ದೊಡ್ಡ ಅನಾಹುತವೇನೂ ಸಂಭವಿಸಿಲ್ಲ, ಹಾಸನಾಂಬೆಯ ದರ್ಶನ ಪುನಃ ಆರಂಭವಾಗಿದೆ: ಕೆಎನ್ ರಾಜಣ್ಣ

ಜಿಲ್ಲಾಧಿಕಾರಿ ದುಷ್ಕೃತ್ಯ ಆಗಿರುವ ಸಾಧ್ಯತೆ ಇದೆ ಅಂತ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಸಚಿವ, ಹೌದು ಅಥವಾ ಇಲ್ಲ ಅಂತ ಸದ್ಯಕ್ಕೆ ಹೇಳಲಾಗದು ಅಂತ ಹೇಳಿ ತೆಲಂಗಾಣ ಪ್ರವಾಸದಲ್ಲಿರುವ ಸಿಎಂ ಸಿದ್ದರಾಮಯ್ಯ ಜಿಲ್ಲಾಧಿಕಾರಿಯಿಂದ ಮಾಹಿತಿ ಪಡೆದಿದ್ದಾರೆ ಎಂದರು.

ದೊಡ್ಡ ಅನಾಹುತವೇನೂ ಸಂಭವಿಸಿಲ್ಲ, ಹಾಸನಾಂಬೆಯ ದರ್ಶನ ಪುನಃ ಆರಂಭವಾಗಿದೆ: ಕೆಎನ್ ರಾಜಣ್ಣ
|

Updated on: Nov 10, 2023 | 7:29 PM

ಹಾಸನ: ಹಾಸನಾಂಬೆ ಉತ್ಸವದ (Hasanamba Utsav) 8ನೇ ದಿನವಾಗಿರುವ ಇಂದು ಬ್ಯಾರಿಕೇಡ್ ಗಳಲ್ಲಿ ವಿದ್ಯುತ್ ಪ್ರವಹಿಸಿದ ಘಟನೆ ರಾಜ್ಯದೆಲ್ಲೆಡೆ ಚರ್ಚೆಯಾಗುತ್ತಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆ ನಡೆದಾಗ ಜಿಲ್ಲಾ ಉಸ್ತವಾರಿ ಸಚಿವ ಕೆಎನ್ ರಾಜಣ್ಣ (KN Rajanna) ತುಮಕೂರಲ್ಲಿದ್ದರು. ಹಾಸನಕ್ಕೆ ತೆರಳುವ ಮೊದಲು ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ದೊಡ್ಡ ಆನಾಹುತಕಾರಿ ವಿದ್ಯಮಾನಗಳೇನೂ ಜರುಗಿಲ್ಲ, ತಮಗೆ ದೊರೆತಿರುವ ಮಾಹಿತಿಯ ಪ್ರಕಾರ ಜನ ಗಾಬರಿ ಮತ್ತು ಅತಂಕಕ್ಕೆ ಒಳಗಾಗಿದ್ದು ಸತ್ಯ, ಆದರೆ ಈಗ ಹಾಸನಾಂಬೆ ದೇವಸ್ಥಾನ ಆವರಣ ಸಾಮಾನ್ಯ ಸ್ಥಿತಿಗೆ ಮರಳಿದೆ, ದರ್ಶನದ ವ್ಯವಸ್ಥೆ ಮತ್ತೆ ಪ್ರಾರಂಭಗೊಂಡಿದೆ ಮತ್ತು ಭಕ್ತಾದಿಗಳು ದೇವಿಯ ದರ್ಶನ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು. ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao), ಸಂಸದ ಮತ್ತು ಶಾಸಕರು ಮಾತಾಡಿಸಿದ್ದಾರೆ, ಯಾರೂ ಗಾಬರಿಯಾಬೇಕಿಲ್ಲ ಎಂದು ರಾಜಣ್ಣ ಹೇಳಿದರು. ಜಿಲ್ಲಾಧಿಕಾರಿ ದುಷ್ಕೃತ್ಯ ಆಗಿರುವ ಸಾಧ್ಯತೆ ಇದೆ ಅಂತ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಸಚಿವ, ಹೌದು ಅಥವಾ ಇಲ್ಲ ಅಂತ ಸದ್ಯಕ್ಕೆ ಹೇಳಲಾಗದು ಅಂತ ಹೇಳಿ ತೆಲಂಗಾಣ ಪ್ರವಾಸದಲ್ಲಿರುವ ಸಿಎಂ ಸಿದ್ದರಾಮಯ್ಯ ಜಿಲ್ಲಾಧಿಕಾರಿಯಿಂದ ಮಾಹಿತಿ ಪಡೆದಿದ್ದಾರೆ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us
