
ಬೆಂಗಳೂರು, ಏಪ್ರಿಲ್ 30: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಉಗ್ರ ದಾಳಿಯ (Terror Attack) ಬಳಿಕ ಕೇಂದ್ರ ಸರ್ಕಾರ ಪಾಕಿಸ್ತಾನದ ವಿರುದ್ಧ ಕಠಿಣ ರಾಜತಾಂತ್ರಿಕ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಭಾರತದಲ್ಲಿರುವ ಪಾಕಿಸ್ತಾನೀಯರು (Pakistanis) ದೇಶ ಬಿಟ್ಟು ತೆರಳುವಂತೆ ಆದೇಶಿಸಿರುವುದೂ ಅವುಗಳಲ್ಲೊಂದು. ಅದರಂತೆ, ಪಾಕ್ ಪ್ರಜೆಗಳು ಭಾರತ ಬಿಟ್ಟು ತೊಲಗಲು ನಿಗದಿ ಮಾಡಿದ್ದ ಗಡುವು ಕೊನೆಗೊಂಡಿದೆ. ಕರ್ನಾಟಕದಲ್ಲಿದ್ದ (Karnataka) ಅನೇಕ ಪಾಕಿಸ್ತಾನೀಯರು ಮಂಗಳವಾರ ತವರಿಗೆ ತೆರಳಿದ್ದಾರೆ.
17 ವೀಸಾಗಳಡಿ ಭಾರತಕ್ಕೆ ಬಂದಿದ್ದ ಪಾಕಿಸ್ತಾನಿಯರಿಗೆ ಏಪ್ರಿಲ್ 27ರೊಳಗೆ ತೊರೆಯುವಂತೆ ಸೂಚಿಸಲಾಗಿತ್ತು. ವೈದ್ಯಕೀಯ ಚಿಕಿತ್ಸೆಗಾಗಿ ಬಂದಿದ್ದವರಿಗೆ ಏಪ್ರಿಲ್ 29 ರೊಳಗೆ ಭಾರತದಿಂದ ವಾಪಸ್ ಹೋಗುವಂತೆ ಆದೇಶಿಸಲಾಗಿತ್ತು. ಹೀಗಾಗಿ, ಪಾಕಿಸ್ತಾನೀಯರು ಭಾರತ ತೊರೆದಿದ್ದಾರೆ. ಕರ್ನಾಟಕದಲ್ಲಿದ್ದ ಹಲವು ಪಾಕ್ ಪ್ರಜೆಗಳು ಮಂಗಳವಾರವೇ ತೆರಳಿದ್ದಾರೆ. ಆದರೆ ಇನ್ನೂ ಕೆಲವು ಮಂದಿ ಇಲ್ಲೇ ಉಳಿದುಕೊಂಡಿದ್ದಾರೆ. ಹೋದವರೆಷ್ಟು ಮಂದಿ? ಇನ್ನೂ ಇಲ್ಲೇ ಇರುವವರು ಎಷ್ಟು ಮಂದಿ ಮತ್ತು ಯಾಕೆ ಎಂಬ ಮಾಹಿತಿ ಇಲ್ಲಿದೆ.
ದಾವಣಗೆರೆಯಲ್ಲಿ ಪಾಕ್ ಮೂಲದ ಓರ್ವ ಮೆಡಿಕಲ್ ವಿದ್ಯಾರ್ಥಿನಿ ಇದ್ದಾಳೆ. ಆಕೆ ಹಿಂದು ಧರ್ಮದವಳಾಗಿದ್ದು, ಪಾಕಿಸ್ತಾನದಲ್ಲಿ ಎಂಬಿಬಿಎಸ್ ಮುಗಿಸಿ ಈಗ ಜೆಜೆಎಂ ಮೆಡಿಕಲ್ ಕಾಲೇಜಿನಲ್ಲಿ ಪೆಥಾಲಜಿ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಓದುತ್ತಿದ್ದಾಳೆ. ಈಕೆಯ ವಿಸಾ 2027ಕ್ಕೆ ಮುಕ್ತಾಯವಾಗಲಿದೆ. ಹೀಗಾಗಿ, ಜಿಲ್ಲಾಡಳಿತ ಕೂಡ ವಿದ್ಯಾರ್ಥಿನಿಗೆ ದೇಶ ಬಿಟ್ಟು ತೆರಳುವಂತೆ ಸೂಚಿಸಿಲ್ಲ.
ಇದನ್ನೂ ಓದಿ: ನನ್ನಲ್ಲಿ ಧೈರ್ಯ ತುಂಬಲು ಅಷ್ಟು ದೂರದಿಂದ ಬಂದ ಅಜ್ಜಿಗೆ ಹೇಗೆ ಕೃತಜ್ಞತೆ ಸಲ್ಲಿಸುವುದು? ಪಲ್ಲವಿ ರಾವ್
ಸದ್ಯ, 17 ವೀಸಾಗಳಡಿ ದೇಶದಲ್ಲಿದ್ದ ಪಾಕ್ ಪ್ರಜೆಗಳು ಭಾರತವನ್ನು ತೊರೆದಿದ್ದಾರೆ. ಇದರ ಹೊರತಾಗೂ ಕದ್ದು ಮುಚ್ಚಿ ಭಾರತದಲ್ಲೇ ಉಳಿದವರಿಗೆ 3 ವರ್ಷ ಜೈಲು ಶಿಕ್ಷೆ, 3 ಲಕ್ಷ ರೂ. ದಂಡ ಬೀಳಲಿದೆ.
Published On - 7:00 am, Wed, 30 April 25