AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐತಿಹಾಸಿಕ ದೇವಾಲಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅನಾಥ; ಪುರಾತತ್ವ ಇಲಾಖೆಯ ವಿರುದ್ಧ ಜನರ ಆಕ್ರೋಶ

ಬಸವಕಲ್ಯಾಣ ತಾಲೂಕಿನ ಉಮಾಪುರ-ಲಾಹೇಶ್ವರ ಅವಳಿ ಊರು. ಇದು ಒಂದೇ ಊರಿನಂತೆ ಕಂಡರೂ ಊರಿನ ಮುಖ್ಯ ರಸ್ತೆಯ ಒಂದು ಮಗ್ಗುಲನ್ನು ಉಮಾಪುರ ಎಂತಲೂ, ಇನ್ನೊಂದನ್ನು ಲಾಹೇಶ್ವರ ಎಂತಲೂ ಗುರುತಿಸುವ ಪರಿಪಾಠವಿದೆ.

ಐತಿಹಾಸಿಕ ದೇವಾಲಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅನಾಥ; ಪುರಾತತ್ವ ಇಲಾಖೆಯ ವಿರುದ್ಧ ಜನರ ಆಕ್ರೋಶ
ಮಹಾದೇವ ದೇವಸ್ಥಾನ
TV9 Web
| Updated By: preethi shettigar|

Updated on: Oct 19, 2021 | 11:47 AM

Share

ಬೀದರ್: ಜಿಲ್ಲೆಯ ಉಮಾಪುರ ಗ್ರಾಮದಲ್ಲಿನ ಐತಿಹಾಸಿಕ ಶಿವ ಮತ್ತು ಪಾರ್ವತಿ ದೇವಾಲಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಅನಾಥವಾಗಿದೆ. ಒಂಭತ್ತು ಶತಮಾನಗಳ ಇತಿಹಾಸವಿರುವ ಪುರಾತನ ದೇವಾಲಯ ತನ್ನ ಕೊನೆಯ ದಿನಗಳನ್ನು ಎಣಿಸುತ್ತಿದೆ. ಈ ದೇವಾಲಯ ಪುರಾತತ್ವ ಇಲಾಖೆಯ ಸುಪರ್ಧಿಗೆಯಲ್ಲಿದ್ದರೂ ಇದರ ಜಿರ್ಣೋದ್ಧಾರ ಕಾರ್ಯಮಾತ್ರ ಇಲ್ಲಿಯವರೆಗೂ ಆಗಿಲ್ಲ. ಇದು ಸಹಜವಾಗಿಯೇ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಬಸವಕಲ್ಯಾಣ ತಾಲೂಕಿನ ಉಮಾಪುರ-ಲಾಹೇಶ್ವರ ಅವಳಿ ಊರು. ಇದು ಒಂದೇ ಊರಿನಂತೆ ಕಂಡರೂ ಊರಿನ ಮುಖ್ಯ ರಸ್ತೆಯ ಒಂದು ಮಗ್ಗುಲನ್ನು ಉಮಾಪುರ ಎಂತಲೂ, ಇನ್ನೊಂದನ್ನು ಲಾಹೇಶ್ವರ ಎಂತಲೂ ಗುರುತಿಸುವ ಪರಿಪಾಠವಿದೆ. ಈ ಊರುಗಳಲ್ಲಿ ಇರುವ ನೀಲಕಂಠ, ಮಹಾದೇವ, ಪಾರ್ವತಿ, ಗಣಪತಿಯ ದೇವಸ್ಥಾನಗಳು ದೇವಾಲಯ ವಾಸ್ತು ಶೈಲಿಗೆ ಅತ್ಯುತ್ತಮ ನಿದರ್ಶನಗಳು. ಸಪ್ತ ರಥ ಮಾದರಿಯಲ್ಲಿರುವ ಮಹಾದೇವ ದೇವಸ್ಥಾನಕ್ಕೆ ಮೂರು ಮುಖ ಮಂಟಪಗಳಿವೆ.

