AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು ದಸರಾ 2023: ಜಂಬೂಸವಾರಿ ವೇಳೆ ಮರಕಳಿಸಲಿದೆ ಗತವೈಭವ, ಏನದು? ಇಲ್ಲಿದೆ ಓದಿ

ಈ ಬಾರಿಯ ಮೈಸೂರು ದಸರಾದ ಜಂಬೂಸವಾರಿ ವಿಶೇಷವಾಗಿರಲಿದೆ. ಕಣ್ಮರೆಯಾಗಿದ್ದ ರಾಜಪೋಷಾಕುಧಾರಿಗಳನ್ನು 2023ರ ಮೈಸೂರು ದಸರಾ ಅಂಬಾರಿ ಮೆರವಣಿಯಲ್ಲಿ ನೋಡಬಹುದಾಗಿದೆ. ಅಷ್ಟಕ್ಕೂ ಈ ರಾಜಪೋಷಾಕುಗಳನ್ನು ಧರಿಸುವವರು ಯಾರು? ಇಲ್ಲಿದೆ ಮಾಹಿತಿ

ರಾಮ್​, ಮೈಸೂರು
| Edited By: |

Updated on:Oct 06, 2023 | 11:03 AM

Share

ಮೈಸೂರು ಅ.06: ಮೈಸೂರು ದಸರಾ (Mysore Dasara) ಪ್ರತಿವರ್ಷ ವಿಜೃಂಭಣೆಯಿಂದ ನಡೆಯುತ್ತದೆ. 2023ರ ವೈಭವದ ಮೈಸೂರು ದಸರಾ ಆಚರಣೆಗೆ ಅರಮನೆ ನಗರಿ ಸಜ್ಜಾಗಿದೆ. ಈಗಾಗಲೆ ವಿವಿಧ ಸಾಂಕೃತಿಕ ಚಟುವಟಿಕೆಗಳು ಆರಂಭವಾಗಿವೆ. ಈ ಬಾರಿ ಜಂಬೂಸವಾರಿ (Jambusavari) ವಿಶೇಷವಾಗಿರಲಿದೆ. ಹೌದು ಕಳೆದು ಹೋಗಿದ್ದ ಗತವೈಭವ ಆಚರಣೆ ಈ ಬಾರಿಯ ದಸರಾ ಉತ್ಸವದಲ್ಲಿ ಮರುಕಳಿಸಲಿದೆ. ಜಂಬೂಸವಾರಿ ವೇಳೆ ಪೊಲೀಸರು ರಾಜಪರಂಪರೆಯ ಪೋಷಕುಗಳನ್ನು ಧರಿಸಿ ಅಂಬಾರಿಯೊಂದಿಗೆ ಸಾಗಲಿದ್ದಾರೆ.

ಮೈಸೂರು ದಸರಾ ಆಚರಣೆಗೆ 400 ವರ್ಷಗಳ ಇತಿಹಾಸ ಇದೆ. ಮಹರಾಹಜರ ಆಚರಣೆ ವೇಳೆ ರಾಜಪೋಷಾಕುಗಳನ್ನು ಧರಿಸಿ ಆನೆಯೊಂದಿಗೆ ಹೆಜ್ಜೆ ಹಾಕುತ್ತಿದ್ದರು. ಆದರೆ ನಂತರ ದಿನಗಳಲ್ಲಿ ಈ ಪದ್ದತಿಯನ್ನು ಕೈ ಬಿಡಲಾಗಿತ್ತು. ಈ ಬಾರಿಯ ದಸರಾದಲ್ಲಿ ಈ ಪದ್ದತಿ ಮತ್ತೆ ಮರುಕಳಿಸಲಿದೆ.

ಇದನ್ನೂ ಓದಿ: ಇದೇ ಮೊದಲ ಬಾರಿ ಮೈಸೂರು ದಸರಾ ಮಹೋತ್ಸವದ ಪ್ರಾಯೋಜಕತ್ವಕ್ಕೆ ಆಹ್ವಾನ

ಅರಮನೆಯ ಒಳಗಡೆ ಭಾವಚಿತ್ರದಲ್ಲಿ ಮಾತ್ರ ಕಾಣಸಿಗುತ್ತಿದ್ದ ರಾಜಪರಂಪರೆ ಪೋಷಾಕುಧಾರಿಗಳನ್ನು ಲೈವ್​ ಆಗಿ ನೋಡಬಹುದಾಗಿದೆ. ಈ ವರ್ಷ ಅದೇ ಮಾದರಿಯಲ್ಲಿ ಜಂಬೂ ಸವಾರಿ ಮೆರವಣಿಗೆ ಮಾಡಲು ನಿರ್ಧರಿಸಲಾಗಿದೆ. ಪೊಲೀಸರು ಪಾರಂಪರಿಕ ಪೋಷಕು ತೊಟ್ಟುಕೊಂಡೆ ಭದ್ರತೆ ನೀಡಲಿದ್ದಾರೆ.

ಪಾರಂಪರಿಕ ಪೋಷಕಗಳು ಈಗಾಗಲೇ ಸಿದ್ದಗೊಂಡಿವೆ. ಅದೇ ರೀತಿ ಕಲಾತಂಡದ ಸದಸ್ಯರು ರಾಜಬಿರುದುಗಳನ್ನು ಹಿಡಿದು ಸಾಗಲಿರುವ ಅಭಿಮನ್ಯು ಜೊತೆ ಸಾಗಲಿದ್ದಾರೆ. ಈ‌ ಹಿಂದೆ ಇದ್ದ ಗ್ರೀನ್ ಲ್ಯಾನ್ಸರ್, ರೆಡ್ ಲ್ಯಾನ್ಸಾರ್, ಗ್ರಿಲ್ ಮೀಸೆ, ಬಿರುದು, ದರ್ಬಾರ್ ಹುಡೋಸ್, ಪ್ಯಾಲೇಸ್ ಜಿಲೋ ಪೋಷಕುಗಳನ್ನು ತಯಾರಿ ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:57 am, Fri, 6 October 23

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