ಮಂಡ್ಯ ಮೈಶುಗರ್ ಶಾಲೆ ಮೇಲೆ ಖಾಸಗಿ ಕಣ್ಣು: ಕೋಟ್ಯಂತರ ರೂ ಆಸ್ತಿ ಕಬಳಿಸಲು ಹುನ್ನಾರ ಆರೋಪ

ಮೈಶುಗರ್ ಶಾಲೆಯನ್ನು ಖಾಸಗಿ ಶಿಕ್ಷಣ ಸಂಸ್ಥೆಗೆ ಗುತ್ತಿಗೆ ನೀಡಲು ಆಡಳಿತ ಮಂಡಳಿ ತೀರ್ಮಾನಿಸಿರುವುದು ತೀವ್ರ ವಿರೋಧಕ್ಕೆ ಕಾರಣವಾಗಿದೆ. ಕೋಟ್ಯಂತರ ರೂ. ಮೌಲ್ಯದ ಆಸ್ತಿಯನ್ನು ಕಬಳಿಸುವ ಹುನ್ನಾರ ನಡೆದಿರುವ ಆರೋಪ ಕೇಳಿಬಂದಿದೆ. ಈ ಬಗ್ಗೆ ರೈತರು ಮತ್ತು ಹಳೇ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಡ್ಯ ಮೈಶುಗರ್ ಶಾಲೆ ಮೇಲೆ ಖಾಸಗಿ ಕಣ್ಣು: ಕೋಟ್ಯಂತರ ರೂ ಆಸ್ತಿ ಕಬಳಿಸಲು ಹುನ್ನಾರ ಆರೋಪ
ಮೈಶುಗರ್ ಶಾಲೆ
Edited By:

Updated on: Jun 20, 2025 | 10:01 AM

ಮಂಡ್ಯ, ಜೂನ್​ 20: ಇತ್ತೀಚೆಗೆ ಮೈಶುಗರ್ (Mysugar) ಫ್ಯಾಕ್ಟರಿಯನ್ನು ಗುತ್ತಿಗೆ ನೀಡಲು ರಾಜ್ಯ ಸರ್ಕಾರ ಮುಂದಾಗಿತ್ತು. ಬಳಿಕ ಹೋರಾಟ ಮಾಡಿ ಉಳಿಸಿಕೊಳ್ಳಲಾಗಿತ್ತು. ಇದೀಗ ಮೈಶುಗರ್ ಶಾಲೆ (mysugar school) ಮೇಲೆ ಖಾಸಗಿಯವರ ಕಣ್ಣು ಬಿದಿದ್ದು, ನೂರಾರು ಕೋಟಿ ಮೌಲ್ಯದ ಶಾಲೆ ಆಸ್ತಿ‌ ಕಬಳಿಸಲು ಹುನ್ನಾರ ನಡೆಯುತ್ತಿರುವ ಆರೋಪ ಕೇಳಿಬಂದಿದೆ. ಮೈಶುಗರ್ ಶಾಲೆಯನ್ನು ಖಾಸಗಿಯವರಿಗೆ ಗುತ್ತಿಗೆ ನೀಡುವ ಈ ಪ್ರಸ್ತಾವನ್ನು ಕೈಬಿಡುವಂತೆ ಆಗ್ರಹ ಕೂಡ ಕೇಳಿಬರುತ್ತಿದೆ.

ಬೆಂಗಳೂರು ಟು ಮೈಸೂರು ಹೆದ್ದಾರಿ ಪಕ್ಕದಲ್ಲೇ 13 ಎಕರೆ ಶಾಲೆ ಜಾಗ ಇದೆ. ಇದೇ ಜಾಗದ ಮೇಲೆ ಖಾಸಗಿಯವರ ಕಣ್ಣು ಬಿದ್ದಿದೆ ಎನ್ನಲಾಗುತ್ತಿದೆ. ಗುತ್ತಿಗೆ ಕೊಡುವ ನೆಪದಲ್ಲಿ ಶಾಲೆಯ ಆಸ್ತಿ ಕಬಳಿಸಲು ಸ್ಕೆಚ್ ಹಾಕಲಾಗಿದ್ದು, ಕೋಟ್ಯಂತರ ಮೌಲ್ಯದ ಜಾಗ‌ ಕಬಳಿಸುವ ಹುನ್ನಾರ ನಡೆದಿದೆ ಎಂದು ಆರೋಪ ಕೇಳಿಬಂದಿದೆ.

