AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇವಸ್ಥಾನದ ಬಳಿ ನಿಧಿಗೆ ಹುಡುಕಾಟ ನಡೆಸುತ್ತಿದ್ದ ಮೂವರು ಅಂದರ್, ಯಾವೂರಲ್ಲಿ?

ನಿಧಿಗಾಗಿ 2 ದಿನದ ಹಿಂದೆ ವಿಶೇಷಪೂಜೆ ಮಾಡಿದ್ದ ಕಿರಾತಕರು, ನಂತರ ಭೂಮಿಯನ್ನು ಅಗೆಯುತ್ತಿದ್ದರಂತೆ. ರಸ್ತೆ ಪಕ್ಕದಲ್ಲಿ ದ್ವಿಚಕ್ರ ವಾಹನಗಳು ನಿಂತಿರೋದನ್ನು ಗಮನಿಸಿದ ವಾಡಿ ಠಾಣೆ ಪೊಲೀಸರು, ಸ್ಥಳಕ್ಕೆ ಹೋಗಿ ಗಮನಿಸಿದಾಗ ಸತ್ಯ ಗೊತ್ತಾಗಿದೆ.

ದೇವಸ್ಥಾನದ ಬಳಿ ನಿಧಿಗೆ ಹುಡುಕಾಟ ನಡೆಸುತ್ತಿದ್ದ ಮೂವರು ಅಂದರ್, ಯಾವೂರಲ್ಲಿ?
ಬಂಧಿತ ಆರೋಪಿಗಳು
ಪೃಥ್ವಿಶಂಕರ
| Edited By: |

Updated on:Dec 03, 2020 | 12:46 PM

Share

ಕಲಬುರಗಿ: ಜಿಲ್ಲೆಯಲ್ಲಿ ನಿಧಿಗಳ್ಳರ ಹಾವಳಿ ವಿಪರೀತವಾಗಿದೆ. ಅದೆಷ್ಟೊ ಪುಟಾಣಿಗಳು ನಿಧಿಗಳ್ಳರ ದುರಾಸೆಗೆ ಬಲಿಯಾಗಿದ್ದಾರೆ.  ಇನ್ನು ಹಲವರು ಜೈಲುಪಾಲಾಗಿದ್ದಾರೆ. ಆದರೂ ನಿಧಿ ಹುಡುಕುವವರ ಸಂಖ್ಯೆ ಕಡಿಮೆಯಾಗಿಲ್ಲ.

ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ರಾಂಪೂರಹಳ್ಳಿ ಹೊರವಲಯದ ಭಾಗ್ಯವಂತಿ ದೇವಸ್ಥಾನದ ಬಳಿ ನಿಧಿಗೆ ಹುಡುಕಾಟ ನಡೆಸುತ್ತಿದ್ದ ಮೂವರು ನಿಧಿಗಳ್ಳರನ್ನು ವಾಡಿ ಠಾಣೆಯ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಕಲಬುರಗಿ ಜಿಲ್ಲೆಯ ತರ್ಕಸಪೇಟ್ ಗ್ರಾಮದ ಸಾಯಿಬಣ್ಣ, ಶಾಂಪೂರಹಳ್ಳಿಯ ಹಣಮಂತ ಖತ್ರಿ, ರಾಂಪೂರಹಳ್ಳಿಯ ಬಸಲಿಂಗ ಬಂಧಿತರು.

2 ದಿನದ ಹಿಂದೆ ವಿಶೇಷಪೂಜೆ ಮಾಡಿದ್ದ ಕಿರಾತಕರು.. ಮೂವರ ಜೊತೆಗೆ ಇನ್ನೂ ಮೂವರು ಸೇರಿ ರಾಂಪೂರಹಳ್ಳಿಯ ಹೊರವಲಯದ ಭಾಗ್ಯವಂತಿ ದೇವಸ್ಥಾನದ ಬಳಿ ನಿಧಿಗೆ ಭೂಮಿ ಅಗೆಯುತ್ತಿದ್ರು. ನಿಧಿಗಾಗಿ 2 ದಿನದ ಹಿಂದೆ ವಿಶೇಷ ಪೂಜೆ ಮಾಡಿದ್ದ ಕಿರಾತಕರು, ನಂತರ ಭೂಮಿಯನ್ನು ಅಗೆಯುತ್ತಿದ್ದರಂತೆ.

