ. ಅಪೋಲಜಿ ಸಾಕು. ಆದರೆ ಸರೆಂಡರ್ ಮಾಡದಿದ್ದರೆ ಕ್ರಮ ಆಗುತ್ತದೆ’ ಎಂದು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Follow Us