Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹುಬ್ಬಳ್ಳಿ ಅಂಜಲಿ ಕೊಲೆ ಕೇಸ್: ಸಿಐಡಿ‌ ತಲೆ ಕೆಡಿಸಿದ ಚಾಕು, ಬ್ಯಾಟರಿ ಹಿಡಿದು ಹುಡುಕಾಟ

ಪ್ರೀತಿ ನಿರಾಕರಣೆ ಮಾಡಿದ್ದಕ್ಕಾಗಿ ಕಳೆದ ಅಂಜಲಿಯನ್ನ ಚಾಕು ಇರಿದು ಬರ್ಬರವಾಗಿ ಹತ್ಯೆಗೈದ ಆರೋಪಿ‌‌ ಗಿರೀಶ್​​ ಅಲಿಯಾಸ್ ವಿಶ್ವನನ್ನ ಈಗಾಗಲೇ ಸಿಐಡಿ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ದಾರೆ. ಇದೆಲ್ಲದರ ಮದ್ಯೆ ಸಿಐಡಿಗೆ ಸವಾಲಾಗಿದ್ದು ಚಾಕು. ಅಂಜಲಿ ಕೊಲೆಗೆ ಬಳಿಸಿದ ಚಾಕು ಇನ್ನು ಪತ್ತೆಯಾಗಿಲ್ಲ. ಹೀಗಾಗಿ ಸಿಐಡಿ‌ ಅಧಿಕಾರಿಗಳ ತಲೆ ಕೆಡಿಸಿರುವ ಚಾಕುವಿಗಾಗಿ ಹುಡುಕಾಟ ಮಾಡಲಾಗಿದೆ.

ಹುಬ್ಬಳ್ಳಿ ಅಂಜಲಿ ಕೊಲೆ ಕೇಸ್: ಸಿಐಡಿ‌ ತಲೆ ಕೆಡಿಸಿದ ಚಾಕು, ಬ್ಯಾಟರಿ ಹಿಡಿದು ಹುಡುಕಾಟ
ಹುಬ್ಬಳ್ಳಿ ಅಂಜಲಿ ಕೊಲೆ ಕೇಸ್: ಸಿಐಡಿ‌ ತಲೆ ಕೆಡಿಸಿದ ಚಾಕು, ಬ್ಯಾಟರಿ ಹಿಡಿದು ಹುಡುಕಾಟ
Follow us
ಶಿವಕುಮಾರ್ ಪತ್ತಾರ್. ಹುಬ್ಬಳ್ಳಿ
| Updated By: ಗಂಗಾಧರ​ ಬ. ಸಾಬೋಜಿ

Updated on: May 24, 2024 | 2:59 PM

ಹುಬ್ಬಳ್ಳಿ, ಮೇ 24: ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಅಂಜಲಿ ಹತ್ಯೆ ಪ್ರಕರಣದ (Anjali murder case) ತನಿಖೆ ಮತ್ತಷ್ಟು‌ ಚುರುಕುಗೊಂಡಿದೆ. ನಿನ್ನೆಯಷ್ಟೇ ತಮ್ಮ ಸುಪರ್ದಿಗೆ ಆರೋಪಿ ಗಿರೀಶನನ್ನ ತೆಗೆದುಕೊಂಡಿದ್ದ ಸಿಐಡಿ‌ ಅಧಿಕಾರಿಗಳು ಸುದೀರ್ಘವಾಗಿ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಬಳಿಕ ಮತ್ತೆ ಎಂಟು ದಿನಗಳ ಕಾಲ ಕಷ್ಟಡಿಗೆ ತೆಗೆದುಕೊಂಡಿದ್ದಾರೆ.‌ ಇದೆಲ್ಲದರ ನಡುವೆ ಕೊಲೆಗೆ ಬಳಸಿದ ಚಾಕು (knife) ಇನ್ನು ಪತ್ತೆಯಾಗಿಲ್ಲ. ಹೀಗಾಗಿ ಸಿಐಡಿ ತಂಡ ಒಂದು ಕಡೆ ಚಾಕುವಿಗಾಗಿ ಶೋಧ ನಡೆಸಿದ್ದಾರೆ.

ವಿಶ್ವ ಕೊಲೆಗೆ ಬಳಸಿದ ಚಾಕು ಸದ್ಯ ಸಿಐಡಿ‌ ಅಧಿಕಾರಿಗಳ ತಲೆ ಕೆಡಿಸಿದೆ. ಸುಮಾರು ಎರಡು ಗಂಟೆಯಿಂದ ಹುಬ್ಬಳ್ಳಿಯ ವೀರಾಪೂರ ಓಣಿಯ ಅಂಜಲಿ ಮನೆ ಸುತ್ತಮುತ್ತ ಹುಡುಕಾಟ ಮಾಡಲಾಗಿದೆ. ಅಂಜಲಿ ಕೊಲೆ ಮಾಡಿ ಚರಂಡಿಯಲ್ಲಿ ಚಾಕು ಬಿಸಾಕಿ ಹೋಗಿದ್ದೇನೆ ಎಂದು ವಿಶ್ವ ಹೇಳಿದ್ದಾನೆ. ಆತನ ಹೇಳಿಕೆ ಮೇಲೆ ಸಿಐಡಿ‌ ಚಾಕು ಹುಡುಕುತ್ತಿದ್ದಾರೆ. ಬ್ಯಾಟರಿ ಹಿಡಿದುಕೊಂಡು ಕಾಲುವೆಗಳಲ್ಲಿ ಇಂಚಿಂಚು ತಲಾಶ್​ ಮಾಡಿದ್ದು, ಆದರೂ ಚಾಕು ಪತ್ತೆ ಆಗಿಲ್ಲ.

