AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಖಬರಸ್ತಾನ್ ಜಾಗದಲ್ಲಿ ಸರ್ವೆ ವೇಳೆ ಆಂಜನೇಯ ದೇಗುಲದ ಕೊಂಡ ಪತ್ತೆ: ಎರಡು ಧರ್ಮೀಯರ ಮಧ್ಯೆ ವಾಕ್ಸಮರ

ಖಬರಸ್ತಾನ ಜಾಗದ ವಸ್ತು ಸ್ಥಿತಿ ವರದಿ ನೀಡಲು ಜಿಲ್ಲಾಡಳಿತಕ್ಕೆ ಕೋರ್ಟ್ ಆದೇಶಿಸಿದೆ. ಹೀಗಾಗಿ ವಸ್ತು ಸ್ಥಿತಿ ಅಧ್ಯಯನಕ್ಕೆ ಜಿಲ್ಲಾಡಳಿತ ಆಗಮಿಸಿದ್ದು, ಈ ವೇಳೆ ಆಂಜನೇಯನ‌ ಕೊಂಡ ಪತ್ತೆಯಾಗಿದೆ.

ಖಬರಸ್ತಾನ್ ಜಾಗದಲ್ಲಿ ಸರ್ವೆ ವೇಳೆ ಆಂಜನೇಯ ದೇಗುಲದ ಕೊಂಡ ಪತ್ತೆ: ಎರಡು ಧರ್ಮೀಯರ ಮಧ್ಯೆ ವಾಕ್ಸಮರ
ಗ್ರಾಮದಲ್ಲಿ ಎರಡೂ ಧರ್ಮಿಯರ ನಡುವೆ ಮಾತಿನ ಚಕಮಕಿ
TV9 Web
| Edited By: |

Updated on:Dec 15, 2021 | 4:15 PM

Share

ಕೊಪ್ಪಳ: ಖಬರಸ್ತಾನದಲ್ಲಿ ಆಂಜನೇಯ ದೇವಸ್ಥಾನದ ಕೊಂಡ ಪತ್ತೆಯಾದ ಘಟನೆ ಕೊಪ್ಪಳ ತಾಲೂಕಿನ ಮಂಗಳಾಪೂರದಲ್ಲಿ ನಡೆದಿದೆ. ಜಿಲ್ಲಾಡಳಿತದ ಸರ್ವೆ ವೇಳೆ ಆಂಜನೇಯನ ಕೊಂಡ ಪತ್ತೆಯಾಗಿದೆ. ಖಬರಸ್ತಾನದ ಭೂಮಿ‌ ವಿವಾದದ ಹಿನ್ನಲೆಯಲ್ಲಿ ಜಿಲ್ಲಾಡಳಿತ ಸರ್ವೆ ಕೈಗೊಂಡಿದ್ದು, ಈ ವೇಳೆ ಆಂಜನೇಯನ ಕೊಂಡ ಪತ್ತೆಯಾಗಿದೆ. ಆಂಜನೇಯನ ಕೊಂಡ ಪತ್ತೆಯಾಗುತ್ತಿದ್ದಂತೆ ಗ್ರಾಮದಲ್ಲಿ ಎರಡೂ ಧರ್ಮಿಯರ ನಡುವೆ ಮಾತಿನ ಚಕಮಕಿ ನಡೆದಿದೆ.

ಖಬರಸ್ತಾನದ ಜಾಗದಲ್ಲಿ ಈ ಮುಂಚೆ ಮಂಗಳಾಪೂರ ಗ್ರಾಮ ಇತ್ತು. ಹಳ್ಳದ ಪ್ರವಾಹದ ವೇಳೆ ಗ್ರಾಮವನ್ನು ಪಕ್ಕದಲ್ಲಿ ಸ್ಥಳಾಂತರ ಮಾಡಲಾಗಿತ್ತು. ಬಳಿಕ‌ ಗ್ರಾಮ ಇದ್ದ ಜಾಗದಲ್ಲಿ ಖಬರಸ್ತಾನ ನಿರ್ಮಾಣವಾಗಿತ್ತು. ಅಂದಿನಿಂದ ಗ್ರಾಮದ ಹಿಂದೂಗಳು ಖಬರಸ್ತಾನ ಜಾಗ ಎಲ್ಲರಿಗೂ ಸೇರಬೇಕೆಂದು ವಾದಿಸುತ್ತಾ ಬಂದಿದ್ದರು. ಈ ಕುರಿತು ಕೋರ್ಟ್​ನಲ್ಲಿಯೂ ಹಿಂದೂ ಸಮಾಜದವರು ದಾವೆ ಹೂಡಿದ್ದರು. ಈ ಹಿನ್ನಲೆಯಲ್ಲಿ ಖಬರಸ್ತಾನ ಜಾಗದ ವಸ್ತು ಸ್ಥಿತಿ ವರದಿ ನೀಡಲು ಜಿಲ್ಲಾಡಳಿತಕ್ಕೆ ಕೋರ್ಟ್ ಆದೇಶಿಸಿದೆ. ಹೀಗಾಗಿ ವಸ್ತು ಸ್ಥಿತಿ ಅಧ್ಯಯನಕ್ಕೆ ಜಿಲ್ಲಾಡಳಿತ ಆಗಮಿಸಿದ್ದು, ಈ ವೇಳೆ ಆಂಜನೇಯನ‌ ಕೊಂಡ ಪತ್ತೆಯಾಗಿದೆ.

