ಸಾಮಾಜಿಕ, ಬಡತನ ನಿರ್ಮೂಲನೆ ಯೋಜನೆಗಳ ಕುರಿತ “ಧರ್ಮಸ್ಥಳ: ಅಭಿವೃದ್ಧಿಯ ಮಂತ್ರ” ಪುಸ್ತಕ ಪ್ರಕಟ

ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ನಾಯಕತ್ವದಡಿ ಜಾರಿಗೆ ತರಲಾದ ಸ್ವಾವಲಂಬನೆ ಅಥವಾ ಸುಸ್ಥಿರ ಆರ್ಥಿಕ ಅಭಿವೃದ್ಧಿ ಮಾದರಿ ಮತ್ತು ಬಡತನ ನಿರ್ಮೂಲನೆಯ ತತ್ವಗಳ ಕುರಿತು ಹಿರಿಯ ಪತ್ರಕರ್ತ ನಾಗೇಶ್ ಪ್ರಭು ಅವರು ರಚಿಸಿದ "ಧರ್ಮಸ್ಥಳ: ಅಭಿವೃದ್ಧಿಯ ಮಂತ್ರ" ಎಂಬ ಪುಸ್ತಕ ಪ್ರಕಟಗೊಂಡಿದೆ.

ಸಾಮಾಜಿಕ, ಬಡತನ ನಿರ್ಮೂಲನೆ ಯೋಜನೆಗಳ ಕುರಿತ ಧರ್ಮಸ್ಥಳ: ಅಭಿವೃದ್ಧಿಯ ಮಂತ್ರ ಪುಸ್ತಕ ಪ್ರಕಟ
"ಧರ್ಮಸ್ಥಳ: ಅಭಿವೃದ್ಧಿಯ ಮಂತ್ರ" ಪುಸ್ತಕ ಮತ್ತು ಲೇಖಕ ನಾಗೇಶ್ ಪ್ರಭು
Follow us
|

Updated on: Apr 01, 2024 | 4:51 PM

ಬೆಂಗಳೂರು, ಏ.1: ಸ್ವಾವಲಂಬನೆ ಅಥವಾ ಸುಸ್ಥಿರ ಆರ್ಥಿಕ ಅಭಿವೃದ್ಧಿ ಮಾದರಿ ಮತ್ತು ಬಡತನ ನಿರ್ಮೂಲನೆಯ ತತ್ವಗಳನ್ನು ಕರ್ನಾಟಕದ ಪ್ರಮುಖ ಯಾತ್ರಾ ಕೇಂದ್ರವಾದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ (Dharmasthala) ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ (Dr.Veerendra Heggade) ನಾಯಕತ್ವದಡಿ ಜಾರಿಗೆ ತರಲಾಗಿದೆ. ಇದನ್ನು ಆಧರಿಸಿ ಹಿರಿಯ ಪತ್ರಕರ್ತ ನಾಗೇಶ್ ಪ್ರಭು ಅವರು ಬರೆದ “ಧರ್ಮಸ್ಥಳ: ಅಭಿವೃದ್ಧಿಯ ಮಂತ್ರ” ಎಂಬ ಪುಸ್ತಕವನ್ನು ಕರ್ನಾಟಕದ ಮಣಿಪಾಲ ವಿಶ್ವವಿದ್ಯಾಲಯದ ಪ್ರತಿಷ್ಠಿತ ಮಣಿಪಾಲ್ ಯುನಿವರ್ಸಲ್ ಪ್ರೆಸ್ (MUP) ಪ್ರಕಟಿಸಿದೆ.

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಹಲವಾರು ಸಾಮಾಜಿಕ ಮತ್ತು ಬಡತನ-ವಿರೋಧಿ ಯೋಜನೆಗಳು ಮತ್ತು ಅನುಷ್ಠಾನಾಧಿಕಾರಿಗಳ ಕುರಿತು ಒಂದು ವರ್ಷಕ್ಕೂ ಹೆಚ್ಚು ಕಾಲ ಲೇಖಕರು ವ್ಯಾಪಕವಾದ ಕ್ಷೇತ್ರ ಕಾರ್ಯ ಮತ್ತು ನೂರಾರು ಫಲಾನುಭವಿಗಳ ಸಂದರ್ಶನಗಳನ್ನು ಆಧರಿಸಿ ಈ ಪುಸ್ತಕವು ಉತ್ತಮವಾಗಿ ಸಂಶೋಧಿಸಲ್ಪಟ್ಟ ಗ್ರಂಥವಾಗಿದೆ.

