AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಭಾರತ್ ಬಯೋಟೆಕ್ ಲಸಿಕೆ ಉತ್ಪಾದನೆಗೆ ಆರಂಭಿಕ‌ ಸಮಸ್ಯೆ; ಆದರೆ, 2022 ನಂತರ ಭಾರತವೇ ವಿಶ್ವಕ್ಕೆ ಕೊವಿಡ್ ಲಸಿಕೆ ಪೂರೈಸುತ್ತೆ’

2022ರ ನಂತರ ಭಾರತವೇ ವಿಶ್ವಕ್ಕೆ ಕೊವಿಡ್ ಲಸಿಕೆ ಪೂರೈಸುತ್ತೆ. 2022ರ ಮೊದಲ ತ್ರೈಮಾಸಿಕದಲ್ಲಿ ಮಕ್ಕಳಿಗೆ ಕೊರೊನಾ ಲಸಿಕೆ ನೀಡಲಾಗುತ್ತದೆ. ವಯಸ್ಕರಿಗೆಲ್ಲಾ ಈ ವರ್ಷದೊಳಗೆ ಲಸಿಕೆ ನೀಡುವುದಕ್ಕೆ ಆದ್ಯತೆ ನೀಡಲಾಗುತ್ತದೆ ಎಂದು ಡಾ. ಎನ್.ಕೆ. ಆರೋರಾ ಹೇಳಿದ್ದಾರೆ.

‘ಭಾರತ್ ಬಯೋಟೆಕ್ ಲಸಿಕೆ ಉತ್ಪಾದನೆಗೆ ಆರಂಭಿಕ‌ ಸಮಸ್ಯೆ; ಆದರೆ, 2022 ನಂತರ ಭಾರತವೇ ವಿಶ್ವಕ್ಕೆ ಕೊವಿಡ್ ಲಸಿಕೆ ಪೂರೈಸುತ್ತೆ’
ಕೊವಿಡ್ ಲಸಿಕೆ ಪಡೆಯುತ್ತಿರುವ ಮಹಿಳೆ
TV9 Web
| Edited By: |

Updated on:Aug 03, 2021 | 3:51 PM

Share

ಬೆಂಗಳೂರು: ಬೆಂಗಳೂರು ಘಟಕದಲ್ಲಿ ಭಾರತ್ ಬಯೋಟೆಕ್ ಕಂಪನಿಯ ಲಸಿಕೆ ಉತ್ಪಾದನೆಗೆ ಆರಂಭಿಕ‌ ಸಮಸ್ಯೆ ಎದುರಾಗಿದೆ. ಆಗಸ್ಟ್ ತಿಂಗಳಲ್ಲಿ 20 ಕೋಟಿ ಡೋಸ್ ಲಸಿಕೆ ಸಿಗುವ ನಿರೀಕ್ಷೆ ಇದೆ. ಸ್ಪುಟ್ನಿಕ್ ವಿ ಲಸಿಕೆ 1, 2ನೇ ಡೋಸ್ ಸಮಸ್ಯೆ ಅನಿರೀಕ್ಷಿತವಾಗಿ ಎದುರಾಗಿದೆ. ಮೊದಲ ಡೋಸ್ ನೀಡಿದ್ದ ವಯಲ್‌ನಲ್ಲೇ 2ನೇ ಡೋಸ್ ನೀಡಲ್ಲ. ಈ ಸಮಸ್ಯೆ ಅನಿರೀಕ್ಷಿತ, ಇದರಿಂದ ಲಸಿಕೆ ಲಭ್ಯತೆಯಲ್ಲಿ ಸಮಸ್ಯೆ ಉಂಟಾಗಿದೆ ಎಂದು NTAGI ಮುಖ್ಯಸ್ಥ ಡಾಕ್ಟರ್ ಎನ್.ಕೆ. ಆರೋರಾ ಹೇಳಿಕೆ ನೀಡಿದ್ದಾರೆ.

ಭಾರತ್ ಬಯೋಟೆಕ್‌ನಿಂದ ತಿಂಗಳಿಗೆ 8-10 ಕೋಟಿ ಡೋಸ್ ಲಸಿಕೆ ಉತ್ಪಾದನೆ ನಿರೀಕ್ಷೆ ಇತ್ತು. ಆದರೆ, ಕಂಪನಿಯಿಂದ ಲಸಿಕೆ ಉತ್ಪಾದನೆಯಲ್ಲಿ ಅನಿಶ್ಚಿತತೆ ಕಂಡುಬಂದಿದೆ. ಹೀಗಾಗಿ ಪಾರ್ಲಿಮೆಂಟ್ ಉತ್ತರದಲ್ಲಿ ಗೊಂದಲವಾಗಿದೆ. ಆಗಸ್ಟ್ ತಿಂಗಳಲ್ಲಿ ಲಸಿಕೆ ಉತ್ಪಾದನೆ ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದ್ದಾರೆ.