ಆರನೇಯ ವಿಕ್ರಮಾದಿತ್ಯನ‌ ಕಾಲದಲ್ಲಿ ನಿರ್ಮಾಣವಾದ ದೇವಸ್ಥಾನ ಮೂಡಣ ದಿಕ್ಕಿನ ಕಡೆಗೆ ಮುಖ ಮಾಡಿದ ಈ ದೇವಸ್ಥಾನದ ಸಭಾಮಂಟಪ, ಗರ್ಭಗೃಹ, ಮಧ್ಯದಲ್ಲಿ ಶಿವಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ. ಪಾರ್ಶ್ವದ ಗೋಡೆಯಲ್ಲಿ ನವ ದೇವತೆಗಳ ಉಬ್ಬು ಶಿಲ್ಪಗಳನ್ನು ಕೊರೆಯಲಾಗಿದೆ. ಮುಂಭಾಗದ ಪಾರ್ಶ್ವ ಗೋಡೆಯಲ್ಲಿ ದ್ವಾರ ಪಾಲಕರ ವಿಗ್ರಹಗಳಿವೆ. ಇನ್ನೂ ದೇವಸ್ಥಾನದ ಅಲ್ಲಲ್ಲಿ ನರ್ತಕಿಯರು ನೃತ್ಯ ಭಂಗಿಯಲ್ಲಿರುವ ನಗ್ನ ಶಿಲ್ಪಗಳಿವೆ. ಕೈಯಲ್ಲಿ ಡಮರುಗ, ಮೃದಂಗ, ವೀಣೆ, ಮುಂತಾದವುಗಳಿವೆ. ಭಿತ್ತಿ ಗೋಡೆಯೊಳಗೆ ಮೂರು ದಿಕ್ಕಿನ ಕಡೆ ಒಂದೊಂದು ಪುಟ್ಟ ಮಂಟಪಗಳಿವೆ. ಅದರೊಳಗೆ ದೇವ ಕೋಷ್ಟಗಳಿವೆ. ನಟರಾಜ, ಚಾಮುಂಡಿ ಹಾಗೂ ನಗ್ನ ರೂಪದ ನೃತ್ಯ ಭಂಗಿಯ ವಿಗ್ರಹಗಳನ್ನ ಕೂಡಾ ಇಲ್ಲಿ ಕಾಣಬಹುದು. ಇನ್ನೂ ಈ ದೇವಸ್ಥಾನವನ್ನು ಆರನೇಯ ವಿಕ್ರಮಾಧಿತ್ಯನ ಕಾಲದಲ್ಲಿ ನಿರ್ಮಾಣವಾದ ದೇವಾಲಯ ಇದಾಗಿದೆ.

ಮಹಾದೇವ ದೇವಸ್ಥಾನದ ಬಲ ಹಿಂಬದಿಯಲ್ಲಿ ಪಾರ್ವತಿ ದೇವಸ್ಥಾನವಿದೆ. ಇದು ಮಹಾದೇವ ಮಂದಿರಕ್ಕಿಂತ ಸ್ವಲ್ಪ ಚಿಕ್ಕದು. ಇದರ ಸಭಾ ಮಂಟಪ ಚೌಕಾಕಾರದಲ್ಲಿದೆ. ಮೇಲ್ಛಾವಣಿಯೂ ಇದೆ. ಸಭಾ ಮಂಟಪದ ಸುತ್ತ ತೆರೆದ ಕಕ್ಷಾಸನವಿದೆ. ಕಕ್ಷಾಸನದ ಹೊರಭಾಗದ ಎದುರಿನ ಎರಡೂ ಬದಿಗೆ ನೃತ್ಯ ಭಂಗಿಯಲ್ಲಿರುವ ನಗ್ನ ಶಿಲ್ಪಗಳಿವೆ. ಗರ್ಭಗುಡಿಯ ದ್ವಾರದ ಎರಡೂ ಬದಿಗೆ ದೇವ ಕೋಷ್ಟಗಳಿವೆ. ಮಧ್ಯದಲ್ಲಿ ಉಮಾ- ಮಹೇಶ್ವರ ವಿಗ್ರಹವಿದೆ. ಮಹೇಶ್ವರನ ತೊಡೆಯ ಮೇಲೆ ಪಾರ್ವತಿ ಕುಳಿತಿದ್ದಾಳೆ. ಈ ದೇವಾಲಯದ ಗೋಡೆಯಲ್ಲಿ 20 ಕ್ಕೂ ಹೆಚ್ಚು ಆಕರ್ಷಕ ಮದನಿಕಾ ನಾಟ್ಯ ರಾಣಿಯರ ಚಿತ್ರಗಳನ್ನು ಕೆತ್ತಲಾಗಿದೆ.