ಇದನ್ನೂ ಓದಿ: ಹೃದಯಾಘಾತದಿಂದ ಶಿವರಾತ್ರಿಯಂದೇ ಶಿವೈಕ್ಯಳಾದ ಧರ್ಮಸ್ಥಳದ ಆನೆ ಲತಾ

ಇದು “ಧರ್ಮಸ್ಥಳ ಅಭಿವೃದ್ಧಿ ಮಾದರಿ”ಗೆ ಹೊಸ ಆಯಾಮವನ್ನು ನೀಡುತ್ತದೆ. ಇದು ಅಭಿವೃದ್ಧಿಯ ಕಡೆಗೆ ಧರ್ಮಸ್ಥಳವು ಅಳವಡಿಸಿಕೊಂಡ ತಳಮಟ್ಟದ ವಿಧಾನವನ್ನು ಆಧರಿಸಿದೆ. ಪುಸ್ತಕವು ಧರ್ಮಸ್ಥಳದ ಮಾದರಿಯ ವಿವಿಧ ಅಂಶಗಳಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಧರ್ಮಸ್ಥಳದ ಅಭಿವೃದ್ಧಿಯ ಮಾದರಿಯ ವಿವಿಧ ಅಂಶಗಳನ್ನು ಲೇಖಕರು ವಿವರಿಸಿದ್ದಾರೆ. ಅಭಿವೃದ್ಧಿಯು ಭಾರತೀಯ ಸಂವಿಧಾನದ ಅವಿಭಾಜ್ಯವಾದ ಜಾತ್ಯತೀತತೆ, ಸಮಾಜವಾದ ಮತ್ತು ಕಲ್ಯಾಣವಾದದ ವಿಚಾರಗಳೊಂದಿಗೆ ಛೇದಿಸಲ್ಪಟ್ಟಿದೆ.

