AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮನ ಬಂಟ ಹನುಮನ ಜನ್ಮಸ್ಥಳದಿಂದ ಅಯೋಧ್ಯೆವರಗೆ ಸೈಕಲ್​ ಸವಾರಿ ಹೊರಟ ಯುವಕ

ಕೊರಳಲ್ಲಿ ಕೇಸರಿ ಶಾಲು, ಸೈಕಲ್ ಎದುರು ರಾಮ ಆಂಜನೆಯರ ಪೋಟೊ, ಎದುರಿಗೆ ಭಗದ್ವಜ, ಹಾಕಿಕೊಂಡು ವಿಜಯಪುರ ಜಿಲ್ಲೆಯ ಬಾಗೇವಾಡಿ ತಾಲೂಕಿನ ತಾಳೇವಾಡ ಗ್ರಾಮದ ಸುರೇಶ, ಹನುಮ ಜನ್ಮಭೂಮಿ ಅಂಜನಾದ್ರಿಯಿಂದ ರಾಮಜನ್ಮ ಭೂಮಿ ಅಯೋದ್ಯೆಗೆ ಸೈಕಲ್​ನಲ್ಲಿ ಯಾತ್ರೆ ಆರಂಭಿಸಿದ್ದಾನೆ.

ರಾಮನ ಬಂಟ ಹನುಮನ ಜನ್ಮಸ್ಥಳದಿಂದ ಅಯೋಧ್ಯೆವರಗೆ ಸೈಕಲ್​ ಸವಾರಿ ಹೊರಟ ಯುವಕ
ಸೈಕಲ್​ನಲ್ಲಿ ಅಯೋಧ್ಯೆಗೆ ಹೊರಟ ಯುವಕ
ಸಂಜಯ್ಯಾ ಚಿಕ್ಕಮಠ
| Edited By: |

Updated on:Jan 10, 2024 | 8:35 AM

Share

ಕೊಪ್ಪಳ, ಜನವರಿ 10: ಶತಕೋಟಿ ಜನರ ಕನಸಿನ ಪ್ರಭು ಶ್ರೀ ರಾಮಮಂದಿರ (Ram Mandir) ಲೊಕಾರ್ಪಣೆಗೆ ದಿನ ಗಣನೆ ಶುರುವಾಗಿದೆ. ಪ್ರತಿ ಹಿಂದೂವು ರಾಮಮಂದಿರ ದರ್ಶನಕ್ಕೆ ಕಾತುರರಾಗಿದ್ದಾರೆ. ಆದರೆ ಇಲ್ಲೊಬ್ಬ ಯುವಕ ವಿಭಿನ್ನವಾಗಿ ಅಯೋಧ್ಯೆ (Ayodhye) ರಾಮಮಂದಿರ ದರ್ಶನಕ್ಕೆ ತೆರಳಿದ್ದಾನೆ. ಜನವರಿ 22 ರಂದು ಕನಸಿನ ರಾಮಮಂದಿರ ಲೋಕಾರ್ಪಣೆಯಾಗಲಿದೆ, ಈ ಒಂದು ಕ್ಷಣ ಕಣ್ತುಂಬಿಕೊಳ್ಳಲು ಶತಕೋಟಿ ಜನರು ಕಾತುರತೆಯಿಂದ ಕಾದಿದ್ದಾರೆ. ಇದೊಂದು ಐತಿಹಾಸಿಕ ಕ್ಷಣ, ಇಡಿ ದೇಶವೇ ಅಂದು ಹಬ್ಬ ಆಚರಣೆ ಮಾಡಲಿದೆ. ಅಯೋದ್ಯೆಯಲ್ಲಂತೂ ಪ್ರಭು ಶ್ರೀರಾಮನ ಪಟ್ಟಾಭಿಷೇಕ ಮತ್ತೊಮ್ಮೆ ನಡೆಯಲಿದೆ. ಈ ಅದ್ಭುತ ಕ್ಷಣಗಳನ್ನು ಕಣ್ತುಂಬಿಕೊಳ್ಳು ಕರ್ನಾಟಕದ ಯುವಕನೊಬ್ಬ ವಿಬಿನ್ನವಾಗಿ ಯಾತ್ರೆ ಆರಂಭಿಸಿದ್ದಾನೆ.

ಹೌದು ವಿಜಯಪುರ ಜಿಲ್ಲೆಯ ಬಾಗೇವಾಡಿ ತಾಲೂಕಿನ ತಾಳೇವಾಡ ಗ್ರಾಮದ ಸುರೇಶ, ಹನುಮ ಜನ್ಮಭೂಮಿ ಅಂಜನಾದ್ರಿಯಿಂದ ರಾಮಜನ್ಮ ಭೂಮಿ ಅಯೋದ್ಯೆಗೆ ಸೈಕಲ್​ನಲ್ಲಿ ಯಾತ್ರೆ ಆರಂಭಿಸಿದ್ದಾನೆ. ಮಂಗಳವಾರ (ಜ.09) ರಂದು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಪರ್ವತದ ಅಂಜನೇಯನ ದರ್ಶನ ಪಡೆದು ಸೈಕಲ್ ಯಾತ್ರೆ ಆರಂಭಿಸಿದ್ದಾನೆ. ಏಕಾಂಗಿಯಾಗಿ ಸೈಕಲ್ ಮೂಲಕ ಅಯೋದ್ಯೆ ತಲುಪಿ ಪ್ರಭು ಶ್ರೀರಾಮನ ದರ್ಶನ ಪಡೆಯಲಿದ್ದಾನೆ. ಅಷ್ಟೆ ಅಲ್ಲದೆ ಅಯೋದ್ಯೆಗೆ ತೆರಳುವ ಮಾರ್ಗ ಮದ್ಯ ಬರುವ ಹಳ್ಳಿಗಳಲ್ಲಿ ಪ್ರಭು ಶ್ರೀರಾಮನ ಚಿತ್ರಗಳನ್ನ ಬಿಡಿಸುತ್ತ ಪ್ರಯಾಣ ನಡೆಸಲಿದ್ದಾನೆ.