ರಸ್ತೆ ಪಕ್ಕದಲ್ಲಿ ದ್ವಿಚಕ್ರ ವಾಹನಗಳು ನಿಂತಿರೋದನ್ನು ಗಮನಿಸಿದ ವಾಡಿ ಠಾಣೆ ಪೊಲೀಸರು, ಸ್ಥಳಕ್ಕೆ ಹೋಗಿ ಗಮನಿಸಿದಾಗ ಸತ್ಯ ಗೊತ್ತಾಗಿದೆ. ಒಟ್ಟು 6 ಜನರ ಪೈಕಿ ಮೂವರು ಪೊಲೀಸರಿಗೆ ಸಿಕ್ಕಿದ್ದು, ಇನ್ನು ಬಾಗಲಕೋಟೆ ಜಿಲ್ಲೆಯವರು ಎಸ್ಕೇಪ್ ಆಗಿದ್ದಾರೆ.

ಬಾಗಲಕೋಟೆ ಮೂಲದ ಮೂವರು ಮಂತ್ರವಾದಿಗಳು, ಸಾಯಿಬಣ್ಣ, ಹಣಮಂತ, ಬಸಲಿಂಗರಿಗೆ ನಿಧಿಗಾಗಿ ಆಸೆ ಹುಟ್ಟಿಸಿದ್ದರಂತೆ. ರಾಂಪೂರಹಳ್ಳಿ ಭಾಗವ್ಯವಂತಿ ದೇವಸ್ಥಾನದ ಬಳಿ ನಿಧಿಯಿದೆ. ಪೂಜೆ ಮಾಡಿ ನಿಧಿ ಹುಡುಕಿದ್ರೆ ಸಿಗುತ್ತೆ ಅಂತ ಹೇಳಿದ್ದರಂತೆ. ಅವರ ಮಾತನ್ನು ನಂಬಿ ಮೂವರು ಪೂಜೆ ಮಾಡಿ ನಿಧಿಗಾಗಿ ಶೋಧ ಮಾಡಲು ಹೋಗಿ ಈಗ ಜೈಲು ಪಾಲಾಗಿದ್ದಾರೆ.

ಒಟ್ನಲ್ಲಿ ನಿಧಿಗೆ ಹುಡುಕಾಟ ನಡೆಸಿದ್ದ ಮೂವರು ಜೈಲು ಪಾಲಾಗಿದ್ದಾರೆ. ನಿಧಿ ಆಸೆ ಹುಟ್ಟಿಸಿ ಯಾಮಾರಿಸುವ ದೊಡ್ಡ ಗ್ಯಾಂಗ್ ರಾಜ್ಯದಲ್ಲಿ ಸಕ್ರಿಯವಾಗಿದೆ. ಗ್ಯಾಂಗ್​ನ ಹೆಡೆಮುರಿ ಕಟ್ಟುವ ಕೆಲಸವನ್ನ ಪೊಲೀಸರು ಮಾಡಬೇಕಿದೆ. ಇಲ್ಲದಿದ್ದರೆ ಇನ್ನೂ ಅನೇಕರು ಇದೇ ರೀತಿ ಅಡ್ಡದಾರಿ ಹಿಡಿಯುವುದರಲ್ಲಿ ಅನುಮಾನವಿಲ್ಲ.

