AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಡಾಡಿ ವೃದ್ಧ ಪ್ರಾಣಿಗಳಿಗೆ ಸಾಯಿಗೋಕುಲ ನಿರ್ಮಾಣ, ಯಾಕೆ?

ಕೋಲಾರ: ಇವತ್ತಿನ ಕಾಲದಲ್ಲಿ ವಯಸ್ಸಾದ ತಂದೆ ತಾಯಿಯರನ್ನೇ ನೋಡಿಕೊಳ್ಳುವ ಮಕ್ಕಳು ಸಿಗೋದು ಕಷ್ಟ. ಅಂಥದರಲ್ಲಿ ವಯಸ್ಸಾದ ಹಸು, ಎಮ್ಮೆ, ಬಿಡಾಡಿ ದನಗಳ ಬಗ್ಗೆ ಯಾರಾದ್ರು ತಲೆ ಕೆಡಿಸಿಕೊಳ್ತಾರಾ? ಆದ್ರೆ ಇಲ್ಲೊಬ್ಬ ಮನುಷ್ಯ ಮುದಿಯಾದ ಬಿಡಾಡಿ ಪ್ರಾಣಿಗಳಿಗೆ ವೃದ್ಧಾಶ್ರಮವೊಂದನ್ನು ಮಾಡಿ ಮಾನವೀಯತೆ ಮೆರೆಯುತ್ತಿದ್ದಾರೆ. ನಮ್ಮ ಪುರಾಣಗಳಲ್ಲಿ ಹಸುವನ್ನು ಪುಣ್ಯಕೋಟಿ, ಕಾಮಧೇನು ಎಂದೆಲ್ಲಾ ಕರೆಯಲಾಗುತ್ತಿತ್ತು. ಜೊತೆಗೆ ಪ್ರಾಣಿ ಪಕ್ಷಿಗಳನ್ನು ದೇವರ ರೂಪದಲ್ಲಿ ಕಾಣಲಾಗುತ್ತಿತ್ತು. ಆದ್ರೆ ಇವತ್ತಿನ ಕಾಲಕ್ಕೆ ಅದೆಲ್ಲ ಅಸಾಧ್ಯದ ಮಾತು. ಯಾಕಂದ್ರೆ ಜನ್ಮಕೊಟ್ಟ ತಂದೆ-ತಾಯಿಯರನ್ನೇ ನೋಡಿಕೊಳ್ಳದ ಜನರ ನಡುವೆ […]

ಬಿಡಾಡಿ ವೃದ್ಧ ಪ್ರಾಣಿಗಳಿಗೆ ಸಾಯಿಗೋಕುಲ ನಿರ್ಮಾಣ, ಯಾಕೆ?
ಸಾಧು ಶ್ರೀನಾಥ್​
| Edited By: |

Updated on:May 31, 2020 | 2:27 PM

Share

ಕೋಲಾರ: ಇವತ್ತಿನ ಕಾಲದಲ್ಲಿ ವಯಸ್ಸಾದ ತಂದೆ ತಾಯಿಯರನ್ನೇ ನೋಡಿಕೊಳ್ಳುವ ಮಕ್ಕಳು ಸಿಗೋದು ಕಷ್ಟ. ಅಂಥದರಲ್ಲಿ ವಯಸ್ಸಾದ ಹಸು, ಎಮ್ಮೆ, ಬಿಡಾಡಿ ದನಗಳ ಬಗ್ಗೆ ಯಾರಾದ್ರು ತಲೆ ಕೆಡಿಸಿಕೊಳ್ತಾರಾ? ಆದ್ರೆ ಇಲ್ಲೊಬ್ಬ ಮನುಷ್ಯ ಮುದಿಯಾದ ಬಿಡಾಡಿ ಪ್ರಾಣಿಗಳಿಗೆ ವೃದ್ಧಾಶ್ರಮವೊಂದನ್ನು ಮಾಡಿ ಮಾನವೀಯತೆ ಮೆರೆಯುತ್ತಿದ್ದಾರೆ.

