Sign In

By signing in or creating an account, you agree with Associated Broadcasting Company's Terms & Conditions and Privacy Policy.

1881ರಲ್ಲಿ ಸ್ಥಾಪನೆಯಾದ ಶಾಲೆಗೆ ಹೈಟೆಕ್ ಟಚ್; ಶಾಲೆಯ ‘ಕಲಾ ಕಲರವ’ ಹೇಗಿದೆ ನೋಡಿ

ಗೋಡೆ ಮೇಲೆ ಸೃಷ್ಟಿಯಾಗಿರುವ ಕಲಾ ಲೋಕದಲ್ಲಿ ಮಕ್ಕಳಂತೂ ಕಳೆದು ಹೋಗಿದ್ದಾರೆ. ಈ ‘ಕಲಾ ಕಲರವ' ಸೃಷ್ಟಿಯಾಗಿರುವುದು ಗದಗ ತಾಲೂಕಿನ ಹೊಸಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆಯ ಗೋಡೆ ಮೇಲೆ.

1881ರಲ್ಲಿ ಸ್ಥಾಪನೆಯಾದ ಶಾಲೆಗೆ ಹೈಟೆಕ್ ಟಚ್; ಶಾಲೆಯ ‘ಕಲಾ ಕಲರವ’ ಹೇಗಿದೆ ನೋಡಿ
ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆ
Follow us
TV9 Web
| Updated By: sandhya thejappa

Updated on: Dec 29, 2021 | 8:45 AM

ಗದಗ: ಸರ್ಕಾರಿ ಶಾಲೆ ಅಂದ್ರೆ ಮೂಗು ಮುರಿಯುವ ಕಾಲವೊಂದಿತ್ತು. ಆದರೆ ಇತ್ತೀಚೆಗೆ ಸರ್ಕಾರಿ ಶಾಲೆಗಳಿಗೆ ಹೈಟೆಕ್ ಸ್ಪರ್ಶ ನೀಡಲಾಗುತ್ತಿದೆ. ವಿಭಿನ್ನ ಥೀಮ್ನಲ್ಲಿ ಸರ್ಕಾರಿ ಶಾಲೆಗಳನ್ನ ರೆಡಿ ಮಾಡಲಾಗುತ್ತಿದೆ. ಹೀಗಾಗಿ ಮಕ್ಕಳು ಸರ್ಕಾರಿ ಶಾಲೆಗಳತ್ತ ವಾಲುತ್ತಿದ್ದಾರೆ. ಗದಗ ಜಿಲ್ಲೆಯಲ್ಲೂ ವಿಭಿನ್ನ ಥೀಮ್ ಇಟ್ಟುಕೊಂಡು ಸರ್ಕಾರಿ ಶಾಲೆಯೊಂದಕ್ಕೆ ಹೈಟೆಕ್ ಟಚ್ ಕೊಟ್ಟಿದ್ದಾರೆ. ಈ ಶಾಲೆ ನೋಡಿದರೆ ಇದು ಸರ್ಕಾರಿ ಶಾಲೆನಾ ಎನ್ನುವಷ್ಟು ಸುಂದರವಾಗಿದೆ.

ಗೋಡೆ ಮೇಲೆ ಸೃಷ್ಟಿಯಾಗಿರುವ ಕಲಾ ಲೋಕದಲ್ಲಿ ಮಕ್ಕಳಂತೂ ಕಳೆದು ಹೋಗಿದ್ದಾರೆ. ಈ ‘ಕಲಾ ಕಲರವ’ ಸೃಷ್ಟಿಯಾಗಿರುವುದು ಗದಗ ತಾಲೂಕಿನ ಹೊಸಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲೆಯ ಗೋಡೆ ಮೇಲೆ. ಶತಮಾನದ ಶಾಲೆಗೆ ಸದ್ಯ ಹೈಟೆಕ್ ಟಚ್ ನೀಡಲಾಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. ಶಾಲೆ ಪ್ರವೇಶವಾಗುತ್ತಿದ್ದಂತೆ ಐತಿಹಾಸಿಕ ಸ್ಥಳಗಳ ಚಿತ್ರ ಕಣ್ಣಿಗೆ ಮುದ ನೀಡುತ್ತದೆ. ಹಂಪಿ, ಮೈಸೂರು ದಸರಾ ವೈಭವ, ಗದಗನ ವೀರನಾರಾಯಣ ದೇವಸ್ಥಾನ ಸೇರಿದಂತೆ ಅನೇಕ ಚಿತ್ರಗಳನ್ನ ಬಿಡಿಸಲಾಗಿದೆ.

