Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಟ್ಟೆ ತುಂಬಾ ಬಿರಿಯಾನಿ ತಿಂದು ಖೋಟಾ ನೋಟು ಕೊಟ್ಟ ಐನಾತಿಗಳು ಲಾಕ್​​

ಮೊನ್ನೆಯಷ್ಟೇ ಖೋಟಾ ನೋಟು ಪ್ರಿಂಟ್ ವಿಚಾರವಾಗಿ ರಾಯಚೂರಿನಲ್ಲಿ ನಾಲ್ವರ ಬಂಧನವಾಗಿತ್ತು. ಇದೀಗ ಅದರ ಬೆನ್ನಲ್ಲೇ ನಗರದಲ್ಲಿ ಫೇಕ್ ಕರೆನ್ಸಿ ಜಾಲ ಸಾರ್ವಜನಿಕರ ನಿದ್ದೆಗೆಡಿಸಿದೆ. ಹೋಟೆಲ್​ವೊಂದರಲ್ಲಿ ಬಿರಿಯಾನಿ ತಿಂದು 500 ಖೋಟಾ ನೋಟು ಕೊಟ್ಟು ಆರೋಪಿಗಳಿಬ್ಬರು ಪರಾರಿಯಾಗಿರುವಂತಹ ಘಟನೆ ನಡೆದಿದೆ. ಸದ್ಯ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಹೊಟ್ಟೆ ತುಂಬಾ ಬಿರಿಯಾನಿ ತಿಂದು ಖೋಟಾ ನೋಟು ಕೊಟ್ಟ ಐನಾತಿಗಳು ಲಾಕ್​​
ಹೊಟ್ಟೆ ತುಂಬಾ ಬಿರಿಯಾನಿ ತಿಂದು ಖೋಟಾ ನೋಟು ಕೊಟ್ಟ ಐನಾತಿಗಳು ಲಾಕ್​​
Follow us
ಭೀಮೇಶ್​​ ಪೂಜಾರ್
| Updated By: ಗಂಗಾಧರ​ ಬ. ಸಾಬೋಜಿ

Updated on: Mar 21, 2025 | 9:55 PM

ರಾಯಚೂರು, ಮಾರ್ಚ್​ 21: ಅವರು ಮದುವೆ ಸಾಲ ಸೇರಿದಂತೆ ಅದು, ಇದು ಅಂತ ಮೈ ತುಂಬ ಸಾಲ ಮಾಡ್ಕೊಂಡಿದ್ದ. ಸುಲಭವಾಗಿ ಹಣ ಗಳಿಸ್ಬೇಕು ಅಂತ ಇನ್​​ಸ್ಟಾಗ್ರಾಂ ಹಣ ಡಬ್ಲಿಂಗ್ (money Doubling) ವಿಡಿಯೋ ನೋಡಿದ್ದ. ಅದರಂತೆ ತನ್ನ ಸ್ನೇಹಿತನ ಜೊತೆ ಸೇರಿ ದೂರದ ಮಹಾರಾಷ್ಟ್ರದ ವ್ಯಕ್ತಿಯೊಂದಿಗೆ ಡೀಲ್ ಕುದುರಿಸಿದ್ದರು. ಮಹಾರಾಷ್ಟ್ರಕ್ಕೆ ಹೋಗಿ 1 ಲಕ್ಷ ರೂ ಅಸಲಿ ಹಣ ಕೊಟ್ಟು 7 ಲಕ್ಷ ರೂ ಖೋಟಾ ನೋಟು (Fake Currency) ತಂದಿದ್ದಾರೆ. ಬಳಿಕ ನಗರದಲ್ಲಿ 500 ಖೋಟಾ ನೋಟು ಚಲಾವಣೆ ಮಾಡಲು ಹೋಗಿ ಆರೋಪಿಗಳು ಪೊಲೀಸರಿಗೆ ಲಾಕ್​ ಆಗಿದ್ದಾರೆ. ಬಾಕಿ ಉಳಿದ 6.5 ಲಕ್ಷ ರೂ ಖೋಟಾ ನೋಟಿನ ಬಗ್ಗೆ ತನಿಖೆ ನಡೆದಿದೆ.