ಸಿಐಡಿ ತಂಡ ವಾಪಸ್ಸಾದ ನಂತರ ಯಶೋಧ ಹೇಳಿದ್ದಿಷ್ಟು 

ಸಿಐಡಿ ಅಧಿಕಾರಿಗಳ ತಂಡ ಬಂದು ಹೋದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಮೃತ ಅಂಜಲಿ ಸಹೋದರಿ ಯಶೋಧ, ಇವತ್ತು ಸಿಐಡಿ ಪೊಲೀಸರು ಆರೋಪಿಯನ್ನ ಕರೆದುಕೊಂಡು ಬಂದಿದ್ದರು. ಮೊದಲು ಯಾರು ಬಾಗಿಲು ತೆಗೆದಿದ್ದು ಅಂತ ಅವನನ್ನ ಕೇಳಿದರು. ಆ ವೇಳೆಯಲ್ಲಿ ಯಾರು ಮನೆಯಲ್ಲಿ ಇದ್ದರು ಅಂತ ಸಿಐಡಿಯವರು ಅವನನ್ನು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ಸುಳ್ಳು ಹೇಳಿದರೆ ಮರೆತುಹೋಗುತ್ತದೆ, ಆದರೆ ನಮ್ಮ ಕಣ್ಣಮುಂದೆ ನಡೆದಿದ್ದನ್ನು ನಾವು ಹೇಳುತ್ತಿದ್ದೇವೆ: ಯಶೋಧ, ಅಂಜಲಿ ತಂಗಿ

ಅಂಜಲಿನೇ ಬಂದು ಬಾಗಿಲು ತೆಗೆದಿದ್ದಾಳೆ ಅಂತ ಅವನು ಹೇಳಿದ್ದಾನೆ. ಆ ವೇಳೆಯಲ್ಲಿ ಅಜ್ಜಿ ನಿದ್ದೆ ಮಾಡುತ್ತಿದ್ದರು. ಮಲಗಿಕೊಂಡಿದ್ದ ಅಜ್ಜಿಯನ್ನ ದಾಟಿಕೊಂಡು ಹೋಗಿ ಅಂಜಲಿ ಜೊತೆ ಮಾತನಾಡಿಸಲು ಹೋಗಿರುವುದಾಗಿ ಹೇಳಿದ್ದಾನೆ ಎಂದರು.

ಇದನ್ನೂ ಓದಿ: ಅಂಜಲಿ ಹತ್ಯೆ: ಅಕ್ಕನ ಕೊಲೆ ಬಗ್ಗೆ ಸಿಐಡಿ ಮುಂದೆ ಸ್ಫೋಟಕ ವಿಚಾರ ಬಿಚ್ಚಿಟ್ಟ ಸಹೋದರಿ ಯಶೋಧಾ

