ಅಂಗಾಂಗ ದಾನಕ್ಕೆ ಕರ್ನಾಟಕದಲ್ಲೂ ತಮಿಳುನಾಡು ಮಾದರಿ ನೀತಿಗೆ ಸರ್ಕಾರ ಚಿಂತನೆ: ಏನಿದರ ವಿಶೇಷ?

ತಮಿಳುನಾಡು ಮಾದರಿಯಲ್ಲಿ ದಾನಿಗಳ ಅಂತಿಮ ಸಂಸ್ಕಾರವನ್ನು ನಡೆಸಲಾಗುವುದು. ಅವರ ದಾನವನ್ನು ಗುರುತಿಸಿ ಅವರ ಅಂತ್ಯಸಂಸ್ಕಾರವನ್ನು ಪೂರ್ಣ ಸರ್ಕಾರಿ ಗೌರವದೊಂದಿಗೆ ನಡೆಸಲು ಸರ್ಕಾರ ಚಿಂತನೆ ನಡೆಸಿದೆ. ಇಷ್ಟೇ ಅಲ್ಲದೆ, ವ್ಯಕ್ತಿಗಳು ಅಥವಾ ದಾನಿಗಳ ಕುಟುಂಬಗಳಿಗೆ ಪ್ರಮಾಣಪತ್ರಗಳನ್ನು ನೀಡುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಅಂಗಾಂಗ ದಾನಕ್ಕೆ ಕರ್ನಾಟಕದಲ್ಲೂ ತಮಿಳುನಾಡು ಮಾದರಿ ನೀತಿಗೆ ಸರ್ಕಾರ ಚಿಂತನೆ: ಏನಿದರ ವಿಶೇಷ?
ದಿನೇಶ್ ಗುಂಡೂರಾವ್

Updated on: Nov 03, 2023 | 2:51 PM

ಬೆಂಗಳೂರು, ನವೆಂಬರ್ 3: ರಾಜ್ಯದಲ್ಲಿ ಅಂಗಾಂಗ ದಾನದ (Organ Donation) ಕುರಿತು ಇನ್ನಷ್ಟು ಜಾಗೃತಿ ಮೂಡಿಸಬೇಕಿದೆ. ಉದಾತ್ತ ಉದ್ದೇಶಕ್ಕಾಗಿ ಜನರನ್ನು ಉತ್ತೇಜಿಸಲು ಕರ್ನಾಟಕ ಸರ್ಕಾರವು (Karnataka Government) ಅಂಗಾಂಗ ದಾನಕ್ಕೆ ಸಂಬಂಧಿಸಿ ತಮಿಳುನಾಡು (Tamil Nadu) ರಾಜ್ಯದ ಮಾದರಿಯಲ್ಲಿ ನೀತಿಯನ್ನು ರೂಪಿಸಲಿದೆ. ಆ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಹೇಳಿದ್ದಾರೆ. ಯಾವುದೇ ಪ್ರತಿಫಲವನ್ನು ನಿರೀಕ್ಷಿಸದೆ ಮತ್ತು ಸಂಪೂರ್ಣವಾಗಿ ಮಾನವೀಯ ಆಧಾರದ ಮೇಲೆ ಅಂಗಾಂಗ ದಾನಕ್ಕೆ ಅನುಕೂಲ ಮಾಡಿಕೊಡುವ ಕುಟುಂಬಗಳು ಮತ್ತು ವ್ಯಕ್ತಿಗಳನ್ನು ಗುರುತಿಸಿ ಗೌರವಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದೂ ಅವರು ತಿಳಿಸಿದ್ದಾರೆ.

ತಮಿಳುನಾಡು ಮಾದರಿಯಲ್ಲಿ ದಾನಿಗಳ ಅಂತಿಮ ಸಂಸ್ಕಾರವನ್ನು ನಡೆಸಲಾಗುವುದು. ಅವರ ದಾನವನ್ನು ಗುರುತಿಸಿ ಅವರ ಅಂತ್ಯಸಂಸ್ಕಾರವನ್ನು ಪೂರ್ಣ ಸರ್ಕಾರಿ ಗೌರವದೊಂದಿಗೆ ನಡೆಸಲು ಸರ್ಕಾರ ಚಿಂತನೆ ನಡೆಸಿದೆ ಎಂದೂ ಅವರು ಹೇಳಿದ್ದಾರೆ.

