ಮಂಡ್ಯದ ವಿಸಿ ನಾಲೆ ಬಳಿ ತಪ್ಪಿದ ಮತ್ತೊಂದು ದುರಂತ, ಶಾಸಕ ದರ್ಶನ್ ಪುಟ್ಟಣ್ಣಯ್ಯ ಎದುರೇ ನಡೆದ ಘಟನೆ

ಪಾಂಡವಪುರ ತಾಲೂಕಿನ ಬನಘಟ್ಟದ ಬಳಿಯ ವಿಸಿ ನಾಲೆ ಬಳಿ ಶಾಸಕರು, ಅಧಿಕಾರಿಗಳು ಪರಿಶೀಲನೆ ನಡೆಸುವಾಗ ಅವಘಡವೊಂದು ನಡೆದಿದೆ. ವಿಸಿ ನಾಲೆ ಬಳಿಗೆ ಎತ್ತಿನ ಗಾಡಿಯೊಂದು ಎಂಟ್ರಿಕೊಟ್ಟಿದ್ದು ಹೆಚ್ಚಿನ ಸಂಖ್ಯೆಯಲ್ಲಿದ್ದ ಜನರನ್ನು ಕಂಡು ಎತ್ತುಗಳು ಗಾಬರಿಗೊಂಡಿವೆ. ಇದರಿಂದ ಎತ್ತಿನ ಗಾಡಿ ನಿಯಂತ್ರಣ ತಪ್ಪಿದ್ದು ದುರಂತ ತಪ್ಪಿಸಲು ರೈತ ಗಾಡಿಯಿಂದ ಎತ್ತುಗಳನ್ನು ಬೇರ್ಪಡಿಸಿದ್ದಾನೆ. ಎತ್ತುಗಳು ಓಡಿ ಹೋಗಿದ್ದು ಎತ್ತು ಹಿಡಿಯಲು ಹೋಗಿ ಅಧಿಕಾರಿ ಬಿದ್ದಿದ್ದಾರೆ.

ಮಂಡ್ಯದ ವಿಸಿ ನಾಲೆ ಬಳಿ ತಪ್ಪಿದ ಮತ್ತೊಂದು ದುರಂತ, ಶಾಸಕ ದರ್ಶನ್ ಪುಟ್ಟಣ್ಣಯ್ಯ ಎದುರೇ ನಡೆದ ಘಟನೆ
ಅಧಿಕಾರಿಯನ್ನು ಬೀಳಿಸಿ ಓಡುತ್ತಿರುವ ಎತ್ತುಗಳು
Follow us
| Updated By: ಆಯೇಷಾ ಬಾನು

Updated on:Nov 08, 2023 | 12:47 PM

ಮಂಡ್ಯ, ನ.08: ವಿಸಿ ನಾಲೆಗೆ (VC Nala) ಕಾರು ಉರುಳಿ ಐವರ ಜಲಸಮಾಧಿ ಆದ ದುರಂತ ನಡೆದ ಸ್ಥಳದಲ್ಲೇ ಮತ್ತೊಂದು ಘಟನೆ ನಡೆದಿದೆ. ಶಾಸಕರ ಸ್ಥಳ ಪರಿಶೀಲನೆ ವೇಳೆ ಎತ್ತುಗಳು ಬೆದರಿದ್ದು ಭಾರೀ ಅವಘಡ ತಪ್ಪಿದೆ. ಅದೃಷ್ಟವಶಾತ್ ಯಾರಿಗೂ ಯಾವುದೇ ಸಮಸ್ಯೆ ಆಗಿಲ್ಲ. ವಿಸಿ ನಾಲೆ ಬಳಿ ಶಾಸಕ ದರ್ಶನ್ ಪುಟ್ಟಣ್ಣಯ್ಯ (Darshan Puttannaiah) ಅವರು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದರು. ಇದೇ ವೇಳೆ ಎತ್ತಿನ ಗಾಡಿಯೊಂದು ಬಂದಿದೆ.  ಎತ್ತುಗಳು ನಾಲೆ ಸೇತುವೆ ಬಳಿ ಬರುತ್ತಿದ್ದಂತೆ ಜನರನ್ನು ಕಂಡು ಬೆದರಿವೆ. ಆಗ ಎತ್ತಿನ ಗಾಡಿ ಓಡಿಸುತ್ತಿದ್ದ ರೈತ ಎತ್ತುಗಳನ್ನು ನಿಯಂತ್ರಿಸಲು ಹರಸಾಹಸ ಪಟ್ಟಿದ್ದು ಕೊನೆಗೆ ಗಾಡಿಯಿಂದ ಎತ್ತುಗಳನ್ನು ಬೇರ್ಪಡಿಸಲಾಯಿತು. ಈ ರೀತಿ ಭಾರೀ ಅವಘಡವೊಂದು ತಪ್ಪಿದೆ.

ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಬನಘಟ್ಟದ ಬಳಿ ಮಂಗಳವಾರ ಸಂಜೆ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ವಿಸಿ ನಾಲೆಗೆ ಬಿದಿದೆ. ಈ ಪರಿಣಾಮ ಮಗು ಸೇರಿ ಒಂದೇ ಕುಟುಂಬದ ಐವರು ಜಲಸಮಾಧಿಯಾಗಿದ್ದಾರೆ. ಈ ಘಟನೆ ಇಡೀ ಮಂಡ್ಯವನ್ನು ಆತಂಕಕ್ಕೆ ತಳ್ಳಿದೆ. ಈ ಬಗ್ಗೆ ಗಮನ ಹರಿಸುವಂತೆ ಸ್ಥಳೀಯರು ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ. ಸದ್ಯ ಸ್ಥಳಕ್ಕೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು ಈ ವೇಳೆ ಪಾಂಡವಪುರ ಕಡೆಯಿಂದ ಬೇವಿನಕುಪ್ಪೆ ಕಡೆಗೆ ಬರುತ್ತಿದ್ದ ಎತ್ತಿನ ಗಾಡಿ ವಿಸಿ ನಾಲೆ ಸೇತುವೆ ಬಳಿ ಬಂದಿದೆ. ಸೇತುವೆ ಬಳಿ ಬರುತ್ತಿದ್ದಂತೆ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿರುವ ಜನರನ್ನು ಕಂಡು ಎತ್ತುಗಳು ಭಯಗೊಂಡವು. ಇನ್ನೇನು ಗಾಡಿ ಸಮೇತ ನಾಲೆಗೆ ಬೀಳುವಷ್ಟರಲ್ಲಿ ರೈತ ಸ್ವಾಮಿಗೌಡ ಅವರು ತಮ್ಮ ಎತ್ತುಗಳನ್ನು ನಿಯಂತ್ರಿಸಲು ಹರಸಾಹಸಪಟ್ಟರು.

ಇದನನ್ನೂ ಓದಿ: ವಿಸಿ ನಾಲೆ ಕಾರು ದುರಂತ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವೆಂದ ಮಾಜಿ ಸಚಿವ ಸಿಎಸ್ ಪುಟ್ಟರಾಜು

ಕಡೆಗೂ ಎತ್ತುಗಳನ್ನ ನಿಯಂತ್ರಿಸಲು ವಿಫಲವಾದರು. ಹೀಗಾಗಿ ಗಾಡಿಯಿಂದ ಎತ್ತುಗಳನ್ನು ಬಿಚ್ಚಿದ್ದು ಹಸುಗಳು ಅಷ್ಟೇ ವೇಗವಾಗಿ ಓಡಿದವು. ದರ್ಶನ್ ಪುಟ್ಟಣಯ್ಯ ಸಮೀಪವೇ ಬೆದರಿ ಓಡಿದವು. ಆಗ ಓಡಿ ಹೋಗ್ತಿದ್ದ ಹಸುಗಳನ್ನ ಹಿಡಿಯಲು ಹೋಗಿ ಅಧಿಕಾರಿಯೊಬ್ಬರು ರಸ್ತೆ ಮೇಲೆ ಬಿದ್ದರು. ಘಟನೆಯಿಂದಾಗಿ ಒಂದು ಕ್ಷಣ ಎಲ್ಲರೂ ವಿಚಲಿತರಾದರು.