ಶಾಲೆ ಕಾಂಪೌಂಡ್ ನೋಡುತ್ತಿದ್ದರೆ ರಾಜ್ಯ ಸುತ್ತಿದ ಅನುಭವ ನೀಡುತ್ತದೆ. ದ್ವಾರದ ಕಮಾನಿಗೆ ಡೂಡಲ್ ಶೈಲಿಯ ಚಿತ್ರಕಲೆ ಬಿಡಿಸಲಾಗಿದ್ದು, ಹೆಚ್ಚು ಆಕರ್ಷಿಸುತ್ತಿದೆ. ಒಳ ಭಾಗದಲ್ಲಿ ಇಂಡಿಯನ್ ಹಾಗೂ ವೆಸ್ಟರ್ನ್ ಶೈಲಿಯ ಸರಸ್ವತಿ ವರ್ಣ ಚಿತ್ರ, ವರ್ಣಮಾಲೆಯ ಚಿತ್ರ ಹಾಗೂ ಚಿತ್ರ ಸಹಿತ ಮಹಾನ್ ನಾಯಕರ ನುಡಿಮುತ್ತುಗಳು ರಾರಾಜಿಸುತ್ತವೆ. ಶಾಲೆಯ ಎದುರು ಗೋಡೆಯ ಮೇಲಿರುವ ಡೂಡಲ್ ಶೈಲಿಯ ಪೇಂಟಿಂಗ್ ಮಕ್ಕಳನ್ನ ಹೆಚ್ಚು ಆಕರ್ಷಿಸುತ್ತದೆ.

ಚಿತ್ರಕಲೆಯಲ್ಲಿನ ಅಕ್ಷರ ಗುರುತಿಸುವ ಮೂಲಕ ಮಕ್ಕಳ ಐಕ್ಯೂ ಹೆಚ್ಚು ಮಾಡುವ ವ್ಯವಸ್ಥೆ ಇಲ್ಲಿದೆ. ಗೋಡೆ ಬರಹದ ಚಿತ್ರಗಳು ಮಕ್ಕಳನ್ನ ಶಾಲೆಯತ್ತ ಕೈ ಬೀಸಿ ಕರೆಯುತ್ತವೆ.

ಶಾಲಾ ಕೊಠಡಿ

1881 ರಲ್ಲೇ ಸ್ಥಾಪನೆಯಾದ ಶಾಲೆಗೆ ಹೈಟೆಕ್ ಟಚ್ ನೀಡಬೇಕು ಅಂತಾ ಶಾಲೆ ಶಿಕ್ಷಕರು ಯೋಜನೆ ರೂಪಿಸಿದ್ದರು. ಐದು ಲಕ್ಷ ರೂಪಾಯಿ ಅನುದಾನದಲ್ಲಿ ಹೈಟೆಕ್ ಲ್ಯಾಬ್ ಸ್ಥಾಪಿಸಲಾಗಿದೆ. ಶಾಮ್ ಪ್ರಕಾಶ್ ಮುಖರ್ಜಿ ರೂರಲ್ ಡೆವೆಲಪ್ಮೆಂಟ್ ಟ್ರಸ್ಟ್ನಿಂದ 5 ಲಕ್ಷ ಅನುದಾನ ಬಂದಿದೆ. ಈ ಅನುದಾನದಲ್ಲಿ ಎರಡು ಹೈಟೆಕ್ ಸೈನ್ಸ್ ಲ್ಯಾಬ್ ಮಾಡಲಾಗಿದೆ. ಸ್ಮಾರ್ಟ್ ಕ್ಲಾಸ್, ಗಣಿತವನ್ನ ಪರಿಣಾಮಕಾರಿ ಬೋಧಿಸುವ ನಿಟ್ಟಿನಲ್ಲಿ ಮ್ಯಾಥ್ಸ್ ಮಾಡಲ್ಗಳನ್ನ ಇರಿಸಲಾಗಿದೆ. ಕಬ್ಬಿಣದ ಕಡಲೆ ಎನ್ನುವ ಗಣಿತ ಇಲ್ಲಿನ ಮಕ್ಕಳು ಸಲಿಸಾಗಿ ಕಲಿಯುತ್ತಿದ್ದಾರೆ.

