AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಿಕ್ಷಾಟನೆ ಮುಕ್ತ ಕರ್ನಾಟಕಕ್ಕೆ ರಾಜ್ಯ ಸರ್ಕಾರ ದಿಟ್ಟ ಹೆಜ್ಜೆ: ವೆಬ್ ಸೈಟ್ ಅನಾವರಣ

ಭಿಕ್ಷಾಟನೆ ಮುಕ್ತ ಕರ್ನಾಟಕಕ್ಕೆ ರಾಜ್ಯ ಸರ್ಕಾರ ದಿಟ್ಟ ಹೆಜ್ಜೆ: ವೆಬ್ ಸೈಟ್ ಅನಾವರಣ

ಹರೀಶ್ ಜಿ.ಆರ್​.
| Edited By: |

Updated on:Sep 11, 2026 | 2:42 PM

Share

ಸಚಿವ ಮುನಿಯಪ್ಪ ಅವರು ಇಂದು (ಸೆಪ್ಟೆಂಬರ್ 11 ಕೇಂದ್ರ ಪರಿಹಾರ ಸಮಿತಿಯ ವೆಬ್​ಸೈಟ್ ಅನಾವರಣಗೊಳಿಸಿದರು. ವೆಬ್​ಸೈಟ್ ನಿರಾಶ್ರಿತರ ಪರಿಹಾರ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡುತ್ತೆ. ಭಿಕ್ಷಾಟನೆ ತಡೆ, ಆಶ್ರಯ, ಆರೋಗ್ಯ ಹಾಗೂ ಕೌಶಲ್ಯಾಭಿವೃದ್ಧಿ ವಿಷಯಗಳು ವೆಬ್​ಸೈಟ್​ನಲ್ಲಿ ಇರಲಿವೆ. ಸಮಾಜದಲ್ಲಿ ಭಿಕ್ಷಾಟನೆ ತಡೆಯುವುದು ಇದರ ಉದ್ದೇಶವಾಗಿದೆ.

ಬೆಂಗಳೂರು, (ಸೆಪ್ಟೆಂಬರ್ 11): ಸಚಿವ ಮುನಿಯಪ್ಪ ಅವರು ಇಂದು (ಸೆಪ್ಟೆಂಬರ್ 11 ಕೇಂದ್ರ ಪರಿಹಾರ ಸಮಿತಿಯ ವೆಬ್​ಸೈಟ್ ಅನಾವರಣಗೊಳಿಸಿದರು. ವೆಬ್​ಸೈಟ್ ನಿರಾಶ್ರಿತರ ಪರಿಹಾರ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡುತ್ತೆ. ಭಿಕ್ಷಾಟನೆ ತಡೆ, ಆಶ್ರಯ, ಆರೋಗ್ಯ ಹಾಗೂ ಕೌಶಲ್ಯಾಭಿವೃದ್ಧಿ ವಿಷಯಗಳು ವೆಬ್​ಸೈಟ್​ನಲ್ಲಿ ಇರಲಿವೆ. ಸಮಾಜದಲ್ಲಿ ಭಿಕ್ಷಾಟನೆ ತಡೆಯುವುದು ಇದರ ಉದ್ದೇಶವಾಗಿದೆ. ಈ ವೇಳೆ ಮಾತನಾಡಿದ ಮುನಿಯಪ್ಪ, ರಾಜ್ಯದಲ್ಲಿ ನಾಲ್ಕು ಸಾವಿರ ಭಿಕ್ಷಾಟನೆ ಮಾಡುವವರಿದ್ದಾರೆ. ಬೆಂಗಳೂರಿನಲ್ಲಿ ಸಾವಿರ ಜನ ಭಿಕ್ಷಾಟನೆ ಮಾಡ್ತಿರುವ ಮಾಹಿತಿ ಇದೆ. ಭಿಕ್ಷಾಟನೆ ಇದ್ದರೆ ಇಡೀ ದೇಶವೇ ತಲೆತಗ್ಗಿಸಬೇಕಾಗುತ್ತೆ. ಭಿಕ್ಷಾಟನೆ ಮಾಡದಂತೆ ಮನಸ್ಸು ಪರಿವರ್ತಿಸಬೇಕಾಗುತ್ತೆ. ಭಿಕ್ಷಾಟನೆ ಮುಕ್ತ ಕರ್ನಾಟಕ ಮಾಡಲು ಹೊರಟಿದ್ದೇವೆ. ಸಮಾಜದಲ್ಲಿ ಬೆರೆತು ಜೀವನ ಮಾಡುವಂತಾಗಬೇಕು. ಹೊಸ ವಾತಾವರಣ ನಿರ್ಮಿಸಬೇಕಿದೆ ಎಂದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Sep 11, 2026 02:41 PM

Follow Us