Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೋಳಿ ಸಾಂಸ್ಕೃತಿಕ ಮಾನ್ಯತೆಗೆ ಗ್ರೀನ್ ಸಿಗ್ನಲ್: ಹಲವಾರು ವರ್ಷಗಳಿಂದ ಇದ್ದ ಬೇಡಿಕೆಗೆ ಸ್ಪಂದಿಸಿದ ಸಚಿವರು

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿರುವ ಅರವಿಂದ ಲಿಂಬಾವಳಿ ಇದೀಗ ಸರ್ಕಾರದ ವತಿಯಿಂದಲೇ ಹೋಳಿ ಆಚರಣೆಗೆ ಸೈ ಎಂದು ಭರವಸೆ ನೀಡಿದ್ದು, ಇದೇ ವರ್ಷದಿಂದಲೇ ಅನುದಾನ ನೀಡುವ ವಾಗ್ದಾನವನ್ನು ಸಹ ಸಚಿವರು ನೀಡಿದ್ದಾರೆ.

ಹೋಳಿ ಸಾಂಸ್ಕೃತಿಕ ಮಾನ್ಯತೆಗೆ ಗ್ರೀನ್ ಸಿಗ್ನಲ್: ಹಲವಾರು ವರ್ಷಗಳಿಂದ ಇದ್ದ ಬೇಡಿಕೆಗೆ ಸ್ಪಂದಿಸಿದ ಸಚಿವರು
ಅರವಿಂದ ಲಿಂಬಾವಳಿ
Follow us
preethi shettigar
| Updated By: ganapathi bhat

Updated on: Mar 15, 2021 | 7:52 PM

ಬಾಗಲಕೋಟೆ: ದೇಶದ ಎರಡನೇ ಅತಿ ದೊಡ್ಡ ಹೋಳಿ ಆಚರಣೆಗೆ ಪ್ರಸಿದ್ದವಾದ ನಗರ ಎಂದರೆ ಅದು ಬಾಗಲಕೋಟೆ. ಈ ನಗರದ ಹೋಳಿ ಹಬ್ಬಕ್ಕೆ ಐತಿಹಾಸಿಕ ಹಿನ್ನೆಲೆ ಇದ್ದು, ನಗರದಲ್ಲಿ ಪುರಾತನ ಕಾಲದಿಂದಲೂ ಬಂಡಿ ಹೋಳಿ ಆಚರಿಸುತ್ತಾ ಹಲಗೆ ವಾದನಕ್ಕೆ ಸಂಭ್ರಮ ಪಡುತ್ತಾರೆ. ಮೊದಲು ಹತ್ತು ದಿನಗಳ ಕಾಲ ನಡೆಯುತ್ತಿದ್ದ ಹೋಳಿ ಆಚರಣೆ ಸದ್ಯ ನಾಲ್ಕು ದಿನಕ್ಕೆ ಬಂದು ನಿಂತಿದೆ. ಇನ್ನು ಹೋಳಿಯನ್ನು ಸಾಂಸ್ಕೃತಿಕ ಮಾನ್ಯತೆ ನೀಡಬೇಕೆಂಬ ಕೂಗು ಹಲವಾರು ವರ್ಷಗಳಿಂದ ಇತ್ತು. ಸದ್ಯ ಅದಕ್ಕೆ ಸಚಿವರಿಂದ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಈ ಬಾರಿಯ ಹೋಳಿಗೆ ಮತ್ತಷ್ಟು ರಂಗು ಬರಲಿದೆ.