ಕರ್ನಾಟಕದಾದ್ಯಂತ ಶಾಖೆಗಳನ್ನು ಹೊಂದಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (SKDRDP) ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಸ್ವ-ಉದ್ಯೋಗ ತರಬೇತಿ ಸಂಸ್ಥೆ (RUDSETI) ಅನ್ನು ಸ್ಥಾಪಿಸುವ ಮೂಲಕ ಧರ್ಮಾಧಿಕಾರಿಗಳು ದೇವಸ್ಥಾನದ ದತ್ತಿಗಳನ್ನು ಹೇಗೆ ಸಂಸ್ಥೆಗೊಳಿಸಿದರು ಎಂಬುದನ್ನು ಪುಸ್ತಕವು ವಿವರಿಸುತ್ತದೆ. ಕಳೆದ ನಾಲ್ಕು ದಶಕಗಳಲ್ಲಿ ಹೆಗ್ಗಡೆಯವರು ತಮ್ಮ ವಿಶಿಷ್ಟ ಬ್ರಾಂಡ್ ಸೇವೆಯನ್ನು ಹೇಗೆ ನಿರ್ವಹಿಸಿದ್ದಾರೆ ಮತ್ತು ಅನೇಕ ಸ್ಟಾರ್ಟ್‌ಅಪ್‌ಗಳನ್ನು ಪ್ರಾರಂಭಿಸುವ ದೂರದೃಷ್ಟಿಯನ್ನು ಇದು ತೋರಿಸುತ್ತದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
‘ನಾನು ದರ್ಶನ್ ಅವರ ಸಂಬಂಧಿ’: ಭೇಟಿ ಮಾಡಲು ಪರಪ್ಪನ ಅಗ್ರಹಾರಕ್ಕೆ ಬಂದ ಯುವತಿ
‘ನಾನು ದರ್ಶನ್ ಅವರ ಸಂಬಂಧಿ’: ಭೇಟಿ ಮಾಡಲು ಪರಪ್ಪನ ಅಗ್ರಹಾರಕ್ಕೆ ಬಂದ ಯುವತಿ
ದರ್ಶನ್​ ಅಭಿಮಾನಿಗಳಿಗೆ ಕಿವಿಮಾತು ಹೇಳಿದ ಹಿರಿಯ ನಿರ್ಮಾಪಕ ಸಾ.ರಾ. ಗೋವಿಂದು
ದರ್ಶನ್​ ಅಭಿಮಾನಿಗಳಿಗೆ ಕಿವಿಮಾತು ಹೇಳಿದ ಹಿರಿಯ ನಿರ್ಮಾಪಕ ಸಾ.ರಾ. ಗೋವಿಂದು
ಸಿಎಂ ವಿವಾದ ಸಿದ್ದರಾಮಯ್ಯ ಕಾರ್ಯವೈಖರಿ ಮೇಲೆ ಪ್ರಭಾವ ಬೀರಿದೆ: ಶೆಟ್ಟರ್
ಸಿಎಂ ವಿವಾದ ಸಿದ್ದರಾಮಯ್ಯ ಕಾರ್ಯವೈಖರಿ ಮೇಲೆ ಪ್ರಭಾವ ಬೀರಿದೆ: ಶೆಟ್ಟರ್
ಹೋರಿ ಬೆದರಿಸುವುದನ್ನು ನೋಡಲು ವಿದ್ಯುತ್​ ಟಿಸಿ ಏರಿ ಕೂತರು: ಜನರ ಹುಚ್ಚಾಟ
ಹೋರಿ ಬೆದರಿಸುವುದನ್ನು ನೋಡಲು ವಿದ್ಯುತ್​ ಟಿಸಿ ಏರಿ ಕೂತರು: ಜನರ ಹುಚ್ಚಾಟ
ಸೋತಲ್ಲೇ ಗೆಲುವ ಹುಡುಕುವ ಛಲ ಮಗನಲ್ಲಿ ಹುಟ್ಟಿದೆ: ಲಕ್ಷ್ಮಿ ಹೆಬ್ಬಾಳ್ಕರ್
ಸೋತಲ್ಲೇ ಗೆಲುವ ಹುಡುಕುವ ಛಲ ಮಗನಲ್ಲಿ ಹುಟ್ಟಿದೆ: ಲಕ್ಷ್ಮಿ ಹೆಬ್ಬಾಳ್ಕರ್
ಕಾಂಗ್ರೆಸ್ ನಾಯಕರು ಯಾರನ್ನೇ ಸಿಎಂ ಮಾಡಿದರೂ ನಂಗೆ ಸಂಬಂಧಿಸದ ವಿಷಯ: ರೇವಣ್ಣ
ಕಾಂಗ್ರೆಸ್ ನಾಯಕರು ಯಾರನ್ನೇ ಸಿಎಂ ಮಾಡಿದರೂ ನಂಗೆ ಸಂಬಂಧಿಸದ ವಿಷಯ: ರೇವಣ್ಣ
ದರ್ಶನ್ ಬಂಧನದ ದಿನ ‘ಡೆವಿಲ್’ ಸಿನಿಮಾ ಸೆಟ್​ನಲ್ಲಿ ಏನಾಯ್ತು? ವಿನಯ್
ದರ್ಶನ್ ಬಂಧನದ ದಿನ ‘ಡೆವಿಲ್’ ಸಿನಿಮಾ ಸೆಟ್​ನಲ್ಲಿ ಏನಾಯ್ತು? ವಿನಯ್
ಡಿಕೆ ಸುರೇಶ್​ರನ್ನು ಸೋಲಿಸಿದ್ದು ಸಿದ್ದರಾಮಯ್ಯ; ಅಶೋಕರಿಂದ ಅಸಂಬದ್ಧ ಹೇಳಿಕೆ
ಡಿಕೆ ಸುರೇಶ್​ರನ್ನು ಸೋಲಿಸಿದ್ದು ಸಿದ್ದರಾಮಯ್ಯ; ಅಶೋಕರಿಂದ ಅಸಂಬದ್ಧ ಹೇಳಿಕೆ
ಸಿಎಂ ಮತ್ತು ಡಿಸಿಎಂ ಆಯ್ಕೆ ಮಾಡೋದು ಸ್ವಾಮೀಜಿಗಳಲ್ಲ: ಸಿದ್ದರಾಮಯ್ಯ, ಸಿಎಂ
ಸಿಎಂ ಮತ್ತು ಡಿಸಿಎಂ ಆಯ್ಕೆ ಮಾಡೋದು ಸ್ವಾಮೀಜಿಗಳಲ್ಲ: ಸಿದ್ದರಾಮಯ್ಯ, ಸಿಎಂ
ಸ್ವಾಮೀಜಿಗಳು ಹೇಳುತ್ತಿರುವ ಹಿಂದೆ ಬಿಜೆಪಿ ಕೈವಾಡ ಇರಬಹುದು: ಚಲುವರಾಯಸ್ವಾಮಿ
ಸ್ವಾಮೀಜಿಗಳು ಹೇಳುತ್ತಿರುವ ಹಿಂದೆ ಬಿಜೆಪಿ ಕೈವಾಡ ಇರಬಹುದು: ಚಲುವರಾಯಸ್ವಾಮಿ