ಇಷ್ಟೇ ಅಲ್ಲದೆ, ವ್ಯಕ್ತಿಗಳು ಅಥವಾ ದಾನಿಗಳ ಕುಟುಂಬಗಳಿಗೆ ಪ್ರಮಾಣಪತ್ರಗಳನ್ನು ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಸೊಳ್ಳೆಗಳಿಗೆ ಕುಖ್ಯಾತಿಯಾಗಿರುವ ಶಿಡ್ಲಘಟ್ಟ ತಾಲೂಕಿನಲ್ಲಿ ಸೊಳ್ಳೆಗಳ ಹುಟ್ಟಡಗಿಸಲು ವಿನೂತನ ಕ್ರಮ, ಫೀಲ್ಡಿಗಿಳಿದ ವಿಶೇಷ ಮೀನುಗಳು! ಟಿವಿ9 ರಿಯಾಲಿಟಿ ಚೆಕ್

ಈ ಕ್ರಮಗಳನ್ನು ಕೈಗೊಂಡ ನಂತರ, ಅಂಗಾಂಗ ದಾನದ ಮಹತ್ವವನ್ನು ಹೆಚ್ಚು ಪ್ರಚುರಪಡಿಸಲು ಮತ್ತು ಜನರು ಅದಕ್ಕಾಗಿ ಮುಂದೆ ಬರುವಂತೆ ಪ್ರೋತ್ಸಾಹಿಸಲು ಸರ್ಕಾರವು ಶೀಘ್ರದಲ್ಲೇ ನೀತಿಯನ್ನು ರೂಪಿಸಲಿದೆ ಎಂದು ಸಚಿವರು ಹೇಳಿದ್ದಾರೆ.

ತಮಿಳುನಾಡು ಮಾದರಿ ಅಧ್ಯಯನಕ್ಕೆ ತಂಡ

ಅಂಗಾಂಗ ದಾನಿಗಳಿಗೆ ಸಂಬಂಧಿಸಿ ತಮಿಳುನಾಡಿನಲ್ಲಿ ಜಾರಿಯಲ್ಲಿರುವ ನೀತಿಯನ್ನು ರಾಜ್ಯವು ಅಧ್ಯಯನ ಮಾಡುತ್ತಿದೆ. ನಾವು ಅದನ್ನು ಅಧ್ಯಯನ ಮಾಡಲು ತಂಡವನ್ನು ಅಲ್ಲಿಗೆ ಕಳುಹಿಸಲು ಚಿಂತನೆ ನಡೆಸಿದ್ದೇವೆ. ಇದಕ್ಕೆ ಇತರ ಇಲಾಖೆಗಳ ಒಳಗೊಳ್ಳುವಿಕೆ ಅಗತ್ಯವಿರುತ್ತದೆ ಮತ್ತು ಸಮಯ ತೆಗೆದುಕೊಳ್ಳುತ್ತದೆ. ನಾವು ಸರಳವಾದ ಮತ್ತು ಅರ್ಥಪೂರ್ಣವಾದ ಯಾವುದನ್ನಾದರೂ ಪ್ರಾರಂಭಿಸುತ್ತೇವೆ. ನಿಸ್ವಾರ್ಥ ಕೊಡುಗೆ ಇರುವಲ್ಲಿ ನಿಜವಾದ ಮೆಚ್ಚುಗೆಯೊಂದಿಗೆ ದಾನಿಗಳ ಕುಟುಂಬಗಳ ಜತೆ ರಾಜ್ಯ ಸರ್ಕಾರ ನಿಲ್ಲಲಿದೆ. ಸದ್ಯ ಆ ಕುರಿತು ಹೆಚ್ಚಿನ ಜಾಗೃತಿ ಮೂಡಿಸುವುದು ಗುರಿಯಾಗಿದೆ ಎಂದು ಸಚಿವರು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