ಶಿವರಾತ್ರಿ ಅಮಾವಾಸ್ಯೆ ದಿನದಿಂದಲೇ ಬಾಗಲಕೋಟೆಯಲ್ಲಿ ಹಲಗೆ ಮೇಳ ನಡೆಸಲಾಗುತ್ತದೆ. ಹೋಳಿ ಹಬ್ಬದ ಈ 15 ದಿನ ಕೋಟೆ ನಗರಿಯಲ್ಲಿ ಹಲಗೆ ಮೇಳ ಇರಲಿದ್ದು, ಸೋಗಿನ ಬಂಡಿಯದ್ದು ಮತ್ತೊಂದು ಆಕರ್ಷಣೆ. ಹೋಳಿ ಹುಣ್ಣಿಮೆಯಿಂದ ಮೂರು-ನಾಲ್ಕು ದಿನ ನಡೆಯುವ ಬಣ್ಣದೋಕುಳಿ ಸಂಭ್ರಮ ಹೇಳತೀರದು. ದೇಶದಲ್ಲಿ ಕೋಲ್ಕತ್ತಾ ಬಳಿಕ ಬಾಗಲಕೋಟೆಯಲ್ಲಿ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಹೋಳಿ ನಡೆಯುತ್ತಾ ಬಂದಿದೆ. ದೇಶದ ಎರಡನೇ ಅತಿ ದೊಡ್ಡ ಹೋಳಿ ಎಂಬ ಹೆಸರು ಬಾಗಲಕೋಟೆಗೆ ಇದೆ. ಆದರೆ ಮುಳುಗಡೆಗೆ ಸಿಕ್ಕು ಬಾಗಲಕೋಟೆ ಮೂರು ಭಾಗವಾಗಿ ಹೋಗಿದ್ದರಿಂದ ಇತ್ತೀಚಿನ ವರ್ಷಗಳಲ್ಲಿ ಹೋಳಿ ಸಂಭ್ರಮಕ್ಕೆ ಸ್ವಲ್ಪ ಮಂಕು ಕವಿಯುತ್ತಿರುವುದು ಸುಳ್ಳಲ್ಲ.

ಹೀಗಾಗಿಯೇ ಬಾಗಲಕೋಟೆ ಹೋಳಿ ಸಂಭ್ರಮ ಮುಂದಿನ ಪೀಳಿಗೆಗೆ ಪರಿಚಯಿಸುವ ಹಾಗೂ ಆ ಸಂಭ್ರಮ ಇನ್ನಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಪುಣೆ ಗಣೇಶ ಉತ್ಸವ ಮಾದರಿಯಲ್ಲಿ ಬಾಗಲಕೋಟೆ ಹೋಳಿ ಹಬ್ಬಕ್ಕೆ ಸಾಂಸ್ಕೃತಿಕ ರೂಪ ನೀಡಬೇಕು. ಇದು ಸರ್ಕಾರದ ವತಿಯಿಂದ ನಡೆಯಬೇಕು. ಇದಕ್ಕಾಗಿ ಪ್ರತಿ ವರ್ಷ ಅನುದಾನ ಮೀಸಲಿಟ್ಟು, ಉತ್ಸವ ನಿರಂತರವಾಗಿ ನಡೆಯುವಂತಾಗಬೇಕು ಎನ್ನುವ ಬೇಡಿಕೆ ಹಲವು ವರ್ಷಗಳಿಂದ ಇತ್ತು. ಆದರೆ ಇದು ಆಗಿರಲಿಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿರುವ ಅರವಿಂದ ಲಿಂಬಾವಳಿ ಇದೀಗ ಸರ್ಕಾರದ ವತಿಯಿಂದಲೇ ಹೋಳಿ ಆಚರಣೆಗೆ ಸೈ ಎಂದು ಭರವಸೆ ನೀಡಿದ್ದು, ಇದೇ ವರ್ಷದಿಂದಲೇ ಅನುದಾನ ನೀಡುವ ವಾಗ್ದಾನವನ್ನು ಸಹ ಸಚಿವರು ನೀಡಿದ್ದಾರೆ.

holi

ಬಾಗಲಕೋಟೆಯಲ್ಲಿ ಹೋಳಿ ಆಚರಣೆ

ಅರವಿಂದ ಲಿಂಬಾವಳಿ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಬಳಿಕ ಮಾ.13 ರಂದು ಬಾಗಲಕೋಟೆಗೆ ಆಗಮಿಸಿದ್ದರು. ಈ ವೇಳೆ ಸಚಿವರನ್ನು ಭೇಟಿ ಮಾಡಿದ ಬಾಗಲಕೋಟೆ ಹೋಳಿ ಆಚರಣಾ ಸಮಿತಿ ಮುಖಂಡರು ಬಾಗಲಕೋಟೆ ಹೋಳಿಗೆ ಸಾಂಸ್ಕೃತಿಕ ರೂಪ ನೀಡುವ ನಿಟ್ಟಿನಲ್ಲಿ ಸರ್ಕಾರದಿಂದ ಉತ್ಸವ ಆಚರಿಸುವಂತಾಗಬೇಕು ಎನ್ನುವ ಮನವಿಯನ್ನು ಕೊಟ್ಟರು. ಅದಕ್ಕೆ ಸ್ಪಂದಿಸಿರುವ ಸಚಿವರು ಅಸ್ತು ಎಂದಿದ್ದಾರೆ.