2018ರ ನವೆಂಬರ್‌ನಿಂದ ಇಲ್ಲಿಯವರೆಗೆ 40 ಜನ ವಿಸಿ ನಾಲಗೆ ಮೃತಪಟ್ಟಿದ್ದಾರೆ. 2018 ನವೆಂಬರ್‌ 24 ರಂದು ಕನಗನಮರಡಿ ಬಸ್ ದುರಂತದಲ್ಲಿ 30 ಜನ ಸಾವಿಗೀಡಾಗಿದ್ದರು. 2023 ಜುಲೈ 27 ರಂದು ಮಂಡ್ಯ ತಾಲೂಕಿನ ತಿಬ್ಬನಹಳ್ಳಿಯಲ್ಲಿ ವಿಸಿ ನಾಲೆಗೆ ಕಾರು ಪಲ್ಟಿಯಾಗಿ ಓರ್ವ ಮೃತಪಟ್ಟಿದ್ದನು.

2023 ಜುಲೈ 29ರಂದು ಶ್ರೀರಂಗಪಟ್ಟಣದ ಗಾಮನಹಳ್ಳಿಯ ವಿಸಿ ನಾಲೆಗೆ ಕಾರು ಪಲ್ಟಿಯಾಗಿ ನಾಲ್ಕು ಮಂದಿ ಜಲ ಸಮಾಧಿಯಾಗಿದ್ದರು. 2023 ನವೆಂಬರ್ 7 ರಂದು ಪಾಂಡವಪುರ ತಾಲೂಕಿನ ಬನಘಟ್ಟ ವಿಸಿ ನಾಲೆಗೆ ಕಾರು ಪಲ್ಟಿಯಾಗಿ ಈ ದುರಂತದಲ್ಲಿ ಐದು ಜನ ನಿಧನರಾಗಿದ್ದಾರೆ. ಕಳೆದ ಐದು ವರ್ಷದಲ್ಲಿ ವಿಸಿ ನಾಲೆಯ ದುರಂತಗಳಲ್ಲಿ 40 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಮಂಡ್ಯ ಜಿಲ್ಲೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:21 pm, Wed, 8 November 23

ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಭೂಮಾಫಿಯಾ ಜೊತೆ ಬಿಬಿಎಂಪಿ ಅಧಿಕಾರಿಗಳು ಶಾಮೀಲು: ಜಗದೀಶ್, ವಕೀಲ
ಭೂಮಾಫಿಯಾ ಜೊತೆ ಬಿಬಿಎಂಪಿ ಅಧಿಕಾರಿಗಳು ಶಾಮೀಲು: ಜಗದೀಶ್, ವಕೀಲ
ಜಕ್ಕೂರು ಮತ್ತು ಯಲಹಂಕಗಳಿಂದ ಹರಿದು ಮನೆಗಳಿಗೆ ನುಗ್ಗಿದ ನೀರು!
ಜಕ್ಕೂರು ಮತ್ತು ಯಲಹಂಕಗಳಿಂದ ಹರಿದು ಮನೆಗಳಿಗೆ ನುಗ್ಗಿದ ನೀರು!
ದೇವನಹಳ್ಳಿ: ಕಾಲುವೆ ನೀರಿನಲ್ಲಿ ಕೊಚ್ಚಿಹೋದ ಕಾರುಗಳು!
ದೇವನಹಳ್ಳಿ: ಕಾಲುವೆ ನೀರಿನಲ್ಲಿ ಕೊಚ್ಚಿಹೋದ ಕಾರುಗಳು!
ಬ್ರಿಕ್ಸ್​​ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ರಷ್ಯಾಗೆ ತೆರಳಿದ ಪ್ರಧಾನಿ ಮೋದಿ
ಬ್ರಿಕ್ಸ್​​ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ರಷ್ಯಾಗೆ ತೆರಳಿದ ಪ್ರಧಾನಿ ಮೋದಿ
ಕಾಶ್ಮೀರವನ್ನು ಪಾಕಿಸ್ತಾನವಾಗಲು ಬಿಡುವುದಿಲ್ಲ: ಫಾರೂಕ್ ಅಬ್ದುಲ್ಲಾ
ಕಾಶ್ಮೀರವನ್ನು ಪಾಕಿಸ್ತಾನವಾಗಲು ಬಿಡುವುದಿಲ್ಲ: ಫಾರೂಕ್ ಅಬ್ದುಲ್ಲಾ