AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಣ್ವ ಬ್ಯಾಂಕ್ ವಂಚನೆ ಅಗಾಧ.. ಹೂಡಿಕೆದಾರರು ಫೋನ್ ಮೂಲಕವೂ ದೂರು ದಾಖಲಿಸಬಹುದು

2005ರಲ್ಲಿ ರಾಜಾಜಿನಗರದಲ್ಲಿ ಸ್ಥಾಪನೆಯಾಗಿದ್ದ ಕಣ್ವ ಸೌಹಾರ್ಧ ಕೋ ಆಪರೇಟಿವ್ ಕ್ರೆಡಿಟ್ ಬ್ಯಾಂಕ್, ಹೂಡಿಕೆ ಮಾಡಿದ್ದ ಗ್ರಾಹಕರಿಗೆ ಹಣ ನೀಡದೇ ವಂಚಿಸಿದೆ ಎಂಬ ಆರೋಪ ಕೇಳಿ ಬಂದಿತ್ತು. ಸಧ್ಯ ಈ ಬಗ್ಗೆ ಸಿಐಡಿ ಹೆಚ್ಚಿನ ತನಿಖೆ ನಡೆಸುತ್ತಿದ್ದು, ಹೂಡಿಕೆದಾರರಿಗೆ ದೂರು ನೀಡಲು ಅವಕಾಶ ಮಾಡಿದೆ.

ಕಣ್ವ ಬ್ಯಾಂಕ್ ವಂಚನೆ ಅಗಾಧ.. ಹೂಡಿಕೆದಾರರು ಫೋನ್ ಮೂಲಕವೂ ದೂರು ದಾಖಲಿಸಬಹುದು
ಕಣ್ವ ಸೌಹಾರ್ಧ ಕೋ-ಆಪರೇಟಿವ್ ಕ್ರೆಡಿಟ್ ಬ್ಯಾಂಕ್
preethi shettigar
| Edited By: |

Updated on: Dec 16, 2020 | 4:22 PM

Share

ಬೆಂಗಳೂರು: ಕಣ್ವ ಸೌಹಾರ್ಧ ಕೋ ಆಪರೇಟಿವ್ ಕ್ರೆಡಿಟ್ ಬ್ಯಾಂಕ್ ವಂಚನೆ ಪ್ರಕರಣ ಹೊಸ ಮಜಲು ತಲುಪಿದೆ. ಸಂತ್ರಸ್ತ ಹೂಡಿಕೆದಾರರು ನೇರವಾಗಿ ತನಿಖಾಧಿಕಾರಿಗೆ ಫೋನ್ ಮೂಲಕ ದೂರು ನೀಡಲು ಸೂಚನೆ‌ ನೀಡಲಾಗಿದೆ. ತನಿಖಾಧಿಕಾರಿ ಮಹಮ್ಮದ್ ರಫಿ, ಡಿವೈಎಸ್​ಪಿ, ಅವರನ್ನು ಬೆಳಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆವರೆಗೆ 080 2209 4417 ಸ್ಥಿರ ದೂರವಾಣಿ ಮೂಲಕ ಸಂಪರ್ಕಿಸಬಹುದು

2005ರಲ್ಲಿ ರಾಜಾಜಿನಗರದಲ್ಲಿ ಸ್ಥಾಪನೆಯಾಗಿದ್ದ ಕಣ್ವ ಸೌಹಾರ್ಧ ಕೋ ಆಪರೇಟಿವ್ ಕ್ರೆಡಿಟ್ ಬ್ಯಾಂಕ್, ಹೂಡಿಕೆ ಮಾಡಿದ್ದ ಗ್ರಾಹಕರಿಗೆ ಹಣ ನೀಡದೇ ವಂಚಿಸಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಬೆಂಗಳೂರಿನ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ಬಳಿಕ ಸಿಐಡಿಗೆ ಈ ಪ್ರಕರಣವನ್ನು ವರ್ಗಾವಣೆ ಮಾಡಲಾಗಿತ್ತು.

ಪ್ರಕರಣದಲ್ಲಿ ಇದುವರೆಗೆ 426 ಕೋಟಿ 19 ಲಕ್ಷ ರೂಪಾಯಿ ಮೌಲ್ಯದ ಆಸ್ತಿ ಜಪ್ತಿ ಮಾಡಿರುವ ಸಿಐಡಿ, ಸದ್ಯ ಈ ವಿಚಾರವಾಗಿ ಹೆಚ್ಚಿನ ತನಿಖೆ ನಡೆಸಿದ್ದು, ವಂಚನೆಗೊಳದ ಹಣದ ಮೌಲ್ಯ ಹೆಚ್ಚಿರಬಹುದಾದ ಸಾಧ್ಯತೆಯಿದೆ ಎಂದು ಅಂದಾಜಿಸಿದೆ. ಈ ನಿಟ್ಟಿನಲ್ಲಿ ಹೂಡಿಕೆದಾರರಿಗೆ ದೂರು ನೀಡಲು ಸೂಚಿಸಿದ್ದು, ಬೆಳಗ್ಗೆ 11ರಿಂದ ಸಂಜೆ 5ರವರೆಗೂ ಖುದ್ದು ತನಿಖಾಧಿಕಾರಿಗೆ ಫೋನ್ ಮೂಲಕ ದೂರು ನೀಡಲು ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಿದೆ.

ಗುರು ರಾಘವೇಂದ್ರ ಬ್ಯಾಂಕ್ ಪ್ರಕರಣ: 11 ಆರೋಪಿಗಳು CID ವಶಕ್ಕೆ