ನಮ್ಮ ಪುರಾಣಗಳಲ್ಲಿ ಹಸುವನ್ನು ಪುಣ್ಯಕೋಟಿ, ಕಾಮಧೇನು ಎಂದೆಲ್ಲಾ ಕರೆಯಲಾಗುತ್ತಿತ್ತು. ಜೊತೆಗೆ ಪ್ರಾಣಿ ಪಕ್ಷಿಗಳನ್ನು ದೇವರ ರೂಪದಲ್ಲಿ ಕಾಣಲಾಗುತ್ತಿತ್ತು. ಆದ್ರೆ ಇವತ್ತಿನ ಕಾಲಕ್ಕೆ ಅದೆಲ್ಲ ಅಸಾಧ್ಯದ ಮಾತು. ಯಾಕಂದ್ರೆ ಜನ್ಮಕೊಟ್ಟ ತಂದೆ-ತಾಯಿಯರನ್ನೇ ನೋಡಿಕೊಳ್ಳದ ಜನರ ನಡುವೆ ಪ್ರಾಣಿ-ಪಕ್ಷಿಗಳ ಬಗ್ಗೆ ಮಾತಾಡೋದೆ ಬೇಡ. ಎಲ್ಲವನ್ನು ಕ್ಷಣಮಾತ್ರದಲ್ಲಿ ತಿಂದು ತೇಗುವ ಪರಿಸ್ಥಿತಿ ಇದೆ. ಆದ್ರೆ ಇಲ್ಲೊಬ್ಬ ಬೀದಿ ಬೀದಿಗಳಲ್ಲಿನ ಬಿಡಾಡಿ ಕರುಗಳನ್ನು, ಕುದುರೆಗಳನ್ನು ಸಾಕಿ ಸಲಹುತ್ತಿದ್ದಾರೆ.

14 ವರ್ಷಗಳಿಂದ ಬಿಡಾಡಿ ಪ್ರಾಣಿಗಳಿಗೆ ವೃದ್ಧಾಶ್ರಮ: ಇಂಥಾದೊಂದು ಆಶ್ರಮ ಇರೋದು ಕೋಲಾರ ತಾಲೂಕಿನ ಗಂಗಾಪುರ ಗ್ರಾಮದ ಬಳಿ. ಬೆಂಗಳೂರು ಮೂಲದ ನಾರಾಯಣ ಶರ್ಮಾ ಎಂಬುವರು ಗಂಗಾಪುರ ಗ್ರಾಮದ ಬಳಿ ಸುಮಾರು 14 ವರ್ಷಗಳಿಂದ ಸಾಯಿಗೋಕುಲ ಆಶ್ರಮ ನಿರ್ಮಾಣ ಮಾಡಿದ್ದಾರೆ. ಹಳ್ಳಿಗಳಲ್ಲಿನ ಮುದಿ ಹಾಗೂ ಗಾಯಗೊಂಡು ಕೆಲಸಕ್ಕೆ ಬಾರದೆಂದು ಕಸಾಯಿಖಾನೆಗೆ ಕಳಿಸುವಂತ ಹಸುಗಳನ್ನು ತಂದು ತಮ್ಮ ಆಶ್ರಮದಲ್ಲಿರಿಸಿಕೊಂಡು ಪ್ರೀತಿಯಿಂದ ಸಾಕಿ ಸಲಹುತ್ತಿದ್ದಾರೆ. ಸದ್ಯ ಆಶ್ರಮದಲ್ಲಿ ಸುಮಾರು 80 ಮುದಿ ಹಾಗೂ ಗಾಯಗೊಂಡ ಹಸುಗಳು, ಮೂರು ಕುದುರೆಗಳು, ಎಮ್ಮೆಗಳು, ಮೊಲ, ಪಾರಿವಾಳಗಳನ್ನು ಸಾಕಲಾಗುತ್ತಿದೆ.