500 ರೂ ನಕಲಿ ನೋಟು ಕೊಟ್ಟು ಪರಾರಿ

ಇದೇ ಮಾರ್ಚ್ 17 ರ ರಾತ್ರಿ ರಾಯಚೂರು ನಗರದ ಹೈದ್ರಾಬಾದ್ ರಸ್ತೆಯಲ್ಲಿರುವ ಹೋಟೆಲ್​​​ವೊಂದಕ್ಕೆ ಮಂಜುನಾಥ್ ಹಾಗೂ ರಮೇಶ್ ಅನ್ನೋರು ಹೋಗಿದ್ದಾರೆ. ಹೊಟ್ಟೆ ತುಂಬ ಚಿಕನ್ ಬಿರಿಯಾನಿ ಕೂಡ ಚಪ್ಪರಿಸಿ ತಿಂದಿದ್ದಾರೆ. ವಾಟರ್ ಬಾಟಲ್ ಎಲ್ಲಾ ಸೇರಿ 500 ರೂ.ಬಿಲ್ ಆಗಿತ್ತು. ಆದರೆ ಮಂಜುನಾಥ್ ಹಾಗೂ ರಮೇಶ್ ಹೋಟೆಲ್​​​ನವ್ನಿಗೆ 500 ರೂ ನಕಲಿ ನೋಟು ಕೊಟ್ಟು ಪರಾರಿಯಾಗಿದ್ದಾರೆ. ಇದಾದ ಬಳಿಕ ಆ ನಕಲಿ ನೋಟನ್ನು ಹೋಟೆಲ್ ಸಿಬ್ಬಂದಿ ನೋಡಿ ಮಾರ್ಕೆಟ್ ಯಾರ್ಡ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಗ ಮಂಜುನಾಥ್ ಹಾಗೂ ರಮೇಶ್​​ ಕೆಲಹೊತ್ತಲ್ಲೇ ಲಾಕ್ ಆಗಿದ್ದಾರೆ.

ಇದನ್ನೂ ಓದಿ: ವಾಟ್ಸಪ್ ಗ್ರೂಪಿನಲ್ಲಿ ಹಾಸ್ಯಾಸ್ಪದ ಎಮೋಜಿ ಹಾಕಿದ್ದಕ್ಕೆ ಕಿರಿಕ್: ಮನೆಗೆ ನುಗ್ಗಿ ದಾಂಧಲೆ

ಇದನ್ನೂ ಓದಿ
Image
ಉತ್ತರ ಕರ್ನಾಟಕಕ್ಕೆ ಬಿಸಿಲಾಘಾತ: ರಾಜ್ಯ ವಿಪತ್ತು ಎಂದು ಘೋಷಿಸಲು ಆಗ್ರಹ
Image
ವಾಟ್ಸಪ್ ಗ್ರೂಪಿನಲ್ಲಿ ಹಾಸ್ಯಾಸ್ಪದ ಎಮೋಜಿ ಹಾಕಿದ್ದಕ್ಕೆ ಕಿರಿಕ್: ದಾಂಧಲೆ
Image
ಈ ಬಾರಿ ಕರಾವಳಿ ಜಿಲ್ಲೆಯಲ್ಲೇ ದಾಖಲಾಯ್ತು ರಾಜ್ಯದ ಅತಿ ಹೆಚ್ಚು ತಾಪಮಾನ
Image
ಮಂತ್ರಾಲಯದಲ್ಲಿ 6 ದಿನಗಳ ಕಾಲ ಶ್ರೀ ರಾಘವೇಂದ್ರ ಸ್ವಾಮಿಗಳ ಗುರು ವೈಭವೋತ್ಸವ

ಆರೋಪಿ ಮಂಜುನಾಥ್​​ ಮದುವೆ ಸಾಲ ಸೇರಿ ಅದು, ಇದು ಅಂತ ಸುಮಾರು 10 ಲಕ್ಷ ರೂ. ಸಾಲ ಮಾಡಿಕೊಂಡಿದ್ದನಂತೆ. ಹೀಗಾಗಿ ಸುಲಭವಾಗಿ ಹಣ ಗಳಿಸುವ ಯೋಚನೆ ಮಾಡಿ ಇನ್​​ಸ್ಟಾಗ್ರಾಂನಲ್ಲಿ ವಿಡಿಯೋಗಳನ್ನ ಹುಡುಕ್ತಿದ್ದ. ಆಗ ಮಹಾರಾಷ್ಟ್ರ ಮೂಲದ ಓರ್ವ ಆನ್​ಲೈನ್​ನಲ್ಲೇ ಈತನನ್ನ ನಂಬಿಸಿ 1 ಲಕ್ಷಕ್ಕೆ 3.5 ಲಕ್ಷ ರೂ ಅಸಲಿ ಹಣ ಕೊಡುತ್ತೇವೆ. ಇದು ಸತ್ಯ ಯಾರಿಗೂ ಹೇಳ್ಬೇಡ. ಇದು ಪುಣ್ಯದ ಕೆಲಸ ಅಂತ ಮೈಂಡ್​ ವಾಷ್ ಮಾಡಿದ್ದ.

ತನಿಖೆಯಲ್ಲಿ ಬಯಲಾದ ಅಸಲಿಯತ್ತೇನು?

