AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

NICE FASTag: ನೈಸ್ ರಸ್ತೆಗೂ ಬಂತು ಫಾಸ್ಟ್ಯಾಗ್; ಟೋಲ್ ಕಿರಿಕಿರಿಯಿಂದ ಮುಕ್ತಿ

NICE ROAD FASTag ವಾಹನಗಳು ನೈಸ್ ರಸ್ತೆ ಪ್ರವೇಶಿಸಿದ ತಕ್ಷಣವೇ ಸ್ಕ್ಯಾನರ್​ಗಳು ಮಾಹಿತಿ ಸಂಗ್ರಹಿಸುತ್ತವೆ. ವಾಹನಗಳು ನೈಸ್ ರಸ್ತೆಯಿಂದ ಹೊರಗೆ ಹೋದ ತಕ್ಷಣ ನಿಗದಿತ ಮೊತ್ತವನ್ನು ಕಡಿತ ಮಾಡಿಕೊಳ್ಳುತ್ತವೆ

NICE FASTag: ನೈಸ್ ರಸ್ತೆಗೂ ಬಂತು ಫಾಸ್ಟ್ಯಾಗ್; ಟೋಲ್ ಕಿರಿಕಿರಿಯಿಂದ ಮುಕ್ತಿ
ನೈಸ್ ರಸ್ತೆ (ಸಂಗ್ರಹ ಚಿತ್ರ)
Ghanashyam D M | ಡಿ.ಎಂ.ಘನಶ್ಯಾಮ
| Edited By: |

Updated on: Feb 08, 2021 | 9:15 PM

Share

ಬೆಂಗಳೂರು: ನೈಸ್ ರಸ್ತೆಯಲ್ಲಿ ಫೆ.14ರಿಂದ ಫಾಸ್ಟ್ಯಾಗ್ (FASTag) ಬಳಕೆ ಆರಂಭವಾಗಲಿದೆ. ಕಳೆದ ಒಂದು ವರ್ಷದಿಂದ ನಂದಿ ಇನ್​ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್​ಪ್ರೈಸಸ್ (Nandi Infrastructure Corridor Enterprice – NICE) ತನ್ನದೇ ಆದ ಟೋಲ್ ಸಂಗ್ರಹ ವ್ಯವಸ್ಥೆ ಆರಂಭಿಸಿತ್ತು. ಕೆಲವರು ಮಾತ್ರ ಈ ವ್ಯವಸ್ಥೆಗೆ ಅನುಗುಣವಾಗಿ ಕಾರ್ಡ್​ಗಳನ್ನು ಖರೀದಿಸಿದ್ದರು. ಆದರೆ ಹೆಚ್ಚಿನವರು ಖರೀದಿಸಿರಲಿಲ್ಲ. ಖಾಸಗಿ ಟೋಲ್​ ಕಾರ್ಡ್​ ಏಕೆ ಖರೀದಿಸಬೇಕೆಂಬ ಮನಃಸ್ಥಿತಿ ಬಳಕೆದಾರರದ್ದಾಗಿತ್ತು.

ಇದೀಗ ದೇಶದಾದ್ಯಂತ FASTag ಬಳಕೆ ಆರಂಭವಾಗಿದೆ. ನೈಸ್ ಸಹ ಇದಕ್ಕೆ ಅನುಗುಣವಾಗಿ ತನ್ನ ತಾಂತ್ರಿಕ ವ್ಯವಸ್ಥೆಯಲ್ಲಿ ಅಗತ್ಯ ಬದಲಾವಣೆ ಮಾಡಿಕೊಂಡಿದೆ. ಮುಂದಿನ ದಿನಗಳಲ್ಲಿ ನೀವು ನೈಸ್ ಕಾರ್ಡ್​ ಮೂಲಕವೇ ಟೋಲ್ ಪಾವತಿಸಬೇಕಿಲ್ಲ. ಅದನ್ನು FASTag ಮೂಲಕವೇ ಪಾವತಿಸಬಹುದು.

ವಾಹನಗಳು ನೈಸ್ ರಸ್ತೆ ಪ್ರವೇಶಿಸಿದ ತಕ್ಷಣವೇ ಸ್ಕ್ಯಾನರ್​ಗಳು ಮಾಹಿತಿ ಸಂಗ್ರಹಿಸುತ್ತವೆ. ವಾಹನಗಳು ನೈಸ್ ರಸ್ತೆಯಿಂದ ಹೊರಗೆ ಹೋದ ತಕ್ಷಣ ನಿಗದಿತ ಮೊತ್ತವನ್ನು ಕಡಿತ ಮಾಡಿಕೊಳ್ಳುತ್ತವೆ ಎಂಬ ನೈಸ್​ ವಕ್ತಾರರೊಬ್ಬರ ಹೇಳಿಕೆಯನ್ನು ರೆಸಿಡೆಂಟ್ಸ್​ ವಾಚ್ ಜಾಲತಾಣ ವರದಿ ಮಾಡಿದೆ.

