ಅಪಖ್ಯಾತಿ ಗಳಿಸುವುದರಲ್ಲೇ ಹಾವೇರಿ ನಂಬರ್ 1; ಇದೀಗ ಮದ್ರಾಸ್ ಐ ರೋಗದಲ್ಲೂ ಟಾಪ್

ಕೊರೋನಾ ಸಾವು ಸಂಖ್ಯೆಯಲ್ಲಿ ಮಾತ್ರವಲ್ಲದೆ ಹಲವು ಅಪಖ್ಯಾತಿ ಗಳಿಸುವುದರಲ್ಲಿ ಹಾವೇರಿ ಮೊದಲ ಸ್ಥಾನದಲ್ಲಿದೆ. ಲಂಪಿ ಸ್ಕಿನ್ ಕಾಯಿಲೆ ನಂತರ ಇದೀಗ ಮದ್ರಾಸ್ ಐ ಎಂಬ ಕಣ್ಣಿನ ರೋಗ ಜಿಲ್ಲೆಯನ್ನು ಕಾಡುತ್ತಿದೆ.

ಅಪಖ್ಯಾತಿ ಗಳಿಸುವುದರಲ್ಲೇ ಹಾವೇರಿ ನಂಬರ್ 1; ಇದೀಗ ಮದ್ರಾಸ್ ಐ ರೋಗದಲ್ಲೂ ಟಾಪ್
ಹಾವೇರಿಯಲ್ಲಿ ಹೆಚ್ಚುತ್ತಿರುವ ಮದ್ರಾಸ್ ಐ ಪ್ರಕರಣಗಳು
Edited By: Rakesh Nayak Manchi

Updated on: Aug 11, 2023 | 3:37 PM

ಹಾವೇರಿ, ಆಗಸ್ಟ್ 11: ಕೊರೋನಾ ಸಾವು ಸಂಖ್ಯೆಯಲ್ಲಿ ಮಾತ್ರವಲ್ಲದೆ ಹಲವು ಅಪಖ್ಯಾತಿ ಗಳಿಸುವುದರಲ್ಲಿ ಹಾವೇರಿ (Haveri) ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಲಂಪಿ ಸ್ಕಿನ್ ಕಾಯಿಲೆ (Lumpy skin disease) ನಂತರ ಇದೀಗ ಮದ್ರಾಸ್ ಐ (Madras Eye) ಎಂಬ ಕಣ್ಣಿನ ರೋಗ ಜಿಲ್ಲೆಯನ್ನು ಕಾಡುತ್ತಿದೆ. ಹೌದು, ಜಿಲ್ಲೆಯಲ್ಲಿ ಮದ್ರಾಸ್ ಐ ಹಾವಳಿ ಹೆಚ್ಚಾಗುತ್ತಿದ್ದು, ಜನರು ಕಂಗೆಟ್ಟಿದ್ದಾರೆ.

ಕೊರೋನಾ ಸಾವು ಪ್ರಕರಣದಲ್ಲಿ ನಂಬರ್ 1 ಆಗಿದ್ದ ಹಾವೇರಿ ಜಿಲ್ಲೆ, ಲಂಪಿ ಸ್ಕಿನ್ ಕಾಯಿಲೆಯಿಂದ ದನ ಕರುಗಳ ಸಾವಿನಲ್ಲೂ ಅಗ್ರಸ್ಥಾನ ಪಡೆದಿದೆ. ರೈತರ ಆತ್ಮಹತ್ಯೆಯಲ್ಲೂ ಮೊದಲ ಸ್ಥಾನದಲ್ಲಿರುವ ಹಾವೇರಿ ಇದೀಗ ಕಣ್ಣುಬೇನೆ ರೋಗದಲ್ಲೂ ಮುಂದಿದೆ.

ಇದನ್ನೂ ಓದಿ: ಕಳೆದ ಒಂದು ವಾರದಲ್ಲಿ ಕರ್ನಾಟಕದಲ್ಲಿ 40 ಸಾವಿರ ಮದ್ರಾಸ್ ಐ ಪ್ರಕರಣಗಳು ಪತ್ತೆ

ಹೌದು, ಮದ್ರಾಸ್ ಐ ರೋಗದ ಪ್ರಕರಣಗಳು ಇಡೀ ರಾಜ್ಯದಲ್ಲಿ 64,506 ಕೇಸ್​ಗಳು ಇವೆ. ಈ ಪೈಕಿ 9,901 ಪ್ರಕರಣಗಳು ಹಾವೇರಿ ಜಿಲ್ಲೆಯಲ್ಲೇ ಪತ್ತೆಯಾಗಿದೆ. ಇದು ಹಾವೇರಿ ಜಿಲ್ಲೆಯ ಜನತೆಯ ನಿದ್ದೆಗೆಡಿಸಿದೆ. ಇನ್ನು, ಮದ್ರಾಸ್ ಐ ರೋಗ ಪತ್ತೆ ಪ್ರಕರಣದಲ್ಲಿ ಬೀದರ್​ಗೆ 2ನೇ ಸ್ಥಾನ, ಶಿವಮೊಗ್ಗ ಜಿಲ್ಲೆ 3ನೇ ಸ್ಥಾನದಲ್ಲಿದೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಹೆಚ್ಚಾದ ಮದ್ರಾಸ್ ಐ ರೋಗ: ಮಾರ್ಗಸೂಚಿ ಹೊರಡಿಸಿದ ಆರೋಗ್ಯ ಇಲಾಖೆ

ಮದ್ರಾಸ್ ಐ ರೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಜಿಲ್ಲಾಡಳಿ ವಿಫಲಗೊಂಡಿದೆ. ಆರೋಗ್ಯ ಇಲಾಖೆಯ ದಿವ್ಯ ನಿರ್ಲಕ್ಷ್ಯಕ್ಕೆ ಜನರು ಪರದಾಟ ನಡೆಸುವಂತಾಗಿದೆ. ಸದ್ಯ ಹಾವೇರಿಯಲ್ಲಿ ಮದ್ರಾಸ್ ಐ ರೋಗ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಜಿಲ್ಲಾಸ್ಪತ್ರೆಯಲ್ಲಿನ ಒಪಿಡಿ ವಿಭಾಗಕ್ಕೆ ನೂರಾರು ಸಂಖ್ಯೆಯಲ್ಲಿ ರೋಗಿಗಳು ಸಾಲುಗಟ್ಟಿ ನಿಲ್ಲುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Suraj Mahaveer Utture

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನವಲಿಹಾಳ ಗ್ರಾಮದ ಸೂರಜ ಉತ್ತೂರೆ. ಕಸ್ತೂರಿ ವಾಹಿನಿಯಲ್ಲಿ ರಾಜಕೀಯ ವರದಿಗಾರನಾಗಿ ಪತ್ರಿಕೊದ್ಯಮ ಪ್ರವೇಶಿಸಿದ ಇವರು. ಡಿಸೆಂಬರ್ 2022 ರಂದು ಹಾವೇರಿ ಜಿಲ್ಲೆ tv9 ವರದಿಗಾರನಾಗಿ ಕೆಲಸ ಆರಂಭಿಸಿದ್ರು ನವೆಂಬರ್ 2023 ರಂದು ಉತ್ತರ ಕನ್ನಡ ಜಿಲ್ಲೆಗೆ ವರ್ಗಾವಣೆ ಆಗಿದ್ದೂ ಸದ್ಯ ಉತ್ತರ ಕನ್ನಡ ಜಿಲ್ಲೆಯ tv9 ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ.

Read More
Follow Us