ಆಗ ಮಂಜುನಾಥ್​ ತನ್ನ ಸ್ನೇಹಿತ ರಮೇಶ್​ನನ್ನ ಕರೆದುಕೊಂಡು ಸೀದಾ ಮಹಾರಾಷ್ಟ್ರಕ್ಕೆ ಹೋಗಿ ಅಲ್ಲಿ 1 ಲಕ್ಷ ರೂ ಅಸಲಿ ಹಣ ನೀಡಿ 3.5 ಲಕ್ಷ ರೂ ಹಣ ಪಡೆದಿದ್ದ. ನಂತರ ಅದು ಅಸಲಿ ಹಣ ಅಂತ ನಂಬಿಕೊಂಡು ಬಂದಿದ್ದಾರೆ. ಆದರೆ ಟ್ರೈನ್​ನಲ್ಲಿ ಬರುವಾಗ ಅದೆಲ್ಲಾ ನಕಲಿ ಅನ್ನೋದು ಗೊತ್ತಾಗಿದೆ. ಆ ನೋಟುಗಳ ಮೇಲೆ ಚಿಲ್ರನ್ ಬ್ಯಾಂಕ್​ ಆಫ್ ಇಂಡಿಯಾ ಅಂತಿದೆ. ಹೀಗಾಗಿ ಎಲ್ಲಾ ನಕಲಿ ನೋಟಿನ ಬಂಡಲ್​ಗಳನ್ನ ಟ್ರೈನ್​ನಿಂದ ಹೊರಗಡೆ ಬಿಸಾಡಿದ್ದಾರೆ. ಆದರೆ 50 ಸಾವಿರದ ಒಂದು ಕಟ್ಟನ್ನ ರಮೇಶ್ ಕದ್ದು ಮುಚ್ಚಿ ತೆಗೆದಿಟ್ಟಿದ್ದ. ನಂತರ ರಾಯಚೂರಿಗೆ ಬಂದು ಆ ಹಣವನ್ನ ಬಿರಿಯಾನಿ ತಿಂದು ಚಲಾವಣೆ ಮಾಡಿದ್ದ ಅನ್ನೋದು ತನಿಖೆಯಲ್ಲಿ ಬಯಲಾಗಿದೆ.

ಮೊಮ್ಮೆಯಷ್ಟೇ ಖೊಟಾ ನೋಟುಗಳನ್ನ ಪ್ರಿಂಟ್ ಮಾಡುವ ನಾಲ್ಕು ಜನ ಐನಾತಿಗಳನ್ನ ಇದೇ ರಾಯಚೂರು ಪೊಲೀಸರು ಅರೆಸ್ಟ್ ಮಾಡಿದ್ದರು. ಇದರ ಬೆನಲ್ಲೇ ಈಗ ನಕಲಿ ನೋಟು ಚಲಾವಣೆ ಆಗಿದೆ. ಆಂಧ್ರ-ತೆಲಂಗಾಣ ಗಡಿಯಲ್ಲಿ ರಾಯಚೂರು ಇರೋದ್ರಿಂದ ಸುಲಭವಾಗಿ ನಕಲಿ ಹಣದ ವಹಿವಾಟು ನಡೆಯುತ್ತಿರಬಹುದು. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯಲಿ ಎಂದು ಸ್ಥಳೀಯರಾದ ಅಶೋಕ್ ಜೈನ್ ಹೇಳಿದ್ದಾರೆ.

ಇದನ್ನೂ ಓದಿ: ಉತ್ತರ ಕರ್ನಾಟಕಕ್ಕೆ ಬಿಸಿಲಾಘಾತ: ರಾಜ್ಯ ವಿಪತ್ತು ಎಂದು ಘೋಷಿಸಲು ಆಗ್ರಹ

ಅದೆನೆ ಇರ್ಲಿ ಎರಡೇ ದಿನದ ಅಂತರದಲ್ಲಿ ಎರಡು ಖೋಟಾ ನೋಟಿಗೆ ಸಂಬಂಧಿಸಿದ ಕೇಸ್​ಗಳು ಬುಕ್ ಆಗಿದ್ದು, ಸಾರ್ವಜನಿಕರ ನಿದ್ದೆಗೆಡಿಸಿದೆ. ಹಿಂದುಳಿದ ಜಿಲ್ಲೆಯಲ್ಲಿ ಅತೀ ಸುಲಭವಾಗಿ ನಕಲಿ ನೋಟಿನ ಚಲಾವಣೆ ನಡೆಯುತ್ತಿದೆಯಾ ಎಂಬ ಅನುಮಾನಗಳು ಕೂಡ ಮೂಡಿವೆ. ಹೀಗಾಗಿ ಗೃಹ ಇಲಾಖೆ ಈ ಬಗ್ಗೆ ಉನ್ನತ ಪಟ್ಟದ ತನಿಖೆ ನಡೆಸಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.