ಗುತ್ತಿಗೆ ನಿರ್ಧಾರಕ್ಕೆ ಹಳೇ ವಿದ್ಯಾರ್ಥಿಗಳು ಆಕ್ರೋಶ

ಆರ್ಥಿಕ‌ ಹೊರೆ ನೆಪದಲ್ಲಿ ಮೈಶುಗರ್ ಶಾಲೆಯನ್ನು ಖಾಸಗಿಯವರಿಗೆ ಗುತ್ತಿಗೆ ನೀಡಲು ಮೈಶುಗರ್ ಶಾಲಾ ಮಂಡಳಿ ಮುಂದಾಗಿದೆ.​​ ಮಾಜಿ ಎಂಎಲ್​ಸಿ ಬಿ.ರಾಮಕೃಷ್ಣ ಮಾಲೀಕತ್ವದ ಕೀರ್ತನಾ ಟ್ರಸ್ಟ್​​​ಗೆ ಗುತ್ತಿಗೆ ನೀಡಲು ಶಾಲಾ ಆಡಳಿತ ಮಂಡಳಿ ನಿರ್ಧರಿಸಿದೆ. ಆದರೆ ಈ ಗುತ್ತಿಗೆ ನಿರ್ಧಾರದ ವಿರುದ್ಧ ರೈತರು ಮತ್ತು ಹಳೇ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ
ಅವಧಿಗೂ ಮುನ್ನವೇ ತುಂಬುತ್ತಿದೆ ಕೆಆರ್​​ಎಸ್ ಡ್ಯಾಂ: 9 ಅಡಿ ಅಷ್ಟೇ ಬಾಕಿ
ಕಾವೇರಿ ಆರತಿ ಕಿಚ್ಚು: ಡಿಕೆಶಿ ಕನಸಿನ‌ ಯೋಜನೆ ಪರನಿಂತ ಹಿಂದೂ ಸಂಘಟನೆಗಳು
ಕೆಆರ್​ಎಸ್​ ಡ್ಯಾಂನ ಕ್ರಸ್ಟ್ ಗೇಟ್ ಬಳಿ ಯುವಕರ ಹುಚ್ಚಾಟ: ವಿಡಿಯೋ ವೈರಲ್
ಕಾವೇರಿ ಆರತಿ ಕಿಚ್ಚು:ವಿರೋಧದ ಮಧ್ಯೆ ರಾತ್ರೋರಾತ್ರಿ ಕದ್ದು ಮುಚ್ಚಿ ಕಾಮಗಾರಿ

ಇದನ್ನೂ ಓದಿ: ಕೃಷಿ ಸಚಿವರ ತವರಲ್ಲೇ ಅನ್ನದಾತರಿಗೆ ತಪ್ಪದ ಸಂಕಷ್ಟ: ಸಂಪೂರ್ಣ ಕಬ್ಬು ಅರೆಯುವ ಮುನ್ನವೇ ಮೈಶುಗರ್ ಕಾರ್ಖಾನೆ ಬಂದ್

1949ರಲ್ಲಿ ಆರಂಭವಾಗಿದ್ದ ಶಾಲೆ ಇತ್ತೀಚೆಗೆ‌ ಅಮೃತ ಮಹೋತ್ಸವ ಆಚರಣೆ ಮಾಡಲಾಗಿದೆ. ಇಲ್ಲಿ ಓದಿದ ಅದೆಷ್ಟೋ ವಿದ್ಯಾರ್ಥಿಗಳು ಉನ್ನತ ಹುದ್ದೆಯಲ್ಲಿದ್ದಾರೆ. ಶಾಲೆ ನಡೆಸಲು ಸಾಧ್ಯವಾಗದಿದರೆ ಹಳೇ‌ ವಿದ್ಯಾರ್ಥಿಗಳೇ ನಡೆಸುತ್ತೇವೆ. ಯಾವುದೇ ಕಾರಣಕ್ಕೂ ಶಾಲೆಯನ್ನು ಗುತ್ತಿಗೆ ನೀಡಬಾರದು. ಈ ನಿರ್ಧಾರ ಕೈಬಿಡದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಶಾಲಾ ಆಡಳಿತ ಮಂಡಳಿಗೆ ರೈತರು ಮತ್ತು ಹಳೇ ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಭ್ರಷ್ಟಾಚಾರ ಆರೋಪ ಸಾಬೀತು: ಮೈಶುಗರ್​ನ ಮಾಜಿ ಅಧ್ಯಕ್ಷನ ವಿರುದ್ಧ ಕೇಸ್ ದಾಖಲಿಸಲು ಮುಂದಾದ ಸರ್ಕಾರ​

ಇತಿಹಾಸ ಪ್ರಸಿದ್ಧ ಮೈಶುಗರ್ ಫ್ಯಾಕ್ಟರಿಯಷ್ಟೇ ಪ್ರಸಿದ್ಧವಾಗಿರುವ ಮೈಶುಗರ್ ಶಾಲೆಯನ್ನು ಖಾಸಗಿ ವ್ಯಕ್ತಿಗಳಿಗೆ ಗುತ್ತಿಗೆ ನೀಡುವ ಮೈಶುಗರ್ ಶಾಲಾ ಮಂಡಳಿಯ ನಿರ್ಧಾರ ನಿಜಕ್ಕೂ ಖಂಡನೀಯ ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಸಿ. ಕುಮಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:59 am, Fri, 20 June 25

Loading...
Unable to load recommendations.
Follow Us