AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಬ್ಬಳ್ಳಿ ಅಂಜಲಿ ಕೊಲೆ ಕೇಸ್: ಸಿಐಡಿ‌ ತಲೆ ಕೆಡಿಸಿದ ಚಾಕು, ಬ್ಯಾಟರಿ ಹಿಡಿದು ಹುಡುಕಾಟ

ಪ್ರೀತಿ ನಿರಾಕರಣೆ ಮಾಡಿದ್ದಕ್ಕಾಗಿ ಕಳೆದ ಅಂಜಲಿಯನ್ನ ಚಾಕು ಇರಿದು ಬರ್ಬರವಾಗಿ ಹತ್ಯೆಗೈದ ಆರೋಪಿ‌‌ ಗಿರೀಶ್​​ ಅಲಿಯಾಸ್ ವಿಶ್ವನನ್ನ ಈಗಾಗಲೇ ಸಿಐಡಿ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ದಾರೆ. ಇದೆಲ್ಲದರ ಮದ್ಯೆ ಸಿಐಡಿಗೆ ಸವಾಲಾಗಿದ್ದು ಚಾಕು. ಅಂಜಲಿ ಕೊಲೆಗೆ ಬಳಿಸಿದ ಚಾಕು ಇನ್ನು ಪತ್ತೆಯಾಗಿಲ್ಲ. ಹೀಗಾಗಿ ಸಿಐಡಿ‌ ಅಧಿಕಾರಿಗಳ ತಲೆ ಕೆಡಿಸಿರುವ ಚಾಕುವಿಗಾಗಿ ಹುಡುಕಾಟ ಮಾಡಲಾಗಿದೆ.

ಹುಬ್ಬಳ್ಳಿ ಅಂಜಲಿ ಕೊಲೆ ಕೇಸ್: ಸಿಐಡಿ‌ ತಲೆ ಕೆಡಿಸಿದ ಚಾಕು, ಬ್ಯಾಟರಿ ಹಿಡಿದು ಹುಡುಕಾಟ
ಹುಬ್ಬಳ್ಳಿ ಅಂಜಲಿ ಕೊಲೆ ಕೇಸ್: ಸಿಐಡಿ‌ ತಲೆ ಕೆಡಿಸಿದ ಚಾಕು, ಬ್ಯಾಟರಿ ಹಿಡಿದು ಹುಡುಕಾಟ
ಶಿವಕುಮಾರ್ ಪತ್ತಾರ್
| Updated By: ಗಂಗಾಧರ​ ಬ. ಸಾಬೋಜಿ|

Updated on: May 24, 2024 | 2:59 PM

Share

ಹುಬ್ಬಳ್ಳಿ, ಮೇ 24: ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಅಂಜಲಿ ಹತ್ಯೆ ಪ್ರಕರಣದ (Anjali murder case) ತನಿಖೆ ಮತ್ತಷ್ಟು‌ ಚುರುಕುಗೊಂಡಿದೆ. ನಿನ್ನೆಯಷ್ಟೇ ತಮ್ಮ ಸುಪರ್ದಿಗೆ ಆರೋಪಿ ಗಿರೀಶನನ್ನ ತೆಗೆದುಕೊಂಡಿದ್ದ ಸಿಐಡಿ‌ ಅಧಿಕಾರಿಗಳು ಸುದೀರ್ಘವಾಗಿ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಬಳಿಕ ಮತ್ತೆ ಎಂಟು ದಿನಗಳ ಕಾಲ ಕಷ್ಟಡಿಗೆ ತೆಗೆದುಕೊಂಡಿದ್ದಾರೆ.‌ ಇದೆಲ್ಲದರ ನಡುವೆ ಕೊಲೆಗೆ ಬಳಸಿದ ಚಾಕು (knife) ಇನ್ನು ಪತ್ತೆಯಾಗಿಲ್ಲ. ಹೀಗಾಗಿ ಸಿಐಡಿ ತಂಡ ಒಂದು ಕಡೆ ಚಾಕುವಿಗಾಗಿ ಶೋಧ ನಡೆಸಿದ್ದಾರೆ.