holi

ಬಣ್ಣ ಹಚ್ಚಿ ಹೋಳಿ ಆಚರಣೆ ಮಾಡುವುದು ವಾಡಿಕೆ

ಬಾಗಲಕೋಟೆ ಹೋಳಿ ಆಚರಣೆಯ ಹಿಂದೆ ಅಸ್ಪೃಶ್ಯತೆ ನಿವಾರಣೆಯ ದಿವ್ಯ ಸಂದೇಶವೂ ಇದೆ. ಬಾಗಲಕೋಟೆ ಬಾಬುದಾರ ಕುಟುಂಬದಿಂದ ದಲಿತರ ಮನೆಗೆ ತೆರಳಿ ಕಾಮದಹನಕ್ಕೆ ಬೆಂಕಿ ತರುವುದಲ್ಲದೆ ಹೋಳಿ ಆಚರಣೆಗೆ ಅವರಿಗೆ ಆಹ್ವಾನ ನೀಡಿ ಬರುವ ಪದ್ಧತಿ ಹಿಂದಿನಿಂದಲೂ ಇದೆ. ಹುಣ್ಣಿಮೆಯ ಇಡೀ ದಿನ ಬಾಗಲಕೋಟೆಯ ಎಲ್ಲ ಗಲ್ಲಿಗಳಲ್ಲೂ ಕಾಮದಹನ ನಡೆಯುತ್ತದೆ. ಬಳಿಕ ಮೂರರಿಂದ ನಾಲ್ಕು ದಿನ ಬಣ್ಣ ದೋಕುಳಿ ಸಂಭ್ರಮ ನಡೆಯುತ್ತದೆ.

holi

ಬಾಗಲಕೋಟೆಯಲ್ಲಿ ಹೋಳಿ ಆಚೆಣೆಗೆ ಸರ್ಕಾರದಿಂದ ಅನುಮತಿ

ಹಿಂದೆ ಹೋಳಿ ಆಚರಣೆ ಹತ್ತು ದಿನಗಳ ಕಾಲ ನಡೆಯುತ್ತಿತ್ತು. ನಂತರ ಅದು ಒಂದು ವಾರಕ್ಕೆ ಸೀಮಿತವಾಗಿತ್ತು, ಸದ್ಯ ಮೂರರಿಂದ ನಾಲ್ಕು ದಿನಗಳ ಕಾಲ ನಡೆಯುತ್ತದೆ. ಹಾಗೆಯೇ ಪ್ರತಿ ದಿನ ರಾತ್ರಿ ಸೋಗಿನ ಬಂಡಿಗಳ ಸಂಭ್ರಮ ಇರುತ್ತದೆ. ಬಣ್ಣದ ಬಂಡಿಗಳ ಮೂಲಕ ಬಣ್ಣದೋಕುಳಿ ಜೊತೆಗೆ ಹಲಗೆ ವಾದ್ಯದ ಸದ್ದು ಈಗಾಗಲೇ ಶುರುವಾಗಿದ್ದು, ಎಲ್ಲವನ್ನೂ ನೋಡೋದೆ ಒಂದು ಸಂಭ್ರಮದ ಕ್ಷಣ. ಇನ್ನು ಈ ಬಾರಿ ಸರ್ಕಾರದಿಂದಲೇ ಅನುಮತಿ ಸಿಕ್ಕಿದ್ದು, ಹೋಳಿಯ ಹಳೆ ವೈಭವ ಮರುಕಳಿಸುತ್ತದೆ.