ಮೂಲತಹ ನಾರಾಯಣ ಶರ್ಮ ಉದ್ಯಮಿ: ಮೂಲತಹ ಉದ್ಯಮಿಯಾಗಿರುವ ನಾರಾಯಣ ಶರ್ಮಾ ಇಂಥಾದೊಂದು ಆಶ್ರಮ ಸ್ಥಾಪನೆ ಮಾಡಲು ಕಾರಣವಿದೆ. ಅವರು ತಮ್ಮ ಚಿಕ್ಕವಯಸ್ಸಿನಲ್ಲಿ ತಮ್ಮ ಮನೆಯಲ್ಲಿದ್ದ ಹಸುವನ್ನು ಮೇಯಿಸಿಕೊಂಡು ಬರುವಾಗ ಕಾಲುಜಾರಿ ಚರಂಡಿಗೆ ಬಿದ್ದು ಗಾಯಗೊಂಡು ನರಳಿ ನರಳಿ ಹಸು ಸತ್ತು ಹೋಗಿತ್ತಂತೆ. ಅದು ಇವರ ಮನಸ್ಸಿನ ಮೇಲೆ ಅಗಾಧ ಪರಿಣಾಮ ಬೀರಿತ್ತಂತೆ. ಜೊತೆಗೆ ಅವರ ತಾಯಿ ಸಹ ಮುಂದೊಂದು ದಿನ ಪ್ರಾಣಿಪಕ್ಷಿಗಳಿಗೆ ನೆರವಾಗುವಂತೆ ಕಿವಿಮಾತು ಹೇಳಿದ್ರಂತೆ.

ಹೀಗಾಗಿ ಕಳೆದ 14 ವರ್ಷಗಳಿಂದ ಸಾಯಿ ಗೋಕುಲ ಆಶ್ರಮ ನಡೆಸಿಕೊಂಡು ಬರುತ್ತಿದ್ದಾರೆ. ಇವರ ಆಶ್ರಮಕ್ಕೆ ಅಕ್ಕ ಪಕ್ಕದ ಹಳ್ಳಿಗಳ ಮುದಿ ಹಸುಗಳು, ಪಟ್ಟಣಗಳ ಬಿಡಾಡಿ ದನಗಳು, ಕುದುರೆಗಳು, ಎಮ್ಮೆ ಹೀಗೆ ಹಲವಾರು ರೀತಿಯ ಪ್ರಾಣಿಗಳನ್ನು ತಂದು ಬಿಡುತ್ತಾರೆ. ಹಾಗೆ ತಂದು ಬಿಟ್ಟ ಪ್ರಾಣಿಗಳನ್ನು ಪ್ರೀತಿಯಿಂದ ಸಾಕಿ ಸಲಹಿ ಅವುಗಳಿಗೆ ಸಹಜ ಸಾವು ಬಂದ ಮೇಲೆ ಅಲ್ಲೇ ಆಶ್ರಮದ ಬಳಿ ಜಾಗದಲ್ಲಿ ಸಮಾಧಿ ಮಾಡಲಾಗುತ್ತೆ.

ಒಟ್ಟಾರೆ ವಯಸ್ಸಾದ ಮನುಷ್ಯರನ್ನೇ ನೋಡಿಕೊಳ್ಳದ ಜನರಿಲ್ಲದ ಈ ಕಾಲದಲ್ಲಿ ವಯಸ್ಸಾದ ಪ್ರಾಣಿ ಪಕ್ಷಿಗಳಿಗೆ ಪ್ರೀತಿಯ ಹಾರೈಕೆ ಮಾಡುತ್ತಿರುವ ಇವರ ಕಾರ್ಯ ನಿಜಕ್ಕೂ ಶ್ಲಾಘನೀಯ. ಇವರ ಈ ಸಮಾಜಮುಖಿ ಕಾರ್ಯ ನಿಜಕ್ಕೂ ಎಂತಹವರಿಗೂ ಪ್ರೇರಣೆ ನೀಡುವಂತದ್ದು.