ನೈಸ್​ ರಸ್ತೆಗೆ ಒಟ್ಟು 8 ಪ್ರವೇಶ-ನಿರ್ಗಮನ ಸ್ಥಳಗಳಿವೆ. ಹೊಸೂರು ರಸ್ತೆ, ಬನ್ನೇರುಘಟ್ಟ ರಸ್ತೆ, ಕನಕಪುರ ರಸ್ತೆ, ನೈಸ್ ರೋಡ್ ಇಂಟರ್​ಚೇಂಜ್, ಲಿಂಕ್ ರಸ್ತೆ, ಮಾಗಡಿ ರಸ್ತೆ, ತುಮಕೂರು ರಸ್ತೆ ಮತ್ತು ಮೈಸೂರು ರಸ್ತೆ ಅದರಲ್ಲಿ ಮುಖ್ಯವಾದವು. ಫೆ.14ರ ನಂತರ ನೈಸ್ ರಸ್ತೆಯಲ್ಲಿ ಸಂಚರಿಸಲು ನೀವು ನೈಸ್ ಕಾರ್ಡ್​ ಖರೀದಿಸಲೇಬೇಕು ಎಂದಿಲ್ಲ. ಫಾಸ್ಟ್ಯಾಗ್​ ಮೂಲಕವೇ ಪಾವತಿ ಮಾಡಬಹುದು. ಸಾಮಾನ್ಯವಾಗಿ ಕಿಕ್ಕಿರಿದು ತುಂಬಿರುತ್ತಿದ್ದ ನೈಸ್ ಟೋಲ್​ಗಳ ಕಿರಿಕಿರಿಯಿಂದ ಫಾಸ್ಟ್ಯಾಗ್​ಗಳು ಮುಕ್ತಿ ನೀಡಲಿವೆ.

Explainer | ಅಮೆಜಾನ್ ಸಿಇಒ ಹುದ್ದೆಯಿಂದ ಬಿಜೊಸ್ ಕೆಳಗಿಳಿಯುತ್ತಿರುವುದೇಕೆ? ಇನ್ಮುಂದೆ ಕಂಪನಿ ಮುನ್ನಡೆಸುವವರು ಯಾರು?

Follow Us
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ವಂಚನೆ ಆರೋಪ, ಸ್ಪಷ್ಟನೆ ನೀಡಿದ ನಿರ್ದೇಶಕ ಓಂ ಪ್ರಕಾಶ್ ರಾವ್
ವಂಚನೆ ಆರೋಪ, ಸ್ಪಷ್ಟನೆ ನೀಡಿದ ನಿರ್ದೇಶಕ ಓಂ ಪ್ರಕಾಶ್ ರಾವ್
ತಹಶೀಲ್ದಾರ್ ಕಚೇರಿಯ ಶೌಚಾಲಯ ಸ್ವಚ್ಛಗೊಳಿಸಿದ ಸಚಿವ
ತಹಶೀಲ್ದಾರ್ ಕಚೇರಿಯ ಶೌಚಾಲಯ ಸ್ವಚ್ಛಗೊಳಿಸಿದ ಸಚಿವ
'ಜೈಲಿನಲ್ಲಿ ಹಣ ಕೊಟ್ಟರೆ ಅದು ಸಿಗುತ್ತೆ': ಆತ ಬಿಚ್ಚಿಟ್ಟ ಸ್ಫೋಟಕ ಸತ್ಯ
'ಜೈಲಿನಲ್ಲಿ ಹಣ ಕೊಟ್ಟರೆ ಅದು ಸಿಗುತ್ತೆ': ಆತ ಬಿಚ್ಚಿಟ್ಟ ಸ್ಫೋಟಕ ಸತ್ಯ
ಅವೈಜ್ಞಾನಿಕ ಪಾರ್ಕಿಂಗ್‌ಗೆ 3 ದಿನಗಳಲ್ಲಿ ಮೂರು ಬಲಿ
ಅವೈಜ್ಞಾನಿಕ ಪಾರ್ಕಿಂಗ್‌ಗೆ 3 ದಿನಗಳಲ್ಲಿ ಮೂರು ಬಲಿ
ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ
ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?
TV9 ರಿಯಲ್ ಎಸ್ಟೇಟ್ ಎಕ್ಸ್​ಪೋ ಬಗ್ಗೆ ಅರುಣ್ ಯೋಗಿರಾಜ್ ಹೇಳಿದ್ದಿಷ್ಟು!
TV9 ರಿಯಲ್ ಎಸ್ಟೇಟ್ ಎಕ್ಸ್​ಪೋ ಬಗ್ಗೆ ಅರುಣ್ ಯೋಗಿರಾಜ್ ಹೇಳಿದ್ದಿಷ್ಟು!