AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Lumpy Skin Disease: ಚರ್ಮಗಂಟು ಕಾಯಿಲೆಗೆ ಮನೆ ಮದ್ದು: ಇಲ್ಲಿದೆ ಪಶುವೈದ್ಯರ ಸಲಹೆ

ಜಾನುವಾರುಗಳ ಚರ್ಮಗಂಟು ಕಾಯಿಲೆಗೆ ‘ಬೆಂಗಳೂರು ಸಹಕಾರ ಹಾಲು ಒಕ್ಕೂಟ ನಿಯಮಿತ’ದ ಸೋಲೂರು ಘಟಕದ ಪಶುವೈದ್ಯರು ಮನೆ ಮದ್ದು ಸಲಹೆ ನೀಡಿದ್ದಾರೆ. ಕಾಯಿಲೆ ನಿಯಂತ್ರಣಕ್ಕೆ ಏನೇನು ಮಾಡಬೇಕು ಎಂಬುದು ಇಲ್ಲಿದೆ.

Lumpy Skin Disease: ಚರ್ಮಗಂಟು ಕಾಯಿಲೆಗೆ ಮನೆ ಮದ್ದು: ಇಲ್ಲಿದೆ ಪಶುವೈದ್ಯರ ಸಲಹೆ
ಚರ್ಮಗಂಟು ರೋಗ (ಸಾಂದರ್ಭಿಕ ಚಿತ್ರ)Image Credit source: PTI
Follow us
TV9 Web
| Updated By: Ganapathi Sharma

Updated on: Oct 16, 2022 | 1:05 PM

ಬೆಂಗಳೂರು: ದೇಶದಾದ್ಯಂತ ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿರುವ ಚರ್ಮಗಂಟು ಕಾಯಿಲೆಗೆ (Lumpy Skin Disease) ‘ಬೆಂಗಳೂರು ಸಹಕಾರ ಹಾಲು ಒಕ್ಕೂಟ ನಿಯಮಿತ’ದ ಸೋಲೂರು ಘಟಕದ ಪಶುವೈದ್ಯರು (Veterinary Doctor) ಮನೆ ಮದ್ದು (Home Remedies) ಸಲಹೆ ನೀಡಿದ್ದಾರೆ. ಇದೊಂದು ವೈರಾಣು ಕಾಯಿಲೆಯಾಗಿದ್ದು ಸೊಳ್ಳೆ ಕಡಿತದಿಂದ ಹರಡುತ್ತದೆ. ಕಾಯಿಲೆ ಹರಡುವಿಕೆ ತಡೆಗೆ ಜಾನುವಾರುಗಳ ಕೊಟ್ಟಿಗೆಯನ್ನು ಶುಚಿಯಾಗಿಡುವುದು ಅಗತ್ಯ ಎಂದು ಪಶುವೈದ್ಯರು ಹೇಳಿದ್ದಾರೆ.

ಪಶುವೈದ್ಯರು ಸೂಚಿಸಿರುವ ಔಷಧಿ ಹೀಗಿದೆ:

– 100 ಗ್ರಾಂ ವೀಳ್ಯದೆಲೆ, 10 ಗ್ರಾಂ ಮೆಣಸು, 10 ಗ್ರಾಂ ಉಪ್ಪು, ಅರ್ಧ ಅಚ್ಚು ಬೆಲ್ಲವನ್ನು ರುಬ್ಬಿ ಉಂಡೆ ಮಾಡಿ 3ರಿಂದ 4 ಉಂಡೆಗಳನ್ನು ದಿನಕ್ಕೆ 2 ಬಾರಿ ತಿನ್ನಿಸಬೇಕು.

ಇದನ್ನೂ ಓದಿ
Image
ಚರ್ಮಗಂಟು ರೋಗ ಆತಂಕ: ಕರ್ನಾಟಕದಾದ್ಯಂತ ಜಾನುವಾರು ಸಂತೆ, ಸಾಗಣೆ ನಿಷೇಧ
Image
ರಾಯಚೂರು: ಜಾನುವಾರುಗಳಲ್ಲಿ ಚರ್ಮಗಂಟು ರೋಗ ಪತ್ತೆ; ಸಂತೆ, ಸಾಗಾಣಿಕೆಗೆ ಜಿಲ್ಲಾಡಿತದಿಂದ ನಿಷೇಧ
Image
Gadag: ಗದಗ ಜಿಲ್ಲೆಯಲ್ಲಿ ಕಾಡುತ್ತಿದೆ ಪಶು ವೈದ್ಯರ ತೀವ್ರ ಕೊರತೆ, ವ್ಯಾಪಕವಾಗಿ ಹರಡುತಿದೆ ಮಾರಕ ಚರ್ಮಗಂಟು ರೋಗ, ಜಾನುವಾರಗಳು ವಿಲವಿಲ
Image
Lumpy Skin Disease: ಕರ್ನಾಟಕದಲ್ಲಿಯೂ ಚರ್ಮಗಂಟು ರೋಗ ಉಲ್ಬಣ, ಹಾವೇರಿಯಲ್ಲಿ ಒಂದೇ ದಿನ ನೂರಾರು ರಾಸುಗಳ ಸಾವು

