AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mann Ki Baat: ಮನ್ ಕೀ ಬಾತ್​ನಲ್ಲಿ ಕರ್ನಾಟಕದವರ ಬಗ್ಗೆ ಮೋದಿ ಪ್ರಸ್ತಾಪಿಸಿದ್ದು ಇವು

PM Modi Praises IISC in Mann Ki Baat: ಭಾರತದ ಪ್ರಜಾತಂತ್ರ ವ್ಯವಸ್ಥೆ ವಿಶ್ವದಲ್ಲೇ ಅತ್ಯಂತ ಹಳೆಯದು ಎಂಬ ವಿಚಾರವನ್ನು ಹೇಳುತ್ತಾ, ಪ್ರಧಾನಿ ಮೋದಿ ಅವರು ಬಸವಣ್ಣರ ಅನುಭವ ಮಂಟಪವೋ ಒಳಗೊಂಡು ಹಲವು ಉದಾಹರಣೆಗಳನ್ನು ತೋರಿದರು.

Mann Ki Baat: ಮನ್ ಕೀ ಬಾತ್​ನಲ್ಲಿ ಕರ್ನಾಟಕದವರ ಬಗ್ಗೆ ಮೋದಿ ಪ್ರಸ್ತಾಪಿಸಿದ್ದು ಇವು
ಪ್ರಧಾನಿ ನರೇಂದ್ರ ಮೋದಿImage Credit source: narendramodi.in
TV9 Web
| Updated By: ಸುಗ್ಗನಹಳ್ಳಿ ವಿಜಯಸಾರಥಿ|

Updated on:Jan 29, 2023 | 12:56 PM

Share

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಭಾನುವಾರ ನಡೆಸಿದ ತಮ್ಮ 97ನೇ ಆವೃತ್ತಿಯ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ (Mann Ki Baat 97th Episode) ಹಲವು ವಿಚಾರಗಳ ಬಗ್ಗೆ ಮಾತನಾಡಿದರು. ಈ ವೇಳೆ, ಕರ್ನಾಟಕದ ಹಲವರು ಹೆಸರುಗಳು ಭಾಷಣದಲ್ಲಿ ಪ್ರಸ್ತಾಪವಾದವು. ಪದ್ಮ ಶ್ರೀ ಪ್ರಶಸ್ತಿ ವಿಜೇತರಾದ ಚಿಕ್ಕಬಳ್ಳಾಪುರದ ತಮಟೆ ಮಾಸ್ಟರ್ ಮುನಿವೆಂಕಟಪ್ಪ (Tamate Master Munivenkatappa) ಅವರ ಹೆಸರನ್ನೂ ಮೋದಿ ಈ ವೇಳೆ ಉಲ್ಲೇಖಿಸುತ್ತಾ, ಭಾರತದ ಪದ್ಮ ಪ್ರಶಸ್ತಿ ವಿಜೇತರ ಜೀವನ ಮತ್ತು ಸಾಧನೆ ಬಗ್ಗೆ ಜನರು ಅರಿತುಕೊಂಡು ಪ್ರೇರಿತರಾಗಬೇಕೆಂದು ಕರೆ ನೀಡಿದರು.

ಭಾರತದ ಪ್ರಜಾತಂತ್ರ ವ್ಯವಸ್ಥೆ ವಿಶ್ವದಲ್ಲೇ ಅತ್ಯಂತ ಹಳೆಯದು ಎಂಬ ವಿಚಾರವನ್ನು ಹೇಳುತ್ತಾ, ಪ್ರಧಾನಿ ಮೋದಿ ಅವರು ಬಸವಣ್ಣರ ಅನುಭವ ಮಂಟಪವೂ (Basavanna Anubhava Mantapa) ಒಳಗೊಂಡು ಹಲವು ಉದಾಹರಣೆಗಳನ್ನು ತೋರಿದರು.