ಶಿಕ್ಷಣ ತರಬೇತಿ ಇಲಾಖೆ ಅಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳು ‘ಕಲಾ ಕಲರವ’ ಎನ್ನುವ ಪರಿಕಲ್ಪನೆಯಲ್ಲಿ ಗೋಡೆಗಳ ಮೇಲೆ ಚಿತ್ರಗಳನ್ನ ಬಿಡಿಸಲಾಗಿದೆ. ಗ್ರಾಮಾಂತರ ವಿಭಾಗದ 12 ಕಲಾ ಶಿಕ್ಷಕರು ಕೊರೊನಾ ರಜೆಯಲ್ಲಿ ಶಾಲೆ ಪೇಂಟಿಂಗ್ ಕೆಲಸ ಮಾಡಿದಾರೆ. ಪೇಟಿಂಗ್ಗಾಗಿ 1 ಲಕ್ಷ 50 ಸಾವಿರ ರೂಪಾಯಿ ವ್ಯಯವಾಗಿದೆ. ಜಿಲ್ಲಾ ಪಂಚಾಯತಿ ಅಡಿಯಲ್ಲಿ ಫ್ಲಡ್ ರಿಲೀಫ್ಗೆ ಅಂತಾ ಬಂದಿದ್ದ ಅನುದಾನದಲ್ಲಿ ಉಳಿತಾಯವಾದ ಹಣವನ್ನ ಬಣ್ಣದ ಖರ್ಚಿಗೆ ಬಳಸಲಾಗಿದೆ. ಉಳಿದಂತೆ ಇಲಾಖೆ ಆದೇಶದ ಮೇರೆಗೆ ಕಲಾ ಶಿಕ್ಷಕರು ಕೆಲಸ ಮಾಡಿದಾರೆ. ಸದ್ಯ ಬಹುತೇಕ ಪೇಂಟಿಂಗ್ ಕೆಲಸ ಮುಗಿದಿದ್ದು, ಕಲರ್ ಫುಲ್ ಶಾಲೆಗೆ ದಾಖಲಾತಿ ಹಾಜರಾತಿ ಗಣನೀಯವಗಾಗಿ ಏರಿಕೆಯಾಗಿದೆ ಅಂತ ಶಿಕ್ಷಕಿ ಎನ್ ಎಸ್ ಕಮತ ತಿಳಿಸಿದರು.

ವರದಿ: ಸಂಜೀವ ಪಾಂಡ್ರೆ

ಇದನ್ನೂ ಓದಿ

ಕಾಂಗ್ರೆಸ್​ ಶಾಸಕರಿಂದ ಪೊಲೀಸರ ಪ್ಯಾಂಟ್ ಒದ್ದೆಯಾಗಬಹುದು ಎಂದ ನವಜೋತ್ ಸಿಂಗ್ ಸಿಧು ವಿರುದ್ಧ ಮಾನನಷ್ಟ ನೋಟಿಸ್ ಜಾರಿ

Flipkart Year End sale: ಹೊಸ ವರ್ಷಕ್ಕೆ ಫ್ಲಿಪ್​ಕಾರ್ಟ್​ನಲ್ಲಿ ಇಯರ್ ಎಂಡ್ ಸೇಲ್: ಅಬ್ಬಾ ಸ್ಮಾರ್ಟ್​ಫೋನ್​ಗಳಿಗೆ ಬಂಪರ್ ಡಿಸ್ಕೌಂಟ್