– 500 ಮಿಲಿ ಗ್ರಾಂ ಎಳ್ಳೆಣ್ಣೆ, 20 ಗ್ರಾಂ ಅರಶಿನ ಪುಡಿ, 100 ಗ್ರಾಂ ಮೆಹಂದಿ ಸೊಪ್ಪು, 100 ಗ್ರಾಂ ತುಳಸಿ ಎಲೆ, 100 ಗ್ರಾಂ ಬೇವಿನ ಸೊಪ್ಪು ಇವುಗಳ ಮಿಶ್ರಣವನ್ನು ಕುದಿಸಿ ಆರಿದ ನಂತರ ಜಾನುವಾರುಗಳ ಮೈಮೇಲಿನ ಗಂಟುಗಳ ಮೇಲೆ ದಿನಕ್ಕೆ ಮೂರರಿಂದ ನಾಲ್ಕು ಬಾರಿ ಹಚ್ಚಬೇಕು.

ಹಾವೇರಿಯಲ್ಲಿ ನಿಷೇಧದ ನಡುವೆಯೂ ಜಾನುವಾರು ಸಂತೆ:

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ನಗರದ ಹೊರವಲಯದ ಎಪಿಎಂಸಿ ಸಮೀಪದ ಜಮೀನಿನಲ್ಲಿ ನಿಷೇಧದ ನಡುವೆಯೂ ಜಾನುವಾರು ಸಂತೆ ನಡೆಯುತ್ತಿದೆ. ಜಾನುವಾರುಗಳಿಗೆ ಚರ್ಮಗಂಟು ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಜಾನುವಾರು ಜಾತ್ರೆ ನಿಷೇಧಿಸಿ ಇತ್ತೀಚೆಗೆ ಆದೇಶ ಹೊರಡಿಸಲಾಗಿತ್ತು. ಅದರಂತೆ ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣವರ ಕೂಡ ಸಂತೆ ನಿಷೇಧ ಆದೇಶ ಹೊರಡಿಸಿದ್ದರು. ಇದನ್ನು ಲೆಕ್ಕಿಸದೆ ಸಂತೆ ಮುಂದುವರಿದಿದೆ. ಅಕ್ಟೋಬರ್ 9ರಿಂದ ನವಂಬರ್ 8 ರವರೆಗೆ ಜಿಲ್ಲೆಯಲ್ಲಿ ಜಾನುವಾರು ಸಂತೆ ನಡೆಯುತ್ತದೆ.

ಇದನ್ನೂ ಓದಿ: ಚರ್ಮಗಂಟು ರೋಗ ಆತಂಕ: ಕರ್ನಾಟಕದಾದ್ಯಂತ ಜಾನುವಾರು ಸಂತೆ, ಸಾಗಣೆ ನಿಷೇಧ

ಚರ್ಮಗಂಟು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಾನುವಾರುಗಳ ಸಂತೆ ಹಾಗೂ ಸಾಗಣೆ ನಿಷೇಧಿಸಿ ಎಲ್ಲಾ ಜಿಲ್ಲಾಡಳಿತಗಳಿಗೆ ಪಶುಸಂಗೋಪನಾ ಇಲಾಖೆಯು ಅಕ್ಟೋಬರ್ 13ರಂದು ಸೂಚನೆ ನೀಡಿತ್ತು. ಜಾನುವಾರುಗಳಿಗೆ ಚರ್ಮಗಂಟು ರೋಗ ವಿಪರೀತವಾಗಿ ಹಬ್ಬುತ್ತಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ. ಅಲ್ಲದೇ ಆತಂಕಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುನ್ನಚ್ಚರಿಕೆ ಕ್ರಮವಾಗಿ ಜಾನುವಾರುಗಳ ಸಂತೆಯನ್ನು ನಿಷೇಧಿಸಲಾಗಿದೆ ಎಂದು ಇಲಾಖೆ ಹೇಳಿತ್ತು.

ಚರ್ಮಗಂಟು ರೋಗ ಹಸು ಮತ್ತು ಎಮ್ಮೆಗಳಲ್ಲಿ ತೀವ್ರವಾಗಿ ಕಾಣಿಸಿಕೊಂಡಿದ್ದು, ಹರಡುವುದನ್ನು ತಡೆಯಲು ಸಾಗಾಟಕ್ಕೆ ನಿರ್ಬಂಧ ವಿಧಿಸಲಾಗಿದೆ.

