AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಡುಗೆ ಮನೆಯಲ್ಲಿ ದೈತ್ಯ ಕಾಳಿಂಗ ಸರ್ಪ ಪತ್ತೆ !

ಮಂಜುನಾಥ್ ಅವರ ಪತ್ನಿ ಅಡುಗೆ ಮಾಡುತ್ತಿದ್ದಾಗ ಹಾವು ನೋಡಿ ಗಾಬರಿಗೊಂಡಿದ್ದರು. ನಂತರದಲ್ಲಿ ಸ್ನೇಕ್ ಕಿರಣ್ ಅಲ್ಲಿಗೆ ಆಗಮಿಸಿ ಹಾವನ್ನು ಹಿಡಿದು ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

ಅಡುಗೆ ಮನೆಯಲ್ಲಿ ದೈತ್ಯ ಕಾಳಿಂಗ ಸರ್ಪ ಪತ್ತೆ !
TV9 Web
| Edited By: |

Updated on:May 03, 2022 | 5:45 PM

Share

ಶಿವಮೊಗ್ಗ : ಶಿವಮೊಗ್ಗದ ಚಾಲುಕ್ಯ ನಗರದಲ್ಲಿ ಮಂಜುನಾಥ್ ಎಂಬುವವರ ಮನೆಯಲ್ಲಿ ಕಾಳಿಂಗ ಸರ್ಪ  ಪತ್ತೆಯಾಗಿದೆ. ಮಂಜುನಾಥ್ ಅವರ ಮನೆಯ ಅಡುಗೆ ಮನೆಯಿಂದ ಕಾಳಿಂಗ ಸರ್ಪ ಪತ್ತೆಯಾಗಿದೆ. ಶುಕ್ರವಾರ ಬೆಳಗ್ಗೆ ಮಂಜುನಾಥ್ ಅವರ ಪತ್ನಿ ಅಡುಗೆ ಮಾಡುತ್ತಿದ್ದಾಗ ಹಾವು ನೋಡಿ ಗಾಬರಿಗೊಂಡಿದ್ದರು. ನಂತರದಲ್ಲಿ ಸ್ನೇಕ್ ಕಿರಣ್ ಅಲ್ಲಿಗೆ ಆಗಮಿಸಿ ಹಾವನ್ನು ಹಿಡಿದು ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.

ಸ್ನೇಕ್ ಕಿರಣ್ ಹಾವು ಪತ್ತೆ ಹಚ್ಚುವುದರಲ್ಲಿ ಮತ್ತು ಅವುಗಳನ್ನು ಸುರಕ್ಷಿತವಾಗಿ ಕಾಡಿಗೆ ಬೀಡುವ ಕೆಲಸವನ್ನು ಮಾಡುವ ಕಾರ್ಯವನ್ನು ಮಾಡುತ್ತಿದ್ದಾರೆ. ಹಾವುಗಳ ಪ್ರತಿಯೊಂದು ನಡೆಯನ್ನು ಮತ್ತು ಅವುಗಳು ಯಾವ ಹಾವು ಎಂದು ಕಂಡುಹಿಡಿಯುವುದರಲ್ಲಿ ನಿಪುಣರು ಹೌದು,  ಕಾಳಿಂಗ ಸರ್ಪಗಳಲ್ಲಿ ವಿಷದ ಅಂಶ ಹೆಚ್ಚಾಗಿರುತ್ತದೆ. ಅದನ್ನು  ತುಂಬಾ ಜಾಗೃತೆಯಿಂದ ಕಾಳಿಂಗ ಸರ್ಪ ಹಿಡಿಯುವ ಕಾರ್ಯವನ್ನು ಮಾಡುತ್ತಾರೆ.

ಮೈಸೂರು: ಚಾಮರಾಜನಗರ ಜಿಲ್ಲೆಯ ಬೂದಿಪದಗ ಗ್ರಾಮದಲ್ಲಿ ಪುರಾತನ ಸಮಾಧಿಗಳು ಪತ್ತೆಯಾಗಿವೆ. ಮೈಸೂರು ವಿಶ್ವವಿದ್ಯಾನಿಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದ ಸಹಾಯಕ ಪ್ರಾಧ್ಯಾಪಕಿ ವಿ.ಶೋಭಾ ನೇತೃತ್ವದ ಅಧಿಕಾರಿಗಳ ತಂಡ ಗ್ರಾಮದ ಬಳಿ ಸುಮಾರು 300 ಮೀಟರ್ ಉತ್ಖನನ ನಡೆಸಿತು. ರಚನೆಗಳು ಸುಮಾರು 9 ಮೀಟರ್ ಉದ್ದ ಮತ್ತು 4.5 ಮೀಟರ್ ಅಗಲವಿದೆ. ಇವುಗಳನ್ನು ಪರೀಕ್ಷಿಸಿ ಗೋರಿಗಳೆಂದು ಗುರುತಿಸಲಾಯಿತು. ಇವುಗಳು ಕ್ರಿ.ಪೂ.1500 ಅಥವಾ ಅದಕ್ಕಿಂತ ಹಿಂದಿನದಿರಬಹುದು ಎಂದು ಸಂಶೋಧಕರು ನಂಬಿದ್ದಾರೆ.

Published On - 5:32 pm, Mon, 2 May 22