ವಿಶ್ವ ಕೊಲೆಗೆ ಬಳಸಿದ ಚಾಕು ಸದ್ಯ ಸಿಐಡಿ‌ ಅಧಿಕಾರಿಗಳ ತಲೆ ಕೆಡಿಸಿದೆ. ಸುಮಾರು ಎರಡು ಗಂಟೆಯಿಂದ ಹುಬ್ಬಳ್ಳಿಯ ವೀರಾಪೂರ ಓಣಿಯ ಅಂಜಲಿ ಮನೆ ಸುತ್ತಮುತ್ತ ಹುಡುಕಾಟ ಮಾಡಲಾಗಿದೆ. ಅಂಜಲಿ ಕೊಲೆ ಮಾಡಿ ಚರಂಡಿಯಲ್ಲಿ ಚಾಕು ಬಿಸಾಕಿ ಹೋಗಿದ್ದೇನೆ ಎಂದು ವಿಶ್ವ ಹೇಳಿದ್ದಾನೆ. ಆತನ ಹೇಳಿಕೆ ಮೇಲೆ ಸಿಐಡಿ‌ ಚಾಕು ಹುಡುಕುತ್ತಿದ್ದಾರೆ. ಬ್ಯಾಟರಿ ಹಿಡಿದುಕೊಂಡು ಕಾಲುವೆಗಳಲ್ಲಿ ಇಂಚಿಂಚು ತಲಾಶ್​ ಮಾಡಿದ್ದು, ಆದರೂ ಚಾಕು ಪತ್ತೆ ಆಗಿಲ್ಲ.

ಸಿಐಡಿ ತಂಡ ವಾಪಸ್ಸಾದ ನಂತರ ಯಶೋಧ ಹೇಳಿದ್ದಿಷ್ಟು 

ಸಿಐಡಿ ಅಧಿಕಾರಿಗಳ ತಂಡ ಬಂದು ಹೋದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಮೃತ ಅಂಜಲಿ ಸಹೋದರಿ ಯಶೋಧ, ಇವತ್ತು ಸಿಐಡಿ ಪೊಲೀಸರು ಆರೋಪಿಯನ್ನ ಕರೆದುಕೊಂಡು ಬಂದಿದ್ದರು. ಮೊದಲು ಯಾರು ಬಾಗಿಲು ತೆಗೆದಿದ್ದು ಅಂತ ಅವನನ್ನ ಕೇಳಿದರು. ಆ ವೇಳೆಯಲ್ಲಿ ಯಾರು ಮನೆಯಲ್ಲಿ ಇದ್ದರು ಅಂತ ಸಿಐಡಿಯವರು ಅವನನ್ನು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಸುಳ್ಳು ಹೇಳಿದರೆ ಮರೆತುಹೋಗುತ್ತದೆ, ಆದರೆ ನಮ್ಮ ಕಣ್ಣಮುಂದೆ ನಡೆದಿದ್ದನ್ನು ನಾವು ಹೇಳುತ್ತಿದ್ದೇವೆ: ಯಶೋಧ, ಅಂಜಲಿ ತಂಗಿ

ಅಂಜಲಿನೇ ಬಂದು ಬಾಗಿಲು ತೆಗೆದಿದ್ದಾಳೆ ಅಂತ ಅವನು ಹೇಳಿದ್ದಾನೆ. ಆ ವೇಳೆಯಲ್ಲಿ ಅಜ್ಜಿ ನಿದ್ದೆ ಮಾಡುತ್ತಿದ್ದರು. ಮಲಗಿಕೊಂಡಿದ್ದ ಅಜ್ಜಿಯನ್ನ ದಾಟಿಕೊಂಡು ಹೋಗಿ ಅಂಜಲಿ ಜೊತೆ ಮಾತನಾಡಿಸಲು ಹೋಗಿರುವುದಾಗಿ ಹೇಳಿದ್ದಾನೆ ಎಂದರು.

ಇದನ್ನೂ ಓದಿ: ಅಂಜಲಿ ಹತ್ಯೆ: ಅಕ್ಕನ ಕೊಲೆ ಬಗ್ಗೆ ಸಿಐಡಿ ಮುಂದೆ ಸ್ಫೋಟಕ ವಿಚಾರ ಬಿಚ್ಚಿಟ್ಟ ಸಹೋದರಿ ಯಶೋಧಾ

ಅವನನ್ನ ಕರೆದುಕೊಂಡು ಬಂದಾಗ ನಾವು ಅವನ ವಿರುದ್ದ ಆಕ್ರೋಶ ವ್ಯಕ್ತಪಡಿಸಿದೆ. ಆದರೆ ಪೊಲೀಸರು ನಮಗೆ ಬೈದು ಸುಮ್ಮನಾಗಿಸಿದರು. ಇಲ್ಲಿ ತನಿಖೆ ಮಾಡಲು ಬಂದಿದ್ದೇವೆ ಸುಮ್ಮನಿರಿ ಅಂತ ಹೇಳಿದರು. ಸಿಐಡಿ ಯಾವ ರೀತಿ ಆದರೂ ತನಿಖೆ ಮಾಡಲಿ ಆರೋಪಿ ಗಿರೀಶ್​ಗೆ ಕಠಿಣ ಶಿಕ್ಷೆಯಾಗಲಿ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