2022ರ ನಂತರ ಭಾರತವೇ ವಿಶ್ವಕ್ಕೆ ಕೊವಿಡ್ ಲಸಿಕೆ ಪೂರೈಸುತ್ತೆ. 2022ರ ಮೊದಲ ತ್ರೈಮಾಸಿಕದಲ್ಲಿ ಮಕ್ಕಳಿಗೆ ಕೊರೊನಾ ಲಸಿಕೆ ನೀಡಲಾಗುತ್ತದೆ. ವಯಸ್ಕರಿಗೆಲ್ಲಾ ಈ ವರ್ಷದೊಳಗೆ ಲಸಿಕೆ ನೀಡುವುದಕ್ಕೆ ಆದ್ಯತೆ ನೀಡಲಾಗುತ್ತದೆ ಎಂದು ಡಾ. ಎನ್.ಕೆ. ಆರೋರಾ ಹೇಳಿದ್ದಾರೆ.

ಭಾರತ್ ಬಯೋಟೆಕ್ ಕಂಪನಿಯಿಂದ ಆಗಸ್ಟ್ ತಿಂಗಳಲ್ಲಿ ಲಸಿಕೆ ಉತ್ಪಾದನೆ ಹೆಚ್ಚಾಗುವ ನಿರೀಕ್ಷೆ ಇದೆ. ಭಾರತಕ್ಕೆ ಫೈಜರ್, ಮಾಡೆರ್ನಾ ಲಸಿಕೆ ಬರಲು ಕಾನೂನು ರಕ್ಷಣೆ ನೀಡುವುದು ಅಡ್ಡಿಯಾಗಿದೆ. ಜೈಡಸ್ ಕ್ಯಾಡಿಲಾ ಕಂಪನಿಯಿಂದ ಲಸಿಕೆಯ ಅನುಮೋದನೆಗೆ ಹೆಚ್ಚಿನ ಮಾಹಿತಿ ಕೇಳಲಾಗಿದೆ. ವಿಷಯ ತಜ್ಞರ ಸಮಿತಿಯು ಜೈಡಸ್ ಕ್ಯಾಡಿಲಾ ಕಂಪನಿಯಿಂದ ಹೆಚ್ಚಿನ ಮಾಹಿತಿ ಕೇಳಿದೆ.

ಜೈ ಕೋವ್ ಡಿ, ಡಿಎನ್ಎ ಲಸಿಕೆ ಸಪ್ಟೆಂಬರ್ ಅಂತ್ಯದ ವೇಳೆಗೆ ಬಯೋಲಾಜಿಕಲ್ಸ್ ಇ ಕಂಪನಿಯ ಲಸಿಕೆಯ ಡಾಟಾ ಲಭ್ಯವಾಗಲಿದೆ. ಆಕ್ಟೋಬರ್ ವೇಳೆಗೆ ಬಯೋಲಾಜಿಕಲ್ಸ್ ಇ ಕಂಪನಿಯ ಲಸಿಕೆ ಮಾರುಕಟ್ಟೆಯಲ್ಲಿ ಲಭ್ಯ ಇರಲಿದೆ.

ಫೈಜರ್, ಜಾನ್ಸನ್ ಅಂಡ್ ಜಾನ್ಸನ್ ಕಂಪನಿಗಳು ಭಾರತದಲ್ಲಿ ತಮ್ಮ ಲಸಿಕೆ ಪ್ರಯೋಗದ ಅರ್ಜಿ ಹಿಂಪಡೆದಿವೆ. 2022 ರ ನಂತರ ವಿಶ್ವಕ್ಕೆ ಭಾರತವೇ ಕೊರೊನಾ ಲಸಿಕೆಯ ಪೂರೈಸಲಿದೆ. ಮುಂದಿನ‌ ವರ್ಷದ ಮೊದಲ ತ್ರೈಮಾಸಿಕದಲ್ಲಿ ದೇಶದಲ್ಲಿ ಮಕ್ಕಳಿಗೆ ಕೊರೊನಾ ಲಸಿಕೆ ಲಭ್ಯ ಆಗಲಿದೆ. ಈಗ ವಯಸ್ಕರಿಗೆಲ್ಲಾ ಈ ವರ್ಷದೊಳಗೆ ಲಸಿಕೆ ನೀಡಿಕೆ ಆದ್ಯತೆ ಎಂದು ಡಾ. ಎನ್.ಕೆ. ಆರೋರಾ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಪರಿಸ್ಥಿತಿ ನೋಡಿಕೊಂಡು ಕರ್ಫ್ಯೂ ಅವಧಿ ವಿಸ್ತರಣೆ; ದಾವಣಗೆರೆಯಲ್ಲಿ ವಾರಾಂತ್ಯಕ್ಕೆ ದೇಗುಲಗಳಿಗೆ ಪ್ರವೇಶವಿಲ್ಲ

3ನೇ ಡೋಸ್ ಕೊರೊನಾ ಲಸಿಕೆ ವಿತರಣೆಗೆ ಚಿಂತನೆ; ಐಸಿಎಂಆರ್​ ಅನುಮತಿಗೆ ಕಾಯುತ್ತಿರುವ ಆರೋಗ್ಯ ಇಲಾಖೆ

(Dr NK Arora on Coronavirus Covid19 Vaccine in India Bengaluru Vaccine Production Unit)

Published On - 3:50 pm, Tue, 3 August 21

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