ರಾಜಸ್ಥಾನದ ರಾಜ್ಯಪಾಲ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ನಲ್ಲಿ ಬೆಂಕಿ
ರಾಜಸ್ಥಾನದ ರಾಜ್ಯಪಾಲ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ನಲ್ಲಿ ಬೆಂಕಿ
‘ಕೆಡಿ’ ಸಿನಿಮಾದ ನಿಜವಾದ ‘ಹೀರೋ’ ಅನ್ನು ಕೊಂಡಾಡಿದ ಧ್ರುವ ಸರ್ಜಾ
‘ಕೆಡಿ’ ಸಿನಿಮಾದ ನಿಜವಾದ ‘ಹೀರೋ’ ಅನ್ನು ಕೊಂಡಾಡಿದ ಧ್ರುವ ಸರ್ಜಾ
ಹೊಸ ಚೆಂಡಿನಲ್ಲಿ ನಾನೇ ಬೆಸ್ಟ್; ರೋಹಿತ್​ಗೆ ಸಿರಾಜ್ ತಿರುಗೇಟು
ಹೊಸ ಚೆಂಡಿನಲ್ಲಿ ನಾನೇ ಬೆಸ್ಟ್; ರೋಹಿತ್​ಗೆ ಸಿರಾಜ್ ತಿರುಗೇಟು
ಮಹಿಳೆಯರನ್ನು ಕೋಟ್ಯಾಧಿಪತಿ ಮಾಡುತ್ತೇವೆ;WITT ಶೃಂಗಸಭೆಯಲ್ಲಿ ಸ್ಮೃತಿ ಇರಾನಿ
ಮಹಿಳೆಯರನ್ನು ಕೋಟ್ಯಾಧಿಪತಿ ಮಾಡುತ್ತೇವೆ;WITT ಶೃಂಗಸಭೆಯಲ್ಲಿ ಸ್ಮೃತಿ ಇರಾನಿ
2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್
2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್
ಅರ್ಜುನ್ ಜನ್ಯಗೆ ಹಾಡು ಹೊಳೆಯುವುದೆಲ್ಲಿ: ಸಂಗತಿ ವಿವರಿಸಿದ ಪ್ರೇಮ್
ಅರ್ಜುನ್ ಜನ್ಯಗೆ ಹಾಡು ಹೊಳೆಯುವುದೆಲ್ಲಿ: ಸಂಗತಿ ವಿವರಿಸಿದ ಪ್ರೇಮ್
ಮ್ಯಾನ್ಮಾರ್​ಗೆ ಸಹಾಯ ಮಾಡುವ ಆಪರೇಷನ್​ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?
ಮ್ಯಾನ್ಮಾರ್​ಗೆ ಸಹಾಯ ಮಾಡುವ ಆಪರೇಷನ್​ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
ಬಿಜೆಪಿ ಎಲ್ಲ ಭಾಷೆಯನ್ನೂ ಗೌರವಿಸುತ್ತದೆ;WITT ಶೃಂಗಸಭೆಯಲ್ಲಿ ಕಿಶನ್ ರೆಡ್ಡಿ
ಬಿಜೆಪಿ ಎಲ್ಲ ಭಾಷೆಯನ್ನೂ ಗೌರವಿಸುತ್ತದೆ;WITT ಶೃಂಗಸಭೆಯಲ್ಲಿ ಕಿಶನ್ ರೆಡ್ಡಿ
ಯತ್ನಾಳ್ ಒಬ್ಬ ಒಳ್ಳೆಯ ನಾಯಕ ಅನ್ನೋದ್ರಲ್ಲಿ ಎರಡು ಮಾತಿಲ್ಲ: ತಂಗಡಿಗಿ
ಯತ್ನಾಳ್ ಒಬ್ಬ ಒಳ್ಳೆಯ ನಾಯಕ ಅನ್ನೋದ್ರಲ್ಲಿ ಎರಡು ಮಾತಿಲ್ಲ: ತಂಗಡಿಗಿ