ಬೀದರ್​ನ ಹುಲ್ಸೂರು ಕಂಪನಿ

ಆರೋಗ್ಯಕ್ಕೆ ಸಿರಿಧಾನ್ಯಗಳ ಮಹತ್ವದ ಬಗ್ಗೆ ಮಾತನಾಡುತ್ತಾ ನರೇಂದ್ರ ಮೋದಿ ಅವರು ಸಿರಿಧಾನ್ಯ ಬೆಳೆಗಾರರು, ತಯಾರಕರು ಮತ್ತು ಉದ್ಯಮಿಗಳ ಕಾರ್ಯಗಳನ್ನು ಹೊಗಳಿದರು. ಈ ವೇಳೆ ಅವರು ಬೀದರ್​ನ ಹುಲ್ಸೂರು ಮಹಿಳಾ ಕಿಸಾನ್ ಸಿರಿಧಾನ್ಯ ತಯಾರಕ ಕಂಪನಿಯ ಕೈಂಕರ್ಯಗಳನ್ನು ಅವರು ತಿಳಿಸಿದರು.

ಬೆಂಗಳೂರಿನ ಐಐಎಸ್​ಸಿ

ಭಾರತದಲ್ಲಿ ನಡೆಯುತ್ತಿರುವ ಇನೋವೇಶನ್ (Innovation: ಹೊಸ ಪ್ರಯೋಗ) ಮತ್ತು ಹೊಸ ಪೇಟೆಂಟ್​ಗಳ ನೊಂದಣಿಯ ಬಗ್ಗೆ ಪ್ರಧಾನಿಗಳು ಮಾತನಾಡುತ್ತಾ ಬೆಂಗಳೂರಿನ ಇಂಡಿಯನ್ ಇನ್ಸ್​ಟಿಟ್ಯೂಟ್ ಅಫ್ ಇಂಡಿಯಾ ಸಂಸ್ಥೆಯನ್ನು ಹೊಗಳಿದರು.

ಭಾರತದಿಂದ ದಾಖಲಾಗುತ್ತಿರುವ ಪೇಟೆಂಟ್​ಗಳ ಸಂಖ್ಯೆ ಇತ್ತೀಚೆಗೆ ಹೆಚ್ಚುತ್ತಿದೆ. ಭಾರತದ ಅತ್ಯಂತ ಹಳೆಯ ವಿಜ್ಞಾನ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿರುವ ಇಂಡಿಯನ್ ಇನ್ಸ್​ಟಿಟ್ಯೂಟ್

ಆಫ್ ಸೈನ್ಸ್ ಇದಕ್ಕೆ ಒಳ್ಳೆಯ ಉದಾಹರಣೆ. 2022ರ ಒಂದೇ ವರ್ಷದಲ್ಲಿ ಐಐಎಸ್​ಸಿ ಹೆಸರಿನಲ್ಲಿ 145 ಪೇಟೆಂಟ್​ಗಳು ನೊಂದಣಿಯಾಗಿವೆ. ಅಂದರೆ ಪ್ರತೀ ಐದು ದಿನಗಳಿಗೆ ಎರಡು ಪೇಟೆಂಟ್​ಗಳು ದಾಖಲಾಗುತ್ತಿವೆ. ಇದು ದಾಖಲೆಯೇ ಆಗಿದೆ. ಇಂಥ ಯಶಸ್ಸಿಗೆ ನಾನು ಐಐಎಸ್​ಸಿಗೆ ಅಭಿನಂದನೆ ತಿಳಿಸುತ್ತೇನೆ ಎಂದರು.

ಹಾಗೆಯೇ, ಐಐಎಸ್​ಸಿ ಹುಟ್ಟಿಗೆ ಜಮ್​ಶೆಡ್​ಜೀ ಟಾಟಾ ಮತ್ತು ಸ್ವಾಮಿ ವಿವೇಕಾನಂದ ಅವರ ಪ್ರೇರಣೆ ಹೇಗಾಯಿತು ಎಂದೂ ಅವರು ಈ ವೇಳೆ ಹೇಳಿದರು.

Published On - 12:56 pm, Sun, 29 January 23

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