ಕಳೆದ 15 ವರ್ಷದಿಂದ ಆ ಭೂಮಿ ಎರಡು ಧರ್ಮಿಯರ ವಿವಾದದ ಕೇಂದ್ರ ಬಿಂದುವಾಗಿತ್ತು. ಈಗ ಆ ವಿವಾದಿತ ಖಬರಸ್ತಾನ ಜಾಗದಲ್ಲಿ ಆಂಜನೇಯ ದೇವಸ್ಥಾನದ ಕುರುಹು ಪತ್ತೆ ಆಗಿದ್ದು, ಗ್ರಾಮಕ್ಕೆ ಸೀಮಿತವಾಗಿದ್ದ ವಿವಾದ ರಾಜ್ಯಾದ್ಯಂತ ಸುದ್ದಿಯಾಗಿದೆ. ಮಂಗಳಾಪೂರ ಹೊರ ಹೊಲಯದಲ್ಲಿನ 2.27 ಎಕರೆ ಭೂಮಿ ಕಳೆದ 40 ವರ್ಷದಿಂದ ವಿವಾದದಲ್ಲಿದೆ.‌ ಈ ಜಾಗ ಸರ್ಕಾರಿ ದಾಖಲೆಯಲ್ಲಿ ಗಾವ್ ಠಾಣಾ ಎಂದಿದೆ. ಕಳೆದ 40 ವರ್ಷದಿಂದ ಈ ಜಾಗದಲ್ಲಿ ಒಂದು ಧರ್ಮಿಯರು ಶವ ಸಂಸ್ಕಾರ ಮಾಡುತ್ತಿದ್ದಾರೆ. ಈ ಭೂಮಿಯ ಅರ್ಧ ಜಾಗವನ್ನು ಹಿಂದೂಗಳಿಗೆ ಶವ ಸಂಸ್ಕಾರಕ್ಕೆ ಬಿಟ್ಟು ಕೊಡುವಂತೆ ಬೇಡಿಕೆ ಇಟ್ಟಿದ್ದು ವಿವಾದಕ್ಕೆ ಕಾರಣ ಎನ್ನಲಾಗಿದೆ.

ಒಟ್ಟು 2 ಎಕರೆ 27 ಗುಂಟೆ ಭೂಮಿಯ ಪೈಕಿ ಅಡಿ ಜಾಗವನ್ನೂ ಕೊಡುವುದಿಲ್ಲ ಎಂದು ಹೇಳಿದಾಗ, ಹಿಂದೂ ಧರ್ಮಿಯರು ಕಳೆದ 2007 ರಲ್ಲಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಇನ್ನು 2011ರಲ್ಲಿ ವಿವಾದಿತ ಜಾಗವನ್ನು ವಕ್ಫ ಬೋರ್ಡ್​ಗೆ ಹಸ್ತಾಂತರಿಸಿ ಪಹಣಿ ತಿದ್ದುಪಡಿ ಮಾಡಲಾಗಿದೆ. ಈ ಎಲ್ಲ ಕಾರಣದಿಂದ, ಇದು ಹಿಂದೂಗಳಿಗೆ ಸೇರಿದ ಭೂಮಿ ಎಂದು ವಾದಿಸಲು ಸಾಕ್ಷಿ ಹುಡುಕಲು ಮುಂದಾಗಿದ್ದಾರೆ.

ಕಳೆದ 2 ದಿನದಿಂದ ನೂರಾರು ಹನುಮ ಮಾಲಾಧಾರಿಗಳು ಹುಡುಕಾಡಿದ್ದು, ನಿನ್ನೆ ವಿವಾದಿತ ಭೂಮಿಯಲ್ಲಿ ಆಂಜನೇಯ ದೇವಸ್ಥಾನದ ಕೊಂಡ ಪತ್ತೆ ಆಗಿದೆ. ಈ ಹಿನ್ನೆಲೆಯಲ್ಲಿ ಇಂದು ಹಿಂದೂ ಪರ ಸಂಘಟನೆ ಕಾರ್ಯಕರ್ತ ಪುನೀತ್ ಕೆರೆ ಹಳ್ಳಿ  ಭೇಟಿ ನೀಡಿ, ಪತ್ತೆಯಾದ ಕೊಂಡಕ್ಕೆ ಪೂಜೆ ಸಲ್ಲಿಸಿದ್ದಾರೆ. ಈ ಮೂಲಕ ಗ್ರಾಮಕ್ಕೆ ಸೀಮಿತವಾಗಿದ್ದ ವಿವಾದ ಈಗ ರಾಜ್ಯಾದ್ಯಂತ ಸುದ್ದಿ ಆಗುತ್ತಿದೆ.

ವಿವಾದ ದೊಡ್ಡದಾಗುವ ಮಾಹಿತಿ ತಿಳಿದ ಪೊಲೀಸರು, ಸ್ಥಳದಲ್ಲೇ ಮೊಕ್ಕಾ ಹೂಡಿದ್ದಾರೆ. ಕೋರ್ಟ್

ಇದನ್ನೂ ಓದಿ: ಮೈಸೂರು ವಸ್ತು ಸಂಗ್ರಹಾಲಯಕ್ಕೆ ಬೆಳ್ಳಿಹಬ್ಬದ ಸಂಭ್ರಮ, ಕಾಡಿನ ರೂಪದಲ್ಲೇ ಸೃಷ್ಟಿಯಾಗಿದೆ ವಿಶೇಷ ಶೋಕೇಸ್

ಐತಿಹಾಸಿಕ ದೇವಾಲಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅನಾಥ; ಪುರಾತತ್ವ ಇಲಾಖೆಯ ವಿರುದ್ಧ ಜನರ ಆಕ್ರೋಶ

Published On - 9:03 am, Wed, 15 December 21

Follow Us
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!