ಇದನ್ನೂ ಓದಿ: ಚಿತ್ರದುರ್ಗದಲ್ಲಿ ಒಂದು ವಾರ ನಡೆಯುವ ಜಾತ್ರೆಗೆ ಆಗಮಿಸಿದ ಹೊರ ರಾಜ್ಯದ ಭಕ್ತರು 

ಬೆನ್ನು ನೋವಿದ್ದರೂ ಕುಂಟುತ್ತಾ ಬಂದು ‘ವಾಮನ’ ಸಿನಿಮಾ ನೋಡಿದ ದರ್ಶನ್
ಬೆನ್ನು ನೋವಿದ್ದರೂ ಕುಂಟುತ್ತಾ ಬಂದು ‘ವಾಮನ’ ಸಿನಿಮಾ ನೋಡಿದ ದರ್ಶನ್
ರೈಲ್ವೆ ಹಳಿ ಮೇಲೆ ಮಲಗಿ ತನ್ನ ಮೇಲೆ ರೈಲು ಹೋಗುವ ರೀಲ್ಸ್ ಮಾಡಿದ ಯುವಕ!
ರೈಲ್ವೆ ಹಳಿ ಮೇಲೆ ಮಲಗಿ ತನ್ನ ಮೇಲೆ ರೈಲು ಹೋಗುವ ರೀಲ್ಸ್ ಮಾಡಿದ ಯುವಕ!
ಈ ಸಿನಿಮಾ ಒಪ್ಪಿಕೊಳ್ಳಲು ಭಯವಾಯ್ತು; ಅಜ್ಞಾತವಾಸಿ ಬಗ್ಗೆ ರಂಗಾಯಣ ರಘು ಮಾತು
ಈ ಸಿನಿಮಾ ಒಪ್ಪಿಕೊಳ್ಳಲು ಭಯವಾಯ್ತು; ಅಜ್ಞಾತವಾಸಿ ಬಗ್ಗೆ ರಂಗಾಯಣ ರಘು ಮಾತು
ಹಣ ಗಳಿಸುತ್ತಿಲ್ಲವೆಂದು ಗಂಡನಿಗೆ ಹೆಂಡತಿಯಿಂದ ಕಪಾಳಮೋಕ್ಷ; ಆಮೇಲೇನಾಯ್ತು?
ಹಣ ಗಳಿಸುತ್ತಿಲ್ಲವೆಂದು ಗಂಡನಿಗೆ ಹೆಂಡತಿಯಿಂದ ಕಪಾಳಮೋಕ್ಷ; ಆಮೇಲೇನಾಯ್ತು?
‘ವಾಮನ’ ಸಿನಿಮಾ ನೋಡಲು ಬಂದ ದರ್ಶನ್; ಚಿಕ್ಕಣ್ಣ, ಧನ್ವೀರ್ ಜತೆ ಕುಶಲೋಪರಿ
‘ವಾಮನ’ ಸಿನಿಮಾ ನೋಡಲು ಬಂದ ದರ್ಶನ್; ಚಿಕ್ಕಣ್ಣ, ಧನ್ವೀರ್ ಜತೆ ಕುಶಲೋಪರಿ
ವಾಹನ ಹತ್ತದೆ ಕಾರ್ಯಕರ್ತರೊಂದಿಗೆ ರ‍್ಯಾಲಿಯಲ್ಲಿ ನಡೆದ ವಿಜಯೇಂದ್ರ
ವಾಹನ ಹತ್ತದೆ ಕಾರ್ಯಕರ್ತರೊಂದಿಗೆ ರ‍್ಯಾಲಿಯಲ್ಲಿ ನಡೆದ ವಿಜಯೇಂದ್ರ
ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಬೆಲೆ ಏರಿಕೆ ಅನಿವಾರ್ಯ ಎಂದ ಕೈ ಶಾಸಕ
ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಬೆಲೆ ಏರಿಕೆ ಅನಿವಾರ್ಯ ಎಂದ ಕೈ ಶಾಸಕ
ಕೇಂದ್ರ ಸರ್ಕಾರ ಗ್ಯಾಸ್ ಸಿಲಿಂಡರ್ ಬೆಲೆ 50 ರೂ ಜಾಸ್ತಿ ಮಾಡಿಲ್ಲವೇ? ರೆಡ್ಡಿ
ಕೇಂದ್ರ ಸರ್ಕಾರ ಗ್ಯಾಸ್ ಸಿಲಿಂಡರ್ ಬೆಲೆ 50 ರೂ ಜಾಸ್ತಿ ಮಾಡಿಲ್ಲವೇ? ರೆಡ್ಡಿ
ಬಾನು ಅವರ 12 ಉತ್ಕೃಷ್ಟ ಕತೆಗಳ ಸಂಕಲನ ಬೂಕರ್ ಪ್ರಶಸ್ತಿಗೆ ಶಾರ್ಟ್​ಲಿಸ್ಟ್ !
ಬಾನು ಅವರ 12 ಉತ್ಕೃಷ್ಟ ಕತೆಗಳ ಸಂಕಲನ ಬೂಕರ್ ಪ್ರಶಸ್ತಿಗೆ ಶಾರ್ಟ್​ಲಿಸ್ಟ್ !
ಇನ್ಮುಂದೆ KSRTC ಬಸ್​ ಟ್ರ್ಯಾಕ್​ ಮಾಡಬಹುದು: ಹೇಗೆ? ವಿಡಿಯೋ ನೋಡಿ
ಇನ್ಮುಂದೆ KSRTC ಬಸ್​ ಟ್ರ್ಯಾಕ್​ ಮಾಡಬಹುದು: ಹೇಗೆ? ವಿಡಿಯೋ ನೋಡಿ