Published On - 12:39 pm, Sun, 31 May 20

ಬೆಂಗಳೂರಿನಲ್ಲಿ ಮತ್ತೊಂದು ಬ್ಯಾಂಕ್ ದರೋಡೆಗೆ ಯತ್ನ
ಬೆಂಗಳೂರಿನಲ್ಲಿ ಮತ್ತೊಂದು ಬ್ಯಾಂಕ್ ದರೋಡೆಗೆ ಯತ್ನ
ತಂಬಾಕು ಬೆಲೆ ಕುಸಿತ: ಬೆಂಬಲ ಬೆಲೆ ನೀಡುವ ಕುರಿತು ಮೈಸೂರಲ್ಲಿ ಮಹತ್ವದ ಸಭೆ
ತಂಬಾಕು ಬೆಲೆ ಕುಸಿತ: ಬೆಂಬಲ ಬೆಲೆ ನೀಡುವ ಕುರಿತು ಮೈಸೂರಲ್ಲಿ ಮಹತ್ವದ ಸಭೆ
ಧೋನಿ ಆಪ್ತನ ಜೊತೆ ಸುತ್ತಾಡುತ್ತಿರುವ ಪರಮ ಸುಂದರಿ ಕೃತಿ ಸನನ್
ಧೋನಿ ಆಪ್ತನ ಜೊತೆ ಸುತ್ತಾಡುತ್ತಿರುವ ಪರಮ ಸುಂದರಿ ಕೃತಿ ಸನನ್
ಗಾಂಧೀಜಿ ಭಾರತದ ರಾಷ್ಟ್ರಪಿತ ಅಲ್ಲ; ನೆಹರು ಮೊದಲ ಪ್ರಧಾನಿಯಲ್ಲ: ಯತ್ನಾಳ್
ಗಾಂಧೀಜಿ ಭಾರತದ ರಾಷ್ಟ್ರಪಿತ ಅಲ್ಲ; ನೆಹರು ಮೊದಲ ಪ್ರಧಾನಿಯಲ್ಲ: ಯತ್ನಾಳ್
ಅವಧಿ ಮೀರಿದ ಔಷಧಿ ವಿತರಣೆ ಪ್ರಶ್ನಿಸಿದ್ದಕ್ಕೆ ಬೆದರಿಕೆ ಆರೋಪ
ಅವಧಿ ಮೀರಿದ ಔಷಧಿ ವಿತರಣೆ ಪ್ರಶ್ನಿಸಿದ್ದಕ್ಕೆ ಬೆದರಿಕೆ ಆರೋಪ
ತಿನ್ನುವ ತರಕಾರಿಯಲ್ಲಿ ವಿಷ: ಸದ್ದಿಲ್ಲದೇ ಮನಷ್ಯರ ದೇಹ ಸೇರುತ್ತಿದೆ ಕೀಟನಾಶಕ
ತಿನ್ನುವ ತರಕಾರಿಯಲ್ಲಿ ವಿಷ: ಸದ್ದಿಲ್ಲದೇ ಮನಷ್ಯರ ದೇಹ ಸೇರುತ್ತಿದೆ ಕೀಟನಾಶಕ
ಮಣ್ಣು ತುಂಬಿದ ಬುಟ್ಟಿ ಹೊತ್ತ ಸಿದ್ದರಾಮಯ್ಯ, ಡಿಕೆಶಿ:ವಿಡಿಯೋ ನೋಡಿ
ಮಣ್ಣು ತುಂಬಿದ ಬುಟ್ಟಿ ಹೊತ್ತ ಸಿದ್ದರಾಮಯ್ಯ, ಡಿಕೆಶಿ:ವಿಡಿಯೋ ನೋಡಿ
ಈ ಅಣಬೆ ತಿನ್ನುವ ಮುನ್ನ ಜೋಕೆ: ಯಾಮಾರಿದ್ರೆ ಭ್ರಮೆ ಹುಟ್ಟಿಸುತ್ತೆ ಎಚ್ಚರ!
ಈ ಅಣಬೆ ತಿನ್ನುವ ಮುನ್ನ ಜೋಕೆ: ಯಾಮಾರಿದ್ರೆ ಭ್ರಮೆ ಹುಟ್ಟಿಸುತ್ತೆ ಎಚ್ಚರ!
ಲಂಚ ತೆಗೆದುಕೊಳ್ಳುವ ಸಿಕ್ಕಿಬಿದ್ದ ಬಿಜೆಪಿ ಶಾಸಕನ ವಿರುದ್ಧ ಸ್ವಾಮೀಜಿ ಆರೋಪ
ಲಂಚ ತೆಗೆದುಕೊಳ್ಳುವ ಸಿಕ್ಕಿಬಿದ್ದ ಬಿಜೆಪಿ ಶಾಸಕನ ವಿರುದ್ಧ ಸ್ವಾಮೀಜಿ ಆರೋಪ
ತನಗೆ ಕಾಟ ಕೊಟ್ಟವರಿಗೆ ಪಂಚ್ ಕೊಡ್ತಾ ಈ ಮರಿ ಕೋತಿ ‘ಪಂಚ್’?
ತನಗೆ ಕಾಟ ಕೊಟ್ಟವರಿಗೆ ಪಂಚ್ ಕೊಡ್ತಾ ಈ ಮರಿ ಕೋತಿ ‘ಪಂಚ್’?