AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು ದಸರಾ 2023: ಜಂಬೂಸವಾರಿ ವೇಳೆ ಮರಕಳಿಸಲಿದೆ ಗತವೈಭವ, ಏನದು? ಇಲ್ಲಿದೆ ಓದಿ

ಈ ಬಾರಿಯ ಮೈಸೂರು ದಸರಾದ ಜಂಬೂಸವಾರಿ ವಿಶೇಷವಾಗಿರಲಿದೆ. ಕಣ್ಮರೆಯಾಗಿದ್ದ ರಾಜಪೋಷಾಕುಧಾರಿಗಳನ್ನು 2023ರ ಮೈಸೂರು ದಸರಾ ಅಂಬಾರಿ ಮೆರವಣಿಯಲ್ಲಿ ನೋಡಬಹುದಾಗಿದೆ. ಅಷ್ಟಕ್ಕೂ ಈ ರಾಜಪೋಷಾಕುಗಳನ್ನು ಧರಿಸುವವರು ಯಾರು? ಇಲ್ಲಿದೆ ಮಾಹಿತಿ

ರಾಮ್​, ಮೈಸೂರು
| Edited By: ವಿವೇಕ ಬಿರಾದಾರ|

Updated on:Oct 06, 2023 | 11:03 AM

Share

ಮೈಸೂರು ಅ.06: ಮೈಸೂರು ದಸರಾ (Mysore Dasara) ಪ್ರತಿವರ್ಷ ವಿಜೃಂಭಣೆಯಿಂದ ನಡೆಯುತ್ತದೆ. 2023ರ ವೈಭವದ ಮೈಸೂರು ದಸರಾ ಆಚರಣೆಗೆ ಅರಮನೆ ನಗರಿ ಸಜ್ಜಾಗಿದೆ. ಈಗಾಗಲೆ ವಿವಿಧ ಸಾಂಕೃತಿಕ ಚಟುವಟಿಕೆಗಳು ಆರಂಭವಾಗಿವೆ. ಈ ಬಾರಿ ಜಂಬೂಸವಾರಿ (Jambusavari) ವಿಶೇಷವಾಗಿರಲಿದೆ. ಹೌದು ಕಳೆದು ಹೋಗಿದ್ದ ಗತವೈಭವ ಆಚರಣೆ ಈ ಬಾರಿಯ ದಸರಾ ಉತ್ಸವದಲ್ಲಿ ಮರುಕಳಿಸಲಿದೆ. ಜಂಬೂಸವಾರಿ ವೇಳೆ ಪೊಲೀಸರು ರಾಜಪರಂಪರೆಯ ಪೋಷಕುಗಳನ್ನು ಧರಿಸಿ ಅಂಬಾರಿಯೊಂದಿಗೆ ಸಾಗಲಿದ್ದಾರೆ.

ಮೈಸೂರು ದಸರಾ ಆಚರಣೆಗೆ 400 ವರ್ಷಗಳ ಇತಿಹಾಸ ಇದೆ. ಮಹರಾಹಜರ ಆಚರಣೆ ವೇಳೆ ರಾಜಪೋಷಾಕುಗಳನ್ನು ಧರಿಸಿ ಆನೆಯೊಂದಿಗೆ ಹೆಜ್ಜೆ ಹಾಕುತ್ತಿದ್ದರು. ಆದರೆ ನಂತರ ದಿನಗಳಲ್ಲಿ ಈ ಪದ್ದತಿಯನ್ನು ಕೈ ಬಿಡಲಾಗಿತ್ತು. ಈ ಬಾರಿಯ ದಸರಾದಲ್ಲಿ ಈ ಪದ್ದತಿ ಮತ್ತೆ ಮರುಕಳಿಸಲಿದೆ.

ಇದನ್ನೂ ಓದಿ: ಇದೇ ಮೊದಲ ಬಾರಿ ಮೈಸೂರು ದಸರಾ ಮಹೋತ್ಸವದ ಪ್ರಾಯೋಜಕತ್ವಕ್ಕೆ ಆಹ್ವಾನ

ಅರಮನೆಯ ಒಳಗಡೆ ಭಾವಚಿತ್ರದಲ್ಲಿ ಮಾತ್ರ ಕಾಣಸಿಗುತ್ತಿದ್ದ ರಾಜಪರಂಪರೆ ಪೋಷಾಕುಧಾರಿಗಳನ್ನು ಲೈವ್​ ಆಗಿ ನೋಡಬಹುದಾಗಿದೆ. ಈ ವರ್ಷ ಅದೇ ಮಾದರಿಯಲ್ಲಿ ಜಂಬೂ ಸವಾರಿ ಮೆರವಣಿಗೆ ಮಾಡಲು ನಿರ್ಧರಿಸಲಾಗಿದೆ. ಪೊಲೀಸರು ಪಾರಂಪರಿಕ ಪೋಷಕು ತೊಟ್ಟುಕೊಂಡೆ ಭದ್ರತೆ ನೀಡಲಿದ್ದಾರೆ.

ಪಾರಂಪರಿಕ ಪೋಷಕಗಳು ಈಗಾಗಲೇ ಸಿದ್ದಗೊಂಡಿವೆ. ಅದೇ ರೀತಿ ಕಲಾತಂಡದ ಸದಸ್ಯರು ರಾಜಬಿರುದುಗಳನ್ನು ಹಿಡಿದು ಸಾಗಲಿರುವ ಅಭಿಮನ್ಯು ಜೊತೆ ಸಾಗಲಿದ್ದಾರೆ. ಈ‌ ಹಿಂದೆ ಇದ್ದ ಗ್ರೀನ್ ಲ್ಯಾನ್ಸರ್, ರೆಡ್ ಲ್ಯಾನ್ಸಾರ್, ಗ್ರಿಲ್ ಮೀಸೆ, ಬಿರುದು, ದರ್ಬಾರ್ ಹುಡೋಸ್, ಪ್ಯಾಲೇಸ್ ಜಿಲೋ ಪೋಷಕುಗಳನ್ನು ತಯಾರಿ ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:57 am, Fri, 6 October 23

Follow Us
Ram
Ram

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More