ಅವನನ್ನ ಕರೆದುಕೊಂಡು ಬಂದಾಗ ನಾವು ಅವನ ವಿರುದ್ದ ಆಕ್ರೋಶ ವ್ಯಕ್ತಪಡಿಸಿದೆ. ಆದರೆ ಪೊಲೀಸರು ನಮಗೆ ಬೈದು ಸುಮ್ಮನಾಗಿಸಿದರು. ಇಲ್ಲಿ ತನಿಖೆ ಮಾಡಲು ಬಂದಿದ್ದೇವೆ ಸುಮ್ಮನಿರಿ ಅಂತ ಹೇಳಿದರು. ಸಿಐಡಿ ಯಾವ ರೀತಿ ಆದರೂ ತನಿಖೆ ಮಾಡಲಿ ಆರೋಪಿ ಗಿರೀಶ್​ಗೆ ಕಠಿಣ ಶಿಕ್ಷೆಯಾಗಲಿ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಪುನೀತ್ ರಾಜ್​ಕುಮಾರ್ ಬಗ್ಗೆ ಅರ್ಧಗಂಟೆ ಮಾತನಾಡಿದ ರಶ್ಮಿಕಾ ಮಂದಣ್ಣ
ಪುನೀತ್ ರಾಜ್​ಕುಮಾರ್ ಬಗ್ಗೆ ಅರ್ಧಗಂಟೆ ಮಾತನಾಡಿದ ರಶ್ಮಿಕಾ ಮಂದಣ್ಣ
ಪತಿಯೊಂದಿಗೆ ಜಗಳವಾಡಿ ವಿದ್ಯುತ್ ಟವರ್ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ ಪತ್ನಿ
ಪತಿಯೊಂದಿಗೆ ಜಗಳವಾಡಿ ವಿದ್ಯುತ್ ಟವರ್ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ ಪತ್ನಿ
ಶಿವಪುರಿಯ ಮಾತಟಿಲಾ ಡ್ಯಾಂನಲ್ಲಿ ಮುಳುಗಿದ ದೋಣಿ; 7 ಜನ ಸಾವನ್ನಪ್ಪಿರುವ ಶಂಕೆ
ಶಿವಪುರಿಯ ಮಾತಟಿಲಾ ಡ್ಯಾಂನಲ್ಲಿ ಮುಳುಗಿದ ದೋಣಿ; 7 ಜನ ಸಾವನ್ನಪ್ಪಿರುವ ಶಂಕೆ
ಚಂದನ್ ಶೆಟ್ಟಿ ಜೊತೆ ಮದುವೆ ಗಾಸಿಪ್, ಸ್ಪಷ್ಟನೆ ಕೊಟ್ಟ ಸಂಜನಾ
ಚಂದನ್ ಶೆಟ್ಟಿ ಜೊತೆ ಮದುವೆ ಗಾಸಿಪ್, ಸ್ಪಷ್ಟನೆ ಕೊಟ್ಟ ಸಂಜನಾ
ಕುಮಾರಸ್ವಾಮಿ ನನ್ನನ್ನು ಬಯ್ಯದೆ ಬೇರೆ ಯಾರನ್ನು ಬಯ್ಯಲು ಸಾಧ್ಯ? ಶಿವಕುಮಾರ್
ಕುಮಾರಸ್ವಾಮಿ ನನ್ನನ್ನು ಬಯ್ಯದೆ ಬೇರೆ ಯಾರನ್ನು ಬಯ್ಯಲು ಸಾಧ್ಯ? ಶಿವಕುಮಾರ್
ಜಾರ್ಖಂಡ್‌ನ ದಿಯೋಘರ್‌ನಲ್ಲಿ ಇಂಡಿಯನ್ ಆಯಿಲ್ ಸ್ಥಾವರದಲ್ಲಿ ಬೆಂಕಿ ಅವಘಡ
ಜಾರ್ಖಂಡ್‌ನ ದಿಯೋಘರ್‌ನಲ್ಲಿ ಇಂಡಿಯನ್ ಆಯಿಲ್ ಸ್ಥಾವರದಲ್ಲಿ ಬೆಂಕಿ ಅವಘಡ
ಕರ್ನಾಟಕ ಮೊದಲು ತಮಿಳುನಾಡು ಚರ್ಚೆ ಮಾಡಬೇಕಾದ ಅವಶ್ಯಕತೆ ಸ್ಪಷ್ಟವಾಗುತ್ತಿದೆ
ಕರ್ನಾಟಕ ಮೊದಲು ತಮಿಳುನಾಡು ಚರ್ಚೆ ಮಾಡಬೇಕಾದ ಅವಶ್ಯಕತೆ ಸ್ಪಷ್ಟವಾಗುತ್ತಿದೆ
ಶಿವಲಿಂಗೇಗೌಡರು ಕೋಪದಿಂದ ಕುದಿಯುತ್ತಿದ್ದರೆ ಸಭಾಧ್ಯಕ್ಷರಿಗೆ ನಗು!
ಶಿವಲಿಂಗೇಗೌಡರು ಕೋಪದಿಂದ ಕುದಿಯುತ್ತಿದ್ದರೆ ಸಭಾಧ್ಯಕ್ಷರಿಗೆ ನಗು!
ಕಂದಾಯ ಮತ್ತು ಸರ್ವೇ ಇಲಾಖೆ ಅಧಿಕಾರಿಗಳಿಂದ ಮಾರ್ಕಿಂಗ್ ಕೆಲಸ ಶುರುವಾಗಿದೆ
ಕಂದಾಯ ಮತ್ತು ಸರ್ವೇ ಇಲಾಖೆ ಅಧಿಕಾರಿಗಳಿಂದ ಮಾರ್ಕಿಂಗ್ ಕೆಲಸ ಶುರುವಾಗಿದೆ
ತೆರವು ಕಾರ್ಯಾಚರಣೆ ಆರಂಭಿಸುವ ಮೊದಲು ನೋಟೀಸ್ ನೀಡಿಲ್ಲ: ಕುಮಾರಸ್ವಾಮಿ
ತೆರವು ಕಾರ್ಯಾಚರಣೆ ಆರಂಭಿಸುವ ಮೊದಲು ನೋಟೀಸ್ ನೀಡಿಲ್ಲ: ಕುಮಾರಸ್ವಾಮಿ