ಇದನ್ನೂ ಓದಿ: ರಾತ್ರಿ ಸಮಯದಲ್ಲಿ ಅಯೋಧ್ಯೆ ರಾಮಮಂದಿರ ಹೇಗೆ ಕಾಣುತ್ತೆ ನೋಡಿ? ಇಲ್ಲಿದೆ ಫೋಟೋ

ಕೊರಳಲ್ಲಿ ಕೇಸರಿ ಶಾಲು, ಸೈಕಲ್ ಎದುರು ರಾಮ ಆಂಜನೆಯರ ಪೋಟೊ, ಎದುರಿಗೆ ಭಗದ್ವಜ, ಹಾಕಿಕೊಂಡು ಸೈಕಲ್ ತುಳಿತಾ ಅಯೋದ್ಯೆಗೆ ಈ ಯುವಕ ಪ್ರಯಾಣ ಬೆಳೆಸಿದ್ದಾನೆ. ಯುವಕನ ಸೈಕಲ್ ಯಾತ್ರೆ ಬಗ್ಗೆ ತಿಳಿದ ಗಂಗಾವತಿಯ ಹಿಂದೂಪರ ಸಂಘಟನೆಯ ಮುಖಂಡರು ಯುವಕನಿಗೆ ಸನ್ಮಾನ ಮಾಡಿ, ಯಾತ್ರೆಗೆ ಶುಭಹಾರೈಸಿದ್ದಾರೆ. ಇನ್ನು ಅಂಜನಾದ್ರಿ ಬೆಟ್ಟಕ್ಕೆ ಬಂದಿದ್ದ ಶಾಸಕ ಗಾಲಿ ಜನಾರ್ದನ ರೆಡ್ಡಿ ಸಹ ಸುರೇಶನ ಸೈಕಲ್​ ಯಾತ್ರೆ ವಿಷಯ ತಿಳಿದು ಶುಭಹಾರೈಸಿ ಯಾವುದೆ ತೊಂದರೆಯಾಗದೆ ಪ್ರಭು ಶ್ರೀರಾಮನ ದರ್ಶನ ಸಿಗಲಿ, ಅಯೋದ್ಯೆಯ ರಾಮಮಂದಿರ ಉದ್ಘಾಟನೆಯ ಐತಿಹಾಸಿಕ ಕ್ಷಣ ಕಣ್ತುಂಬಿಕೊಳ್ಳಲಿ ಎಂದು ಶುಭ ಕೋರಿದ್ದಾರೆ. ಯುವಕನ ಸೈಕಲ್ ಯಾತ್ರೆಯ ಬಗ್ಗೆ ತಿಳಿಯುತ್ತಲೆ ನೂರಾರು ಜನ ಯುವಕರು ಸೇರಿ ಸುರೇಶನಿಗೆ ಶುಭಹಾರೈಸಿ ಬಿಳ್ಕೊಟ್ಟಿದ್ದಾರೆ.

ಸದ್ಯ ಅಂಜನಾದ್ರಿಯಿಂದ ಹೊರಟ ಯುವಕನ ಸೈಕಲ್ ಯಾತ್ರೆ, ಬೆಳಗಾವಿ ಜಿಲ್ಲೆಯಿಂದ ಮಹಾರಾಷ್ಟ್ರದ ಮೂಲಕವಾಗಿ ಉತ್ತರ ಪ್ರದೇಶದ ಅಯೋದ್ಯೆಯೆಡೆಗೆ ಪ್ರಯಾಣ ಸಾಗಲಿದೆ. ಹನುಮನ ಸ್ಥಳದಿಂದ ರಾಮನ ಸ್ಥಳಕ್ಕೆ ಸೈಕಲ್ ಮೂಲಕ ಹೊರಟ ವ್ಯಕ್ತಿಗೆ ಪ್ರಭು ಶ್ರೀರಾಮ ಹಾಗೂ ಆಂಜನೆಯನ ಆಶಿರ್ವಾದ ಇರಲಿ, ಎಂಬುದೆ ಎಲ್ಲರ ಆಶಯವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:34 am, Wed, 10 January 24

‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
‘45’ ಸಿನಿಮಾ ಕಲೆಕ್ಷನ್ ಸೂಪರ್: ಸ್ವತಃ ನಿರ್ಮಾಪಕರೇ ಹೇಳಿದ ಮಾತು ಕೇಳಿ..
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಸಿರಿಯಾದ ಮಸೀದಿಯಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟ; 8 ಜನ ಸಾವು
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ಗಡಿಯಲ್ಲಿ ಸೈನಿಕರಿಗೆ ಸಹಾಯ ಮಾಡಿದ್ದ ಬಾಲಕನಿಗೆ ವಿಶೇಷ ಪುರಸ್ಕಾರ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ದೇಶದ ಅತ್ಯುನ್ನತ ಪ್ರಶಸ್ತಿ ಸ್ವೀಕರಿಸಿದ ವೈಭವ್ ಸೂರ್ಯವಂಶಿ
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಫ್ಯಾಮಿಲಿ ನೋಡಿ ಕಣ್ಣೀರಾದ ಬಿಗ್​​ಬಾಸ್ ಮನೆಯ ಟಫ್​ ಮ್ಯಾನ್ ರಘು
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
‘45’ ಸಿನಿಮಾಕ್ಕೆ ಪೈರಸಿ ಕಾಟ: ನಿರ್ಮಾಪಕ ಹೇಳಿದ್ದೇನು?
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