ಸಿಎಂಗೆ ತಾಕತ್ತಿದ್ದರೆ ತನ್ವೀರ್ ಪೀರಾ ವಿರುದ್ಧ ತನಿಖೆ ನಡೆಸಲಿ: ಯತ್ನಾಳ್
ಸಿಎಂಗೆ ತಾಕತ್ತಿದ್ದರೆ ತನ್ವೀರ್ ಪೀರಾ ವಿರುದ್ಧ ತನಿಖೆ ನಡೆಸಲಿ: ಯತ್ನಾಳ್
ವಿನಯ್, ನಮ್ರತಾನ ಕ್ಯಾಪ್ಟನ್ಸಿ ಟಾಸ್ಕ್​ನಿಂದ ಹೊರಗಿಟ್ಟ ಸ್ನೇಹಿತ್
ವಿನಯ್, ನಮ್ರತಾನ ಕ್ಯಾಪ್ಟನ್ಸಿ ಟಾಸ್ಕ್​ನಿಂದ ಹೊರಗಿಟ್ಟ ಸ್ನೇಹಿತ್
BBL ​ನಲ್ಲಿ ಜೆಟ್​ಪ್ಯಾಕ್ ಶೋ: IPL ನಲ್ಲಿ ಇದೆಲ್ಲ ಇಲ್ಲ ಎಂದ ಫ್ಯಾನ್ಸ್
BBL ​ನಲ್ಲಿ ಜೆಟ್​ಪ್ಯಾಕ್ ಶೋ: IPL ನಲ್ಲಿ ಇದೆಲ್ಲ ಇಲ್ಲ ಎಂದ ಫ್ಯಾನ್ಸ್
‘ಅನಿಮಲ್’ ಸಿನಿಮಾದ ವಾರ್ ಮಷಿನ್ ಡಿಸೈನ್ ಮಾಡಿದ ಕನ್ನಡಿಗ ಇವರೆ
‘ಅನಿಮಲ್’ ಸಿನಿಮಾದ ವಾರ್ ಮಷಿನ್ ಡಿಸೈನ್ ಮಾಡಿದ ಕನ್ನಡಿಗ ಇವರೆ
ಬೃಹತ್ ಗಾತ್ರದ ಹೆಬ್ಬಾವು ಸೆರೆ; ಉರಗ ತಜ್ಞನ ಮೇಲೆಯೇ ದಾಳಿಗೆ ಮುಂದಾದ ಪೈಥಾನ್
ಬೃಹತ್ ಗಾತ್ರದ ಹೆಬ್ಬಾವು ಸೆರೆ; ಉರಗ ತಜ್ಞನ ಮೇಲೆಯೇ ದಾಳಿಗೆ ಮುಂದಾದ ಪೈಥಾನ್
ಮಂತ್ರಘೋಷಗಳ ನಡುವೆ ಕಚೇರಿ ಪ್ರವೇಶಿಸಿದ ತೆಲಂಗಾಣ ನೂತನ ಸಿಎಂ ರೇವಂತ್ ರೆಡ್ಡಿ
ಮಂತ್ರಘೋಷಗಳ ನಡುವೆ ಕಚೇರಿ ಪ್ರವೇಶಿಸಿದ ತೆಲಂಗಾಣ ನೂತನ ಸಿಎಂ ರೇವಂತ್ ರೆಡ್ಡಿ
ಬೆಂಗಳೂರು: ಸರಗಳ್ಳತನ ಮಾಡ್ತಿದ್ದ ಮಾಜಿ ಶಾಸಕರ ಮೊಮ್ಮಗ ಸೇರಿ ಮೂವರ ಬಂಧನ
ಬೆಂಗಳೂರು: ಸರಗಳ್ಳತನ ಮಾಡ್ತಿದ್ದ ಮಾಜಿ ಶಾಸಕರ ಮೊಮ್ಮಗ ಸೇರಿ ಮೂವರ ಬಂಧನ
ಪೃಥ್ವಿಸಿಂಗ್ ಹಲ್ಲೆ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಕ್ರಮ: ಪರಮೇಶ್ವರ್
ಪೃಥ್ವಿಸಿಂಗ್ ಹಲ್ಲೆ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಕ್ರಮ: ಪರಮೇಶ್ವರ್
ಬೆಳಗಾವಿ ಅಧಿವೇಶನ: ಕುಮಾರಸ್ವಾಮಿ ಎಡವಟ್ಟಿನಿಂದ ರೇವಣ್ಣ ತೀವ್ರ ನೊಂದುಕೊಂಡರು
ಬೆಳಗಾವಿ ಅಧಿವೇಶನ: ಕುಮಾರಸ್ವಾಮಿ ಎಡವಟ್ಟಿನಿಂದ ರೇವಣ್ಣ ತೀವ್ರ ನೊಂದುಕೊಂಡರು
ಕೆರೆಯಲ್ಲಿ ಕಳೆದಿದ್ದ ಚಿನ್ನದ ಸರ ಹುಡುಕಿ ವಾರಸುದಾರರಿಗೆ ಹಸ್ತಾಂತರ
ಕೆರೆಯಲ್ಲಿ ಕಳೆದಿದ್ದ ಚಿನ್ನದ ಸರ ಹುಡುಕಿ ವಾರಸುದಾರರಿಗೆ ಹಸ್ತಾಂತರ