ಜೈನ ಮುನಿಗಳಿಂದ ಪ್ರಧಾನಿ ಮೋದಿಗೆ ಧರ್ಮ ಚಕ್ರವರ್ತಿ ಬಿರುದು ಪ್ರದಾನ
ಜೈನ ಮುನಿಗಳಿಂದ ಪ್ರಧಾನಿ ಮೋದಿಗೆ ಧರ್ಮ ಚಕ್ರವರ್ತಿ ಬಿರುದು ಪ್ರದಾನ
ಮಳೆಯಿಂದ ಚಾರ್ ಧಾಮ್ ಯಾತ್ರೆಗೆ ಅಡ್ಡಿ; ಕೇದಾರನಾಥ ಮಾರ್ಗದಲ್ಲಿ ಭೂಕುಸಿತ
ಮಳೆಯಿಂದ ಚಾರ್ ಧಾಮ್ ಯಾತ್ರೆಗೆ ಅಡ್ಡಿ; ಕೇದಾರನಾಥ ಮಾರ್ಗದಲ್ಲಿ ಭೂಕುಸಿತ
ಬೌಲಿಂಗ್ ಕೋಚ್ ಜೊತೆ WWE ಆಡಿ ಸೋತ ಅರ್ಷದೀಪ್, ಆಕಾಶ್
ಬೌಲಿಂಗ್ ಕೋಚ್ ಜೊತೆ WWE ಆಡಿ ಸೋತ ಅರ್ಷದೀಪ್, ಆಕಾಶ್
ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಮುಖಾಮುಖಿಯಾಗುವುದನ್ನು ತಪ್ಪಿಸಿದ ಪೊಲೀಸ್
ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಮುಖಾಮುಖಿಯಾಗುವುದನ್ನು ತಪ್ಪಿಸಿದ ಪೊಲೀಸ್
ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಭಕ್ತರಿಗೆ ಪ್ರಸಾದ ತಯಾರಿಸಿದ ಗೌತಮ್ ಅದಾನಿ
ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಭಕ್ತರಿಗೆ ಪ್ರಸಾದ ತಯಾರಿಸಿದ ಗೌತಮ್ ಅದಾನಿ
ಅಂಬೇಡ್ಕರ್​ ಅವರನ್ನು ಕಾಂಗ್ರೆಸ್ ಯಾವತ್ತೂ ಗೌರವಿಸಲಿಲ್ಲ: ಸಿಟಿ ರವಿ
ಅಂಬೇಡ್ಕರ್​ ಅವರನ್ನು ಕಾಂಗ್ರೆಸ್ ಯಾವತ್ತೂ ಗೌರವಿಸಲಿಲ್ಲ: ಸಿಟಿ ರವಿ
ಅಧಿಕಾರಕ್ಕಾಗಿ ಆಸೆಪಟ್ಟವನಲ್ಲ, 50 ವರ್ಷಗಳಿಂದ ರಾಜಕೀಯದಲ್ಲಿದ್ದೇವೆ: ಶಾಸಕ
ಅಧಿಕಾರಕ್ಕಾಗಿ ಆಸೆಪಟ್ಟವನಲ್ಲ, 50 ವರ್ಷಗಳಿಂದ ರಾಜಕೀಯದಲ್ಲಿದ್ದೇವೆ: ಶಾಸಕ
ವಿನಯ್ ರಾಜ್​ಕುಮಾರ್ ಹೃದಯದಲ್ಲಿ ಯಾರ ಹೆಸರಿದೆ? ಅವರೇ ಕೊಟ್ಟ ಉತ್ತರ
ವಿನಯ್ ರಾಜ್​ಕುಮಾರ್ ಹೃದಯದಲ್ಲಿ ಯಾರ ಹೆಸರಿದೆ? ಅವರೇ ಕೊಟ್ಟ ಉತ್ತರ
ದಸರಾ ಮಹೋತ್ಸವ-2025 ಹನ್ನೊಂದು ದಿನಗಳ ಕಾಲ ನಡೆಯಲಿದೆ: ಸಿದ್ದರಾಮಯ್ಯ
ದಸರಾ ಮಹೋತ್ಸವ-2025 ಹನ್ನೊಂದು ದಿನಗಳ ಕಾಲ ನಡೆಯಲಿದೆ: ಸಿದ್ದರಾಮಯ್ಯ
ಮಧುಗಿರಿ ಜಮೀನು ಒತ್ತುವರಿ ಪ್ರಕರಣ ತನಿಖೆಗೊಪ್ಪಿಸಲಾಗಿದೆ: ರಾಜಣ್ಣ
ಮಧುಗಿರಿ ಜಮೀನು ಒತ್ತುವರಿ ಪ್ರಕರಣ ತನಿಖೆಗೊಪ್ಪಿಸಲಾಗಿದೆ: ರಾಜಣ್ಣ