ಹಿಂದಿನ ಕಾಲದಲ್ಲಿ ಈ ಕಲ್ಲಿನ ಕಂಭಗಳಿಂದ ಇಂಪಾದ ಸಂಗೀತ ಕೆಳುತ್ತಿತ್ತು ಎಂದು ಪೂರ್ವ ಜರು ಹೇಳುತ್ತಾರೆ. ಯುಗಾದಿ ಹಬ್ಬದ ದಿನದಂದು ಸೂರ್ಯನ ಕಿರಣಗಳು ಇಲ್ಲಿನ ಶಿವಲಿಂಗದ ಮೇಲೆ ಬೀಳುವುದು ಇಲ್ಲಿನ ಇನ್ನೊಂದು ವಿಶೇಷವಾಗಿದೆ. ಇಂತಹ ಅಪರೂಪದ ದೇವಾಲಯ ಇಂದು ಶಾಲಾ ಮಕ್ಕಳು ಆಟವಾಡುವ ಸ್ಥಳವಾಗಿ ಮಾರ್ಪಾಡಾಗಿದೆ. ಇಲ್ಲಿನ ಕಂಬಗಳು ಅಲ್ಲಲ್ಲಿ ಬಿರುಕುಬಿಟ್ಟಿದ್ದು ದೇವಾಲಯದ ಮೇಲ್ಚಾವಣಿಯು ಕೂಡ ಹಾಳಾಗಿದೆ. ಗೋಡೆಯ ಮೇಲೇ ಕೆತ್ತಲಾದ ಸುಂದರ ಕಲಾಕೃತಿಗಳು ಕೂಡಾ ಹಾಳಾಗಿವೆ. ಇಂತಹ ಅಪರೂಪದ ದೇವಸ್ಥಾನವನ್ನು ಪುರಾತತ್ವ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ ಮಾಡಿದ್ದಾರೆಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತ ಪಡಿಸುತ್ತಿದ್ದು, ಅಪರೂಪದ ದೇವಾಲಯವನ್ನು ಕಾಪಾಡಿಕೊಂಡು ಹೋಗಬೇಕೆಂದು ಇಲ್ಲಿನ ಜನರು ಸರ್ಕಾರಕ್ಕೆ ವಿನಂತಿಸುತ್ತಿದ್ದಾರೆ.

ವರದಿ: ಸುರೇಶ್ ನಾಯಕ್

ಇದನ್ನೂ ಓದಿ: ಉಡುಪಿ: ಉಚ್ಚಿಲದ ಮಹಾಲಕ್ಷ್ಮಿ ದೇವಾಲಯದ ವಿಶೇಷತೆ ಏನು ಗೊತ್ತಾ?

ದ್ವೈತ ಮಠಕ್ಕೆ ಸೇರಿದ ಪ್ರಸನ್ನ ಸುಬ್ರಹ್ಮಣ್ಯ ದೇವಾಲಯ; ಏಳು ಹೆಡೆಗಳ ನಾಗದೇವತೆಯ ವಿಶೇಷತೆ ಏನು ಗೊತ್ತಾ?

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