Published On - 12:56 pm, Sat, 28 November 20

450 ಕಿ.ಮೀ ಸ್ಕೇಟಿಂಗ್ ಮಾಡಿ ಅಯೋಧ್ಯೆಯ ರಾಮನ ದರ್ಶನ ಪಡೆದ 9 ವರ್ಷದ ಬಾಲಕಿ!
450 ಕಿ.ಮೀ ಸ್ಕೇಟಿಂಗ್ ಮಾಡಿ ಅಯೋಧ್ಯೆಯ ರಾಮನ ದರ್ಶನ ಪಡೆದ 9 ವರ್ಷದ ಬಾಲಕಿ!
ಸೋಮನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ
ಸೋಮನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ
ಸೋಮನಾಥ ದೇವಾಲಯಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ
ಸೋಮನಾಥ ದೇವಾಲಯಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ
ಹೆಚ್​​​ಡಿಕೆ VS ಡಿಕೆಶಿ ಸವಾಲು: ಓಪನ್ ಡಿಬೇಟ್ ಮಾಡೋಣ ಬನ್ನಿ
ಹೆಚ್​​​ಡಿಕೆ VS ಡಿಕೆಶಿ ಸವಾಲು: ಓಪನ್ ಡಿಬೇಟ್ ಮಾಡೋಣ ಬನ್ನಿ
ಶ್ವಾನ ದಾಳಿಯಿಂದ ಶ್ರೇಯಸ್ ಅಯ್ಯರ್ ಜಸ್ಟ್ ಮಿಸ್; ವಿಡಿಯೋ ನೋಡಿ
ಶ್ವಾನ ದಾಳಿಯಿಂದ ಶ್ರೇಯಸ್ ಅಯ್ಯರ್ ಜಸ್ಟ್ ಮಿಸ್; ವಿಡಿಯೋ ನೋಡಿ
ಕಿಚ್ಚನ ಮಾತು ಕೇಳಿ ಕಣ್ಣೀರು ಹಾಕಿದ ಅಶ್ವಿನಿ-ಧ್ರುವಂತ್: ವಿಡಿಯೋ ನೋಡಿ
ಕಿಚ್ಚನ ಮಾತು ಕೇಳಿ ಕಣ್ಣೀರು ಹಾಕಿದ ಅಶ್ವಿನಿ-ಧ್ರುವಂತ್: ವಿಡಿಯೋ ನೋಡಿ
ಬಳ್ಳಾರಿ ಗಲಭೆ ಖಂಡಿಸಿ ಬಿಜೆಪಿಯಿಂದ ಸಮರ: ಜ 17ರಂದು ಪ್ರತಿಭಟನೆ ಎಂದ ರೆಡ್ಡಿ
ಬಳ್ಳಾರಿ ಗಲಭೆ ಖಂಡಿಸಿ ಬಿಜೆಪಿಯಿಂದ ಸಮರ: ಜ 17ರಂದು ಪ್ರತಿಭಟನೆ ಎಂದ ರೆಡ್ಡಿ
ಪ್ರೀತಿ ಮಾಡಲು ಒಪ್ಪದಿದ್ದಕ್ಕೆ ಬೆಂಗಳೂರಿನ ಹುಡುಗಿಗೆ ಕೊಲೆ ಬೆದರಿಕೆ
ಪ್ರೀತಿ ಮಾಡಲು ಒಪ್ಪದಿದ್ದಕ್ಕೆ ಬೆಂಗಳೂರಿನ ಹುಡುಗಿಗೆ ಕೊಲೆ ಬೆದರಿಕೆ
ಮನೆ ಕಟ್ಟಲು ಅಡಿಪಾಯ ತೆಗೆಯುವಾಗ ವೇಳೆ ನಿಧಿ ಪತ್ತೆ
ಮನೆ ಕಟ್ಟಲು ಅಡಿಪಾಯ ತೆಗೆಯುವಾಗ ವೇಳೆ ನಿಧಿ ಪತ್ತೆ
ಎಣ್ಣೆ ಮತ್ತಲ್ಲಿ ಡಿವೈಡರ್​​ ಹಾರಿಸಿದ ಕಾರು ಚಾಲಕ: 8 ಜನ ಜಸ್ಟ್​ ಮಿಸ್!​​
ಎಣ್ಣೆ ಮತ್ತಲ್ಲಿ ಡಿವೈಡರ್​​ ಹಾರಿಸಿದ ಕಾರು ಚಾಲಕ: 8 ಜನ ಜಸ್ಟ್​ ಮಿಸ್!​​